MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ganesh Chaturthi 2026 Date & Time
Ganesh Chaturthi Special Trains
2027 Lucky Zodiac Signs
Brics Summit 2026
Bengaluru Tunnel Road Business Corridor
ED Raid on Satish Jarkiholi
Karnataka Guarantee Schemes
Bengaluru Economy by 2037
Karnataka Apex Bank Election
BJP Padayatra
Prajwal Revanna Case
Duleep Trophy Final
Bengaluru-Mangaluru Vande Bharat
  • Home
  • Astrology
  • Festivals
  • ಹನುಮಾನ್ ಚಾಲೀಸಾ ಪಠಿಸುವಾಗ ಇವು ನೆನಪಿರಲಿ

ಹನುಮಾನ್ ಚಾಲೀಸಾ ಪಠಿಸುವಾಗ ಇವು ನೆನಪಿರಲಿ

ಬಜರಂಗಬಲಿಯನ್ನು ಪೂಜಿಸೋದ್ರಿಂದ, ಭಕ್ತರ ಎಲ್ಲಾ ದುಃಖ ಮತ್ತು ನೋವುಗಳು ದೂರವಾಗುತ್ತವೆ ಮತ್ತು ಅವರ ಜೀವನದಲ್ಲಿ ಯಾವಾಗಲೂ ಸಾಕಷ್ಟು ಸಂತೋಷವಿರುತ್ತೆ ಎಂದು ನಂಬಲಾಗಿದೆ. ಈ ದಿನದಂದು ಹನುಮಾನ್ ಚಾಲೀಸಾ ಪಠಣಕ್ಕೂ ವಿಶೇಷ ಮಹತ್ವವಿದೆ. ಅದಕ್ಕೆ ಸಂಬಂಧಿಸಿದ ಕೆಲವು ನಿಯಮಗಳನ್ನು ತಿಳಿದುಕೊಳ್ಳೋಣ.

2 Min read
Author : Suvarna News
Published : Nov 23 2022, 04:41 PM IST
Share this Photo Gallery
  • FB
  • TW
  • Linkdin
  • Whatsapp
17

ಒಂದೊಂದು ದೇವರಿಗೆ ಒಂದೊಂದು ದಿನದಂದು ವಿಶೇಷ ಪೂಜೆ ಮಾಡಲಾಗುತ್ತೆ. ಮಂಗಳವಾರವನ್ನು ಮಾರುತಿ ಅಂದರೆ ಹನುಮಾನ್ ಗೆ ಸಮರ್ಪಿಸಲಾಗುತ್ತೆ. ಈ ದಿನ, ಭಜರಂಗಬಲಿಯ ವಿಶೇಷ ಪೂಜೆ ನಡೆಯುತ್ತೆ. ಅಲ್ಲದೆ, ಈ ದಿನ ಮಂತ್ರಗಳನ್ನು ಪಠಿಸೋದರಿಂದ ಹನುಮಂತ ಸಂತೋಷಪಡುತ್ತಾರೆ. ಈ ವಿಶೇಷ ದಿನದಂದು ಹನುಮಂತನಿಗೆ ಸಮರ್ಪಿತವಾದ ವಿವಿಧ ಸ್ತೋತ್ರ ಮತ್ತು ಚಾಲೀಸಾಗಳನ್ನು ಸಹ ಪಠಿಸಲಾಗುತ್ತೆ. ಭಜರಂಗಬಲಿಯನ್ನು ಮೆಚ್ಚಿಸಲು ಹನುಮಾನ್ ಚಾಲೀಸಾ (Hanuman chalisa) ಹೆಚ್ಚು ಉಪಯುಕ್ತ ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27

ಹನುಮಾನ್ ಚಾಲೀಸಾ ಪಠಿಸುವ ಮೂಲಕ, ಭಕ್ತರು ಅನೇಕ ರೀತಿಯ ದುಃಖಗಳನ್ನು ತೊಡೆದು ಹಾಕಬಹುದು. ಇದರೊಂದಿಗೆ, ಗೋಸ್ವಾಮಿ ತುಳಸೀದಾಸರು( Tulasidas) ರಚಿಸಿದ ಹನುಮಾನ್ ಚಾಲೀಸಾ ಸಾಮಾನ್ಯ ಜನರಿಗೆ ತುಂಬಾ ಸುಲಭವಾಗಿ ಲಭ್ಯವಿದೆ. ಹನುಮಾನ್ ಚಾಲೀಸಾ ಪಠಣದ ನಿಯಮಗಳು ಮತ್ತು ಮಹತ್ವ ತಿಳಿಯೋಣ.

37
ಹನುಮಾನ್ ಚಾಲೀಸಾದ ನಿಯಮಗಳು (Rules)

ಹನುಮಾನ್ ಚಾಲೀಸಾದ ನಿಯಮಗಳು (Rules)

ಹನುಮಾನ್ ಚಾಲೀಸಾವನ್ನು ಖಂಡಿತವಾಗಿಯೂ ಮಂಗಳವಾರ ಪಠಿಸಬೇಕು ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಪಾಠದ ಮೊದಲು ಪರಿಶುದ್ಧತೆಯ ಬಗ್ಗೆ ಕಾಳಜಿ ವಹಿಸಬೇಕು. ಆದ್ದರಿಂದ, ಪಾಠಕ್ಕೆ ಮೊದಲು, ಸ್ನಾನ ಮಾಡಿ ಮತ್ತು ಧ್ಯಾನಿಸಿ ಮತ್ತು ನಿಮ್ಮ ಮೇಲೆ ಗಂಗಾ ನೀರನ್ನು ಚಿಮುಕಿಸಿ.

47

ಪೂಜಾ ಸಮಯದಲ್ಲಿ ಕುಳಿತುಕೊಳ್ಳಲು ಆಸನ ಬಳಸೋದನ್ನು ಖಚಿತಪಡಿಸಿಕೊಳ್ಳಿ. ಆಸನವಿಲ್ಲದೆ ಕೆಳಗೆ ನೆಲದ ಮೇಲೆ ಕುಳಿತುಕೊಳ್ಳಬೇಡಿ. ಇದನ್ನು ಅಶುಭವೆಂದು ಪರಿಗಣಿಸಲಾಗುತ್ತೆ. ದೇವರ (God) ಯಾವುದೇ ಕಾರ್ಯವನ್ನು ಮಾಡುವಾಗ ಚಾಪೆ ಅಥವಾ ಮಣೆ ಮೇಲೆ ಕುಳಿತುಕೊಳ್ಳೋದನ್ನು ಮಿಸ್ ಮಾಡಬೇಡಿ.

57

ಹನುಮಾನ್ ಚಾಲೀಸಾ ಪಠಣ ಪ್ರಾರಂಭಿಸುವ ಮೊದಲು, ಗಣೇಶನನ್ನು (Lord Ganesh) ಪೂಜಿಸಿ ಮತ್ತು ಅದರ ನಂತರ ಭಗವಾನ್ ಶ್ರೀ ರಾಮ ಮತ್ತು ಸೀತಾ ಮಾತೆಗೆ ನಮಸ್ಕರಿಸಿ. ಬಳಿಕವಷ್ಟೇ ಹನುಮಾನ್ ಚಾಲೀಸಾ ಪಠಿಸಿ. ಇದರಿಂದ ನೀವು ಅಂದುಕೊಂಡ ಕಾರ್ಯ ಸಿದ್ಧಿಯಾಗುತ್ತೆ ಎಂದು ನಂಬಲಾಗಿದೆ. 

67

ಹನುಮಾನ್ ಚಾಲೀಸಾ ಪಠಣಕ್ಕೆ ಸ್ವಲ್ಪ ಮೊದಲು, ದೀಪವನ್ನು ಬೆಳಗಿಸಿ ಮತ್ತು ಹನುಮಂತನಿಗೆ ಹೂವುಗಳನ್ನು(Flower) ಅರ್ಪಿಸಿ. ಅಲ್ಲದೆ, ಪಾಠದ ಸಮಯದಲ್ಲಿ, ಮನಸ್ಸಿನಲ್ಲಿ ಯಾರೊಂದಿಗೂ ಯಾವುದೇ ರೀತಿಯ ದ್ವೇಷ - ಕೋಪ ಇಲ್ಲದಿರುವಂತೆ ನೋಡಿಕೊಳ್ಳಬೇಕು. ಬಯಕೆಗಳನ್ನು ಗಮನದಲ್ಲಿಟ್ಟುಕೊಂಡು ಮಾತ್ರ ಚಾಲೀಸಾ ಪಠಿಸಿ.

77
ಹನುಮಾನ್ ಚಾಲೀಸಾ ಪಠಣದ ಪ್ರಯೋಜನಗಳು

ಹನುಮಾನ್ ಚಾಲೀಸಾ ಪಠಣದ ಪ್ರಯೋಜನಗಳು

ನಂಬಿಕೆಗಳ ಪ್ರಕಾರ, ಹನುಮಾನ್ ಚಾಲೀಸಾವನ್ನು ಪಠಿಸೋದರಿಂದ ಜೀವನದಿಂದ ಆರ್ಥಿಕ ಸಮಸ್ಯೆಗಳು (Financial Crisis) ದೂರವಾಗುತ್ತೆ ಮತ್ತು ವ್ಯಕ್ತಿಯ ಶಕ್ತಿಯ ಭಾವನೆಯನ್ನು(Feelings) ಜಾಗೃತಗೊಳಿಸುತ್ತೆ. ಇದರೊಂದಿಗೆ, ಹನುಮಾನ್ ಚಾಲೀಸಾದ ಪಠಣ ಮೋಕ್ಷ ಪಡೆಯಲು ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದರೊಂದಿಗೆ, ಒಬ್ಬ ವ್ಯಕ್ತಿ ಜ್ಞಾನ ಮತ್ತು ಬುದ್ಧಿವಂತಿಕೆ ಪಡೆಯುತ್ತಾನೆ.
 

About the Author

SN
Suvarna News

Latest Videos
Recommended Stories
Recommended image1
ಪಿತೃಪಕ್ಷದ 16 ದಿನಗಳಲ್ಲಿ ಶುಭ ಕಾರ್ಯ ಏಕೆ ಮಾಡಬಾರದು? ಇದರ ಹಿಂದಿದೆ ಧಾರ್ಮಿಕ ಕಾರಣ
Recommended image2
2027 ಈ 4 ರಾಶಿಗಳಿಗೆ ಅದೃಷ್ಟದ ಬಾಗಿಲು ಓಪನ್, ಮುಂದಿನ ವರ್ಷ ಹಣ, ಉದ್ಯೋಗ, ಯಶಸ್ಸು ಪಕ್ಕಾ
Recommended image3
ಈ ಲಕ್ಷಣಗಳಿದ್ದರೆ ಜೀವನದ ಮೇಲೆ ಸರ್ಪ ಗ್ರಹ ಸ್ಥಾನ ಪರಿಣಾಮ ಬೀರುತ್ತಿದೆ ಎಂದರ್ಥ, ಪರಿಹಾರವೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved