MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • Politics
  • ಸಿಎಂ ಜೋಸೆಫ್​ ವಿಜಯ್​ಗೆ ಜ್ಯೋತಿಷಿ ತಂದಿಟ್ಟ ಸಂಕಷ್ಟ: ತಮಿಳುನಾಡಲ್ಲಿ ಭುಗಿಲೆದ್ದ ವಿವಾದ

ಸಿಎಂ ಜೋಸೆಫ್​ ವಿಜಯ್​ಗೆ ಜ್ಯೋತಿಷಿ ತಂದಿಟ್ಟ ಸಂಕಷ್ಟ: ತಮಿಳುನಾಡಲ್ಲಿ ಭುಗಿಲೆದ್ದ ವಿವಾದ

ದಳಪತಿ ವಿಜಯ್ ಮುಖ್ಯಮಂತ್ರಿಯಾದ ನಂತರ, ತಮಗೆ ಭವಿಷ್ಯ ನುಡಿದಿದ್ದ ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ತಮ್ಮ ವಿಶೇಷ ಕರ್ತವ್ಯದ ಅಧಿಕಾರಿಯಾಗಿ (OSD) ನೇಮಿಸಿದ್ದಾರೆ. ಈ ನೇಮಕಾತಿಯು ತಮಿಳುನಾಡು ರಾಜಕೀಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ.

1 Min read
Author : Suchethana D
Published : May 12 2026, 10:33 PM IST
Share this Photo Gallery
  • FB
  • TW
  • Linkdin
  • Whatsapp
15
ಭವಿಷ್ಯ ನುಡಿದಿದ್ದ ಜ್ಯೋತಿಷಿ
Image Credit : Asianet News

ಭವಿಷ್ಯ ನುಡಿದಿದ್ದ ಜ್ಯೋತಿಷಿ

ದಳಪತಿ ವಿಜಯ್‌ ಅವರ ಪರ್ಸನಲ್‌ ಜ್ಯೋತಿಷಿ ಆಗಿರುವ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೇಲ್, ಹಿಂದೊಮ್ಮೆ ವಿಜಯ್​ ಸಿಎಂ ಆಗ್ತಾರೆ, ಅವರ ಜಾತಕ ಸಖತ್‌ ಆಗಿದೆ ಎಂದು ಹೇಳಿದ್ದರು. ಇದೊಂದು ಥರ ಸುನಾಮಿ ಜಾತಕ ಎಂದು ಬಣ್ಣಿಸಿದ್ದರು. ಅದರಂತೆಯೇ ವಿಜಯ್​ ಇಂದು ಮುಖ್ಯಮಂತ್ರಿ ಆಗಿದ್ದಾರೆ.

Add Asianetnews Kannada as a Preferred SourcegooglePreferred
25
ವಿಶೇಷ ಅಧಿಕಾರ
Image Credit : Asianet News

ವಿಶೇಷ ಅಧಿಕಾರ

ಇದೇ ಕಾರಣದಿಂದಾಗಿ, ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ಮುಖ್ಯಮಂತ್ರಿಯವರ (ರಾಜಕೀಯ) ವಿಶೇಷ ಕರ್ತವ್ಯದ ಅಧಿಕಾರಿಯಾಗಿ (OSD) ನೇಮಕ ಮಾಡಲಾಗಿದೆ. ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ಸರ್ಕಾರದಲ್ಲಿ ಜ್ಯೋತಿಷಿಯೊಬ್ಬರನ್ನು ರಾಜಕೀಯ ಸಲಹೆಗಾರರನ್ನಾಗಿ ನೇಮಿಸಿದ ಬಗ್ಗೆ ತಮಿಳುನಾಡಿನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ. ಟಿವಿಕೆ ಸರ್ಕಾರವನ್ನು ಹೊರಗಿನಿಂದ ಬೆಂಬಲಿಸುತ್ತಿರುವ ಸಿಪಿಐ(ಎಂ) ಈ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದೆ.

Related Articles

Related image1
ದಳಪತಿ ವಿಜಯ್​ ಪ್ರಮಾಣ ವಚನ ಸಮಾರಂಭದಲ್ಲಿ ಗಮನ ಸೆಳೆದ ತ್ರಿಷಾ ಟ್ಯಾಟೂ: ಅದೃಷ್ಟ ತಂದ ಮಾರ್ಕ್​?
Related image2
ದಳಪತಿ ವಿಜಯ್​ ವಿರೋಧಿಯ ಜೊತೆ ಕೈಜೋಡಿಸಿದ Trisha Krishan: ಕಾಲಿವುಡ್​ನಲ್ಲಿ ಹಲ್​ಚಲ್​- ಏನಾಯ್ತು
35
 ಕಾಂಗ್ರೆಸ್​ ಸೇರಿ ಹಲವರ ಅಸಮಾಧಾನ
Image Credit : Asianet News

ಕಾಂಗ್ರೆಸ್​ ಸೇರಿ ಹಲವರ ಅಸಮಾಧಾನ

ಕಾಂಗ್ರೆಸ್, ಸಿಪಿಐ(ಎಂ) ಮತ್ತು ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ನಾಯಕರು ಈ ನಿರ್ಧಾರವನ್ನು ಸಾರ್ವಜನಿಕವಾಗಿ ಪ್ರಶ್ನಿಸಿದ್ದಾರೆ, ವಿಜಯ್ ಈ ಕ್ರಮವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ. ಸಿಪಿಐ(ಎಂ)ನ ತಮಿಳುನಾಡು ಘಟಕವು ಈ ನೇಮಕಾತಿಯನ್ನು ಆಕ್ಷೇಪಿಸಿದೆ. ಪಕ್ಷದ ರಾಜ್ಯ ಕಾರ್ಯದರ್ಶಿ ಪಿ. ಷಣ್ಮುಗಂ ಹೇಳಿಕೆ ನೀಡಿ, ಸರ್ಕಾರದಲ್ಲಿ ಇಂತಹ ನೇಮಕಾತಿಗಳು ಮೂಢನಂಬಿಕೆಯನ್ನು ಉತ್ತೇಜಿಸುತ್ತವೆ ಮತ್ತು ವೈಜ್ಞಾನಿಕ ಚಿಂತನೆಯನ್ನು ದುರ್ಬಲಗೊಳಿಸುತ್ತವೆ ಎಂದು ಅವರು ಹೇಳಿದರು. ನೇಮಕಾತಿಗಳು ಆಡಳಿತಾತ್ಮಕ ಸಾಮರ್ಥ್ಯದ ಆಧಾರದ ಮೇಲೆ ಇರಬೇಕು ಎಂದಿದ್ದಾರೆ.

45
ಸಾಮರ್ಥ್ಯದ ಆಧಾರದ ಮೇಲೆ ನಡೆಯಬೇಕು
Image Credit : Asianet News

ಸಾಮರ್ಥ್ಯದ ಆಧಾರದ ಮೇಲೆ ನಡೆಯಬೇಕು

ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ವ್ಯವಸ್ಥೆಯಲ್ಲಿ, ಸರ್ಕಾರಿ ಹುದ್ದೆಗಳಿಗೆ ನೇಮಕಾತಿಗಳು ಜ್ಯೋತಿಷ್ಯ ಹಕ್ಕುಗಳ ಆಧಾರದ ಮೇಲೆ ಅಲ್ಲ, ಅರ್ಹತೆ ಮತ್ತು ಆಡಳಿತಾತ್ಮಕ ಸಾಮರ್ಥ್ಯದ ಆಧಾರದ ಮೇಲೆ ನಡೆಯಬೇಕು ಎಂದು ಸಿಪಿಐ(ಎಂ) ಪ್ರಶ್ನಿಸಿದೆ.

55
ವಿಸಿಕೆ ಅಸಮಾಧಾನ
Image Credit : Asianet News

ವಿಸಿಕೆ ಅಸಮಾಧಾನ

ವಿಸಿಕೆ ಪ್ರಧಾನ ಕಾರ್ಯದರ್ಶಿ ಡಿ. ರವಿಕುಮಾರ್ ಕೂಡ ಈ ನೇಮಕಾತಿಗೆ ಆಕ್ಷೇಪ ವ್ಯಕ್ತಪಡಿಸಿ, "ಇದು ಜಾತ್ಯತೀತ ಸರ್ಕಾರದಲ್ಲಿ ಸ್ವೀಕಾರಾರ್ಹವಲ್ಲ. ಗೌರವಾನ್ವಿತ ಮುಖ್ಯಮಂತ್ರಿಗಳು ಇದನ್ನು ಮರುಪರಿಶೀಲಿಸಬೇಕು" ಎಂದು ಹೇಳಿದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ತಮಿಳುನಾಡು
ರಾಜಕೀಯ ಸುದ್ದಿ
ರಾಜಕೀಯ ಪಕ್ಷ
ಭಾರತ ಸುದ್ದಿ
ದಳಪತಿ ವಿಜಯ್

Latest Videos
Recommended Stories
Recommended image1
ರಾಜ್ಯ ಸರ್ಕಾರದಿಂದ ನಾಳೆ 6ನೇ ಗ್ಯಾರಂಟಿ ಘೋಷಣೆಯಾಗಲಿದೆ; ಸುಳಿವು ಬಿಚ್ಚಿಟ್ಟ ಡಿ.ಕೆ. ಶಿವಕುಮಾರ್
Recommended image2
ದಳಪತಿ ವಿಜಯ್​ ವಿರೋಧಿಯ ಜೊತೆ ಕೈಜೋಡಿಸಿದ Trisha Krishan: ಕಾಲಿವುಡ್​ನಲ್ಲಿ ಹಲ್​ಚಲ್​- ಏನಾಯ್ತು
Recommended image3
ಚಿನ್ನದ ಮೇಲಿನ ಸಮರ: ಇಂದಿರಾ ಗಾಂಧಿ- ನರೇಂದ್ರ ಮೋದಿ ಒಂದೇ ಹಾದಿ? ಅಸಲಿಗೆ ಆಗಿದ್ದೇ ಬೇರೆ!
Related Stories
Recommended image1
ದಳಪತಿ ವಿಜಯ್​ ಪ್ರಮಾಣ ವಚನ ಸಮಾರಂಭದಲ್ಲಿ ಗಮನ ಸೆಳೆದ ತ್ರಿಷಾ ಟ್ಯಾಟೂ: ಅದೃಷ್ಟ ತಂದ ಮಾರ್ಕ್​?
Recommended image2
ದಳಪತಿ ವಿಜಯ್​ ವಿರೋಧಿಯ ಜೊತೆ ಕೈಜೋಡಿಸಿದ Trisha Krishan: ಕಾಲಿವುಡ್​ನಲ್ಲಿ ಹಲ್​ಚಲ್​- ಏನಾಯ್ತು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved