MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Raksha Bandhan Wishes
Yash Toxic 2 Days Collections
MLA Vinay Kulkarni
BJP Leaders Meet Siddaramaiah
Nepal Floods Death Toll
Teachers Suspended RSS Pathsanchalan
CM DK Shivakumar
Koppal Urban Development Authority
Toxic Movie Analysis
Nepal-tibet Floods
New Financial Rules September
  • Home
  • Entertainment
  • Sandalwood
  • ಆರೋಗ್ಯಕ್ಕೆ ಬೇಕು ತಂಗಳನ್ನ: ನಟರಾದ ಸಪ್ತಮಿ ಗೌಡ- ನೀನಾಸಂ ಸತೀಶ್​ ಹೇಳಿದ ಮಾತು ಕೇಳಿ

ಆರೋಗ್ಯಕ್ಕೆ ಬೇಕು ತಂಗಳನ್ನ: ನಟರಾದ ಸಪ್ತಮಿ ಗೌಡ- ನೀನಾಸಂ ಸತೀಶ್​ ಹೇಳಿದ ಮಾತು ಕೇಳಿ

ಆಧುನಿಕ ಆಹಾರ ಪದ್ಧತಿಯಿಂದ ಹೆಚ್ಚುತ್ತಿರುವ ರೋಗಗಳ ನಡುವೆ, ನಮ್ಮ ಹಿರಿಯರ ಆಹಾರವಾದ ತಂಗಳನ್ನದ ಮಹತ್ವವನ್ನು ನಟರಾದ ಸತೀಶ್ ನಿನಾಸಂ ಮತ್ತು ಸಪ್ತಮಿಗೌಡ ವಿವರಿಸಿದ್ದಾರೆ. ಶುಗರ್ ನಿಯಂತ್ರಣ ಸೇರಿದಂತೆ ಹಲವು ಆರೋಗ್ಯ ಪ್ರಯೋಜನ ಹೊಂದಿರುವ ತಂಗಳನ್ನದ ಬಗ್ಗೆ ವೈದ್ಯರೂ ಶಿಫಾರಸು ಮಾಡುತ್ತಾರೆ ಎಂದಿದ್ದಾರೆ.

2 Min read
Author : Suchethana D
Published : Feb 22 2026, 06:16 PM IST
Share this Photo Gallery
  • FB
  • TW
  • Linkdin
  • Whatsapp
16
ಆಧುನಿಕತೆ ಹೆಸರಲ್ಲಿ ಬದಲು
Image Credit : social media

ಆಧುನಿಕತೆ ಹೆಸರಲ್ಲಿ ಬದಲು

ಆಧುನಿಕತೆಯ ಹೆಸರಿನಲ್ಲಿ ಆಹಾರ ಕ್ರಮಗಳಲ್ಲಿಯೂ ಸಾಕಷ್ಟು ಬದಲಾವಣೆ ಆಗಿಬಿಟ್ಟಿದೆ. ಫಾಸ್ಟ್​ ಫುಡ್​, ಮನೆಯಲ್ಲಿಯೇ ಕುಳಿತು ಆರ್ಡರ್​ ಅದೂ ಇದೂ ಅಂತೆಲ್ಲಾ ಹೆಚ್ಚಾಗುತ್ತಿದ್ದಂತೆಯೇ ಇಲ್ಲಸಲ್ಲದ ಮಾರಣಾಂತಿಕ ರೋಗಗಳೂ ಆವರಿಸಿಕೊಳ್ಳಲು ಶುರು ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಬುದ್ಧಿವಂತ ಹಿರಿಯರು
Image Credit : freepik

ಬುದ್ಧಿವಂತ ಹಿರಿಯರು

ಆದರೆ ನಮ್ಮ ಹಿರಿಯರು ಅಷ್ಟೇ ಅಲ್ಲ, ಈಗಲೂ ಎಷ್ಟೋ ಗ್ರಾಮೀಣ ಪ್ರದೇಶಗಳಲ್ಲಿ ಹಿಂದಿನ ದಿನದ ಅನ್ನವನ್ನು ಅರ್ಥಾತ್​ ತಂಗಳನ್ನವನ್ನೇ ತಿಂದು ಹೋಗುವುದು ಉಂಟು. ಕೆಲವರಿಗೆ ಬಿಸಿಬಿಸಿ ಅನ್ನ ತಿನ್ನಲು ಸಾಧ್ಯವಾಗದೇ ಇರುವುದು ಕಾರಣವಾದರೆ, ಅನುಕೂಲಸ್ಥರು ಕೂಡ ತಂಗಳನ್ನದ ಮಹತ್ವ ಗೊತ್ತಿದ್ದೇ ಅದನ್ನು ತಿನ್ನುವುದು ಉಂಟು. ಆದರೆ ಇಂದು ಯಾರಾದರೂ ತಂಗಳನ್ನ ತಿನ್ನುತ್ತಾರೆ ಎಂದರೆ ಅವರನ್ನು ಮುಖವೆಲ್ಲ ತಿವುಚಿ ನೋಡುವ ಮಾಡರ್ನ್​ ಜನರೂ ಇಲ್ಲದಿಲ್ಲ.

Related Articles

Related image1
ಎಲ್ಲಾ ವಯಸ್ಸಿನವರಲ್ಲೂ ಹೆಚ್ಚುತ್ತಿದೆ ವಿಟಮಿನ್​ B 12 ಸಮಸ್ಯೆ: ಆಯುರ್ವೇದ ವೈದ್ಯೆಯಿಂದ ಸಿಂಪಲ್​ ಮನೆಮದ್ದು
Related image2
ತಾಮ್ರದ ಪಾತ್ರೆ ಕಪ್ಪಾಗೋ ಚಿಂತೆನಾ? ಇನ್ಮುಂದೆ ಟೆನ್ಷನ್​ ಬಿಡಿ- ಫಳಫಳ ಹೊಳಪಿಗೆ ಇಲ್ಲಿದೆ ಸೂಪರ್​ ಟಿಪ್ಸ್​
36
ನಟರಿಂದ ಆರೋಗ್ಯದ ಟಿಪ್ಸ್​
Image Credit : Instagram

ನಟರಿಂದ ಆರೋಗ್ಯದ ಟಿಪ್ಸ್​

ಆದರೆ, ತಂಗಳನ್ನದ ಮಹತ್ವದ ಬಗ್ಗೆ ಸ್ಟಾರ್​ ನಟರಾದ ಸತೀಶ್ ನಿನಾಸಂ(Sathish Ninasam) ಮತ್ತು ಸಪ್ತಮಿಗೌಡ (Sapthami Gowda) ತಿಳಿಸಿಕೊಟ್ಟಿದ್ದಾರೆ. ಕನ್ನಡ ಪಿಚ್ಚರ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಅವರು, ಇತ್ತೀಚಿನ ದಿನಗಳಲ್ಲಿ ಜನರಿಗೆ ನಮ್ಮ ಹಿರಿಯರು ಮಾಡ್ತಿರೋದೇ ಸರಿ ಎನ್ನಿಸುವುದು ಉಂಟು. ಅದೇ ಕಾರಣಕ್ಕೆ ಮತ್ತೆ ತಂಗಳನ್ನದ ಮೊರೆ ಹೋಗುತ್ತಿದ್ದಾರೆ ಎಂದಿದ್ದಾರೆ.

46
ತಂಗಳನ್ನದ ಮಹತ್ವ
Image Credit : our own

ತಂಗಳನ್ನದ ಮಹತ್ವ

ತಂಗಳನ್ನ ತಿನ್ನಿ ಎಂದು ವೈದ್ಯರೇ ಹೇಳುತ್ತಾರೆ. ಶುಗರ್​ ಲೆವೆಲ್​ ಕಡಿಮೆ ಮಾಡುವುದು ಸೇರಿದಂತೆ ಹಲವು ಸಮಸ್ಯೆಗಳಿಗೆ ಹಿಂದಿನ ದಿನದ ಅನ್ನ, ಮುದ್ದೆ ತಿಂದರೆ ಒಳ್ಳೆಯದು. ಅದರಲ್ಲಿಯೂ ಹಿಂದಿನ ದಿನದ ಅನ್ನಕ್ಕೆ ಮಾರನೆಯ ದಿನ ಮೊಸರು ಕಲಿಸಿ ತಿನ್ನುವುದರಿಂದ ಇದು ಆರೋಗ್ಯಕ್ಕೂ ಒಳ್ಳೆಯದು ಎಂದು ನಟರು ಹೇಳಿದ್ದಾರೆ.

56
ಹಿರಿಯರು ಬುದ್ಧಿವಂತರು
Image Credit : our own

ಹಿರಿಯರು ಬುದ್ಧಿವಂತರು

ನಮ್ಮ ಹಿಂದಿನವರು ಎಲ್ಲವನ್ನೂ ತಿಳಿದೇ ಇವುಗಳನ್ನು ಮಾಡುತ್ತಿದ್ದರು. ಆಗ ಮಾಡ್ತಿರೋದೆಲ್ಲವೂ ಆರೋಗ್ಯಪೂರ್ಣವೇ ಆಗಿತ್ತು. ಆದರೆ ನಮ್ಮ ಹಿರಿಯರಿಗೆ ಏನು ಗೊತ್ತು ಎಂದು ಇವತ್ತಿನ ದಿನ, ಆಧುನಿಕತೆಯ ಹೆಸರಿನಲ್ಲಿ ಏನೇನೋಮಾಡುತ್ತಿದ್ದೇವೆ. ಆದರೆ ಸ್ವಲ್ಪ ಜನರಿಗೆ ಜಾಗ್ರತಿ ಮೂಡಿದ್ದು, ಮತ್ತೆ ಹಿಂದಿನ ದಿನಗಳಿಗೆ ನಾವು ಹೋಗಲೇಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಸತೀಶ್​ ಹೇಳಿದ್ದಾರೆ.

66
ದಿ ರೈಸ್ ಆಫ್ ಅಶೋಕ
Image Credit : Instagram

ದಿ ರೈಸ್ ಆಫ್ ಅಶೋಕ

ಅಂದಹಾಗೆ, ಸತೀಶ್ ನಿನಾಸಂ ಮತ್ತು ಸಪ್ತಮಿಗೌಡ ಅಭಿನಯದ ದಿ ರೈಸ್ ಆಫ್ ಅಶೋಕ (The Rise Of Ashoka Trailer) ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ. ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಬಹುನಿರೀಕ್ಷಿತ ಈ ಚಿತ್ರವು ಫೆಬ್ರವರಿ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ಟ್ರೇಲರ್ ಅನ್ನು ಹಿರಿಯ ನಟ ರವಿಚಂದ್ರನ್, ದುನಿಯಾ ವಿಜಯ್, ಪ್ರಜ್ವಲ್ ದೇವರಾಜ್, ಡಾಲಿ ಧನಂಜಯ್, ಯೋಗೆಶ್,ದಿಗಂತ್, ಡಾರ್ಲಿಂಗ್ ಕೃಷ್ಣಾ ಸೇರಿದಂತೆ ಅನೇಕ ಖ್ಯಾತನಾಮರು ಬಿಡುಗಡೆ ಮಾಡಿದರು. ಮನು ಶೆಡ್ಲಾರ್ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ವೃದ್ದಿ ಕ್ರಿಯೇಷನ್ಸ್ ಜೊತೆಗೆ ಸತೀಶ್ ನೀನಾಸಂ ಅವರು ನಿರ್ಮಾಣ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಸ್ಯಾಂಡಲ್‌ವುಡ್
ಆಹಾರ
ಆರೋಗ್ಯ
ಆರೋಗ್ಯಕರ ಆಹಾರಗಳು
ಮನರಂಜನಾ ಸುದ್ದಿ

Latest Videos
Recommended Stories
Recommended image1
ಶಿವಣ್ಣನ ‘ಬೇಲ್’ ಟೀಸರ್ ರಿಲೀಸ್‌: ಪೊಲೀಸ್‌ ಆಫೀಸರ್‌ ಅವತಾರದಲ್ಲಿ ಖಡಕ್‌ ಎಂಟ್ರಿ, ಕಥೆ ಏನು?
Recommended image2
ಶಿವಣ್ಣಂಗೆ ಚಿನ್ನದ ರಾಖಿ ಕಟ್ಟಿದ ರಾಧಿಕಾ ಕುಮಾರಸ್ವಾಮಿ: 'ಅಣ್ಣ-ತಂಗಿ'ಯನ್ನು ನೆನಪಿಸೋ ವಿಡಿಯೋ ಮತ್ತೆ ವೈರಲ್​
Recommended image3
ವಿಮರ್ಶೆ-ಟ್ರೋಲ್‌ಗಳ ನಡುವೆ ಯಶ್‌ಗೆ ಕಿಚ್ಚನ ಬೆಂಬಲ: ‘ಟಾಕ್ಸಿಕ್’ ಬಗ್ಗೆ ಸುದೀಪ್‌ ಹೇಳಿದ್ದೇನು?
Related Stories
Recommended image1
ಎಲ್ಲಾ ವಯಸ್ಸಿನವರಲ್ಲೂ ಹೆಚ್ಚುತ್ತಿದೆ ವಿಟಮಿನ್​ B 12 ಸಮಸ್ಯೆ: ಆಯುರ್ವೇದ ವೈದ್ಯೆಯಿಂದ ಸಿಂಪಲ್​ ಮನೆಮದ್ದು
Recommended image2
ತಾಮ್ರದ ಪಾತ್ರೆ ಕಪ್ಪಾಗೋ ಚಿಂತೆನಾ? ಇನ್ಮುಂದೆ ಟೆನ್ಷನ್​ ಬಿಡಿ- ಫಳಫಳ ಹೊಳಪಿಗೆ ಇಲ್ಲಿದೆ ಸೂಪರ್​ ಟಿಪ್ಸ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved