MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!

ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!

'ಕಾಟೇರ' ಖ್ಯಾತಿಯ ನಟಿ ಶ್ವೇತಾ ಆರ್ ಪ್ರಸಾದ್ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಭೀಕರ ಬಸ್ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಕೆಟ್ಟ ಫೋನ್ ಕರೆಯಿಂದ ಮಾನಸಿಕವಾಗಿ ವಿಚಲಿತರಾಗಿ ರಸ್ತೆ ದಾಟುತ್ತಿದ್ದಾಗ ಈ ಘಟನೆ ನಡೆದಿದ್ದು, ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. 

2 Min read
Santosh Naik
Published : Dec 11 2025, 07:44 PM IST
Share this Photo Gallery
  • FB
  • TW
  • Linkdin
  • Whatsapp
110
Image Credit : Instagram/shwetha prasad

ಕಿರುತೆರೆಯಲ್ಲಿ ರಾಧಾ ಮಿಸ್‌ ಎಂದೇ ಜನರಿಗೆ ಪರಿಚಯವಾಗಿರುವ, ಕಾಟೇರ ಸಿನಿಮಾದಲ್ಲಿನ ಮಹತ್ವದ ಪಾತ್ರದ ಮೂಲಕ ಜನಮನ್ನಣೆ ಪಡೆದ ನಟಿ ಶ್ವೇತಾ ಆರ್‌ ಪ್ರಸಾದ್‌ ಇತ್ತೀಚೆಗೆ ಮೇಜರ್‌ ಅಪಘಾತದಿಂದ ಜಸ್ಟ್‌ ಬಚಾವ್‌ ಆಗಿದ್ದಾರೆ.

210
Image Credit : Instagram/shwetha prasad

ಡಿಸೆಂಬರ್‌ 5 ರಂದು ಬೆಂಗಳೂರಿನಲ್ಲಿಯೇ ಈ ಘಟನೆ ನಡೆದಿದ್ದು, ಆ ಬಳಿಕ ಬಳಿಕ ಚೇತರಿಸಿಕೊಳ್ಳಲು ಕೆಲವು ದಿನಗಳು ಹಿಡಿದವು ಎಂದು ಹೇಳಿದ್ದಾರೆ. ಎಲ್ಲೂ ಹೋಗದೆ ಮನೆಯಲ್ಲಿಯೇ ದಿನಗಳನ್ನು ಕಳೆದೆ ಎಂದಿದ್ದಾರೆ.

Related Articles

Related image1
ಕಿರುತೆರೆ ನಟಿ ಶ್ವೇತಾ ಪ್ರಸಾದ್‌ ಸೌದಿ ಅರೇಬಿಯಾ ಪ್ರವಾಸ; ಫೋಟೋಗಳು ವೈರಲ್
Related image2
ಕೊಡಗಿನ ಮಳೆಯಲ್ಲಿ ಮಿಂದೆದ್ದ ರಾಧಾ ಮಿಸ್‌ನಲ್ಲಿ ಆ ಬಿಟೌನ್ ನಟಿಯನ್ನ ಕಂಡ ಫ್ಯಾನ್ಸ್
310
Image Credit : Instagram/shwetha prasad

ಆ ದಿನ ಒಂದು ಕೆಟ್ಟ ಕಾಲ್‌ ನನನಗೆ ಬಂದಿತ್ತು. ಇದರಿಂದಾಗಿ ನನ್ನ ಮುಂದಿನ ಎಂಟು ದಿನದ ವೇಳಾಪಟ್ಟಿ ಸಂಪೂರ್ಣ ಅಸ್ತವ್ಯಸ್ಥವಾಗಿತ್ತು. ಈ ಫೋನ್‌ ಕಾಲ್‌ಅನ್ನು ಸಿಟ್ಟಿನಿಂದಲೇ ನಾನು ಕಟ್‌ ಮಾಡಿದ್ದೆ ಎಂದು ಶ್ವೇತಾ ಪ್ರಸಾದ್ ಹೇಳಿದ್ದಾರೆ.

410
Image Credit : Instagram/shwetha prasad

ಏನು ಮಾಡೋದು ಅನ್ನೋದು ಗೊತ್ತಿರಲಿಲ್ಲ. ನಾನು ಕಾರ್‌ನಿಂದ ಇಳಿದು ಕಾಫಿ ಶಾಪ್‌ನ ಕಡೆಗೆ ರಸ್ತೆ ದಾಟಲು ಆರಂಭ ಮಾಡಿದ್ದೆ. ಈ ಹಂತದಲ್ಲಿ ನಾನು ಎಲ್ಲಿದ್ದೇನೆ ಅನ್ನೋದೇ ನನಗೆ ತಿಳಿದಿರಲಿಲ್ಲ ಎಂದು ಶ್ವೇತಾ ಹೇಳಿದ್ದಾರೆ.

510
Image Credit : Instagram/shwetha prasad

ನಾನು ರಸ್ತೆ ದಾಟುವ ವೇಳೆ ಬಸ್ಸೊಂದು ವೇಗವಾಗಿ ನನ್ನ ಬಳಿಗೆ ಬರುತ್ತಿತ್ತು. ನನ್ನ ಅದೃಷ್ಟ ಚೆನ್ನಾಗಿತ್ತು. ಬಸ್‌ ಡ್ರೈವರ್‌ಗೆ ಸರಿಯಾದ ಸಮಯಕ್ಕೆ ಬ್ರೇಕ್‌ ಹಾಕುವ ಮನಸ್ಸು ಮತ್ತು ಟೈಮ್‌ ಎರಡೂ ಇತ್ತು ಎಂದು ಹೇಳಿದ್ದಾರೆ.

610
Image Credit : Instagram/shwetha prasad

ಬಸ್‌ ನನ್ನ ಪಕ್ಕದಲ್ಲಿಯೇ ಬಂದು ನಿಂತಿತ್ತು. ನಾನು ಸ್ಟನ್‌ ಆಗಿ ಹೋಗಿದ್ದ. ಈ ಹಂತದಲ್ಲಿ ಕ್ಯಾಬ್‌ ಚಾಲಕನೊಬ್ಬ ಓಡಿ ಬಂದು ರಸ್ತೆಯಿಂದ ನನ್ನನ್ನು ಹೊರಗೆ ಹಾಕಿದ. ನಾನು ತುಂಬಾ ಶಾಕ್‌ನಲ್ಲಿದ್ದೆ. ಏನು ಪ್ರಕ್ರಿಯೆ ನೀಡಲು ಕೂಡ ನನಗೆ ಸಾಧ್ಯವಾಗಿರಲಿಲ್ಲ ಎಂದಿದ್ದಾರೆ.

710
Image Credit : Instagram/shwetha prasad

ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ಕೆಟ್ಟದ್ದೇನೂ ಸಂಭವಿಸಿಲ್ಲ ಎನ್ನುವುದಕ್ಕೆ ನಾನು ಆಭಾರಿಯಾಗಿದ್ದೇನೆ. ಆದರೆ ಘಟನೆಯಿಂದ ಹೊರಬರಲು ನನಗೆ ಸ್ವಲ್ಪ ಸಮಯ ತೆಗೆದುಕೊಂಡಿತು ಎಂದಿದ್ದಾರೆ.

810
Image Credit : Instagram/shwetha prasad

ರಸ್ತೆಯಲ್ಲಿ ಓಡಾಡುವಾಗ ನಾನು ಸಾಮಾನ್ಯವಾಗಿ ಜಾಗರೂಕಳಾಗಿ ಇರುತ್ತೇನೆ. ಆದರೆ, ಆಕ್ಷಣದಲ್ಲಿ ಇದ್ದ ಅಗಾಧ ಒತ್ತಡ ನನ್ನ ಯೋಚನೆನ್ನು ಮಸುಕಾಗಿಸಿತು ಎಂದಿದ್ದಾರೆ.

910
Image Credit : Instagram/shwetha prasad

ನನ್ನ ಮನಸ್ಸು ಬೇರೆ ಯೋಚನೆ ಮಾಡುತ್ತಿತ್ತು. ಈ ಘಟನೆ ಸಂಭವಿಸಿತು ಎಂದು ಇನ್ನೂ ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಒಂದು ದೊಡ್ಡ

1010
Image Credit : Instagram/shwetha prasad

ಘಟನೆಯಿಂದ ಪಾರಾದ ರೀತಿ ನೆನೆಸಿಕೊಂಡರೆ ಈಗಲೂ ನಡುಕ ಉಂಟಾಗುತ್ತದೆ ಎಂದು ಶ್ವೇತಾ ಪ್ರಸಾದ್‌ ಹೇಳಿದ್ದಾರೆ. 'ರಾಧಾ ರಮಣ', 'ಶ್ರೀರಸ್ತು ಶುಭಮಸ್ತು' ಮುಂತಾದ ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತಗೊಂಡಿರುವ ನಟಿ ಶ್ವೇತಾ ಆರ್ ಪ್ರಸಾದ್ ಮಹೇಶ್ ರವಿಕುಮಾರ್ ಎಂಬುವವರು ನಿರ್ದೇಶನ ಮಾಡಿರುವ 'ಬಂದೂಕ್' ಸಿನಿಮಾದಲ್ಲಿ ಕೊನೆಯ ಬಾರಿಗೆ ಕಾಣಿಸಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಟಿವಿ ಶೋ
ಸ್ಯಾಂಡಲ್‌ವುಡ್
ಮನರಂಜನಾ ಸುದ್ದಿ
ಸುದ್ದಿ
ಸೀರಿಯಲ್ ಶೂಟಿಂಗ್

Latest Videos
Recommended Stories
Recommended image1
BBK 12 Video: ಸ್ನಾನ ಮಾಡದೇ ತೆಪ್ಪಗೆ ಕುಳಿತ ಸೂರಜ್; ಫ್ಲೈಯಿಂಗ್ ಕಿಸ್ ಕೊಟ್ಟು ಸಂತಸಪಟ್ಟ ರಕ್ಷಿತಾ ಶೆಟ್ಟಿ!
Recommended image2
ಶಾರ್ಟ್ಸ್ ಧರಿಸಿ ಪೋಸ್ ಕೊಟ್ಟ ನಿವೇದಿತಾ ಗೌಡ… ವಯಸ್ಸು ಕಮ್ಮಿ ಆಗ್ತಿದೆ ಎಂದ ಜನ
Recommended image3
ಮುಸ್ಲಿಮರ ವಿರುದ್ಧ ದ್ವೇಷದ ಅಸ್ತ್ರವಾಗಿ ವಂದೇ ಮಾತರಂ ಬಳಸಲಾಗ್ತಿದೆ: ನಟ ಕಿಶೋರ್‌ ಆಕ್ರೋಶ!
Related Stories
Recommended image1
ಕಿರುತೆರೆ ನಟಿ ಶ್ವೇತಾ ಪ್ರಸಾದ್‌ ಸೌದಿ ಅರೇಬಿಯಾ ಪ್ರವಾಸ; ಫೋಟೋಗಳು ವೈರಲ್
Recommended image2
ಕೊಡಗಿನ ಮಳೆಯಲ್ಲಿ ಮಿಂದೆದ್ದ ರಾಧಾ ಮಿಸ್‌ನಲ್ಲಿ ಆ ಬಿಟೌನ್ ನಟಿಯನ್ನ ಕಂಡ ಫ್ಯಾನ್ಸ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved