MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • 'ಬ್ರಹ್ಮಗಂಟು' ಸೀರಿಯಲ್​ ಹೀರೋ ಆಗಿ 'ಪುಟ್ಟಕ್ಕನ ಮಕ್ಕಳು ಕಂಠಿ' ಎಂಟ್ರಿ! ಇದೇನಿದು ಸೀರಿಯಲ್​ ಟ್ವಿಸ್ಟು?

'ಬ್ರಹ್ಮಗಂಟು' ಸೀರಿಯಲ್​ ಹೀರೋ ಆಗಿ 'ಪುಟ್ಟಕ್ಕನ ಮಕ್ಕಳು ಕಂಠಿ' ಎಂಟ್ರಿ! ಇದೇನಿದು ಸೀರಿಯಲ್​ ಟ್ವಿಸ್ಟು?

ಪುಟ್ಟಕ್ಕನ ಮಕ್ಕಳು ನಾಯಕನಾಗಿರೋ ಕಂಠಿ, ಬ್ರಹ್ಮಗಂಟುವಿನಲ್ಲಿಯೂ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾನೆ. ಏನಿದು ಟ್ವಿಸ್ಟ್​ ಅಂತೀರಾ? ಇಲ್ಲಿದೆ ನೋಡಿ ಡಿಟೇಲ್ಸ್​... 

2 Min read
Suchethana D
Published : Aug 20 2025, 10:12 PM IST
Share this Photo Gallery
  • FB
  • TW
  • Linkdin
  • Whatsapp
17
ಬ್ರಹ್ಮಗಂಟುವಿನಲ್ಲಿ ರೋಚಕ ಟ್ವಿಸ್ಟ್​
Image Credit : Instagram

ಬ್ರಹ್ಮಗಂಟುವಿನಲ್ಲಿ ರೋಚಕ ಟ್ವಿಸ್ಟ್​

ಬ್ರಹ್ಮಗಂಟು ಸೀರಿಯಲ್​ನಲ್ಲಿ ವಿಲನ್​ ಸೌಂದರ್ಯಳ ಕರಾಮತ್ತಿನಲ್ಲಿ ಅರ್ಚನಾ ಮದುವೆ ಬೇರೆಯವರ ಜೊತೆ ನಡೆಯುತ್ತಿದೆ. ಚಿರುಗೆ ಅತ್ತಿಗೆ ನಿಜ ಗುಣವನ್ನು ಬಯಲು ಮಾಡುವುದು ನಾಯಕಿ ದೀಪಾಗೆ ಕಷ್ಟವಾಗಿದೆ. ಅವಳು ಎಲ್ಲರನ್ನೂ ಕೊಲ್ಲಿಸಲು ಮಾಡಿರುವ ಸಂಚು ದೀಪಾಗೆ ತಿಳಿದಿದ್ದರೂ ಅದಕ್ಕೆ ಸಾಕ್ಷಿ ಇಲ್ಲ. ಇದೀಗ ಮೋಸದಿಂದ ಅರ್ಚನಾಳ ಮದುವೆಯನ್ನು ಯಾವನದ್ದೋ ಜೊತೆ ಮಾಡಿಸಲು ಹೊರಟಿದ್ದಾಳೆ ಸೌಂದರ್ಯ. ಅರ್ಚನಾ ಮದುವೆಯಾಗಬೇಕು ಎಂದಿರೋ ರಾಹುಲ್​ಗೆ ಅಪಘಾತ ಮಾಡಿಸಿದ್ದಾಳೆ ಸೌಂದರ್ಯ. ಆದರೆ ಇದಕ್ಕೆ ಸಾಕ್ಷಿ ಇಲ್ಲ.

27
ನರಸಿಂಹ ರಾಹುಲ್​ಗೆ ಕಾವಲು
Image Credit : our own

ನರಸಿಂಹ ರಾಹುಲ್​ಗೆ ಕಾವಲು

ಅದೇ ಆಸ್ಪತ್ರೆಯಲ್ಲಿ ಅಡ್ಮಿಟ್​ ಆಗಿರೋ ರಾಹುಲ್​ನ ಕೊಲ್ಲಿಸಲು ಸೌಂದರ್ಯ ರೌಡಿಗಳನ್ನು ಕಳಿಸಿದ್ದಾಳೆ. ಆದರೆ, ನರಸಿಂಹ ರಾಹುಲ್​ಗೆ ಕಾವಲು ನೀಡುತ್ತಿದ್ದಾನೆ. ರೌಡಿಗಳನ್ನು ಚೆನ್ನಾಗಿ ಬಡಿದಿದ್ದಾನೆ. ಕೊನೆಗೆ ಚಿರುಗೆ ಕರೆ ಮಾಡಿ, ರಾಹುಲ್​ ಒಳ್ಳೆಯವನು, ಅವನ ವಿರುದ್ಧ ಹೇಗೆ ಪಿತೂರಿ ನಡೆಯುತ್ತಿದೆ ಎಂದಿದ್ದಾರೆ. ಚಿರುಗೂ ಹೇಗಾದರೂ ಮಾಡಿ ಅರ್ಚನಾ ಮತ್ತು ರಾಹುಲ್​ ಮದುವೆ ಮಾಡಿಸುವ ಆಸೆ.

Related Articles

Related image1
ಶರತ್​-ದುರ್ಗಾ ಮದ್ವೆ ಫಿಕ್ಸ್​? ದೀಪಾಗೆ ಸಿಕ್ತು ಗಂಡನ ಕಿಸ್​! ರೋಚಕ ತಿರುವಿನಲ್ಲಿ ಎರಡು ಸೀರಿಯಲ್ಸ್​
Related image2
Brahmagantu Serial: ಸೌಂದರ್ಯಳ ಖೇಲ್​ ಖತಮ್​? ಎದೆಗೆ ಪಿಸ್ತೂಲ್​ನಿಂದ ಗುರಿಯಿಟ್ಟ ದೀಪಾ!
37
ಪುಟ್ಟಕ್ಕನ ಮಕ್ಕಳು ಕಂಠಿ ಎಂಟ್ರಿ
Image Credit : Instagram

ಪುಟ್ಟಕ್ಕನ ಮಕ್ಕಳು ಕಂಠಿ ಎಂಟ್ರಿ

ಅದಕ್ಕೆ ಮಾವ ಬೆನ್ನೆಲುಬಾಗಿದ್ದಾನೆ. ಭಟ್ಟರ ವೇಷದಲ್ಲಿ ಬಂದಿದ್ದಾನೆ. ಎಲ್ಲರೂ ಸೇರಿ ಪ್ಲ್ಯಾನ್​ ಮಾಡಿದ್ದಾರೆ. ಆದರೆ ಇಲ್ಲೊಂದು ಟ್ವಿಸ್ಟ್​ ಇದೆ. ಅದೇನೆಂದರೆ, ಪುಟ್ಟಕ್ಕನ ಮಕ್ಕಳು ಕಂಠಿ ಎಂಟ್ರಿ ಕೊಟ್ಟಿದ್ದಾನೆ. ಮದುವೆ ಮನೆಯಲ್ಲಿ ಹೊಗೆ ಹಾಕಿಸಿ ಅಲ್ಲಿಂದ ಅರ್ಚನಾಳನ್ನು ಕರೆದುಕೊಂಡು ಓಡಿ ಹೋಗಿದ್ದಾನೆ ಕಂಠಿ. ಎದುರಿಗೆ ಬಂದಿರೋ ರೌಡಿಗಳನ್ನುಹೊಡೆದುರುಳಿಸಿದ್ದಾನೆ.

47
ನಡೆಯಿತು ರಾಹುಲ್​- ಅರ್ಚನಾ ಮದುವೆ
Image Credit : Instagram

ನಡೆಯಿತು ರಾಹುಲ್​- ಅರ್ಚನಾ ಮದುವೆ

ಅಲ್ಲಿ ರಾಹುಲ್​ ಮತ್ತು ಅರ್ಚನಾ ಮದುವೆಗೆ ಎಲ್ಲಾ ರೆಡಿ ಮಾಡಿಕೊಳ್ಳಲಾಗಿದೆ. ಚಿರು ಮತ್ತು ದೀಪಾ ಅರ್ಚನಾಳನ್ನು ಕರೆದುಕೊಂಡು ಬರುವುದಾಗಿ ಸುಳ್ಳು ಹೇಳಿ ಮೊದಲೇ ನಿಗದಿಮಾಡಿದಂತೆ ರಾಹುಲ್​ ಜೊತೆ ಮದುವೆ ನಿಗದಿ ಮಾಡಿದ ಸ್ಥಾನಕ್ಕೆ ಹೋಗಿದ್ದಾರೆ. ಅಷ್ಟರಲ್ಲಿ ಸೌಂದರ್ಯ ಬಂದಿದ್ದಾಳೆ. ಅವಳು ಬರುವ ಮೊದಲೇ ತಾಳಿ ಕಟ್ಟಿದ್ದಾನೆ ರಾಹುಲ್​.

57
ಚಿರು ಕೆನ್ನೆಗೆ ಹೊಡೆದ ಸೌಂದರ್ಯ
Image Credit : our own

ಚಿರು ಕೆನ್ನೆಗೆ ಹೊಡೆದ ಸೌಂದರ್ಯ

ಚಿರು ತನ್ನ ವಿರುದ್ಧ ಹೋದುದಕ್ಕೆ ಅವನ ಕೆನ್ನೆಗೆ ಹೊಡೆದಿದ್ದಾಳೆ ಸೌಂದರ್ಯ. ಅದೇನೇ ಇದ್ದರೂ ಅವರಿಬ್ಬರ ಮದುವೆ ಆಗಿರುವುದಕ್ಕೆ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ಕಂಠಿ ಇಲ್ಲಿ ಹೀರೋ ಆಗಿದ್ದಾನೆ. ಅರ್ಚನಾ ಮತ್ತು ರಾಹುಲ್​ನನ್ನು ಮದುವೆ ಮಾಡಿಸುವುದಾಗಿ ಸೌಂದರ್ಯಗೆ ದೀಪಾ ಸವಾಲು ಹಾಕಿದ್ದು ಸಕ್ಸಸ್​ ಆಗಿದೆ.

67
ಸೌಂದರ್ಯ ಪ್ಲ್ಯಾನ್ ಫ್ಲಾಪ್​
Image Credit : Instagram

ಸೌಂದರ್ಯ ಪ್ಲ್ಯಾನ್ ಫ್ಲಾಪ್​

ಇದಾಗಲೇ ಸೌಂದರ್ಯ ಅರ್ಚನಾ ಮತ್ತು ರಾಹುಲ್​ ಒಂದಾಗಬಾರದು ಎನ್ನುವ ಕಾರಣಕ್ಕೆ ರಾಹುಲ್​ನನ್ನು ರೌಡಿಗಳನ್ನು ಕಳುಹಿಸಿ ಕೊ*ಲೆಗೆ ಪ್ರಯತ್ನಿಸಿದ್ದಳು. ಆದರೆ ಆತ ಬದುಕಿದ್ದಾನೆ. ಆಸ್ಪತ್ರೆಗೆ ದಾಖಲಾಗಿದ್ದ. ರಾಹುಲ್​ ಮತ್ತು ಅರ್ಚನಾರನ್ನು ಒಂದು ಮಾಡಬೇಕು ಎನ್ನುವ ಕಾರಣಕ್ಕೆ ಚಿರುನೇ ಆತನನ್ನು ಮನೆಗೆ ಕರೆದಿದ್ದ.

77
ರೌಡಿಗಳಿಂದ ಅಟ್ಯಾಕ್​
Image Credit : our own

ರೌಡಿಗಳಿಂದ ಅಟ್ಯಾಕ್​

ಚಿರುವಿನ ಮನವಿ ಮೇರೆಗೆ ಬೈಕ್​ನಲ್ಲಿ ರಾಹುಲ್​ ಮನೆಗೆ ಬರುತ್ತಿರುವಾಗ ಹಿಂದಿನಿಂದ ರೌಡಿಗಳು ಗಾಡಿಯಲ್ಲಿ ಆತನಿಗೆ ಆ್ಯಕ್ಸಿಡೆಂಟ್​ ಮಾಡಿದ್ದಾರೆ. ಆದರೆ ಆತ ಆಸ್ಪತ್ರೆಯಲ್ಲಿ ಇದ್ದು, ಜೀವ ಉಳಿಸಿಕೊಂಡಿದ್ದಾನೆ. ಇದನ್ನು ಕೇಳಿ ಸೌಂದರ್ಯಳ ತಲೆ ಕೆಟ್ಟು ಹೋಗಿದೆ. ಆದ್ದರಿಂದ ರೌಡಿಗಳನ್ನು ಕರೆಸಿ ಅವರನ್ನು ಕೊಲ್ಲಲು ಮುಂದಾಗಿದ್ದಳು. ಇದು ತಿಳಿಯುತ್ತಲೇ ಸೌಂದರ್ಯ ಹೀಗೆ ಮಾಡಿದ್ದಳು. ಆದರೆ ಈಗ ಎಲ್ಲವೂ ಉಲ್ಟಾ ಹೊಡೆದಿದೆ. ಸೌಂದರ್ಯಳಿಗೆ ದೀಪಾ ಹಾಕಿದ ಚಾಲೆಂಜ್​ ಯಶಸ್ವಿಯಾಗಿದೆ. 

 
 
 
 
View this post on Instagram
 
 
 
 
 
 
 
 
 
 
 

A post shared by Zee Kannada (@zeekannada)

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಪುಟ್ಟಕ್ಕನ ಮಕ್ಕಳು
ಕನ್ನಡ ಧಾರಾವಾಹಿ
ಜೀ ಕನ್ನಡ
ಸಂಬಂಧಗಳು
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved