MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಶ್ರಾವಣದಲ್ಲಿ ಕೆಲವರು ಈರುಳ್ಳಿ-ಬೆಳ್ಳುಳ್ಳಿ ತಿನ್ನಲ್ಲ ಯಾಕೆ? ಧರ್ಮ & ವಿಜ್ಞಾನದ ಉತ್ತರ

ಶ್ರಾವಣದಲ್ಲಿ ಕೆಲವರು ಈರುಳ್ಳಿ-ಬೆಳ್ಳುಳ್ಳಿ ತಿನ್ನಲ್ಲ ಯಾಕೆ? ಧರ್ಮ & ವಿಜ್ಞಾನದ ಉತ್ತರ

ಹಬ್ಬ, ಉಪವಾಸದ ಸಮಯದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಅವುಗಳ ತಾಮಸಿಕ ಗುಣಗಳಿಂದಾಗಿ ಧಾರ್ಮಿಕವಾಗಿ ದೂರವಿಡಲಾಗುತ್ತದೆ. ಆಯುರ್ವೇದವು ಇವುಗಳ ಉತ್ತೇಜಕ ಸ್ವಭಾವವನ್ನು ಉಲ್ಲೇಖಿಸಿದರೆ, ವಿಜ್ಞಾನವು ಇವುಗಳ ಪೌಷ್ಟಿಕಾಂಶದ ಮೌಲ್ಯವನ್ನು ಎತ್ತಿ ಹಿಡಿಯುತ್ತದೆ.

2 Min read
Author : Mahmad Rafik
Published : Jul 25 2026, 11:25 AM IST
Share this Photo Gallery
  • FB
  • TW
  • Linkdin
  • Whatsapp
16
ಈರುಳ್ಳಿ, ಬೆಳ್ಳುಳ್ಳಿ
Image Credit : Gemini

ಈರುಳ್ಳಿ, ಬೆಳ್ಳುಳ್ಳಿ

ನವರಾತ್ರಿ, ಏಕಾದಶಿ, ಶಿವರಾತ್ರಿ, ಸೋಮವಾರದ ವ್ರತ. ಹೀಗೆ ಹಬ್ಬ, ಉಪವಾಸ ಅಂದಾಗ ನಮ್ಮ ಮನೆಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿಯನ್ನು ಆಹಾರದಿಂದ ದೂರವಿಡುತ್ತಾರೆ. ಅದರಲ್ಲಿಯೂ ಕೆಲವರು ಶ್ರಾವಣದ ಒಂದು ತಿಂಗಳು ಈ ಎರಡರಿಂದ ದೂರವಿರುತ್ತಾರೆ. ಆದ್ರೆ ಯಾಕೆ ಹೀಗೆ ಮಾಡ್ತಾರೆ ಅಂತ ಎಂದಾದ್ರೂ ಯೋಚಿಸಿದ್ದೀರಾ? ಇದರ ಹಿಂದೆ ಬರೀ ಧಾರ್ಮಿಕ ನಂಬಿಕೆನಾ ಅಥವಾ ಆಯುರ್ವೇದ ಮತ್ತು ನಮ್ಮ ಜೀವನಶೈಲಿಗೆ ಸಂಬಂಧಿಸಿದ ಬೇರೆ ಕಾರಣ ಇದೆಯಾ ಎಂಬುದನ್ನು ನೊಡೋಣ ಬನ್ನಿ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಹಿಂದೂ ಧರ್ಮದಲ್ಲಿ ಈರುಳ್ಳಿ-ಬೆಳ್ಳುಳ್ಳಿ ಸೇವನೆಗಿದ್ಯಾ ನಿಷೇಧ?
Image Credit : AI Meta

ಹಿಂದೂ ಧರ್ಮದಲ್ಲಿ ಈರುಳ್ಳಿ-ಬೆಳ್ಳುಳ್ಳಿ ಸೇವನೆಗಿದ್ಯಾ ನಿಷೇಧ?

ಹಿಂದೂ ಧರ್ಮದಲ್ಲಿ ಉಪವಾಸ ಅಂದ್ರೆ ಬರೀ ಹಸಿವಿನಿಂದ ಇರೋದಲ್ಲ. ಮನಸ್ಸು, ಮಾತು ಮತ್ತು ಇಂದ್ರಿಯಗಳ ಮೇಲೆ ಹಿಡಿತ ಸಾಧಿಸೋದು ಅಂತ ನಂಬಲಾಗುತ್ತದೆ. ಅದಕ್ಕಾಗಿಯೇ ಉಪವಾಸದ ಸಮಯದಲ್ಲಿ ಸಾತ್ವಿಕ ಆಹಾರ ಸೇವನೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. 

ಸಂಪ್ರದಾಯಗಳ ಪ್ರಕಾರ, ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಾಮಸಿಕ ಅಥವಾ ಕೆಲವು ಕಡೆ ರಾಜಸಿಕ ಗುಣದ ಆಹಾರ ಅಂತ ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ವ್ರತ, ಪೂಜೆಗಳ ಸಮಯದಲ್ಲಿ ಇವುಗಳನ್ನು ಬಳಸಲ್ಲ.

Related Articles

Related image1
ಶ್ರಾವಣ ಮಾಸದಲ್ಲಿ 3 ಗ್ರಹಗಳ ದೊಡ್ಡ ಆಟ; ವೃಷಭ, ತುಲಾ, ಮೀನ ರಾಶಿಗೆ ದೊಡ್ಡ ಆರ್ಥಿಕ ಲಾಭ, ಹೊಸ ಉದ್ಯೋಗ
Related image2
ಶ್ರಾವಣ ಮಾಸದಲ್ಲಿಯೇ 2026ರ ಮತ್ತೊಂದು ಸೂರ್ಯಗ್ರಹಣ ಗೋಚರ; ಭಾರತದಲ್ಲಿ ಕಾಣಿಸುತ್ತಾ?
36
ಸಾಧು-ಸಂತರು ಯಾಕೆ ಈರುಳ್ಳಿ-ಬೆಳ್ಳುಳ್ಳಿ ತಿನ್ನಲ್ಲ?
Image Credit : Getty

ಸಾಧು-ಸಂತರು ಯಾಕೆ ಈರುಳ್ಳಿ-ಬೆಳ್ಳುಳ್ಳಿ ತಿನ್ನಲ್ಲ?

ಸಾಧು-ಸಂತರ ಜೀವನ ಸಂಪೂರ್ಣವಾಗಿ ಧರ್ಮ ಮತ್ತು ಆಧ್ಯಾತ್ಮಕ್ಕೆ ಮೀಸಲಾಗಿರುತ್ತದೆ. ಧ್ಯಾನ, ಜಪ ಮಾಡೋದು ಅವರ ದಿನಚರಿಯ ಪ್ರಮುಖ ಭಾಗ. ಈರುಳ್ಳಿ-ಬೆಳ್ಳುಳ್ಳಿ ತಿಂದರೆ ಮನಸ್ಸಿನಲ್ಲಿ ಚಂಚಲತೆ ಮತ್ತು ಉದ್ರೇಕ ಹೆಚ್ಚಾಗಬಹುದು ಅನ್ನೋದು ಒಂದು ನಂಬಿಕೆ. ಹಾಗಾಗಿ ಮನಸ್ಸನ್ನು ಶಾಂತವಾಗಿ ಮತ್ತು ಸ್ಥಿರವಾಗಿಡಲು ಸಹಾಯ ಮಾಡುವ ಆಹಾರವನ್ನೇ ಸಾಧು-ಸಂತರು ಇಷ್ಟಪಡ್ತಾರೆ.

46
ಹಾಗಾದ್ರೆ ಸಾತ್ವಿಕ ಆಹಾರ ಅಂದ್ರೆ ಏನು?
Image Credit : Gemini

ಹಾಗಾದ್ರೆ ಸಾತ್ವಿಕ ಆಹಾರ ಅಂದ್ರೆ ಏನು?

ಯಾವ ಆಹಾರ ಮನಸ್ಸನ್ನು ಶಾಂತವಾಗಿ, ಹಗುರವಾಗಿ ಮತ್ತು ಏಕಾಗ್ರತೆಯಿಂದ ಇಡಲು ಸಹಾಯ ಮಾಡುತ್ತೋ, ಅದನ್ನೇ ಸಾತ್ವಿಕ ಆಹಾರ ಅಂತಾರೆ. ಉಪವಾಸದ ಸಮಯದಲ್ಲಿ ಸಾಮಾನ್ಯವಾಗಿ ಜನರು ಯಾವ ಆಹಾರ ಹೆಚ್ಚು ಸೇವಿಸುತ್ತಾರೆ ಎಂಬುದರ ಪಟ್ಟಿ ಕೆಳಗೆ ನೀಡಲಾಗಿದೆ.

ಹಣ್ಣುಗಳು, ಹಾಲು ಮತ್ತು ಮೊಸರು, ಮಖಾನಾ (ತಾವರೆಬೀಜ), ಸಾಬುದಾನಾ, ಡ್ರೈ ಫ್ರೂಟ್ಸ್, ರಾಗಿ ಗಂಜಿ ಸೇರದಿಂತೆ ಉಪ್ಪು-ಹುಳಿ-ಖಾರ ಕಡಿಮೆ ಹೊಂದಿರುವ ಆಹಾರಗಳನ್ನು ಸೇವಿಸಲಾಗುತ್ತದೆ.

56
ಆಯುರ್ವೇದ ಏನು ಹೇಳುತ್ತೆ?
Image Credit : Gemini

ಆಯುರ್ವೇದ ಏನು ಹೇಳುತ್ತೆ?

ಆಯುರ್ವೇದದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯ ಅನೇಕ ಔಷಧೀಯ ಗುಣಗಳನ್ನು ವಿವರಿಸಲಾಗಿದೆ. ಜೀರ್ಣಕ್ರಿಯೆ, ಹೃದಯ ಸಂಬಂಧಿ ಸಮಸ್ಯೆಗಳಿಗೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ಇವು ಬಹಳ ಒಳ್ಳೆಯದು ಅಂತ ಆಯುರ್ವೇದ ಹೇಳುತ್ತೆ. ಆದರೆ, ಇವುಗಳ ಪರಿಣಾಮ ದೇಹ ಮತ್ತು ಮನಸ್ಸಿನ ಮೇಲೆ ಉತ್ತೇಜಕವಾಗಿರಬಹುದು (Stimulating) ಅಂತಾನೂ ಹೇಳುತ್ತೆ. 

ಇದೇ ಕಾರಣಕ್ಕೆ ಕೆಲವು ಆಧ್ಯಾತ್ಮಿಕ ಸಾಧನೆ ಮತ್ತು ಉಪವಾಸದ ಸಮಯದಲ್ಲಿ ಇವುಗಳಿಂದ ದೂರವಿರಲು ಸಲಹೆ ನೀಡಲಾಗುತ್ತೆ. ಅಂದರೆ, ಆಯುರ್ವೇದ ಇವುಗಳನ್ನು ಕೆಟ್ಟದ್ದು ಅಂತ ಹೇಳಲ್ಲ, ಬದಲಾಗಿ ವ್ಯಕ್ತಿಯ ಅಗತ್ಯ ಮತ್ತು ಪರಿಸ್ಥಿತಿಗೆ ತಕ್ಕಂತೆ ಬಳಸಬೇಕು ಅಂತ ಹೇಳುತ್ತೆ.

66
ವಿಜ್ಞಾನದ ದೃಷ್ಟಿಕೋನ ಏನು?
Image Credit : Asianet News

ವಿಜ್ಞಾನದ ದೃಷ್ಟಿಕೋನ ಏನು?

ವಿಜ್ಞಾನದ ಪ್ರಕಾರ, ಈರುಳ್ಳಿ ಮತ್ತು ಬೆಳ್ಳುಳ್ಳಿ ಪೋಷಕಾಂಶಗಳಿಂದ ತುಂಬಿರುವ ಆಹಾರ ಪದಾರ್ಥಗಳು. ಇವುಗಳು ಆ್ಯಂಟಿಆಕ್ಸಿಡೆಂಟ್‌ಗಳು, ಸಲ್ಫರ್ ಸಂಯುಕ್ತಗಳು (Sulfur Compounds), ವಿಟಮಿನ್ ಸಿ, ಫೈಬರ್ ಸೇರಿದಂತೆ ಹಲವು ಆರೋಗ್ಯಕರ ಗುಣಗಳನ್ನು ಹೊಂದಿವೆ. ವಿಶ್ವ ಆರೋಗ್ಯ ಸಂಸ್ಥೆ (WHO) ಕೂಡ ಇವುಗಳನ್ನು ಸಮತೋಲಿತ ಆಹಾರದ ಭಾಗ ಅಂತ ಪರಿಗಣಿಸುತ್ತೆ. ಹಾಗಾಗಿ, ಉಪವಾಸದಲ್ಲಿ ಇವುಗಳನ್ನು ತಿನ್ನದಿರಲು ಮುಖ್ಯ ಕಾರಣ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯವೇ ಆಗಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಆರೋಗ್ಯಕರ ಆಹಾರಗಳು
ಆರೋಗ್ಯ

Latest Videos
Recommended Stories
Recommended image1
ಚೀನಾದಿಂದ ಮತ್ತೊಂದು ಆಘಾತಕಾರಿ ಆರೋಗ್ಯ ಸಮಸ್ಯೆ.. ಪ್ರಾಣಕ್ಕೆ ಸಂಚಕಾರ ತರುತ್ತಿದೆ ಈ ಹೊಸ ಟ್ರೆಂಡ್..!
Recommended image2
ಮಳೆಗಾಲದಲ್ಲಿ ಗಂಟಲು ನೋವು ಕಾಡ್ತಿದ್ರೆ ಈ ಮನೆ ಮದ್ದು ಬೆಸ್ಟ್
Recommended image3
ವ್ಯಾಟ್ಸಾಪ್, ಇನ್‌ಸ್ಟಾ ಪದೇ ಪದೆ ಚೆಕ್ ಮಾಡ್ತೀರಾ? ಕೇವಲ ಅಡಿಕ್ಷನ್ ಅಲ್ಲ ಮನೋ ತಜ್ಞರು ಹೇಳ್ತಾರೆ ಕೇಳಿ
Related Stories
Recommended image1
ಶ್ರಾವಣ ಮಾಸದಲ್ಲಿ 3 ಗ್ರಹಗಳ ದೊಡ್ಡ ಆಟ; ವೃಷಭ, ತುಲಾ, ಮೀನ ರಾಶಿಗೆ ದೊಡ್ಡ ಆರ್ಥಿಕ ಲಾಭ, ಹೊಸ ಉದ್ಯೋಗ
Recommended image2
ಶ್ರಾವಣ ಮಾಸದಲ್ಲಿಯೇ 2026ರ ಮತ್ತೊಂದು ಸೂರ್ಯಗ್ರಹಣ ಗೋಚರ; ಭಾರತದಲ್ಲಿ ಕಾಣಿಸುತ್ತಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved