MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Kitchen
  • 6-7 ಸೀಟಿ ಹೊಡೆದ್ರೂ ಕಡ್ಲೆ, ಬಟಾಣಿ ಬೇಯೋದಿಲ್ವಾ? ಕುಕ್ಕರ್ ಗೆ ಈ ವಸ್ತು ಹಾಕಿ ನೋಡಿ

6-7 ಸೀಟಿ ಹೊಡೆದ್ರೂ ಕಡ್ಲೆ, ಬಟಾಣಿ ಬೇಯೋದಿಲ್ವಾ? ಕುಕ್ಕರ್ ಗೆ ಈ ವಸ್ತು ಹಾಕಿ ನೋಡಿ

ಬಟಾಣಿ, ರಾಜ್ಮಾ ಮತ್ತು ಕಡ್ಲೆ ತಿನ್ನೋದಕ್ಕೆ ತುಂಬಾ ರುಚಿಕರವಾಗಿರುತ್ತದೆ, ಆದರೆ ಕೆಲವೊಮ್ಮೆ, ಪದೇ ಪದೇ ಕುಕ್ಕರ್ ನಲ್ಲಿ ವಿಸಿಲ್ ಹೊಡೆದರೂ, ಅವು ಸರಿಯಾಗಿ ಬೆಂದಿರೋದಿಲ್ಲ, ಇದರಿಂದ ರುಚಿಯೇ ಹಾಳಾಗಿ ಹೋಗುತ್ತದೆ. ರಾಜ್ಮಾ, ಕಡ್ಲೆ, ಬಟಾಣಿಯನ್ನು ಸುಲಭವಾಗಿ ಬೇಯಿಸುವ ಟ್ರಿಕ್ಸ್ ಇಲ್ಲಿದೆ. 

2 Min read
Author : Pavna Das
Published : Apr 10 2026, 04:51 PM IST
Share this Photo Gallery
  • FB
  • TW
  • Linkdin
  • Whatsapp
16
ಬಟಾಣಿ, ಕಡ್ಲೆ, ರಾಜ್ಮಾ ರೆಸಿಪಿ
Image Credit : Asianet News

ಬಟಾಣಿ, ಕಡ್ಲೆ, ರಾಜ್ಮಾ ರೆಸಿಪಿ

ಹೆಚ್ಚಿನ ಜನರಿಗೆ ತಮ್ಮ ಪ್ರತಿದಿನದ ಅಡುಗೆಯಲ್ಲಿ ಕಡಲೆ, ರಾಜ್ಮಾ, ಬಟಾಣಿಯನ್ನು ಬಳಸಲು ತುಂಬಾನೆ ಇಷ್ಟ. ಅವುಗಳನ್ನು ಬಳಸಿ ಬಗೆ ಬಗೆಯ ಸೌತ್ ಇಂಡಿಯನ್, ನಾರ್ತ್ ಇಂಡಿಯನ್ ಖಾದ್ಯಗಳನ್ನು ಮಾಡಿ ತಿನ್ನುತ್ತೇವೆ. ಆದರೆ ಅವುಗಳನ್ನು ಸರಿಯಾಗಿ ಬೇಯಿಸದಿದ್ದರೆ, ಅವು ಅಡುಗೆಯ ರುಚಿಯೇ ಹಾಳಾಗುತ್ತದೆ ಅಲ್ವಾ?

26
ಬೇಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ
Image Credit : Freepik

ಬೇಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ

ಕೆಲವೊಮ್ಮೆ, ಅವುಗಳನ್ನು ರಾತ್ರಿಯಿಡೀ ನೆನೆಸಿಟ್ಟು, ಮರುದಿನ ಕುಕ್ಕರ್ ನಲ್ಲಿ ಆರರಿಂದ ಏಳು ಬಾರಿ ವಿಸಿಲ್ ಹಾಕಿ, ಬೇಯಿಸಿದರೂ ಅವು ಬೇಯೋದಿಲ್ಲ. ಇದರಿಂದ ಮಾಡಿದ ಅಡುಗೆಯೂ ಚೆನ್ನಾಗಿರೋದಿಲ್ಲ, ಜೊತೆಗೆ ಅವುಗಳನ್ನು ತಿಂದ ನಂತರ ಗ್ಯಾಸ್, ಹೊಟ್ಟೆ ಉಬ್ಬರ ಅಥವಾ ಹೊಟ್ಟೆಯಲ್ಲಿ ಭಾರ ಮೊದಲಾದ ಸಮಸ್ಯೆ ಕಾಡುತ್ತೆ.

Related Articles

Related image1
Kitchen Sink: ಅಡುಗೆಮನೆ ಸಿಂಕ್‌ನ ಕಲೆ ತೆಗೆಯೋಕೆ ಇಲ್ಲಿದೆ ಸುಲಭ ಟಿಪ್ಸ್
Related image2
Kitchen Tips: ಉಪ್ಪಿದ್ರೆ ಸಾಕು, ಒಂದು ಹನಿ ಎಣ್ಣೆ ಬಳಸದೆಯೂ ಹಪ್ಪಳ, ಸಂಡಿಗೆ, ಶೇಂಗಾ ಗರಿಗರಿಯಾಗಿ ಬರುತ್ತೆ
36
ಇಲ್ಲಿದೆ ಸೂಪರ್ ಟ್ರಿಕ್ಸ್
Image Credit : Getty

ಇಲ್ಲಿದೆ ಸೂಪರ್ ಟ್ರಿಕ್ಸ್

ನಿಮಗೂ ಕೂಡ ಕಡ್ಲೆ, ಬಟಾಣಿಯನ್ನು ಬೇಯಿಸೋದೆ ಒಂದು ತಲೆಬಿಸಿ ಆಗಿದ್ಯಾ? ನೀವು ಇನ್ನು ಚಿಂತಿಸಬೇಕಾಗಿಲ್ಲ. ಯಾಕಂದ್ರೆ, ಕಡ್ಲೆ, ಬಟಾಣಿ, ರಾಜ್ಮಾ ಕಾಳನ್ನು ಕೇವಲ 1-2 ಸೀಟಿಗಳಲ್ಲಿ ಬೇಯಿಸಲು ಸಹಾಯ ಮಾಡುವ ಟ್ರಿಕ್ ಇಲ್ಲಿದೆ. ಈ ಟ್ರಿಕ್ ಇನ್’ಸ್ಟಾಗ್ರಾಂ ಪೇಜ್ ಒಂದರಲ್ಲಿ ವೈರಲ್ ಆಗಿತ್ತು. ನೀವು ಟ್ರೈ ಮಾಡಿ ನೋಡಿ, ಉಪಯೋಗಕ್ಕೆ ಬರಬಹುದು.

46
ಇದೊಂದು ವಸ್ತು ಇದ್ರೆ ಸಾಕು ನಿಮಿಷದಲ್ಲಿ ಬೇಯುತ್ತೆ
Image Credit : Freepik

ಇದೊಂದು ವಸ್ತು ಇದ್ರೆ ಸಾಕು ನಿಮಿಷದಲ್ಲಿ ಬೇಯುತ್ತೆ

ಇದು ತುಂಬಾ ಸರಳ ಮತ್ತು ಅಗ್ಗದ ವಿಧಾನ. ಇದಕ್ಕೆ ಹೆಚ್ಚಿನ ಶ್ರಮ ಅಗತ್ಯವಿಲ್ಲ. ನಿಮಗೆ ಬೇಕಾಗಿರುವುದು ಶುಂಠಿ ಅಷ್ಟೇ. ಕಡ್ಲೆ, ಬಟಾಣಿಯನ್ನು ಬೇಯಿಸಲು ನೀರನ್ನು ಕುದಿಸುವಾಗ ಒಂದು ಸಣ್ಣ ತುಂಡು ಶುಂಠಿಯನ್ನು ಆ ನೀರಿಗೆ ಸೇರಿಸಿ. ಈ ಹಳೆಯ ಮನೆಮದ್ದು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಶುಂಠಿ ಧಾನ್ಯಗಳು ಬೇಗನೆ ಬೇಯುವಂತೆ ಮಾಡುತ್ತದೆ.

56
ವೈಜ್ಞಾನಿಕ ಕಾರಣಗಳು
Image Credit : Pixabay

ವೈಜ್ಞಾನಿಕ ಕಾರಣಗಳು

ಶುಂಠಿ ಹಾಕೋದರಿಂದ ಧಾನ್ಯಗಳು ಬೇಗನೆ ಬೇಯುವ ಹಿಂದೆ ವೈಜ್ಞಾನಿಕ ಕಾರಣಗಳಿವೆ. ಕಡ್ಲೆ, ಬೀನ್ಸ್, ರಾಜ್ಮಾ, ಬಟಾಣಿ ಕಾಳುಗಳಲ್ಲಿ ಆಲಿಗೋಸ್ಯಾಕರೈಡ್‌ ಎಂಬ ಸಂಕೀರ್ಣ ಸಕ್ಕರೆ ಇರುತ್ತವೆ, ಇವುಗಳನ್ನು ನಮ್ಮ ಜೀರ್ಣಾಂಗ ವ್ಯವಸ್ಥೆಯು ಸುಲಭವಾಗಿ ಒಡೆಯಲು ಸಾಧ್ಯವಿಲ್ಲ. ಈ ಸಕ್ಕರೆಗಳು ಕರುಳಿನಲ್ಲಿ ಹುದುಗುವಿಕೆಗೆ ಕಾರಣವಾಗುತ್ತವೆ, ಇದು ಗ್ಯಾಸ್ಟ್ರಿಕ್ ಗೆ ಕಾರಣವಾಗುತ್ತದೆ. ಶುಂಠಿಯಲ್ಲಿರುವ ಜಿಂಜರಾಲ್ ಈ ಸಂಕೀರ್ಣ ಸಕ್ಕರೆಗಳನ್ನು ವೇಗವಾಗಿ ಒಡೆಯಲು ಸಹಾಯ ಮಾಡುತ್ತದೆ. ಇದರಿಂದ ದ್ವಿದಳ ಧಾನ್ಯಗಳು ಬೇಗನೆ ಮೃದುವಾಗುತ್ತವೆ, ಹೊಟ್ಟೆಯಲ್ಲಿ ಅನಿಲ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.

66
ಹೇಗೆ ಬಳಸುವುದು?
Image Credit : Freepik

ಹೇಗೆ ಬಳಸುವುದು?

ಕಡ್ಲೆ, ರಾಜ್ಮಾವನ್ನು ಚೆನ್ನಾಗಿ ತೊಳೆದು 6-8 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ನೀರಲ್ಲಿ ನೆನೆಸಿಡಿ. ನೆನೆಸಿದ ಕಡಲೆ/ರಾಜ್ಮಾವನ್ನು ಕುಕ್ಕರ್‌ಗೆ ಸೇರಿಸಿ. 1 ಇಂಚಿನ ಶುಂಠಿಯನ್ನು ಸೇರಿಸಿ. ನೀವು ಅದನ್ನು ಜಜ್ಜಿ ಕೂಡ ಹಾಕಬಹುದು. ಈಗ ಅದಕ್ಕೆ ಉಪ್ಪು, ಅರಿಶಿನ ಮತ್ತು ಸ್ವಲ್ಪ ನೀರು ಸೇರಿಸಿ. ಕುಕ್ಕರ್ 4-5 ಬಾರಿ ಸೀಟಿ ಹೊಡೆಯಲು ಬಿಡಿ. ಧಾನ್ಯಗಳು ನಿಮಿಷದಲ್ಲಿ ಬೆಂದಿರುತ್ತೆ ನೀವೆ ನೋಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಅಡುಗೆಮನೆ ಸಲಹೆಗಳು
ಜೀವನಶೈಲಿ
ಆಹಾರ
ಆರೋಗ್ಯ

Latest Videos
Recommended Stories
Recommended image1
ಉದ್ದು-ಅವಲಕ್ಕಿ ಬೇಡವೇ ಬೇಡ: ಹತ್ತಿಯಂಥ ಮೃದು ದೋಸೆಗೆ ಈ ಒಂದೇ ಒಂದು ಪದಾರ್ಥ ಸಾಕು!
Recommended image2
ಈ ಟ್ರಿಕ್ಸ್ ಟ್ರೈ ಮಾಡಿದ್ರೆ… ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರೋದೇ ಇಲ್ಲ
Recommended image3
ಸ್ಪ್ರೇ ಬೇಕಾಗಿಲ್ಲ, ಅಡುಗೆ ಮನೆಯಲ್ಲಿ ಈ ವಸ್ತು ಇಟ್ನೋಡಿ ಜಿರಳೆ ಸುಳಿಯೋದಿಲ್ಲ
Related Stories
Recommended image1
Kitchen Sink: ಅಡುಗೆಮನೆ ಸಿಂಕ್‌ನ ಕಲೆ ತೆಗೆಯೋಕೆ ಇಲ್ಲಿದೆ ಸುಲಭ ಟಿಪ್ಸ್
Recommended image2
Kitchen Tips: ಉಪ್ಪಿದ್ರೆ ಸಾಕು, ಒಂದು ಹನಿ ಎಣ್ಣೆ ಬಳಸದೆಯೂ ಹಪ್ಪಳ, ಸಂಡಿಗೆ, ಶೇಂಗಾ ಗರಿಗರಿಯಾಗಿ ಬರುತ್ತೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved