- Home
- Life
- Relationship
- ಬ್ರಾಹ್ಮಣಳಾಗಿದ್ರೂ ಅವ್ರು ನೀರು ಕುಡೀಲಿಲ್ಲ: ಮದ್ವೆ ಕ್ಯಾನ್ಸಲ್ ಮಾಡಿ ಅಂದೆ- ಕಹಿ ಘಟನೆ ನೆನೆದ ನಟಿ ಲಾವಣ್ಯ ಭಾರಧ್ವಾಜ್
ಬ್ರಾಹ್ಮಣಳಾಗಿದ್ರೂ ಅವ್ರು ನೀರು ಕುಡೀಲಿಲ್ಲ: ಮದ್ವೆ ಕ್ಯಾನ್ಸಲ್ ಮಾಡಿ ಅಂದೆ- ಕಹಿ ಘಟನೆ ನೆನೆದ ನಟಿ ಲಾವಣ್ಯ ಭಾರಧ್ವಾಜ್
ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಲಾವಣ್ಯ ಭಾರಧ್ವಾಜ್, ತಾವು ಹವ್ಯಕ ಬ್ರಾಹ್ಮಣರಲ್ಲ ಎಂಬ ಕಾರಣಕ್ಕೆ ಪತಿ ಶಶಿ ಹೆಗಡೆ ಅವರ ಸಂಬಂಧಿಕರಿಂದ ಮದುವೆಯ ಸಮಯದಲ್ಲಿ ಎದುರಿಸಿದ ಕಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ

ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ..
ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿ ತುಳಸಿಯ ಸೊಸೆ ಪೂರ್ಣಿ ಪಾತ್ರಧಾರಿಯಾಗಿದ್ದ ಲಾವಣ್ಯ ಭಾರಧ್ವಾಜ್ ಮತ್ತು ಅಮೃತಧಾರೆ ಸೀರಿಯಲ್ನಲ್ಲಿ ಭೂಮಿಕಾ ತಮ್ಮ ಜೀವನ್ ಪಾತ್ರವನ್ನು ಕೆಲ ಕಾಲ ನಿರ್ವಹಿಸಿದ್ದ ಶಶಿ ಹೆಗಡೆ ಇಬ್ಬರೂ ಇದೀಗ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ, ಮದುವೆಯಾದ ಹೊಸತರಲ್ಲಿ ಹಾಗೂ ಎಂಗೇಜ್ಮೆಂಟ್ ಆದ ಬಳಿಕ ಶಶಿ ಹೆಗಡೆ ಅವರ ಮನೆಯಲ್ಲಿ ಅಂದರೆ ಅವರ ಸಂಬಂಧಿಕರಿಂದ ಆದ ಕೆಲವು ಕಹಿ ಘಟನೆಗಳನ್ನು sumantv kannada entertainment ಚಾನೆಲ್ನಲ್ಲಿ ನೆನಪಿಸಿಕೊಂಡಿದ್ದಾರೆ ಲಾವಣ್ಯ.
ಬ್ರಾಹ್ಮಣ ಆದ್ರೂ ಇಷ್ಟ ಆಗಲಿಲ್ಲ
ನಾನು ಭಾರಧ್ವಾಜ್. ಅಂದರೆ ನಾನು ಕೂಡ ಬ್ರಾಹ್ಮಣಳೇ. ಆದರೆ ಹವ್ಯಕ ಅಲ್ಲ. ಶಶಿ ಮನೆಯವರು ಹವ್ಯಕರು. ನಾವು ಎಂಗೇಜ್ಮೆಂಟ್ ಆದಾಗಲೇ ಶಶಿ ತಂದೆಯವರಿಗೆ ಕೆಲವರು ಕಾಲ್ ಮಾಡಿ ಯಾಕೆ ಒಪ್ಕೊಂಡೆ. ಹವ್ಯಕ ಹೆಣ್ಣನ್ನೇ ನೋಡಬೇಕಿತ್ತು ಎಂದೆಲ್ಲಾ ಹೇಳಿದ್ರು. ಎಲ್ಲರ ಫ್ಯಾಮಿಲಿಯಲ್ಲಿಯೂ ಇದು ಇದ್ದೇ ಇರುತ್ತೆ ಎಂದು ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಕೊನೆಗೆ ಇದು ವಿಪರೀತ ಆಯ್ತು ಎಂದು ಲಾವಣ್ಯ ನೆನಪಿಸಿಕೊಂಡಿದ್ದಾರೆ.
ಮದ್ವೆ ಕ್ಯಾನ್ಸಲ್ ಮಾಡಿ ಅಂದೆ!
ನನ್ನಿಂದಾಗಿ ಶಶಿ ಮನೆಯವರ ಸಂಬಂಧ ಅವರ ಕುಟುಂಬದಲ್ಲಿ ಹಾಳಾಗಬಾರದು ಎನ್ನುವ ಕಾರಣಕ್ಕೆ ನಾನು, ಎಂಗೇಜ್ಮೆಂಟ್ ಆದ್ರೂ ಇಷ್ಟೆಲ್ಲಾ ಇದ್ದರೆ ಮದುವೆ ಬೇಡ ಅಂದುಬಿಟ್ಟೆ. ನನ್ನಿಂದ ಯಾಕೆ ಸುಮ್ಮನೇ ಅವರ ಸಂಬಂಧ ಹಾಳಾಗೋದು ಎನ್ನುವುದು ನನ್ನ ಅನಿಸಿಕೆ ಆಗಿತ್ತು. ಆದರೆ ಶಶಿ ಅಪ್ಪ, ನೀನು ನಮಗೆ ಇಷ್ಟ. ಸಂಬಂಧಿಕರ ಮಾತು ಕಟ್ಟಿಕೊಂಡು ಏನಾಗಬೇಕು? ಬಾಳುವುದು ನೀವಿಬ್ಬರೂ, ನೀವಿಬ್ಬರೂ ಚೆನ್ನಾಗಿದ್ದರೆ ಸಾಕು ಎಂದು ಹೇಳಿದ್ದರಿಂದ ಮದುವೆಯಾಯಿತು ಎಂದಿದ್ದಾರೆ.
ನೀರು ಕೊಟ್ರೆ ಕುಡಿಯಲಿಲ್ಲ
ಮದುವೆ ಆದ್ಮೇಲೂ ಇದು ಮುಂದುವರೆಯಿತು. ನಾನು ನೀರು ಕೊಟ್ಟರೂ ಅವರು ಕುಡಿಯುತ್ತಿರಲಿಲ್ಲ. ಫಂಕ್ಷನ್ ನಡೆಯುತ್ತಿರುವಾಗ ಆಶೀರ್ವಾದ ತೆಗೆದುಕೊಳ್ಳಲು ಹೋದ್ರೆ ಹಿಂದೆ ಸರಿಯೋದು.. ಹೀಗೆ ಏನೇನೋ ಎಕ್ಸ್ಪೀರಿಯನ್ಸ್ ಆಯ್ತು. ನಾನು ಬ್ರಾಹ್ಮಿನ್ಸ್ ಆಗಿದ್ರೂ ಹೀಗೆ ಮಾಡಿದ್ರು ಎಂದು ಘಟನೆ ನೆನಪಿಸಿಕೊಂಡಿದ್ದಾರೆ ಲಾವಣ್ಯ.
ತಲೆ ಕೆಡಿಸಿಕೊಳ್ಳಲಿಲ್ಲ
ಮೊದಲೆಲ್ಲಾ ದುಃಖ ಆಗ್ತಿತ್ತು. ಆಮೇಲೆ ಪದೇ ಪದೇ ಆದಾಗ ನಾನೂ ತಲೆ ಕೆಡಿಸಿಕೊಳ್ಳಲಿಲ್ಲ. ಹವ್ಯಕ ಭಾಷೆ ನನಗೆ ಅರ್ಥ ಆಗ್ತಿರಲಿಲ್ಲ. ಜೋಕ್ ಮಾಡಿದ್ರೂ ಗೊತ್ತಾಗ್ತಾ ಇರಲಿಲ್ಲ, ಬೈದರೂ ತಿಳೀತಾ ಇರಲಿಲ್ಲ. ಸುಮ್ಮನೇ ತಲೆ ಕೆಡಿಸಿಕೊಳ್ಳೋದು ಯಾಕೆ ಎಂದು ಬಿಟ್ಟುಬಿಟ್ಟೆ ಎಂದಿದ್ದಾರೆ ನಟಿ.
ಇಂಟರ್ಕಾಸ್ಟ್ ಮ್ಯಾರೇಜ್
ನಾನೇನೋ ಎಲ್ಲಿಂದಲೋ ಗುಂಡಿಯಿಂದ ಎದ್ದು ಬಂದಿಲ್ಲ. ನನ್ನ ಅಪ್ಪ-ಅಮ್ಮನೂ ನನಗೆ ತುಂಬಾ ಚೆನ್ನಾಗಿ ಸಾಕಿದ್ದಾರೆ. ಆದ್ರೂ ಹೀಗೆ ಮಾಡಿದ್ರು. ನನ್ನ ಅಪ್ಪ-ಅಮ್ಮಂದು ಬೇರೆ ಬೇರೆ ಜಾತಿ ಎನ್ನುವ ಕಾರಣವೂ ಇದಕ್ಕೆ ಸೇರಿತ್ತು ಎಂದು ಕಹಿ ಘಟನೆ ನೆನಪಿಸಿಕೊಂಡಿದ್ದಾರೆ ಲಾವಣ್ಯ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

