MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Bhagyalakshmi Serial: ಭಾಗ್ಯ-ಆದಿ ಲವ್​ಸ್ಟೋರಿಗೆ ತಾಂಡವನ ಸಾಥ್​! ಕಥೆ ಅಂದ್ರೆ ಇದು ಎಂದ ಸೀರಿಯಲ್​ ಪ್ರಿಯರು....

Bhagyalakshmi Serial: ಭಾಗ್ಯ-ಆದಿ ಲವ್​ಸ್ಟೋರಿಗೆ ತಾಂಡವನ ಸಾಥ್​! ಕಥೆ ಅಂದ್ರೆ ಇದು ಎಂದ ಸೀರಿಯಲ್​ ಪ್ರಿಯರು....

ಭಾಗ್ಯಲಕ್ಷ್ಮಿಯ ಭಾಗ್ಯ ಮತ್ತು ಆದಿಯ ಲವ್​ ಸ್ಟೋರಿ ಇನ್ನೇನು ಶುರುವಾಗುವ ಹಂತದಲ್ಲಿದೆ. ಈ ಸಂದರ್ಭದಲ್ಲಿ ಆದಿಗೆ ತಾಂಡವ್​ನ ಸಾಥ್​ ಸಿಕ್ತಿದೆ. ಇದೇನಿದು ಸೀರಿಯಲ್​ ಟ್ವಿಸ್ಟ್​? 

2 Min read
Suchethana D
Published : Jul 26 2025, 09:21 PM IST
Share this Photo Gallery
  • FB
  • TW
  • Linkdin
  • Whatsapp
17
ಭಾಗ್ಯ ಮತ್ತು ಆದಿ ನಡುವೆ ಪ್ರೀತಿ?
Image Credit : Instagram

ಭಾಗ್ಯ ಮತ್ತು ಆದಿ ನಡುವೆ ಪ್ರೀತಿ?

ಜೀವನದಲ್ಲಿ ಎಂದಿಗೂ ಯಾರ ಮುಂದೆಯೂ ತಲೆತಗ್ಗಿಸಿಲ್ಲ. ಲೈಫ್​ನಲ್ಲಿ ಇದೇ ಮೊದಲ ಬಾರಿಗೆ ಮಂಡಿಯೂರಿ ಕ್ಷಮೆ ಕೋರುತ್ತಿದ್ದೇನೆ ಎನ್ನುತ್ತಲೇ ಭಾಗ್ಯಳ ಮುಂದೆ ಆದಿ ಮಂಡಿಯೂರಿ ಕ್ಷಮೆ ಕೋರಿಯಾಗಿದೆ. ಆಸ್ತಿಗಾಗಿ ಈ ಮದುವೆಯಾಗುತ್ತಿದೆ ಎಂದು ಭಾಗ್ಯಾಳನ್ನು ಚುಚ್ಚಿದ್ದ ಆತನ ಮಾತಿಗೆ ನೊಂದು ಭಾಗ್ಯ ತಂಗಿ ಪೂಜಾ ಮತ್ತು ಕಿಶನ್​ ಮದುವೆ ಆಗದಂತೆ ತಡೆಯೊಡ್ಡಿದ್ದಳು. ತಂಗಿಯ ಮದುವೆಗಾಗಿ ಎಷ್ಟೆಲ್ಲಾ ಕಷ್ಟಪಟ್ಟಿದ್ದ ಭಾಗ್ಯ, ಹಸೆಮಣೆಯಿಂದಲೇ ತಂಗಿಯನ್ನು ಕರೆದುಕೊಂಡು ಬಂದು ಮದುವೆಯನ್ನು ರದ್ದು ಮಾಡಲು ಮುಂದಾಗಿದ್ದಳು.

27
ಭಾಗ್ಯಳ ಕ್ಷಮೆ ಕೋರಿದ್ದ ಆದಿ
Image Credit : Instagram

ಭಾಗ್ಯಳ ಕ್ಷಮೆ ಕೋರಿದ್ದ ಆದಿ

ಆದರೆ ಆದಿಗೆ ತನ್ನಿಂದ ತಪ್ಪಾಗಿರುವುದು ತಿಳಿದಿದೆ. ಭಾಗ್ಯ ಎಂಥ ಸ್ವಾಭಿಮಾನಿ ಹೆಣ್ಣು, ಆಕೆ ಹೇಗೆಲ್ಲಾ ಬದುಕಿದ್ದಾಳೆ ಎನ್ನುವ ಸತ್ಯದ ಅರಿವು ಆಗುತ್ತಿದ್ದಂತೆಯೇ ನೊಂದುಕೊಂಡಿದ್ದ. ಭಾಗ್ಯಳಿಗೆ ಇಲ್ಲಸಲ್ಲದ ಮಾತುಗಳನ್ನಾಗಿ ನೋಯಿಸಿದ್ದ ಆತನಿಗೆ ನೋವಾಗಿತ್ತು. ಮಂಡಿಯೂರುತ್ತಲೇ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಭಾಗ್ಯಳ ಬಳಿ ಕ್ಷಮೆ ಕೋರಿದ್ದ.

Related Articles

Related image1
Amruthadhaare Serial: ಒಂಟಿಯಾಗಿರೋ ಮಲ್ಲಿ ಲೈಫ್​ಗೆ ಹೊಸ ಎಂಟ್ರಿ? ಯಾರೀತ?
Related image2
Amrutha Gowda: ಸ್ಯಾಂಡಲ್​ವುಡ್​ಗೆ ಭಾಗ್ಯಲಕ್ಷ್ಮಿ ಮಗಳು ತನ್ವಿ ಎಂಟ್ರಿ? ಕ್ಯೂಟ್​ ಫೋಟೋಶೂಟ್​
37
ಭಾಗ್ಯ ಮತ್ತು ಆದಿ ನಡುವೆ ಪ್ರೀತಿ?
Image Credit : Instagram

ಭಾಗ್ಯ ಮತ್ತು ಆದಿ ನಡುವೆ ಪ್ರೀತಿ?

ಆಗಲೇ ಭಾಗ್ಯ ಮತ್ತು ಆದಿ ನಡುವೆ ಲವ್ ಹುಟ್ಟುತ್ತೆ, ಇಬ್ಬರೂ ಮದ್ವೆಯಾಗುತ್ತಾರೆ ಎಂದೇ ನೆಟ್ಟಿಗರು ಹೇಳ್ತಿದ್ದರು. ನಿಜ ಜೀವನದಲ್ಲಿ ಈ ರೀತಿ ಮಧ್ಯವಯಸ್ಸಿನ ಹೆಣ್ಣು ಮದ್ವೆಯಾಗೋದನ್ನು ಒಪ್ಪುತ್ತಾರೋ, ಬಿಡುತ್ತಾರೋ, ಆದರೆ ಸೀರಿಯಲ್​ನಲ್ಲಿ ಮಾತ್ರ ಆದಿ ಮತ್ತು ಭಾಗ್ಯ ಮದ್ವೆಯಾಗಬೇಕು, ತಾಂಡವ್​ಗೆ ತಕ್ಕ ಶಾಸ್ತಿ ಕಲಿಸಬೇಕು ಎಂದು ಹಲವರು ವೀಕ್ಷಕರು ಹೇಳುತ್ತಿದ್ದಾರೆ. ಆದರೆ ಇದೀಗ ಸೀರಿಯಲ್​ಗೆ ಭಾರಿ ಟ್ವಿಸ್ಟ್​ ಸಿಕ್ಕಿದೆ. ಆದಿ ಮತ್ತು ಭಾಗ್ಯಳ ಲವ್​ಸ್ಟೋರಿಗೆ ತಾಂಡವ್​ನಿಂದಲೇ ಗ್ರೀನ್​ ಸಿಗ್ನಲ್​ ಸಿಗುವಂತಿದೆ.

47
ಭಾಗ್ಯ ಮತ್ತು ಆದಿ ನಡುವೆ ಪ್ರೀತಿ?
Image Credit : Instagram

ಭಾಗ್ಯ ಮತ್ತು ಆದಿ ನಡುವೆ ಪ್ರೀತಿ?

ಇದಕ್ಕೆ ಕಾರಣ, ಒಂದು ಹಂತದಲ್ಲಿ ಆದಿ ಮತ್ತು ತಾಂಡವ್​ ಸ್ನೇಹಿತರಾಗಿದ್ದಾರೆ. ಆದರೆ ಇಬ್ಬರಿಗೂ ಅವರ ಇತಿಹಾಸ ಗೊತ್ತಿಲ್ಲ. ಪೂಜಾಳ ಮದುವೆಯಾಗಿರುವುದು ಆದಿಯ ತಮ್ಮನಿಗೆ ಎನ್ನುವ ಸತ್ಯ ತಾಂಡವ್​ಗೆ ತಿಳಿದಿಲ್ಲ, ಅದೇ ರೀತಿ, ತಾಂಡವ್​ ಭಾಗ್ಯಳ ಪತಿ ಎನ್ನುವುದೂ ಆದಿಗೆ ಗೊತ್ತಿಲ್ಲ. ಆದರೆ ಆದಿ ಮತ್ತು ಆತನ ತಮ್ಮ ಮದುವೆಯಾಗ್ತಿರೋ ಮನೆಯವರಿಗೆ ಗಲಾಟೆ ಆಗಿರುವ ವಿಷಯ ತಾಂಡವ್​ಗೆ ತಿಳಿದಿದೆ.

57
ತಾಂಡವ್​ಗೆ ಭಾಗ್ಯಳ ಕುರಿತು ತಿಳಿಸಿದ ಆದಿ
Image Credit : Instagram

ತಾಂಡವ್​ಗೆ ಭಾಗ್ಯಳ ಕುರಿತು ತಿಳಿಸಿದ ಆದಿ

ಇದೇ ಕಾರಣಕ್ಕೆ ಮದುವೆ ಏನಾಯ್ತು ಎಂದು ಫೋನ್​ನಲ್ಲಿ ತಾಂಡವ್​ ಆದಿಗೆ ಕೇಳಿದ್ದು, ತಾನು ಭಾಗ್ಯಳ ಬಗ್ಗೆ ತಪ್ಪಾಗಿ ತಿಳಿದುಕೊಂಡಿದ್ದು, ಆಕೆ ತುಂಬಾ ಒಳ್ಳೆಯವಳು ಎಂದು ಆದಿ ತಾಂಡವ್​ಗೆ ಹೇಳಿದ್ದಾನೆ.

67
ಭಾಗ್ಯ-ಆದಿ ಒಂದಾಗಲಿ ಅಂತಿರೋ ವೀಕ್ಷಕರು
Image Credit : Instagram

ಭಾಗ್ಯ-ಆದಿ ಒಂದಾಗಲಿ ಅಂತಿರೋ ವೀಕ್ಷಕರು

ಆದರೆ, ಭಾಗ್ಯಳ ಹೆಸರು ಹೇಳಲಿಲ್ಲ. ಆ ಲೇಡಿ ಎಂದು ಹೇಳಿರೋ ಕಾರಣ, ತಾಂಡವ್​ಗೆ ಆದಿ ಮಾತನಾಡ್ತಿರೋದು ಭಾಗ್ಯಳ ವಿಷಯ ಎಂದು ತಿಳಿದಿಲ್ಲ. ಒಳ್ಳೆಯದಾಯಿತು, ಕೊನೆಗೂ ತಪ್ಪಿನ ಅರಿವಾಗಿದ್ದು ಒಳ್ಳೆಯದು ಎಂದಿದ್ದಾನೆ. ಅಲ್ಲಿಗೆ ಆದಿ ಮತ್ತು ಭಾಗ್ಯಳ ಲವ್​ ಸ್ಟೋರಿಗೆ ಒಂದು ರೀತಿಯಲ್ಲಿ ಅವನೇ ಗ್ರೀನ್​ ಸಿಗ್ನಲ್​ ಕೊಟ್ಟಂತಾಗಿದೆ.

77
Bhagyalakshmಭಾಗ್ಯ-ಆದಿ ಒಂದಾಗಲಿ ಅಂತಿರೋ ವೀಕ್ಷಕರುi
Image Credit : Instagram

Bhagyalakshmಭಾಗ್ಯ-ಆದಿ ಒಂದಾಗಲಿ ಅಂತಿರೋ ವೀಕ್ಷಕರುi

ಅದೇ ಇನ್ನೊಂದೆಡೆ, ಪೂಜಾಳಿಗೆ ಯಾವುದೇ ಆಪತ್ತು ಬರದಂತೆ ಕಾಯುವ ಜವಾಬ್ದಾರಿ ನನ್ನದು ಎಂದು ಮಾತು ಕೊಟ್ಟಿದ್ದಾನೆ ಆದಿ. ಅಲ್ಲಿಗೆ ಪೂಜಾ ವಿವಾಹ ಸಂಪನ್ನವಾಗುತ್ತದೆ. ಪೂಜಾಳ ಮದುವೆಗೆ ಇದ್ದ ಎಲ್ಲಾ ಅಡ್ಡಿ ಆತಂಕಕಗಳೂ ಸದ್ಯ ನಿವಾರಣೆಯಾಗಿದೆ. ಅಷ್ಟಕ್ಕೂ ಕನ್ನಿಕಾ ಅಣ್ಣನಾಗಿ ಆದಿ ಅರ್ಥಾತ್​ ನಟ ಹರೀಶ್​ ಎಂಟ್ರಿಯಾದಾಗಲೇ ಭಾಗ್ಯಳಿಗೆ ಈತ ಜೋಡಿ ಎಂದಿದ್ದರು ನೆಟ್ಟಿಗರು.

 
 
 
 
View this post on Instagram
 
 
 
 
 
 
 
 
 
 
 

A post shared by Colors Kannada Official (@colorskannadaofficial)

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಭಾಗ್ಯಲಕ್ಷ್ಮಿ ಧಾರಾವಾಹಿ
ಕಲರ್ಸ್ ಕನ್ನಡ
ಕನ್ನಡ ಧಾರಾವಾಹಿ
ಸಂಬಂಧಗಳು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved