MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Travel
  • ಈ ದೇಗುಲದ ಬಳಿ ನಾಯಿ ಬೊಗಳಲ್ಲ, ಗುಡುಗು, ಮಿಂಚು ಸದ್ದು ಮಾಡಲ್ಲ… ಎಲ್ಲವೂ ನಿಶ್ಯಬ್ಧ!

ಈ ದೇಗುಲದ ಬಳಿ ನಾಯಿ ಬೊಗಳಲ್ಲ, ಗುಡುಗು, ಮಿಂಚು ಸದ್ದು ಮಾಡಲ್ಲ… ಎಲ್ಲವೂ ನಿಶ್ಯಬ್ಧ!

ದೇಶದ ಪ್ರಸಿದ್ಧ ಬದರೀನಾಥ್ ಧಾಮದ ರಹಸ್ಯದ ಬಗ್ಗೆ ನಿಮಗೆ ಗೊತ್ತ? ಈ ದೇಗುಲದ ಪ್ರದೇಶದಲ್ಲಿ ನಾಯಿ ಬೊಗಳೋದೆ ಇಲ್ಲ. ಅಷ್ಟೇ ಅಲ್ಲ ಮಿಂಚು ಬರುತ್ತೆ, ಆದ್ರೆ ಗುಡುಗು ಸದ್ದು ಮಾಡೋದೆ ಇಲ್ಲ. ಯಾಕೆ ಅನ್ನೋದನ್ನು ನೋಡಿ.  

2 Min read
Pavna Das
Published : Feb 05 2025, 08:48 PM IST| Updated : Feb 06 2025, 10:43 AM IST
Share this Photo Gallery
  • FB
  • TW
  • Linkdin
  • Whatsapp
17

ದೇಶದ ನಾಲ್ಕು ಪವಿತ್ರ ದೇವಾಲಯಗಳಲ್ಲಿ ಒಂದಾದ ಪ್ರಸಿದ್ಧ ಬದರೀನಾಥ್ ಧಾಮ್ (Badrinath Dham) ನರ ಮತ್ತು ನಾರಾಯಣ ಇಬ್ಬರೂ ಭೇಟಿಯಾಗುವ ಯಾತ್ರಾ ಸ್ಥಳವಾಗಿದೆ. ಪ್ರತಿವರ್ಷ ಲಕ್ಷಾಂತರ ಭಕ್ತರು ಬದರೀನಾಥ ಧಾಮಕ್ಕೆ ಭೇಟಿ ನೀಡುತ್ತಾರೆ. ಇಲ್ಲಿ ವಿಷ್ಣುವನ್ನು ಪೂಜಿಸಲಾಗುತ್ತದೆ. ಆದಾಗ್ಯೂ, ಬದರೀನಾಥಕ್ಕೆ ಸಂಬಂಧಿಸಿದ ಕೆಲವು ಪೌರಾಣಿಕ ನಂಬಿಕೆಗಳಿವೆ, ಅವುಗಳನ್ನು ನಂಬುವುದು ಕಷ್ಟ. ಅವುಗಳ ಅಲ್ಲಿನ ಕುರಿತಾದ ರಹಸ್ಯ ಮಾಹಿತಿ ಇಲ್ಲಿದೆ. 
 

27

ಬದರೀನಾಥ ದೇವಾಲಯ ಎಲ್ಲಿದೆ? 
ಬದರಿನಾಥ ದೇವಾಲಯ ಉತ್ತರಾಖಂಡದ ಚಮೋಲಿ ಜಿಲ್ಲೆಯ ಅಲಕನಂದಾ ನದಿಯ ದಡದಲ್ಲಿದೆ. ಇಲ್ಲಿ, ಬದರೀನಾಥ ಧಾಮದಲ್ಲಿ ವಿಷ್ಣುವನ್ನು ಪೂಜಿಸಲಾಗುತ್ತದೆ. ಬದರೀನಾಥ ಧಾಮದ ಬಾಗಿಲುಗಳು ತೆರೆಯು ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. 

37

ಬದರೀನಾಥಕ್ಕೆ ಯಾವಾಗ ತೀರ್ಥಯಾತ್ರೆಗೆ ಹೋಗಬೇಕು?
ಇಲ್ಲಿ ಭೇಟಿ ನೀಡಲು ಉತ್ತಮ ಸಮಯ ಎಂದರೆ ಬೇಸಿಗೆ. ಮೇ ಮತ್ತು ನವೆಂಬರ್ ನಡುವೆ ನೀವು ಇಲ್ಲಿಗೆ ಹೋಗಬಹುದು.  ಮೇ ಮತ್ತು ಜೂನ್ ಮತ್ತು ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಕಡಿಮೆ ಹಿಮಪಾತವಿರುತ್ತದೆ, ಆದ್ದರಿಂದ ಈ ತಿಂಗಳುಗಳಲ್ಲಿ ಭೇಟಿ ನೀಡುವುದು ಉತ್ತಮವೆಂದು ಪರಿಗಣಿಸಲಾಗಿದೆ. ಚಳಿಗಾಲದಲ್ಲಿ, ಇಲ್ಲಿನ ತಾಪಮಾನವು 1 ರಿಂದ 14 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ. ಹಾಗಾಗಿ ಆ ಸಮಯದಲ್ಲಿ ಇಲ್ಲಿ ಭೇಟಿ ನೀಡದೇ ಇರೋದು ಬೆಸ್ಟ್.

47

ಬದರೀನಾಥದಲ್ಲಿ ನಾಯಿಗಳು ಏಕೆ ಬೊಗಳುವುದಿಲ್ಲ?
ಬದರಿನಾಥ ದೇಗುಲದಲ್ಲಿ ಒಂದು ರಹಸ್ಯ ಇದೆ. ಅದನ್ನು ತಿಳಿದರೆ ನಿಮಗೆ ಅಚ್ಚರಿಯಾಗಬಹುದು. ಬದರೀನಾಥದಲ್ಲಿ ನಾಯಿ ಬೊಗೊಳೋದಿಲ್ಲವಂತೆ. ಅಷ್ಟೇ ಅಲ್ಲ, ಇಲ್ಲಿ ಮಿಂಚು ಮಿಂಚುತ್ತದೆ, ಆದರೆ ಅದು ಗುಡುಗೋದೆ ಇಲ್ಲ, ಮೋಡಗಳು ಆವರಿಸಿ ಮಳೆ ಬೀಳುತ್ತವೆ ಆದರೆ ಮೋಡಗಳು ಘರ್ಜಿಸುವುದಿಲ್ಲ. ಬದರೀನಾಥದಲ್ಲಿ, ಮೋಡಗಳಿಂದ ಎಂದಿಗೂ ಗುಡುಗು ಮತ್ತು ಮಿಂಚಿನ ಸದ್ದನ್ನು ಕೇಳೋದಕ್ಕೆ ಸಾಧ್ಯವಿಲ್ಲ. ಅಷ್ಟೇ ಆಲ್ಲ ಇಲ್ಲಿ ನಾಯಿಗಳು ಬೊಗಳೋದನ್ನೆ (barking of Dog) ನೋಡೋಲು ಸಿಗೋದೇ ಇಲ್ಲವಂತೆ. 

57

ಇದಕ್ಕೆ ಕಾರಣ ಏನು? 
ಇದರ ಹಿಂದಿನ ಕಾರಣವೆಂದರೆ ಭಗವಾನ್ ಶ್ರೀ ಹರಿ ನಾರಾಯಣ ಬದರೀನಾಥ ಧಾಮದಲ್ಲಿ (Sri Hari Narayana Badrinath Dham) ಏಕಾಗ್ರತೆಯ ಸ್ಥಿತಿಯಲ್ಲಿ ಧ್ಯಾನ ಮಾಡುತ್ತಿದ್ದಾರೆ. ಹಾಗಾಗಿ ಪ್ರಕೃತಿಯೂ ಅವನ ಧ್ಯಾನಕ್ಕೆ ಸಹಕರಿಸುತ್ತಿದೆ. ಹಾಗಾಗಿಯೇ ಹರಿಯ ತಪಸ್ಸನ್ನು ಭಂಗಗೊಳಿಸಲು ಇಷ್ಟಪಡದ ಗುಡುಗು, ನಾಯಿ ಎಲ್ಲಾ ಆ ಪ್ರದೇಶದಲ್ಲಿ ಮೌನವಾಗಿರುತ್ತೆ. ಇತರ ಸ್ಥಳಗಳಲ್ಲಿ, ಮೋಡಗಳು ಮೊದಲು ಘರ್ಜಿಸುತ್ತವೆ ಮತ್ತು ನಂತರ ಮಳೆಯಾಗುತ್ತವೆ, ಆದರೆ ಬದರೀನಾಥದಲ್ಲಿ, ಮೋಡ ಇರುತ್ತೆ, ಆದರೆ ಗುಡುಗು ಬರೋದೆ ಇಲ್ಲ. 

67

ಮಿಂಚುತ್ತೆ, ಆದರೆ ಗುಡುಗೋದಿಲ್ಲ
ಬದರೀನಾಥದಲ್ಲಿ ಮಿಂಚು ಕಾಣಿಸಿಕೊಳ್ಳುತ್ತೆ, ಅದು ಹೊಳೆಯುತ್ತದೆ, ಆದರೆ ಅದು ಎಂದಿಗೂ ಗುಡುಗುವುದಿಲ್ಲ. ಏಕೆಂದರೆ ಭಗವಾನ್ ಹರಿ ನಾರಾಯಣನ ತಪಸ್ಸಿಗೆ ಭಂಗ ತರಲು ಅವು ಬಯಸುವುದಿಲ್ಲ.  ಇದೇ ಆ ಪ್ರದೇಶದಲ್ಲಿನ ಬಗೆಹರಿಯದ ರಹಸ್ಯವಾಗಿದೆ. 

77

ಇತರ ಪೌರಾಣಿಕ ನಂಬಿಕೆಗಳು 
ಇತರ ಕೆಲವು ಪೌರಾಣಿಕ ನಂಬಿಕೆಗಳ ಪ್ರಕಾರ, ವಿಷ್ಣುವು ಬದರೀನಾಥದಲ್ಲಿ ನಾರಾಯಣನಾಗಿ ಅವತಾರ ತಾಳಿದನು. ಆ ಸಮಯದಲ್ಲಿ, ಅವರು ನಾಯಿಗಳು ಈ ಸ್ಥಳದಲ್ಲಿ ಎಂದಿಗೂ ಬೊಗಳಬಾರದು ಎಂದು ಶಪಿಸಿದರಂತೆ. ಮತ್ತೊಂದು ನಂಬಿಕೆಯೆಂದರೆ ನಾಯಿಗಳು ಈ ಸ್ಥಳದಲ್ಲಿ ದೇವರ ಸೇವಕರು. ಹಾಗಾಗಿಯೇ ನಾಯಿಗಳು ಇಲ್ಲಿ ಶಾಂತಿ ಧೂತರಂತೆ ಸುಮ್ಮನಿದ್ದು ಬಿಡುತ್ತವೆ.  ಎಂದಿಗೂ ಬೊಗಳೋದಿಲ್ಲ. 
 

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಬದರಿನಾಥ ದೇವಾಲಯ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved