MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Food
  • ವಿಧವೆಯರ ಆಹಾರವಾಗಿತ್ತಂತೆ ಉಪ್ಪಿಟ್ಟು? ಈ ತಿಂಡಿ ಹುಟ್ಟಿಕೊಂಡಿದ್ದೇ ರೋಚಕ- ಇಂಟರೆಸ್ಟಿಂಗ್​ ಸ್ಟೋರಿ ಇಲ್ಲಿದೆ

ವಿಧವೆಯರ ಆಹಾರವಾಗಿತ್ತಂತೆ ಉಪ್ಪಿಟ್ಟು? ಈ ತಿಂಡಿ ಹುಟ್ಟಿಕೊಂಡಿದ್ದೇ ರೋಚಕ- ಇಂಟರೆಸ್ಟಿಂಗ್​ ಸ್ಟೋರಿ ಇಲ್ಲಿದೆ

ಒಂದು ಕಾಲದಲ್ಲಿ ವಿಧವೆಯರ ಆಹಾರವಾಗಿದ್ದ ಉಪ್ಪಿಟ್ಟು, ಇಂದು ದಕ್ಷಿಣ ಭಾರತದ ಜನಪ್ರಿಯ ತಿಂಡಿಯಾಗಿದೆ. ಉಪ್ಪು ಮತ್ತು ರವೆಯಿಂದ ತಯಾರಾಗುತ್ತಿದ್ದ ಈ ಸರಳ ಆಹಾರ, ಲಕ್ಷಮ್ಮ ಪಾಟಿ ಎಂಬ ಮಹಿಳೆಯಿಂದಾಗಿ ರುಚಿಕರ ತಿಂಡಿಯಾಗಿ ಬದಲಾಗಿ, ಉಪ್ಮಾ, ಖಾರಾ ಭಾತ್ ಎಂದು ಪ್ರಸಿದ್ಧಿಯಾಯಿತು.

2 Min read
Suchethana D
Published : Nov 28 2025, 01:05 PM IST
Share this Photo Gallery
  • FB
  • TW
  • Linkdin
  • Whatsapp
16
ಉಪ್ಪಿಟ್ಟು ಎನ್ನುವ ಫೇಮಸ್​ ತಿಂಡಿ
Image Credit : Social Media

ಉಪ್ಪಿಟ್ಟು ಎನ್ನುವ ಫೇಮಸ್​ ತಿಂಡಿ

ಉಪ್ಪಿಟ್ಟು ಎನ್ನುವುದು ಇದೀಗ ಹಲವಾರು ಹೆಸರುಗಳಿಂದ ಹಲವು ಪ್ರದೇಶಗಳಲ್ಲಿ ಫೇಮಸ್​​ ಆಗಿದೆ. ಇದನ್ನು ಕಾಂಕ್ರೀಟ್​ ಎಂದು ಹೇಳುವವರೂ ಹಲವರು ಇದ್ದಾರೆ. ಉಪ್ಪಿಟ್ಟು ತಿಂದೂ ತಿಂದೂ ಬೇಸರವಾಗಿ ಉಪ್ಪಿಟ್ಟು ಎಂದರೆ ಬೇಡಪ್ಪಾ ಬೇಡ ಎನ್ನುವವರು ಎಷ್ಟು ಮಂದಿ ಇದ್ದಾರೋ, ಅಷ್ಟೇ ಮಂದಿ ಈ ತಿಂಡಿಯನ್ನು ಪ್ರೀತಿಸುವವರೂ ಇದ್ದಾರೆ.

26
ಉಪ್ಪಿಟ್ಟು ಹುಟ್ಟಿಕೊಂಡದ್ದು ಹೇಗೆ?
Image Credit : Social Media

ಉಪ್ಪಿಟ್ಟು ಹುಟ್ಟಿಕೊಂಡದ್ದು ಹೇಗೆ?

ಹಾಗಿದ್ದರೆ ಉಪ್ಪಿಟ್ಟು ಹುಟ್ಟಿಕೊಂಡದ್ದು ಹೇಗೆ? ಇದರ ಇತಿಹಾಸವೇನು? ಇದಕ್ಕೆ ಈ ಹೆಸರು ಬರಲು ಕಾರಣವೇನು? ಇದರ ಹಿಂದಿದೆ ರೋಚಕ ಸ್ಟೋರಿ. ರೇಡಿಯೋಸಿಟಿ ಕನ್ನಡಕ್ಕೆ ಆರ್​ಜೆ ಕಿರಣ್​ ಹೆಬ್ಬಾಳೆ ಅವರು ಇದರ ರೋಚಕ ಸ್ಟೋರಿಯನ್ನು ಹೇಳಿದ್ದಾರೆ.

Related Articles

Related image1
ಮೆಣಸಿನ ಪುಡಿಯಲ್ಲಿ ಕಲಬೆರಕೆ ಆಗಿದ್ಯಾ? ಮನೆಯಲ್ಲೇ ಪತ್ತೆ ಹಚ್ಚುವುದು ಹೇಗೆ? ಇಲ್ಲಿದೆ ಸುಲಭದ ವಿಧಾನ
Related image2
Online Food ಪ್ರೇಮಿಗಳಿಗೆ ಶಾಕ್​ ಕೊಟ್ಟ GST ಪರಿಷ್ಕರಣೆ! ಏನಾಗಿದೆ ನೋಡಿ... ಡಿಟೇಲ್ಸ್​ ಇಲ್ಲಿದೆ...
36
ವಿಧವೆಯರ ಆಹಾರ
Image Credit : Social Media

ವಿಧವೆಯರ ಆಹಾರ

ಅಂದಹಾಗೆ ಉಪ್ಪಿಟ್ಟು ವಿಧವೆಯರ ಆಹಾರವಾಗಿತ್ತಂತೆ! ಹಿಂದಿನ ಕಾಲದಲ್ಲಿ ಗಂಡ ಸತ್ತ ಬಳಿಕ ಹೆಣ್ಣಿನ ಮೇಲೆ ಅದ್ಯಾವ ಪರಿಯ ಶೋಷಣೆ ನಡೆಯುತ್ತಿತ್ತು ಎನ್ನುವುದು ಎಲ್ಲರಿಗೂ ತಿಳಿದದ್ದೇ. ಗಂಡನ ಚಿತೆಯಲ್ಲಿ ಹೆಣ್ಣು ಸಾಯುವಂಥ ಹೀನಾತಿಹೀನ ಪದ್ಧತಿಯೂ ಇದ್ದ ಕಾಲವದು. ವಿಧವೆಯರು ಎಂದರೆ ಅತ್ಯಂತ ಹೀನಾಯವಾಗಿ ನೋಡುವ ಸ್ಥಿತಿಯಲ್ಲಿ ಹುಟ್ಟಿಕೊಂಡಿದ್ದಂತೆ ಈ ಉಪ್ಪಿಟ್ಟು.

46
 ಬೇರೆ ಆಕರ್ಷಣೆ ಬೇಡ
Image Credit : Social Media

ಬೇರೆ ಆಕರ್ಷಣೆ ಬೇಡ

ಗಂಡ ಸತ್ತ ಬಳಿಕ ಹೆಣ್ಣಿಗೆ ಬೇರೆ ಗಂಡಿನ ಕಡೆ ಆಕರ್ಷಣೆಯಾಗಬಾರದು ಎನ್ನುವ ಕಾರಣಕ್ಕೆ ಆಕೆಯನ್ನು ಒಂದು ಕಡೆ ದೂರವೇ ಇಡುತ್ತಿದ್ದರು. ಉಪ್ಪು,ಹುಳಿ,ಖಾರ ತಿಂದರೆ ಆಕೆಗೆ ದೈಹಿಕ ವಾಂಛೆ ಶುರುವಾಗಬಹುದು ಎನ್ನುವ ಕಾರಣಕ್ಕೆ ಬಿಸಿನೀರಿನಲ್ಲಿ ರವೆಯನ್ನು ಹಾಕಿ ಸ್ವಲ್ಪ ಉಪ್ಪು ಹಾಕಿ ಕೊಡುತ್ತಿದ್ದರಂತೆ. ಉಪ್ಪಿನಿಂದ ಮಾಡಿದ ಈ ಹಿಟ್ಟಿನ ರೂಪದ ಆಹಾರವೇ ಉಪ್ಪಿಟ್ಟು ಆಗಿದೆ ಎನ್ನುವುದು ಅವರ ಮಾತು.

56
ಮಗನಿಗಾಗಿ ರೆಡಿಯಾಯ್ತು
Image Credit : Social Media

ಮಗನಿಗಾಗಿ ರೆಡಿಯಾಯ್ತು

ಲಕ್ಷಮ್ಮ ಪಾಟಿ ಎನ್ನುವ ಮಹಿಳೆ ನೌಕರಿಗೆ ಹೋಗಿ ವಾಪಸ್​ ಬರುವ ತಮ್ಮ ಮಗನಿಗಾಗಿ ಇದೇ ಆಹಾರಕ್ಕೆ ಸ್ವಲ್ಪ ಉಪ್ಪು, ಹುಳಿ, ಖಾರ, ತೆಂಗಿಯ ತುರಿ ಎಲ್ಲವನ್ನೂ ಹಾಕಿ ಕೊಟ್ಟಾಗ ಅದಕ್ಕೆ ಒಂದು ರುಚಿ ಬರುತ್ತದೆ. ಅವರು ಕಚೇರಿಯಲ್ಲಿ ಎಲ್ಲರಿಗೂ ಹಂಚಿದಾಗ ಅದು ಟೇಸ್ಟಿ ಎನ್ನಿಸುತ್ತದೆ. ಅಲ್ಲಿಂದ ಕಚೇರಿಯಲ್ಲಿ ಇರುವವರೆಲ್ಲಾ ತಮ್ಮ ಅಮ್ಮಂದಿರಿಂದ ಇದೇ ತಿಂಡಿ ಮಾಡಿ ತರುತ್ತಾರೆ.

66
ಉಪ್ಪಿಟ್ಟು ಫೇಮಸ್​
Image Credit : Social Media

ಉಪ್ಪಿಟ್ಟು ಫೇಮಸ್​

ಅಲ್ಲಿಂದ ಉಪ್ಪಿಟ್ಟು ಫೇಮಸ್​ ಆಗಿದೆ ಎಂದು ಇದರ ಹಿಂದಿನ ರೋಚಕ ಸ್ಟೋರಿಯಲ್ಲಿ ತೆರೆದಿಟ್ಟಿದ್ದಾರೆ ಆರ್​ಜೆ ಕಿರಣ್​ ಹೆಬ್ಬಾಳೆ. ಬಳಿಕ ಈ ಆಹಾರ ವಿವಿಧ ಪ್ರದೇಶಗಳಲ್ಲಿ ಉಪ್ಮಾ, ಉಪ್ಪಿಂಡಿ, ಖಾರಾ ಭಾತ್ ಇತ್ಯಾದಿಗಳಿಂದ ಫೇಮಸ್​ ಆಗಿದೆ. ಕರ್ನಾಟಕ, ತಮಿಳುನಾಡು ಮತ್ತು ತೆಲುಗು ರಾಜ್ಯಗಳಲ್ಲಿ ಇದು ಬಹಳ ಜನಪ್ರಿಯ ಆಹಾರವಾಗಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಆಹಾರ
ಜೀವನಶೈಲಿ
ಆರೋಗ್ಯಕರ ಆಹಾರಗಳು
ಆರೋಗ್ಯ
Latest Videos
Recommended Stories
Recommended image1
ನೀರು, ಹಾಲು, ಟೀಪುಡಿ, ಸಕ್ಕರೆ ಯಾವಾಗ ಎಷ್ಟು ಹಾಕಿ ಕುದಿಸಬೇಕು ತಿಳ್ಕೊಳಿ, ಪರ್‌ಫೆಕ್ಟ್ ಆಗಿ ಬರುತ್ತೆ ಟೀ
Recommended image2
ಬೆಳಗಿನ ಉಪಾಹಾರದ ಜೊತೆಗೆ ಪಪ್ಪಾಯಿ ಸೇರಿಸಿ ತಿನ್ನಿ, ಅದರ ಪ್ರಯೋಜನಗಳು ಇಲ್ಲಿವೆ ತಿಳ್ಕೊಳ್ಳಿ!
Recommended image3
ಕಲಬೆರಕೆ ಜೀರಿಗೆ ಸೇವನೆ ಅಪಾಯಕಾರಿ: ಒಂದೇ ನಿಮಿಷದಲ್ಲಿ ಹೀಗೆ ಪತ್ತೆ ಮಾಡಿ!
Related Stories
Recommended image1
ಮೆಣಸಿನ ಪುಡಿಯಲ್ಲಿ ಕಲಬೆರಕೆ ಆಗಿದ್ಯಾ? ಮನೆಯಲ್ಲೇ ಪತ್ತೆ ಹಚ್ಚುವುದು ಹೇಗೆ? ಇಲ್ಲಿದೆ ಸುಲಭದ ವಿಧಾನ
Recommended image2
Online Food ಪ್ರೇಮಿಗಳಿಗೆ ಶಾಕ್​ ಕೊಟ್ಟ GST ಪರಿಷ್ಕರಣೆ! ಏನಾಗಿದೆ ನೋಡಿ... ಡಿಟೇಲ್ಸ್​ ಇಲ್ಲಿದೆ...
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved