MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಇಲ್ಲಿ ವಿಜೃಂಭಣೆಯಿಂದ ನಡೆಯುತ್ತೆ ಮಂಗಳಮುಖಿಯರ ಮದುವೆ, ಮರುದಿನವೇ ವಿಧವೆ!

ಇಲ್ಲಿ ವಿಜೃಂಭಣೆಯಿಂದ ನಡೆಯುತ್ತೆ ಮಂಗಳಮುಖಿಯರ ಮದುವೆ, ಮರುದಿನವೇ ವಿಧವೆ!

ಮದುವೆಯ ಬಗ್ಗೆ ವಿವಿಧೆಡೆ ವಿವಿಧ ರೀತಿಯ ಸಂಪ್ರದಾಯಗಳಿವೆ. ಕೆಲವು ಕಡೆಗಳಲ್ಲಿ ಬಹುಪತ್ನಿತ್ವವಬ ವಾಡಿಕೆಯಲ್ಲಿದ್ದರೆ, ಮತ್ತೆ ಕೆಲವೆಡೆ ಮದುವೆಗೆ ಮುನ್ನವೇ ಲಿವ್ ಇನ್ ರಿಲೇಶನ್‌ನಲ್ಲಿರುವ ಸಂಪ್ರದಾಯವೂ ಇದೆ. ಇದೆಲ್ಲವೂ ಆಯಾ ಪ್ರದೇಶದ ಆಚರಣೆಗೆ ಬಿಟ್ಟದ್ದು. ಇಂದು ನಾವಿಲ್ಲಿ ಹೇಳ್ತಾ ಇರೋದು ಮಂಗಳಮುಖಿಯರ ಮದುವೆ ಬಗ್ಗೆ. ಹೌದು, ಈ ಊರಲ್ಲಿ ಮಂಗಳಮುಖಿಯರ ಅದ್ಧೂರಿ ಮದುವೆ ನಡೆದು, ಮರುದಿನವೇ ಅವರು ವಿಧವೆಯರಾಗ್ತಾರೆ.

2 Min read
Author : Suvarna News
Published : Jul 23 2022, 06:15 PM IST
Share this Photo Gallery
  • FB
  • TW
  • Linkdin
  • Whatsapp
110

ಸಾಮಾನ್ಯವಾಗಿ ನಾವು ನೋಡಿರುವಂತೆ ಮದುವೆ ಮತ್ತಿತರ ಸಮಾರಂಭಗಳಲ್ಲಿ ಅನೇಕ ಮಂಗಳಮುಖಿಯರು ನೃತ್ಯ ಮಾಡುತ್ತಾರೆ ಅಲ್ವಾ? ಆದರೆ ಭಾರತದಲ್ಲಿ ಈ ಮಂಗಳಮುಖಿಯರೇ ಮದುವೆಯಾಗುವ ಒಂದು ಸ್ಥಳವಿದೆ ಎಂದು ನಿಮಗೆ ತಿಳಿದಿದೆಯೇ, ಅದೂ ಕೇವಲ ಒಂದು ದಿನ ಮಾತ್ರ? ಯಾವುದು ಈ ಊರು. ಇಲ್ಲಿನ ವಿಶೇಷತೆ ಏನು ಅನ್ನೋದನ್ನು ತಿಳಿಯೋಣ. 

210

ನಮ್ಮ ದೇಶದಲ್ಲಿ ಇಂತಹ ಅನೇಕ ವಿಲಕ್ಷಣ ಸಂಪ್ರದಾಯಗಳಿವೆ, ಅವು ಶತಮಾನಗಳಿಂದ ನಡೆಯುತ್ತಿವೆ. ಅಂತಹ ಸಂಪ್ರದಾಯಗಳ (tradition) ಬಗ್ಗೆ ತಿಳಿದು ನಮಗೆ ಆಶ್ಚರ್ಯವಾಗುತ್ತದೆ. ಇದೇ ರೀತಿಯ ಒಂದು ಸಂಪ್ರದಾಯವು ಭಾರತದ ತಮಿಳುನಾಡಿನಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದಿದೆ. ಏನಿದು ಸಂಪ್ರದಾಯ ತಿಳಿಯಿರಿ. 

310

ತಮಿಳುನಾಡಿನ ಒಂದೆಡೆ ಮಂಗಳಮುಖಿಯರ ವಿವಾಹ ಹಬ್ಬವನ್ನು ಆಡಂಬರ ಮತ್ತು ಸಂಭ್ರಮದೊಂದಿಗೆ ಆಚರಿಸಲಾಗುತ್ತೆ. 18 ದಿನಗಳ ಕಾಲ ನಡೆಯುವ ಈ ಉತ್ಸವದ 17ನೇ ದಿನದಂದು ಮಂಗಳಮುಖಿಯರು ಮದುವೆಯಾಗುತ್ತಾರೆ. ಆದರೆ ಏನಾಗುತ್ತದೆ ಎಂದರೆ ಮರುದಿನ ಅವರು ಸುಮಂಗಲಿಯರಾಗಿ ಇರೋದಿಲ್ಲ, ಅಂದರೆ ಅವರು ವಿಧವೆಯಾಗುತ್ತದೆ. ಕಿನ್ನರರ ಮದುವೆಯ ಹಿಂದಿನ ಕಾರಣವೇನು ಅನ್ನೋ ವಿಷಯದ ಬಗ್ಗೆ ನಾವು ನಿಮಗಿಂದು ತಿಳಿಸುತ್ತೇವೆ.

410
ಒಂದೇ ದಿನದ ಸುಮಂಗಲಿಯಾಗುವ ಮಂಗಳಮುಖಿ

ಒಂದೇ ದಿನದ ಸುಮಂಗಲಿಯಾಗುವ ಮಂಗಳಮುಖಿ

ತಮಿಳುನಾಡಿನಲ್ಲಿ ತಮಿಳು ಹೊಸ ವರ್ಷವು ಪ್ರಾರಂಭವಾದಾಗ, ಮೊದಲ ಹುಣ್ಣಿಮೆಯ ಸಮಯದಲ್ಲಿ ಮಂಗಳಮುಖಿಯರ ವಿವಾಹ ಆಚರಣೆಯ ಪ್ರಾರಂಭವನ್ನು ಸೂಚಿಸುತ್ತದೆ. ಈ 18 ದಿನಗಳ ಸುದೀರ್ಘ ಕಾರ್ಯಕ್ರಮದ 17 ನೇ ದಿನದಂದು, ಎಲ್ಲಾ ಮಂಗಳಮುಖಿಯರು ತಮ್ಮ ದೇವರಾದ ಇರ್ವಾನ್ ನೊಂದಿಗೆ ಆಡಂಬರದಿಂದ ಮದುವೆಯಾಗುತ್ತಾರೆ. 

510

ಈ ಸಮಯದಲ್ಲಿ, ಮಂಗಳಮುಖಿಯರು ಹದಿನಾರು ಶೃಂಗಾರಗಳನ್ನು ಮಾಡಿಕೊಳ್ಳುತ್ತಾರೆ ಮತ್ತು ಇರ್ವಾನ್ ದೇವರ ಅನುಗ್ರಹದ ವಧುವಾಗುತ್ತಾಳೆ. ಅಲ್ಲದೇ ಅವರು ಸಪ್ತಪದಿಯನ್ನು ಸಹ ತುಳಿಯುತ್ತಾರೆ. ಇಷ್ಟೇ ಅಲ್ಲ, ಮದುವೆಯ ನಂತರ, ಈ ಮಂಗಳಮುಖಿಯರ ಮೆರವಣಿಗೆಯನ್ನು ಸಹ ನಡೆಸಲಾಗುತ್ತದೆ, ಅಲ್ಲಿ ಅವರು ತಮ್ಮ ದೇವರೊಂದಿಗೆ ನಗರದಾದ್ಯಂತ ಸಂಚರಿಸುತ್ತಾರೆ.

610
ಮರುದಿನ ಅವಳು ವಿಧವೆಯಾಗುತ್ತಾಳೆ

ಮರುದಿನ ಅವಳು ವಿಧವೆಯಾಗುತ್ತಾಳೆ

ಮಂಗಳಮುಖಿಯರ ಮದುವೆಯ ಆಚರಣೆಯ ಕೊನೆಯ ದಿನದಂದು ಅಂದರೆ 18 ನೇ ದಿನದಂದು, ಈ ಮಂಗಳಮುಖಿಯರು ವಿಧವೆಯರಾಗುತ್ತಾರೆ (widow). ವಾಸ್ತವವಾಗಿ, ಅವಳು ಆಡಂಬರದಿಂದ ಮದುವೆಯಾಗಿರುವ ಅದೇ ದೇವರಾದ ಇರ್ವಾನ್ ನ ಪ್ರತಿಮೆಯನ್ನು ಮುರಿಯುವ ಮೂಲಕ, ಅವಳು ವಿಧವೆಯಾಗುತ್ತಾಳೆ ಮತ್ತು ವಿಧವೆಯಂತೆ ಅಳಲು ಪ್ರಾರಂಭಿಸುತ್ತಾಳೆ. ಇದರ ಹಿಂದೆ ದೊಡ್ಡ ಕತೆಯೇ ಇದೆ.

710
ಇದು ಮಹಾಭಾರತದ ಸಮಯದಲ್ಲಿ ಪ್ರಾರಂಭವಾಯಿತು

ಇದು ಮಹಾಭಾರತದ ಸಮಯದಲ್ಲಿ ಪ್ರಾರಂಭವಾಯಿತು

ಈ ವಿಲಕ್ಷಣ ಸಂಪ್ರದಾಯದ ಹಿಂದೆ, ಮಹಾಭಾರತದ ಕತೆಯೇ ಇದೆ. ಏನಿದು ಕತೆ ಕೇಳಿ… ಇದು ಮಹಾಭಾರತದ ಯುದ್ಧದ ಸಮಯದಲ್ಲಿ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಪಾಂಡವರು ಕಾಳಿಮಾತೆಯನ್ನು ಪೂಜಿಸುತ್ತಿದ್ದರು ಮತ್ತು ಪೂಜೆಯ ನಂತರ ಒಬ್ಬ ರಾಜಕುಮಾರನನ್ನು ಬಲಿಕೊಡಬೇಕಾಗಿತ್ತು. 

810

ರಾಜ ಇರ್ವಾನ್ ತನ್ನನ್ನು ತಾನು ತ್ಯಾಗ ಮಾಡಲು ಒಪ್ಪಿದನು, ಆದರೆ ಅವನು ಮದುವೆಯಾಗದ ಹಿನ್ನೆಲೆಯಲ್ಲಿ ಬಲಿ ನೀಡಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಯಿತು. ಅದಕ್ಕಾಗಿ ರಾಜಕುಮಾರ ಇರ್ವಾನ್ ನನ್ನು ಒಂದು ದಿನಕ್ಕಾಗಿ ಮದುವೆಯಾಗಲಾಯಿತು ಎಂದು ಹೇಳಲಾಗಿದೆ. 

910

ಹಾಗಾದರೆ ಇರ್ವಾನ್ ನನ್ನು 1 ದಿನಕ್ಕಾಗಿ ಮದುವೆಯಾಗಿದ್ದವರು ಯಾರು? ಅನ್ನೋ ಪ್ರಶ್ನೆ ಮೂಡೋದು ಖಂಡಿತಾ. ಭಗವಾನ್ ಕೃಷ್ಣನು ಮೋಹಿನಿ ರೂಪವನ್ನು ತೆಗೆದುಕೊಂಡು ಇರ್ವಾನ್ ನನ್ನು ಮದುವೆಯಾದನು. ಮರುದಿನ ಇರ್ವಾನ್ ಅನ್ನು ಬಲಿ ಕೊಡಲಾಯಿತು ಮತ್ತು ಭಗವಾನ್ ಶ್ರೀ ಕೃಷ್ಣನು ವಿಧವೆಯಾದನು ಮತ್ತು ದುಃಖಿಸಿದನು ಎನ್ನಲಾಗಿದೆ. 

1010

ಇದೇ ಸಂಪ್ರದಾಯವನ್ನು ಇಂದಿಗೂ ಸಹ ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಲಾಗುತ್ತೆ. ಕಿನ್ನರರು ಪ್ರತಿ ವರ್ಷ ಈ ದಿನದಂದು ತಮ್ಮ ಮೆಚ್ಚಿನ ದೇವರು ಇರ್ವಾನ್ ನನ್ನು ಮದುವೆಯಾಗುತ್ತಾರೆ ಮತ್ತು ಮರುದಿನವೇ ವಿಧವೆಯಾಗುತ್ತಾರೆ. ಈ ವಿಶೇಷ ಮದುವೆಗೆ ಮಂಗಳಮುಖಿಯರು ಮಾತ್ರ ಸಾಕ್ಷಿಯಾಗಿರುತ್ತಾರೆ. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ತಮಿಳುನಾಡು
ತೃತೀಯ ಲಿಂಗಿಗಳು
ಮದುವೆ
ವಿಧವೆ

Latest Videos
Recommended Stories
Recommended image1
ವಯಸ್ಸಿನ ಅಂತರ ಎಷ್ಟಿದ್ದರೆ ಚೆಂದ: ಗಂಡ ಹೆಂಡತಿ ಮಧ್ಯೆ ವಯಸ್ಸಿಗಿಂತ ಮನಸ್ಸಿನ ಅಂತರ ಕಡಿಮೆ ಮಾಡಿಕೊಳ್ಳೋದು ಹೇಗೆ
Recommended image2
Vijay Devarakonda ಮದುವೆ ಬಳಿಕ ತಮ್ಮನಿಗೆ ಭರ್ಜರಿ ಡಿಮಾಂಡ್​: ಯಾರೀ ಆನಂದ್​? ಮಾಡ್ತಿರೋದು ಏನು?
Recommended image3
ಈ ದಿನಗಳಲ್ಲಿ ಗಂಡ ಹೆಂಡತಿ ಸೇರಬಾರದು, ಅದರಲ್ಲೂ ನಾಳೆ ಮಾರ್ಚ್‌ 3 ಅಪ್ಪಿತಪ್ಪಿಯೂ ದೈಹಿಕ ಸಂಬಂಧ ಬೇಡ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved