MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಹಾಸನ: ಅರ್ಜುನನ ಸಮಾಧಿಗೆ ಪೂಜೆ ಸಲ್ಲಿಸಿ ಕಣ್ಣೀರಿಟ್ಟ ಯದುವೀರ್ ದಂಪತಿ..!

ಹಾಸನ: ಅರ್ಜುನನ ಸಮಾಧಿಗೆ ಪೂಜೆ ಸಲ್ಲಿಸಿ ಕಣ್ಣೀರಿಟ್ಟ ಯದುವೀರ್ ದಂಪತಿ..!

ಹಾಸನ(ಡಿ.08):  ಹುತಾತ್ಮ ಅರ್ಜುನನ ಸಮಾಧಿಗೆ ಇಂದು(ಶುಕ್ರವಾರ) ಯದುವೀರ್ ಒಡೆಯರ್, ಪತ್ನಿ ತ್ರಿಷಿಕಾ ದೇವಿ ಅವರು ಪೂಜೆ ಸಲ್ಲಿಸಿದ್ದಾರೆ. ಮೃತ ಅರ್ಜುನ 8 ಬಾರಿ ಮೈಸೂರು ದಸರಾದಲ್ಲಿ ಅಂಬಾರಿಯನ್ನ ಹೊತ್ತಿದ್ದ.  ಕಾಡಾನೆ  ಸೆರೆ ಕಾರ್ಯಾಚರಣೆ ವೇಳೆ ಅರ್ಜುನ ಹುತಾತ್ಮನಾಗಿದ್ದನು. 

1 Min read
Girish Goudar
Published : Dec 08 2023, 06:04 PM IST
Share this Photo Gallery
  • FB
  • TW
  • Linkdin
  • Whatsapp
14

ಇದೇ 4 ರ ಸೋಮವಾರ ಕಾಡಾನೆ ಕಾರ್ಯಾಚರಣೆ ವೇಳೆ ಅರ್ಜುನ ವೀರಮರಣವನ್ನಪ್ಪಿದ್ದ, ಮಂಗಳವಾರ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಅರ್ಜುನನ ಅಂತ್ಯಕ್ರಿಯೆಗೆ ರಾಜಮನೆತನದವರು ಭಾಗವಹಿಸಿರಲಿಲ್ಲ. ಅರಮನೆ ಪುರೋಹಿತರನ್ನ ಕಳುಹಿಸಿಕೊಟ್ಟಿದ್ದರು. ಹಾಗಾಗಿ ಯದುವೀರ್ ದಂಪತಿ ಇಂದು ದಬ್ಬಳ್ಳಿಗೆ ಆಗಮಿಸಿ ಅರಣ್ಯದಲ್ಲಿರುವ ಅರ್ಜುನನ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.  

24

ಮೈಸೂರು ರಾಜಮನೆತನದ ರಾಜಮರ್ಯಾದೆ ಅರ್ಜುನನಿಗೆ ನೀಡಿಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಅಂತ್ಯಕ್ರಿಯೆ ವೇಳೆ ಮೈಸೂರು ರಾಜಮನೆತನದವರು ಗೈರಾಗಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಅಂಬಾರಿ ಹೊರಲು ಅರ್ಜುನ ಬೇಕಿತ್ತು, ಸಾವನ್ನಪ್ಪಿದ ಅರ್ಜುನನ ದರ್ಶನ ರಾಜಮನೆತನದವರಿಗೆ ಬೇಕಿಲ್ಲವಾ? ಎಂದು ಪ್ರಶ್ನಿಸಿದ್ದರು. 

34

ಯದುವೀರ್ ದಂಪತಿ ಇಂದು ಅರ್ಜುನನ ಸಮಾಧಿಗೆ ಪೂಜೆ ಸಲ್ಲಿಸಿ ಕಂಬನಿ ಮಿಡಿದಿದ್ದಾರೆ. ಯದುವೀರ್ ಆಗಮನ ವೇಳೆ ಹಾಸನ ಡಿಎಫ್‌ಒ ಮೋಹನ್ ಸಾಥ್ ನೀಡಿದ್ದರು. 

44

ಕಾಡಾನೆ ಕಾರ್ಯಾಚರಣೆ ವೇಳೆ ಅರ್ಜುನ ವೀರಮರಣವನ್ನಪ್ಪಿದ್ದ, ಮಂಗಳವಾರ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಅರ್ಜುನನ ಅಂತ್ಯಕ್ರಿಯೆಗೆ ರಾಜಮನೆತನದವರು ಭಾಗವಹಿಸಿರಲಿಲ್ಲ. ಅರಮನೆ ಪುರೋಹಿತರನ್ನ ಕಳುಹಿಸಿಕೊಟ್ಟಿದ್ದರು. ಹಾಗಾಗಿ ಯದುವೀರ್ ದಂಪತಿ ಇಂದು ದಬ್ಬಳ್ಳಿಗೆ ಆಗಮಿಸಿ ಅರಣ್ಯದಲ್ಲಿರುವ ಅರ್ಜುನ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.  

About the Author

GG
Girish Goudar
ಏಷ್ಯಾನೆಟ್‌ ಸುವರ್ಣ ನ್ಯೂಸ್‌.ಕಾಮ್‌ನಲ್ಲಿ ಹಿರಿಯ ಉಪ ಸಂಪಾದಕ. ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದೇನೆ. ನನ್ನ ಊರು ಬಾಗಲಕೋಟೆ ಜಿಲ್ಲೆಯ ಹುನಗುಂದ . ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂಎಸ್‌ಸಿ ಎಲೆಕ್ಟ್ರಾನಿಕ್‌ ಮೀಡಿಯಾ ಪದವಿ ಪಡೆದಿದ್ದೇನೆ. ಈಟಿವಿ ಭಾರತ್‌, ವೇ ಟು ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಸಂಪಾದಕನಾಗಿ ಕೆಲಸ ಮಾಡಿದ್ದೇನೆ. ಕ್ರೀಡೆ, ಚಲನಚಿತ್ರ, ರಾಜಕೀಯ ಸುದ್ದಿಗಳ ಬಗ್ಗೆ ಅತೀವ ಆಸಕ್ತಿ ಇದೆ. ಸಂಗೀತ ಕೇಳುವುದು, ಕ್ರಿಕೆಟ್‌ ಆಡುವುದು ನೆಚ್ಚಿನ ಹವ್ಯಾಸಗಳಾಗಿವೆ.
ಯದುವೀರ್ ಒಡೆಯರ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved