MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • ಸ್ಮೃತಿ-ಪಲಾಶ್ ಮದುವೆ ಮುಂದೂಡಿಕೆ ಚರ್ಚೆ ನಡುವೆ ಅಚ್ಚರಿ ಹೇಳಿಕೆ ಕೊಟ್ಟ ಪಲಾಶ್ ತಾಯಿ

ಸ್ಮೃತಿ-ಪಲಾಶ್ ಮದುವೆ ಮುಂದೂಡಿಕೆ ಚರ್ಚೆ ನಡುವೆ ಅಚ್ಚರಿ ಹೇಳಿಕೆ ಕೊಟ್ಟ ಪಲಾಶ್ ತಾಯಿ

Smriti Mandhana Wedding Postponed: ಪಲಾಶ್ ಮುಚ್ಚಲ್ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರಿಗೆ ಏನಾಯ್ತು ಎಂಬುದು ಸ್ಪಷ್ಟವಾಗಿಲ್ಲ. ಈ ಮಧ್ಯೆ ಸ್ಮೃತಿ ತಮ್ಮ ಇನ್‌ಸ್ಟಾಗ್ರಾಮ್‌ನಿಂದ ಪಲಾಶ್ ಅವರೊಂದಿಗಿರುವ ಎಲ್ಲಾ ಫೋಟೋಗಳು ಮತ್ತು ವಿಡಿಯೋ ಸಹ ಡಿಲೀಟ್ ಮಾಡಿದ್ದಾರೆ.  

2 Min read
Ashwini HR
Published : Nov 25 2025, 04:31 PM IST
Share this Photo Gallery
  • FB
  • TW
  • Linkdin
  • Whatsapp
16
ವಿವಾಹ ಮುಂದೂಡಿಕೆ
Image Credit : insta/palash_muchhal

ವಿವಾಹ ಮುಂದೂಡಿಕೆ

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂಧಾನ ಮತ್ತು ಇಂದೋರ್ ಮೂಲದ ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರ ವಿವಾಹ ನವೆಂಬರ್ 23 ರಂದು ನಿಗದಿಯಾಗಿತ್ತು. ಆದರೆ ಸ್ಮೃತಿ ತಂದೆ ಶ್ರೀನಿವಾಸ್ ಮಂಧಾನಗೆ ಹೃದಯಾಘಾತವಾದ ಹಿನ್ನೆಲೆಯಲ್ಲಿ ವಿವಾಹವನ್ನು ಮುಂದೂಡಲಾಗಿದೆ.

26
ಪಲಾಶ್ ಸಹೋದರಿ ಹೇಳಿದ್ದೇನು?
Image Credit : insta/palash_muchhal

ಪಲಾಶ್ ಸಹೋದರಿ ಹೇಳಿದ್ದೇನು?

ಈ ಮಧ್ಯೆ ವರನ ಸಹೋದರಿ ಪಾಲಕ್ ಅವರು "ಸ್ಮೃತಿ ತಂದೆಯ ಅನಾರೋಗ್ಯದ ಕಾರಣದಿಂದಾಗಿ ಸ್ಮೃತಿ ಮತ್ತು ಪಲಾಶ್ ಅವರ ವಿವಾಹವನ್ನು ಸದ್ಯಕ್ಕೆ ಮುಂದೂಡಲಾಗಿದೆ. ಈ ಸೂಕ್ಷ್ಮ ಸಮಯದಲ್ಲಿ ಎರಡೂ ಕುಟುಂಬಗಳ ಗೌಪ್ಯತೆಯನ್ನು ನೀವೆಲ್ಲರೂ ಗೌರವಿಸಬೇಕೆಂದು ನಾವು ವಿನಂತಿಸುತ್ತೇವೆ" ಎಂದು ಹೇಳಿಕೆ ನೀಡಿದ್ದಾರೆ. 

Related Articles

Related image1
ಸ್ಮೃತಿ ಮಂಧಾನಾರನ್ನು ವರಿಸಲಿರುವ ಪಲಾಶ್ ಮುಚ್ಚಲ್ ಒಟ್ಟು ಆಸ್ತಿ ಎಷ್ಟು?
Related image2
ಸ್ಮೃತಿ ಮದುವೆ ದಿಢೀರ್ ಮುಂದೂಡಿಕೆ ಬೆನ್ನಲ್ಲೇ ಎಲ್ಲಾ ಫೋಟೋ-ವಿಡಿಯೋ ಡಿಲೀಟ್ ಮಾಡಿದ ಮಂಧನಾ!
36
ಏನಾಯ್ತು ಗೊತ್ತಿಲ್ಲ!
Image Credit : insta/palash_muchhal

ಏನಾಯ್ತು ಗೊತ್ತಿಲ್ಲ!

ಮಾಹಿತಿಯ ಪ್ರಕಾರ, ಪಲಾಶ್ ಮುಚ್ಚಲ್ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರಿಗೆ ಏನಾಯ್ತು ಎಂಬುದು ಸ್ಪಷ್ಟವಾಗಿಲ್ಲ. ಈ ಮಧ್ಯೆ ಸ್ಮೃತಿ ತಮ್ಮ ಇನ್‌ಸ್ಟಾಗ್ರಾಮ್‌ನಿಂದ ಪಲಾಶ್ ಅವರೊಂದಿಗಿರುವ ಎಲ್ಲಾ ಫೋಟೋಗಳು ಮತ್ತು ವಿಡಿಯೋ ಸಹ ಡಿಲೀಟ್ ಮಾಡಿದ್ದಾರೆ.

46
ಭೇಟಿಗೆ ಕಾರಣ ಸ್ಪಷ್ಟವಾಗಿಲ್ಲ
Image Credit : insta/palash_muchhal

ಭೇಟಿಗೆ ಕಾರಣ ಸ್ಪಷ್ಟವಾಗಿಲ್ಲ

ಮಂಗಳವಾರ ಬೆಳಗ್ಗೆ ಮುಂಬೈನ ಎಸ್‌ಆರ್‌ವಿ ಆಸ್ಪತ್ರೆಯ ಹೊರಗೆ ಗಾಯಕಿ ಪಾಲಕ್ ಮುಚ್ಚಲ್ ಕಾಣಿಸಿಕೊಂಡಿದ್ದರು. ಆದರೆ ಅವರ ಭೇಟಿಗೆ ಕಾರಣ ಸ್ಪಷ್ಟವಾಗಿಲ್ಲ.

56
ಪಲಾಶ್ ತಾಯಿ ಹೇಳಿದ್ದೇನು?
Image Credit : Instagram@smritipalash18

ಪಲಾಶ್ ತಾಯಿ ಹೇಳಿದ್ದೇನು?

ಇದೀಗ ಪಲಾಶ್ ಅವರ ತಾಯಿ ಅಮಿತಾ ಮಾಧ್ಯಮಗಳಿಗೆ, ಪಲಾಶ್ ಸ್ಮೃತಿಯ ತಂದೆಗೆ ತುಂಬಾ ಆಪ್ತರಾಗಿದ್ದರು. ಆದ್ದರಿಂದ ಮದುವೆಯ ಯಾವುದೇ ವಿಧಿವಿಧಾನಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಇದರ ಮಧ್ಯೆ ಪಲಾಶ್ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿತು. ನಾಲ್ಕು ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಇರಿಸಲಾಯಿತು. IV ಡ್ರಿಪ್ ನೀಡಲಾಯಿತು. ಇಸಿಜಿ ಮತ್ತು ಇತರ ಪರೀಕ್ಷೆಗಳನ್ನು ಮಾಡಲಾಯಿತು. ಸದ್ಯ ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳಿದೆ. ಆದರೆ ಪಲಾಶ್ ತುಂಬಾ ಒತ್ತಡಕ್ಕೊಳಗಾಗಿದ್ದಾರೆ. ಪಲಾಶ್ ಮತ್ತು ಸ್ಮೃತಿ ಇಬ್ಬರೂ ಪ್ರಸ್ತುತ ತುಂಬಾ ಭಾವನಾತ್ಮಕ ಒತ್ತಡದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

66
ಟ್ರೋಲ್ ಆದ ಪಲಾಶ್
Image Credit : Instagram@smritipalash18

ಟ್ರೋಲ್ ಆದ ಪಲಾಶ್

ಅಷ್ಟೇ ಅಲ್ಲ, ಸಾಮಾಜಿಕ ಮಾಧ್ಯಮದಲ್ಲಿ ಪಲಾಶ್ ಅವರನ್ನು ಟ್ರೋಲ್ ಮಾಡಲಾಗುತ್ತಿದ್ದು, ಅನೇಕ ಬಳಕೆದಾರರು ಸ್ಮೃತಿಯನ್ನು ಮಾತ್ರ ಸಪೋರ್ಟ್ ಮಾಡುತ್ತಿದ್ದಾರೆ. "ಸ್ಮೃತಿ ವಿಶ್ವಕಪ್ ಗೆದ್ದ ಬಲಿಷ್ಠ ಮಹಿಳೆ, ಆದರೆ ಈ ದ್ರೋಹವನ್ನು ಸಹಿಸಿಕೊಳ್ಳುವುದು ಕಷ್ಟವಾಗುತ್ತದೆ" ಎಂದು ಹೇಳುತ್ತಿದ್ದಾರೆ. ಆದರೆ ಸ್ಮೃತಿ ಅಥವಾ ಪಲಾಶ್ ಈ ವಿಷಯದ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಪಲಾಶ್‌ಗೆ ಆರೋಗ್ಯ ಸಮಸ್ಯೆಗಳಿದ್ದು, ಇದು ಆಸ್ಪತ್ರೆಗೆ ದಾಖಲಾಗಲು ಕಾರಣವಾಯಿತು. ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂಬ ಸುದ್ದಿ ಬಂದಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಕ್ರಿಕೆಟ್
ಸುದ್ದಿ
ಭಾರತ ಸುದ್ದಿ
Latest Videos
Recommended Stories
Recommended image1
26/11 ಮುಂಬೈ ದಾಳಿಗೆ 17 ವರ್ಷ: ಹಲವು ಪ್ರಶ್ನೆಗಳಿಗೆ ಇನ್ನೂ ಸಿಕ್ಕಿಲ್ಲ ಉತ್ತರ, ಸಾಜಿದ್‌ ಮಿರ್‌ ಭಾಗಿ ಬಗ್ಗೆ ಇನ್ನೂ ಅನುಮಾನ!
Recommended image2
ರಾಜಕೀಯ ಬೆಳವಣಿಗೆ ನಡುವೆ ಕಾಂಗ್ರೆಸ್‌‌ನಲ್ಲಿ ಮೇಜರ್ ಸರ್ಜರಿ, 7 ಪ್ರಮುಖ ನಾಯಕರ ಉಚ್ಚಾಟನೆ
Recommended image3
India Untold: ಮುಂಬೈ ದಾಳಿಯಲ್ಲಿ 157 ಜನರ ಜೀವ ಉಳಿಸಿದ್ದ ಯುಎಸ್‌ ಮರೀನ್‌ ಕಮಾಂಡೋ ರವಿ ಧರ್ಣಿಧಿರ್ಕ
Related Stories
Recommended image1
ಸ್ಮೃತಿ ಮಂಧಾನಾರನ್ನು ವರಿಸಲಿರುವ ಪಲಾಶ್ ಮುಚ್ಚಲ್ ಒಟ್ಟು ಆಸ್ತಿ ಎಷ್ಟು?
Recommended image2
ಸ್ಮೃತಿ ಮದುವೆ ದಿಢೀರ್ ಮುಂದೂಡಿಕೆ ಬೆನ್ನಲ್ಲೇ ಎಲ್ಲಾ ಫೋಟೋ-ವಿಡಿಯೋ ಡಿಲೀಟ್ ಮಾಡಿದ ಮಂಧನಾ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved