MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಅಳಿಯನಿಗೆ ರಾಜ ಮರ್ಯಾದೆ: 158 ಬಗೆಯ ಭಕ್ಷ್ಯ ಸಿದ್ಧಪಡಿಸಿ ಬಡಿಸಿದ ಆಂಧ್ರದ ಕುಟುಂಬ

ಅಳಿಯನಿಗೆ ರಾಜ ಮರ್ಯಾದೆ: 158 ಬಗೆಯ ಭಕ್ಷ್ಯ ಸಿದ್ಧಪಡಿಸಿ ಬಡಿಸಿದ ಆಂಧ್ರದ ಕುಟುಂಬ

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯ ಕುಟುಂಬವೊಂದು ತಮ್ಮ ಮಗಳು ಮತ್ತು ಹೊಸ ಅಳಿಯನ ಮೊದಲ ಸಂಕ್ರಾಂತಿ ಹಬ್ಬಕ್ಕಾಗಿ 158 ಬಗೆಯ ಭಕ್ಷ್ಯಗಳನ್ನು ಸಿದ್ಧಪಡಿಸಿ ಅದ್ದೂರಿ ಔತಣ ನೀಡಿದೆ. ಗೋದಾವರಿ ಜಿಲ್ಲೆಯಲ್ಲಿ ಅಳಿಯನನ್ನು ರಾಜನಂತೆ ಸತ್ಕರಿಸುವ ಸಂಪ್ರದಾಯದ ಭಾಗವಾಗಿ ಈ ಸಂಭ್ರಮವನ್ನು ಆಚರಿಸಲಾಗಿದೆ.

2 Min read
Author : Anusha Kb
Published : Jan 16 2026, 12:31 PM IST
Share this Photo Gallery
  • FB
  • TW
  • Linkdin
  • Whatsapp
16
ಆಂಧ್ರದಲ್ಲಿ ಅದ್ದೂರಿ ಸಂಕ್ರಾಂತಿ ಸಂಭ್ರಮ
Image Credit : Google

ಆಂಧ್ರದಲ್ಲಿ ಅದ್ದೂರಿ ಸಂಕ್ರಾಂತಿ ಸಂಭ್ರಮ

ನಿನ್ನೆಯಷ್ಟೇ ಸಂಕ್ರಾಂತಿ ಹಬ್ಬವನ್ನು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಯ್ತು, ದೇಶದ ವಿವಿಧಿ ಭಾಗಗಳಲ್ಲಿ ಸಂಕ್ರಾಂತಿ ಹಬ್ಬವನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ದಕ್ಷಿಣ ಭಾರತದಲ್ಲಿ ಸಂಕ್ರಾಂತಿ ಪೊಂಗಲ್ ಎಂದು ಕರೆದರೆ ಉತ್ತರ ಭಾರತದಲ್ಲಿ ಬೋಗಿ, ಮಕರ ಸಂಕ್ರಾಂತಿ, ಸುಗ್ಗಿ ಹಬ್ಬ ಎಂದೆಲ್ಲಾ ಕರೆಯಲಾಗುತ್ತದೆ. ಈ ಹಬ್ಬದಂದು ವಿವಿಧ ತಿನಿಸುಗಳನ್ನು ತಯಾರಿಸಿ, ಹೊಸ ಅಕ್ಕಿ ಊಟ ಮಾಡಿ ರೈತಾಪಿ ಜನರು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. 

26
ಅಳಿಯನಿಗಾಗಿ 158 ಬಗೆಯ ಭೋಜನ ಸಿದ್ಧಪಡಿಸಿದ ಕುಟುಂಬ
Image Credit : Google

ಅಳಿಯನಿಗಾಗಿ 158 ಬಗೆಯ ಭೋಜನ ಸಿದ್ಧಪಡಿಸಿದ ಕುಟುಂಬ

ಹಾಗೆಯೇ ಆಂಧ್ರಪ್ರದೇಶದಲ್ಲಿ ಈ ಹಬ್ಬದಂದು ಕುಟುಂಬವೊಂದು ಹೊಸದಾಗಿ ಮದುವೆಯಾದ ತಮ್ಮ ಮಗಳು ಅಳಿಯನ ಮೊದಲ ಸಂಕ್ರಾಂತಿ ಹಬ್ಬಕ್ಕೆ 158 ಬಗೆಯ ಭಕ್ಷ್ಯಗಳನ್ನು ಸಿದ್ಧಪಡಿಸಿ ಬಡಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

Related Articles

Related image1
ಸಂಕ್ರಾಂತಿ ದಿನವೇ ರಾಜಕಾರಣದ ಪಥ ಬದಲಿಸಿದ ಕುಮಾರಣ್ಣ; 2028ಕ್ಕೆ ರಾಜ್ಯ ರಾಜಕಾರಣಕ್ಕೆ ರೀ-ಎಂಟ್ರಿ ಖಚಿತ!
Related image2
ದರ್ಶನ್​ ಇಲ್ಲದ ಸಂಕ್ರಾಂತಿ: ಕುದುರೆ ಜೊತೆ ವಿಜಯಲಕ್ಷ್ಮಿ ಕುತೂಹಲದ ಪೋಸ್ಟ್​- ಅಭಿಮಾನಿಗಳು ಭಾವುಕ
36
ಗುಂಟೂರು ಜಿಲ್ಲೆಯ ತೆನಾಲಿಯ ಕುಟುಂಬದಿಂದ ವಿಶಿಷ್ಠ ಸತ್ಕಾರ
Image Credit : Google

ಗುಂಟೂರು ಜಿಲ್ಲೆಯ ತೆನಾಲಿಯ ಕುಟುಂಬದಿಂದ ವಿಶಿಷ್ಠ ಸತ್ಕಾರ

ಹೌದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯ ಕುಟುಂಬವೊಂದು ಈ ರೀತಿ ವಿಭಿನ್ನವಾಗಿ ಸಂಕ್ರಾಂತಿ ಆಚರಿಸಿದೆ. ವಂಡನಪು ಮುರಲಿಕೃಷ್ಣ ಹಾಗೂ ಅವರ ಪತ್ನಿ ತಮ್ಮ ಅಳಿಯ ಗೋದಾವರಿ ಜಿಲ್ಲೆಯ ರಾಜಮಂಡ್ರಿ ಜಿಲ್ಲೆಯ ನಿವಾಸಿಯಾದ ಶ್ರೀದತ್ತ ಹಾಗೂ ಮಗಳು ಮೌನಿಕಾಗಾಗಿ ಈ ರೀತಿ ಅದ್ದೂರಿ ಸಂಕ್ರಾಂತಿ ಭೋಜನ ಕೂಟವನ್ನು ಆಯೋಜಿಸಿದ್ದರು. ಶ್ರೀದತ್ತ ಹಾಗೂ ಮೌನಿಕಾ ಕಳೆದ ವರ್ಷ ಮದುವೆಯಾಗಿದ್ದರಿಂದ ಅವರಿಗೆ ಇದು ತಮ್ಮ ಮೊದಲ ಸಂಕ್ರಾಂತಿ ಆಗಿತ್ತು. ಹೀಗಾಗಿ ಮೌನಿಕಾ ಕುಟುಂಬದವರು ಮಗಳು ಅಳಿಯನಿಗಾಗಿ ಸಂಕ್ರಾಂತಿಯಂದು ವಿಶೇಷ ಔತಣ ಕೂಟ ಏರ್ಪಡಿಸಿತ್ತು.

46
ಇಲ್ಲಿ ಸಂಕ್ರಾಂತಿ ಕೇವಲ ಸುಗ್ಗಿ ಆಚರಣೆ ಅಲ್ಲ
Image Credit : Google

ಇಲ್ಲಿ ಸಂಕ್ರಾಂತಿ ಕೇವಲ ಸುಗ್ಗಿ ಆಚರಣೆ ಅಲ್ಲ

ಆಂಧ್ರಪ್ರದೇಶ ಹಲವು ಭಾಗಗಳಲ್ಲಿ ಅದರಲ್ಲೂ ವಿಶೇಷವಾಗಿ ಗೋದಾವರಿ ಜಿಲ್ಲೆಯಲ್ಲಿ ಸಂಕ್ರಾಂತಿ ಹಬ್ಬ ಕೇವಲ ಸುಗ್ಗಿಯ ಆಚರಣೆಯಲ್ಲ, ಇದು ಕುಟುಂಬ ಪ್ರೀತಿ, ಸಂಬಂಧಿಕರ ಆರೈಕೆ ಅತಿಥ್ಯವನ್ನು ಒಳಗೊಂಡಿದೆ. ಅಲ್ಲಿ ಅಳಿಯನನ್ನು ರಾಜನಂತೆ ನಡೆಸಿಕೊಳ್ಳಲಾಗುತ್ತದೆ. ಕುಟುಂಬದವರು ಅವರನ್ನು ಪ್ರೀತಿ ಹಾಗೂ ಉಡುಗೊರೆಯೊಂದಿಗೆ ಅದ್ದೂರಿಯಾಗಿ ಸ್ವಾಗತಿಸುತ್ತಾರೆ. ಆದರೆ ತೆನಾಲಿಯ ಈ ಕುಟುಂಬ ಈ ಸಂಭ್ರಮವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿದೆ.

56
158 ಬಗೆಯ ಆಹಾರದಲ್ಲಿ ಏನೇನಿತ್ತು?
Image Credit : Google

158 ಬಗೆಯ ಆಹಾರದಲ್ಲಿ ಏನೇನಿತ್ತು?

ಸಿಹಿತಿಂಡಿಗಳು, ತಿಂಡಿಗಳು ಮತ್ತು ಸಸ್ಯಾಹಾರಿ ಮತ್ತು ಮಾಂಸಾಹಾರಿ ಸಾಂಪ್ರದಾಯಿಕ ಭಕ್ಷ್ಯಗಳು ಸೇರಿದಂತೆ ಒಟ್ಟು158 ಬಗೆಯ ಆಹಾರವನ್ನು ಮಗಳು ಅಳಿಯನಿಗಾಗಿ ತಯಾರಿಸಿ ಬಡಿಸಿದೆ. ಆಂಧ್ರದ ಸಾಂಪ್ರದಾಯಿಕ ಖಾದ್ಯಗಳಾದ ಮುರುಕುಲು, ಚೆಕ್ಕಲು ಮತ್ತು ಗರೇಲು, ಅರಿಸೆಲು, ಬೊಬ್ಬಟ್ಲು, ಸುನ್ನುಂಡುಲು ಮತ್ತು ಕಜ್ಜಿಕಾಯಲು ಮುಂತಾದ ಬೆಲ್ಲವನ್ನು ಒಳಗೊಂಡಿರುವ ಸಿಹಿ ತಿನಿಸುಗಳ ಜೊತೆಗೆ ಸಸ್ಯಾಹಾರಿ ಮತ್ತು ಮಾಂಸಾಹಾರಿ ಭಕ್ಷ್ಯಗಳು, ಅಕ್ಕಿಯಿಂದ ತಯಾರಿಸಿದ ತಿನಿಸುಗಳು, ಕರಿಗಳು ಇದರಲ್ಲಿ ಸೇರಿದ್ದವು.

ಇದನ್ನೂ ಓದಿ: 2023ರಲ್ಲಿ ಪಿಯರ್ಸನ್ ಏರ್‌ಪೋರ್ಟ್‌ನಲ್ಲಿ ನಡೆದ 400 ಕೆಜಿ ಚಿನ್ನ ದರೋಡೆ: ಆರೋಪಿ ಗಡೀಪಾರಿಗೆ ಭಾರತಕ್ಕೆ ಕೆನಡಾ ಮನವಿ

66
ಕಲೆ ಸಂಸ್ಕೃತಿಗೆ ಹೆಸರುವಾಸಿಯಾಗಿರುವ ತೆನಾಲಿ ಗ್ರಾಮ
Image Credit : Google

ಕಲೆ ಸಂಸ್ಕೃತಿಗೆ ಹೆಸರುವಾಸಿಯಾಗಿರುವ ತೆನಾಲಿ ಗ್ರಾಮ

ಇವರ ವೈವಿಧ್ಯತೆ ಹಾಗೂ ಅಳಿಯನನ್ನು ಸತ್ಕರಿಸಲು ಮಾಡಿದ ಕೆಲಸ ಎಲ್ಲರ ಮನೆ ಸೆಳೆಯಿತು. ಇದನ್ನು ಅನೇಕರು ತೆಲುಗು ಶೈಲಿಯಲ್ಲಿ ಅದಿರಿ ಪೋಯಿಂದಿ ಎಂದು ಬಣ್ಣಿಸಿದ್ದಾರೆ. ಗುಂಟೂರಿನ ಈ ತೆನಾಲಿ ಗ್ರಾಮವೂ ಕಲೆ, ನಾಟಕ ಮತ್ತು ಸಾಹಿತ್ಯದಲ್ಲಿ ಶ್ರೀಮಂತ ಪರಂಪರೆಗೆ ಹೆಸರುವಾಸಿಯಾಗಿದೆ ಮತ್ತು ವಿಜಯನಗರ ಯುಗದ ಪೌರಾಣಿಕ ಹಾಸ್ಯಮಯ ಆಸ್ಥಾನ ಕವಿ ತೆನಾಲಿ ರಾಮನಿಗೂ ಹೆಸರುವಾಸಿಯಾಗಿದೆ. ಈ ಪಟ್ಟಣವು ಅದರ ಸಿಹಿತಿಂಡಿಗಳಿಗೆ, ವಿಶೇಷವಾಗಿ 'ಬೆಲ್ಲಂ ಜಿಲೇಬಿಗೂ ಫೇಮಸ್.

ಇದನ್ನೂ ಓದಿ: ಬಹಳ ಪವಿತ್ರವಾದ ಸಂಬಂಧ ಹಾಳು ಮಾಡಿದಿರಿ: 11 ವರ್ಷದ ಮಗಳ ರೇ*ಪ್‌ ಮಾಡಿದ ತಂದೆಗೆ ಜೀವಾವಧಿ ಶಿಕ್ಷೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಆಹಾರ
ಆಹಾರ ಸಂಸ್ಕೃತಿ

Latest Videos
Recommended Stories
Recommended image1
ಮಾವನ ಆಸ್ತಿಯಲ್ಲಿ ವಿಧವೆ ಸೊಸೆಗೆ ಜೀವನಾಂಶ: ಸುಪ್ರೀಂ ಮಹತ್ವದ ತೀರ್ಪು- ಕೋರ್ಟ್​ ಹೇಳಿದ್ದೇನು?
Recommended image2
ಅಂಚೆ ಇಲಾಖೆಯ ಹೊಸ ಯುಗ ಆರಂಭ, ಲಾಜಿಸ್ಟಿಕ್ಸ್ ಸೇವೆಗೆ ಎಂಟ್ರಿ ಮೊದಲ ಡೆಲಿವರಿ ಯಶಸ್ವಿ
Recommended image3
ನರೇಗಾ ಬಳಿಕ ಯುಪಿಎ ಕಾಲದ ಇನ್ನೆರಡು ಕಾಯ್ದೆಗೆ ತಿದ್ದುಪಡಿ? ಆರ್‌ಟಿಐ, ಆಹಾರ ಭದ್ರತಾ ಕಾಯ್ದೆಯ ಮೇಲೆ ಕೇಂದ್ರದ ಕಣ್ಣು!
Related Stories
Recommended image1
ಸಂಕ್ರಾಂತಿ ದಿನವೇ ರಾಜಕಾರಣದ ಪಥ ಬದಲಿಸಿದ ಕುಮಾರಣ್ಣ; 2028ಕ್ಕೆ ರಾಜ್ಯ ರಾಜಕಾರಣಕ್ಕೆ ರೀ-ಎಂಟ್ರಿ ಖಚಿತ!
Recommended image2
ದರ್ಶನ್​ ಇಲ್ಲದ ಸಂಕ್ರಾಂತಿ: ಕುದುರೆ ಜೊತೆ ವಿಜಯಲಕ್ಷ್ಮಿ ಕುತೂಹಲದ ಪೋಸ್ಟ್​- ಅಭಿಮಾನಿಗಳು ಭಾವುಕ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved