MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare Serial: ಪಂಕಜಾ ಬಗ್ಗೆ ಆನಂದ್‌ಗೆ ಸತ್ಯ ಗೊತ್ತಾಗೋಯ್ತು! ಇನ್ನು ಅಸಲಿ ಕಥೆ ಶುರು!

Amruthadhaare Serial: ಪಂಕಜಾ ಬಗ್ಗೆ ಆನಂದ್‌ಗೆ ಸತ್ಯ ಗೊತ್ತಾಗೋಯ್ತು! ಇನ್ನು ಅಸಲಿ ಕಥೆ ಶುರು!

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ, ಆನಂದ್‌ ಇಬ್ಬರೂ ಪಂಕಜಾ ಯಾರು ಎಂದು ಕಂಡುಹಿಡಿಯಲು ಕನಕದುರ್ಗಕ್ಕೆ ಹೋಗಿದ್ದಾರೆ. ಅಲ್ಲಿ ಅವರಿಗೆ ಪಂಕಜಾ ಬಗ್ಗೆ ಗೊತ್ತಾಗಿದೆ. 

1 Min read
Padmashree Bhat
Published : May 24 2025, 09:24 AM IST| Updated : May 24 2025, 09:26 AM IST
Share this Photo Gallery
  • FB
  • TW
  • Linkdin
  • Whatsapp
16
Image Credit : zee5

ʼಅಮೃತಧಾರೆʼ ಧಾರಾವಾಹಿಯಲ್ಲಿ ಶಕುಂತಲಾ ಯಾರು ಎನ್ನೋದು ಇನ್ನಷ್ಟೇ ಬಯಲಾಗಬೇಕಿದೆ. ಶಕುಂತಲಾ ಬಣ್ಣ ಬಯಲು ಮಾಡುವ ಕನಕದುರ್ಗಕ್ಕೆ ಗೌತಮ್‌, ಭೂಮಿಕಾ, ಆನಂದ್‌, ಅಪರ್ಣಾ ಹೋಗಿದ್ದಾರೆ. ಅಲ್ಲಿ ಪಂಕಜಾ ಯಾರು ಎನ್ನೋದು ಗೊತ್ತಾಗಬೇಕಿದೆ.

26
Image Credit : zee5

ಕನಕದುರ್ಗದಲ್ಲಿ ಪಂಕಜಾ ಬಗ್ಗೆ ತಿಳಿದುಕೊಳ್ಳೋಕೆ ಭೂಮಿಕಾ, ಆನಂದ್‌ ಹರಸಾಹಸ ಪಡುತ್ತಿದ್ದಾರೆ. ನಂಜಮ್ಮ ಎನ್ನುವ ಹೆಂಗಸಿನಿಂದ ಪಂಕಜಾ ಬಗ್ಗೆ ತಿಳಿದುಕೊಳ್ಳಬೇಕು ಅಂತ ಭೂಮಿಕಾ ಪರದಾಡುತ್ತಿದ್ದಾಳೆ. ನಂಜಮ್ಮಗೆ ಪಂಕಜಾ ಬಗ್ಗೆ ಗೊತ್ತಿದೆ. ಶಕುಂತಲಾಗೆ ಪದೇ ಪದೇ ಫೋನ್‌ ಮಾಡುವ ನಂಜಮ್ಮ ಎಲ್ಲ ವರದಿ ಒಪ್ಪಿಸುತ್ತಾಳೆ.

Related Articles

Related image1
'ಅಮೃತಧಾರೆ' ಧಾರಾವಾಹಿ ಸಚಿನ್‌ ಪಾತ್ರಧಾರಿ ಯಾರು? ಹಿನ್ನಲೆ ಏನು?
Related image2
ʼಯಾರಿಗೆ ಇಡ್ಲಿʼ ಎಂದಿದ್ದ ಅಮೃತಧಾರೆ ಧಾರಾವಾಹಿ ಸುಧಾ ಪಾತ್ರಧಾರಿ ಯಾರು?
36
Image Credit : zee5

ಕನಕದುರ್ಗದಲ್ಲಿ ಪಂಕಜಾ ಬಗ್ಗೆ ಭೂಮಿಕಾ, ಆನಂದ್‌ ಹುಡುಕಾಟ ಮಾಡುತ್ತಿರೋದನ್ನು ನಂಜಮ್ಮ, ಶಕುಂತಲಾಗೆ ಫೋನ್‌ ಮಾಡಿ ಹೇಳಿದ್ದಾಳೆ. ಈ ವಿಷಯ ಶಕುಂತಲಾಗೆ ಗೊತ್ತಾದರೆ ಅವಳು ಏನು ಮಾಡ್ತಾಳೋ ಏನೋ! ತನ್ನ ಸತ್ಯ ಏನಾದರೂ ಗೊತ್ತಾದರೆ ಕಷ್ಟ ಅಂತ ಇವರಿಬ್ಬರನ್ನು ಶಕುಂತಲಾ ಸಾಯಿಸಿದರೂ ಕೂಡ ಆಶ್ಚರ್ಯ ಇಲ್ಲ.

46
Image Credit : zee5

ನಂಜಮ್ಮನ ಗಂಡ ಕುಡುಕ. ಅವನಿಂದ ಎಲ್ಲ ಸತ್ಯಹೊರಗಡೆ ಬರಬಹುದು ಅಂತ ಅವಳಿಗೆ ಗೊತ್ತಿದೆ. ಇದನ್ನೇ ಬಂಡವಾಳವಾಗಿಟ್ಟುಕೊಂಡ ಆನಂದ್‌, ಅವನಿಗೆ ಕುಡಿಸಿ ಪಂಕಜಾ ಯಾರು ಎಂದು ತಿಳಿದುಕೊಳ್ಳುವ ಯತ್ನದಲ್ಲಿದ್ದಾನೆ. ಪಂಕಜಾಳ ಅಣ್ಣನೇ ಕಾಂತ. ಪಂಕಜಾ ಸಿಕ್ಕಾಪಟ್ಟೆ ಅನ್ಯಾಯ ಮಾಡಿದ್ದಾಳೆ ಅಂತ ನಂಜಮ್ಮ ಗಂಡ ಹೇಳಿದ್ದಾನೆ.

56
Image Credit : zee5

ಪಂಕಜಾ, ಕಾಂತ ಸ್ಮಗಲಿಂಗ್‌ ಮಾಡುತ್ತಿದ್ದರು. ಸ್ಮಗಲಿಂಗ್‌ ಮಾಡುವಾಗ ಅಪಘಾತ ಮಾಡಿದರು. ಆ ಅಪಘಾತದಲ್ಲಿ ಒಬ್ಬ ಸತ್ತೋದ. ಆಮೇಲೆ ಜೈಲಿಗೆ ಹೋಗಬೇಕಾಗುತ್ತದೆ ಅಂತ ಅವರು ಊರು ಬಿಟ್ಟು ಹೋದರು ಎಂದು ನಂಜಮ್ಮನ ಗಂಡ ಹೇಳಿದ್ದನು. ಸದ್ಯ ಈ ಪ್ರೋಮೋ ಪ್ರಸಾರ ಆಗಿದ್ದು, ನಂಜಮ್ಮನ ಗಂಡ ಇನ್ನೂ ಹೆಚ್ಚಿನ ವಿಷಯ ಹೇಳುತ್ತಾನಾ? ಅಥವಾ ಅಲ್ಲಿಗೆ ಯಾರಾದರೂ ಬಂದು ಅವನ ಮಾತನ್ನು ನಿಲ್ಲಿಸ್ತಾರಾ ಎಂದು ಕಾದು ನೋಡಬೇಕಿದೆ.

66
Image Credit : zee5

ಭೂಮಿಕಾ ಪಾತ್ರದಲ್ಲಿ ಛಾಯಾ ಸಿಂಗ್‌, ಆನಂದ್‌ ಪಾತ್ರದಲ್ಲಿ ಸಿಲ್ಲಿ ಲಲ್ಲಿ ಆನಂದ್‌, ಗೌತಮ್‌ ಪಾತ್ರದಲ್ಲಿ ರಾಜೇಶ್‌ ನಟರಂಗ, ಶಕುಂತಲಾ ಪಾತ್ರದಲ್ಲಿ ವನಿತಾ ವಾಸು ಮುಂತಾದವರು ನಟಿಸುತ್ತಿದ್ದಾರೆ. 

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ
ಸೀರಿಯಲ್ ಶೂಟಿಂಗ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved