MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Technology
  • Science
  • ಪ್ರತಿ 26 ಸೆಕೆಂಡ್‌ಗೆ ಗಢ ಗಢ ನಡುಗುತ್ತಿದೆ ಭೂಮಿ; ವಿಜ್ಞಾನಿಗಳಿಗೆ ಕಬ್ಬಿಣದ ಕಡಲೆಯಾದ ಅಚ್ಚರಿ ವಿದ್ಯಮಾನ

ಪ್ರತಿ 26 ಸೆಕೆಂಡ್‌ಗೆ ಗಢ ಗಢ ನಡುಗುತ್ತಿದೆ ಭೂಮಿ; ವಿಜ್ಞಾನಿಗಳಿಗೆ ಕಬ್ಬಿಣದ ಕಡಲೆಯಾದ ಅಚ್ಚರಿ ವಿದ್ಯಮಾನ

The secret of the Earth: ಪ್ರತಿ 26 ಸೆಕೆಂಡ್‌ಗಳಿಗೊಮ್ಮೆ ಭೂಮಿ ಕಂಪಿಸುತ್ತಿರುವ ಅಚ್ಚರಿಯ ವಿದ್ಯಮಾನವನ್ನು ವಿಜ್ಞಾನಿಗಳು ಗಮನಿಸುತ್ತಿದ್ದಾರೆ. ಈ ಸೂಕ್ಷ್ಮ ಕಂಪನಗಳಿಗೆ ನಿಖರವಾದ ಕಾರಣ ಇನ್ನೂ ನಿಗೂಢವಾಗಿದೆ.

2 Min read
Mahmad Rafik
Published : Sep 09 2025, 04:44 PM IST
Share this Photo Gallery
  • FB
  • TW
  • Linkdin
  • Whatsapp
15
ಹೃದಯಬಡಿತ ಹೆಚ್ಚಾಗುವ ಸುದ್ದಿ
Image Credit : Getty

ಹೃದಯಬಡಿತ ಹೆಚ್ಚಾಗುವ ಸುದ್ದಿ

ಜನರ ಹೃದಯಬಡಿತ ಹೆಚ್ಚಾಗುವ ಸುದ್ದಿಯೊಂದು ಹೊರಬಂದಿದ್ದು, ವಿಜ್ಞಾನಿಗಳಿಗೂ ಇದು ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಹಲವು ದಶಕಗಳಿಂದ ಈ ವಿದ್ಯಮಾನ ಸಂಭವಿಸುತ್ತಿದ್ದು, ಈ ಸಂಬಂಧ ವಿಜ್ಞಾನಿಗಳು ಗಂಭೀರವಾಗಿ ಸಂಶೋಧನೆ ಮಾಡುತ್ತಿದ್ದಾರೆ. ಭೂಮಿಯ ಈ ಅಚ್ಚರಿ ವಿದ್ಯಮಾನವನ್ನು 2005ರಲ್ಲಿ ಪತ್ತೆ ಮಾಡಲಾಗಿತ್ತು.

25
26 ಸೆಕೆಂಡ್‌ನ ಕಂಪನ
Image Credit : X

26 ಸೆಕೆಂಡ್‌ನ ಕಂಪನ

ಭೂಕಂಪ ಸಂಭವಿಸಿದಾಗ ಭೂಮಿ ಅಲ್ಲಾಡಿದ ಅನುಭವ ಆಗಿರುತ್ತದೆ. 2005ರಿಂದ ಪ್ರತಿ 26 ಸೆಕೆಂಡ್‌ಗೆ ಭೂಮಿ ಕಂಪಿಸುತ್ತಿದೆ. 26 ಸೆಕೆಂಡ್‌ನ ಕಂಪನ ಅತ್ಯಂತ ಸೌಮ್ಯವಾಗಿದ್ದು, ಜನರ ಅನುಭವಕ್ಕೆ ಬರುತ್ತಿಲ್ಲ. ಈ ಸೌಮ್ಯವಾದ ಕಂಪನದಿಂದ ಭೂಮಿ ಮೇಲೆ ಯಾವುದೇ ರೀತಿಯ ಹಾನಿಯನ್ನುಂಟು ಮಾಡುತ್ತಿಲ್ಲ. ಆದ್ರೆ ಭೂಮಿಯ ಅಂತರಾಳದಲ್ಲಿ ಏನು ನಡೆಯುತ್ತಿದೆ ಎಂಬುವುದು ವಿಜ್ಞಾನಿಗಳ ತರ್ಕಕ್ಕೆ ಸಿಗುತ್ತಿಲ್ಲ. ಭೂಮಿಯೊಳಗೆ ಅಚ್ಚರಿಯ ವಿದ್ಯಮಾನ ನಡೆಯುತ್ತಿರೋದು ಮಾತ್ರ ಖಚಿತವಾಗಿದೆ.

Related Articles

Related image1
ಮೊಟ್ಟೆ ನಿಜವಾಗಿಯೂ ‘ಸೂಪರ್ ಫುಡ್’ ಹೌದೇ? ವಿಜ್ಞಾನ ಏನು ಹೇಳುತ್ತೆ?
Related image2
ನಭಕ್ಕೆ ಸೇರಿದ ಇಸ್ರೋ-ನಾಸಾದ ಅತ್ಯಂತ ದುಬಾರಿ, ಶಕ್ತಿಶಾಲಿ ಉಪಗ್ರಹ ನಿಸಾರ್‌ !
35
ಸಮುದ್ರ ಅಲೆಗಳ ಸೃಷ್ಟಿ
Image Credit : Asianet News

ಸಮುದ್ರ ಅಲೆಗಳ ಸೃಷ್ಟಿ

ಸೂರ್ಯದ ತಾಪಮಾನ ಏರಿಕೆಯಾದ್ರೆ ತಾಪಮಾನ ಅಧಿಕವಾಗಿ ಸಮುದ್ರದಲ್ಲಿ ಚಂಡಮಾರುತ, ಬಿರುಗಾಳಿ ಉಂಟಾಗುತ್ತದೆ. ಇದರಿಂದ ದೊಡ್ಡ ಸಮುದ್ರ ಅಲೆಗಳ ಸೃಷ್ಟಿಯಾಗುತ್ತದೆ. ಸಮುದ್ರದ ಅಲೆಗಳು ದಡಕ್ಕೆ ಅಪ್ಪಳಿಸಿದಾಗ ಅವುಗಳ ಶಕ್ತಿ ಭೂಮಿಗೆ ರವಾನೆಯಾಗುತ್ತದೆ. ಈ ಶಕ್ತಿ ಭೂಮಿಯಾದ್ಯಂತ ಹರಡುತ್ತದೆ. ಈ ವಿದ್ಯಮಾನವನ್ನು ವಿಜ್ಞಾನಿಗಳು ಕಂಪನಗಳ ರೂಪದಲ್ಲಿ ದಾಖಲಿಸುತ್ತಿದ್ದಾರೆ. ಸಾಗರದಲ್ಲಿ ಉತ್ಪತ್ತಿಯಾಗುವ ಶಕ್ತಿ ಭೂಮಿಯಾದ್ಯಂತ ಹರಡುತ್ತದೆ.

ಇದನ್ನೂ ಓದಿ: ಐದು ತಂತ್ರಜ್ಞಾನವನ್ನು ಭಾರತೀಯ ಕಂಪನಿಗಳಿಗೆ ಹಸ್ತಾಂತರ ಮಾಡಿದ ಇಸ್ರೋ!

45
ಕಾರಣ ಏನಿರಬಹುದು?
Image Credit : Asianet News

ಕಾರಣ ಏನಿರಬಹುದು?

ಈ ಪ್ರತಿ 26 ಸೆಕೆಂಡ್‌ಗಳ ಭೂಮಿಯ ಕಂಪನ ಯಾಕಾಗುತ್ತಿದೆ ಅನ್ನೋದು ಇನ್ನೂ ನಿಗೂಢವಾಗಿದೆ. ಕಾರಣ ತಿಳಿಯದ ಹಿನ್ನೆಲೆಯಲ್ಲಿ ಇದನ್ನು ನಿಗೂಢ ವಿದ್ಯಮಾನ ಅಂತಾನೇ ಕರೆಯಲಾಗುತ್ತದೆ. ಈ ಕಂಪನ ಭೂಮಿಯ ಆಳದಲ್ಲಿನ ಅಂದರೆ ಮ್ಯಾಂಟಲ್ ಮತ್ತು ಕೋರ್ ನಡುವಿನ ಚಲನೆ/ಘರ್ಷಣೆ/ಚಟುವಟಿಕೆಯಿಂದ ಸಂಭವಿಸುತ್ತಿರಬಹುದು ಎಂದು ಕೆಲ ಸಂಶೋಧಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ಸಮುದ್ರದ ಶಕ್ತಿ ಎಫೆಕ್ಟ್ ಎಂದು ಹೇಳುತ್ತಾರೆ.

ಇದನ್ನೂ ಓದಿ: ವೇಗವಾಗಿ ತಿರುಗುತ್ತಿದೆ ಭೂಮಿ: 2029ರಲ್ಲಿ ಸಮಯದಲ್ಲಿ ಬದಲಾವಣೆ! ಏನಿದು ಕುತೂಹಲದ ವಿದ್ಯಮಾನ?

55
ಬಿಡಿಸಲಾದ ಒಗಟು
Image Credit : Getty

ಬಿಡಿಸಲಾದ ಒಗಟು

2005ರಿಂದ ಅಂದ್ರೆ ಎರಡು ದಶಕಗಳಿಂದ ಈ ಭೂಮಿಯ ಆಂತರಿಕ ರಚನೆಯನ್ನು ಅರ್ಥಮಾಡಿಕೊಳ್ಳಲು ಭೂಕಂಪನ ಶಬ್ದ ಬಳಕೆ ಮಾಡಿಕೊಂಡು ಅಧ್ಯಯನ ನಡೆಸುತ್ತಿದ್ದಾರೆ. ಭೂಕಂಪನ ಶಬ್ದದಿಂದ ದೋಷ ರೇಖೆಗಳು ಮತ್ತು ಕ್ರಸ್ಟ್-ಮ್ಯಾಂಟಲ್ ಕುರಿತ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಈವರೆಗೂ 26 ಸೆಕೆಂಡುಗಳ ಕಂಪನ ವಿಜ್ಞಾನಿಗಳಿಗೆ ಬಿಡಿಸಲಾದ ಒಗಟು ಆಗಿದೆ. ಸದ್ಯಕ್ಕೆ 26 ಸೆಕೆಂಡುಗಳಲ್ಲಿ ಭೂಮಿಯು ಕಂಪಿಸುವುದು ನಿಗೂಢವಾಗಿಯೇ ಉಳಿದಿದೆ.

ಇದನ್ನೂ ಓದಿ: ಕ್ಯಾನ್ಸರ್‌ಗೆ ಹೊಸ ವ್ಯಾಕ್ಸಿನ್, ರಷ್ಯಾದ ಔಷಧಿ ಮಾರಕ ರೋಗಕ್ಕೆ ಆಗುತ್ತಾ ವರ?

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಭೂಮಿ
ಭೂಕಂಪ
ವಿಜ್ಞಾನ

Latest Videos
Recommended Stories
Recommended image1
ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
Recommended image2
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ
Recommended image3
ಬ್ರಹ್ಮೋಸ್‌ ವಿಜ್ಞಾನಿ ಸೇರಿ ಒಂದೇ ತಿಂಗಳ ಅಂತರದಲ್ಲಿಒಂದೇ ರೀತಿ 2 ವಿಜ್ಞಾನಿಗಳ ಹಠಾತ್ ಸಾವು: ವೈದ್ಯರ ಅನುಮಾನ
Related Stories
Recommended image1
ಮೊಟ್ಟೆ ನಿಜವಾಗಿಯೂ ‘ಸೂಪರ್ ಫುಡ್’ ಹೌದೇ? ವಿಜ್ಞಾನ ಏನು ಹೇಳುತ್ತೆ?
Recommended image2
ನಭಕ್ಕೆ ಸೇರಿದ ಇಸ್ರೋ-ನಾಸಾದ ಅತ್ಯಂತ ದುಬಾರಿ, ಶಕ್ತಿಶಾಲಿ ಉಪಗ್ರಹ ನಿಸಾರ್‌ !
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved