MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ಅಣ್ಣಾವರನ್ನು ನೋಡಿದ ತಕ್ಷಣ Amitabh Bachchan ಮಾಡಿದ್ದೇನು ಗೊತ್ತಾ?

ಅಣ್ಣಾವರನ್ನು ನೋಡಿದ ತಕ್ಷಣ Amitabh Bachchan ಮಾಡಿದ್ದೇನು ಗೊತ್ತಾ?

ಇಂದು ದಕ್ಷಿಣ ಚಿತ್ರರಂಗದ ಸೂಪರ್‌ ಸ್ಟಾರ್  ದಿವಂಗತ  ಡಾ. ರಾಜ್‌ಕುಮಾರ್  (Dr Rajkumar) ಅವರಇಂದು 93 ನೇ ಜನ್ಮದಿನವಾಗಿದೆ.  1929 ರ ಏಪ್ರಿಲ್ 24 ರಂದು  ಅವರು ಕರ್ನಾಟಕದ ಗಾಜನೂರಿನಲ್ಲಿ 1929 ರಲ್ಲಿ ಜನಿಸಿದರು. ಅವರ ನಿಜವಾದ ಹೆಸರು ಸಿಂಗಳೂರು ಪುಟ್ಟಸ್ವಾಮಿ ಮುತ್ತುರಾಜು, ಆದರೆ ಅವರು ಮನರಂಜನಾ ಕ್ಷೇತ್ರದಲ್ಲಿ ಡಾ.ರಾಜ್‌ಕುಮಾರ್ ಎಂದು ಪ್ರಸಿದ್ಧರಾದರು. ಆಣ್ಣವರ ಮತ್ತು ಅಮಿತಾಬ್‌ ಬಚ್ಚನ್‌ ಅವರ ಭೇಟಿಯ ಘಟನೆಯನ್ನು   ಮಿಮಿಕ್ರಿ  ದಯಾನಂದ ಅವರು ಬಹಿರಂಗ ಪಡಿಸಿದ್ದಾರೆ. ರಾಜ್‌ ಕುಮಾರ್‌ ಅವರನ್ನು ನೋಡಿದ ತಕ್ಷಣ ಅಮಿತಾಬ್‌ ಏನು ಮಾಡಿದ್ದರು ಗೊತ್ತಾ? 

2 Min read
Suvarna News
Published : Apr 24 2022, 05:32 PM IST
Share this Photo Gallery
  • FB
  • TW
  • Linkdin
  • Whatsapp
110

ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಡಾ.ರಾಜ್ ಕುಮಾರ್ ಅವರು ಅಣ್ಣಾವರು ಎಂಬ ಹೆಸರಿನಿಂದಲೇ ಪ್ರಖ್ಯಾತರಾದರು. ಕನ್ನಡ ಚಿತ್ರರಂಗದಲ್ಲಿ ಅವರು ಗಳಿಸಿದ ಸ್ಟಾರ್ ಪಟ್ಟವನ್ನು ಅವರ ನಂತರ ಯಾರೂ ಮುಟ್ಟಿರಲಿಲ್ಲ. 

210

ಅವರ ಜನ್ಮದಿನದ ಸಂದರ್ಭದಲ್ಲಿ, ಮಿಮಿಕ್ರಿ ಕಲಾವಿದ ದಯಾನಂದ್ ಅವರನ್ನು ನೆನಪಿಸಿಕೊಂಡರು ಮತ್ತು  ಸೂಪರ್‌ ಸ್ಟಾರ್‌ ಅಮಿತಾಬ್ ಬಚ್ಚನ್ ಅವರನ್ನು ಭೇಟಿಯಾದ ಹಳೆಯ ಘಟನೆಯನ್ನು ಹಂಚಿಕೊಂಡರು. 

310

ಕರ್ನಾಟಕದಲ್ಲಿ ಇಂದ್ರಜಿತ್ ಚಿತ್ರದ ಶೂಟಿಂಗ್ ನಡೆಯುತ್ತಿದ್ದ ಸಮಯದಲ್ಲಿ ನಡೆದ ಘಟನೆಯಾಗಿದೆ ಇದು. ಈ ಚಿತ್ರದ ನಿರ್ದೇಶಕರು ಕೆ ವಿ ರಾಜು.  ಬಿಗ್ ಬಿ ಮತ್ತು ರಾಜ್‌ ಕುಮಾರ್‌ ಅವರ ಭೇಟಿಯ ಕುತೂಹಲಕಾರಿ ಘಟನೆಯನ್ನು ದಯಾನಂದ ಅವರು ಹಂಚಿಕೊಂಡಿದ್ದಾರೆ
 

410

 ನಾನು ಅಣ್ಣವರ ಜೊತೆ ಪರಶುರಾಮ್ ಚಿತ್ರೀಕರಣದಲ್ಲಿದ್ದಾಗ, ಅದೇ ಸ್ಥಳದಲ್ಲಿ ಶೂಟಿಂಗ್ ಮಾಡುತ್ತಿದ್ದ ಅಮಿತಾಬ್ ಬಚ್ಚನ್ ಅವರನ್ನು ಭೇಟಿಯಾಗಬಹುದೇ ಎಂದು ಅವರು ನನಗೆ ಕೇಳಿದಾಗ. ಯಾಕೆ ಇಲ್ಲ, ಅವರು ಖಂಡಿತವಾಗಿಯೂ ನಿಮ್ಮನ್ನು ಭೇಟಿಯಾಗುತ್ತಾರೆ ಎಂದು  ನಾನು ಹೇಳಿದೆ.

510

ಅಲ್ಲಿ ತುಂಬಾ ಬಿಗಿ ಭದ್ರತೆ ಇರುತ್ತದೆ ಎಂದು ಅಣ್ಣಾವರು ಹೇಳಿದರು.ಅಣ್ಣಾವರನ್ನು ತಡೆಯುವ ಧೈರ್ಯ ಯಾರಿಗೂ ಸಾಧ್ಯವಾಗದಿದ್ದರೂ, ಅವರು ಸಾಮಾನ್ಯ ಮನುಷ್ಯನಂತೆ ಬಿಗ್ ಬಿ ಅವರನ್ನು ಭೇಟಿಯಾಗಲು ಬಯಸಿದ್ದರು.

610

ನಾವು ಬಿಗ್ ಬಿ ಅವರ ಶೂಟಿಂಗ್ ಸೆಟ್ ತಲುಪಿದಾಗ ಅವರಿಗೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಅವರ ಅರ್ಧ ಕಿಲೋಮೀಟರ್ ವ್ಯಾಪ್ತಿಯೊಳಗೆ ಹೋಗಲು ಯಾರಿಗೂ ಅವಕಾಶವಿರಲಿಲ್ಲ.

710

ಶೂಟಿಂಗ್ ಸೆಟ್‌ನಲ್ಲಿ ಕುರ್ಚಿಯ ಮೇಲೆ ಕುಳಿತು ಅಮಿತಾಬ್ ಬಚ್ಚನ್ ತಮ್ಮ ಗಡ್ಡವನ್ನು ಸರಿ ಮಾಡಿಕೊಳ್ಳುತ್ತಿದ್ದರು. ಅಣ್ಣನವರನ್ನು ಕಂಡ ಕೂಡಲೇ ಓಡಿ ಬಂದು ಅವರ ಪಾದ ಮುಟ್ಟಿದರು. 

810

ನೀವು ಹೇಳಿದ್ದರೆ ನಾನೇ ಸರ್ ನಿಮ್ಮನ್ನು ಭೇಟಿ ಮಾಡಲು ಬರುತ್ತಿದ್ದೆ ಎಂದು ಬಿಗ್ ಬಿ ಅಣ್ಣಾವರಿಗೆ ಹೇಳಿದರು ಮತ್ತು  ಈ ಸಮಯದಲ್ಲಿ ಅಣ್ಣಾವರು ನಾನು ಹಿಂದೆಂದೂ ಕೇಳದ ಇಂಗ್ಲಿಷ್‌ನಲ್ಲಿ ಮಾತನಾಡಿದರು ಎಂದು ಆ ಕ್ಷಣವನ್ನು ದಯಾನಂದ ಅವರು ನೆನಪಿಸಿಕೊಳ್ಳುತ್ತಾ  ಹೇಳಿದರು.  

910

ನನ್ನ ಮಗ ಪುನೀತ್ ನಿಮ್ಮ ದೊಡ್ಡ ಅಭಿಮಾನಿ. ನನ್ನ ಮಕ್ಕಳೆಲ್ಲ ನಿನ್ನ ಬಗ್ಗೆ ಹುಚ್ಚರಾಗಿದ್ದಾರೆ. ಕೈ ಹೇಗಿದೆ, ಹೊಟ್ಟೆ ನೋವು ಹೇಗಿದೆ. ನೀವು ನಮ್ಮ ಊರಿನಲ್ಲಿರುವುದು ತುಂಬಾ ಸಂತೋಷದ ವಿಷಯ, ಏನಾದರೂ ಸಮಸ್ಯೆ ಇದ್ದರೆ ಹೇಳಬೇಕು ಎಂದು  ರಾಜ್‌ಕುಮಾರ್‌ ಅವರು ಬಿಗ್ ಬಿಗೆ ಹೇಳಿದರು

1010

ಅಷ್ಟೇ ಅಲ್ಲ ಪರಶುರಾಮ್ ಶೂಟಿಂಗ್ ಸೆಟ್‌ಗೆ ಅಮಿತಾಭ್ ಸ್ವತಃ ಬಂದಿದ್ದರು ಮತ್ತು ಅವರು ಇಡೀ ಪಾತ್ರವರ್ಗ ಮತ್ತು ಸಿಬ್ಬಂದಿಯೊಂದಿಗೆ ಫೋಟೋಗಳನ್ನು ಕ್ಲಿಕ್ ಮಾಡಿದ್ದಾರೆ  ಎಂದು ದಯಾನಂದ್ ಹೇಳಿದ್ದರು 

About the Author

SN
Suvarna News
ಸ್ಯಾಂಡಲ್‌ವುಡ್
ಅಮಿತಾಭ್ ಬಚ್ಚನ್
ಡಾ. ರಾಜ್‌ಕುಮಾರ್
ಬಾಲಿವುಡ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved