MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • ದೈವಕ್ಕೆ ಅವಮಾನ ಆರೋಪ: ಹುಚ್ಚು ವರ್ತನೆಗೆ ಕ್ಷಮೆ ಕೇಳಿದ ರಣ್‌ವೀರ್ ಸಿಂಗ್

ದೈವಕ್ಕೆ ಅವಮಾನ ಆರೋಪ: ಹುಚ್ಚು ವರ್ತನೆಗೆ ಕ್ಷಮೆ ಕೇಳಿದ ರಣ್‌ವೀರ್ ಸಿಂಗ್

ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ 'ಕಾಂತಾರ' ಚಿತ್ರದ ದೈವವನ್ನು 'ದೆವ್ವ' ಎಂದು ಕರೆದು ನಟ ರಣ್‌ವೀರ್ ಸಿಂಗ್ ವಿವಾದ ಸೃಷ್ಟಿಸಿದ್ದರು. ರಣ್‌ವೀರ್ ಸೋಶಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿ, ಭಾವನೆಗಳಿಗೆ ನೋವಾಗಿದ್ದರೆ ಕ್ಷಮೆಯಾಚಿಸಿದ್ದಾರೆ.

1 Min read
Mahmad Rafik
Published : Dec 02 2025, 12:41 PM IST
Share this Photo Gallery
  • FB
  • TW
  • Linkdin
  • Whatsapp
14
ದೈವಕ್ಕೆ ದೆವ್ವ ಎಂದ ನಟ ರಣ್‌ವೀರ್
Image Credit : Ranveer Singh FB

ದೈವಕ್ಕೆ ದೆವ್ವ ಎಂದ ನಟ ರಣ್‌ವೀರ್

ಗೋವಾದಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕಾಂತಾರ-1 ಸಿನಿಮಾದಲ್ಲಿನ ರಿಷಬ್‌ ಶೆಟ್ಟಿ ಪಾತ್ರದ ಅನುಕರಣೆ ವೇಳೆ ದೈವಕ್ಕೆ ದೆವ್ವ ಎಂದು ನಟ ರಣ್‌ವೀರ್ ಸಿಂಗ್ ಹೇಳಿದ್ದರು. ತಮ್ಮ ವರ್ತನೆ ಮತ್ತು ಹೇಳಿಕೆಗೆ ಇದೀಗ ರಣ್‌ವೀರ್ ಸಿಂಗ್ ಸೋಶಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದ್ದಾರೆ.

24
ರಣ್‌ವೀರ್ ಸಿಂಗ್ ಹೇಳಿದ್ದೇನು?
Image Credit : Instagram

ರಣ್‌ವೀರ್ ಸಿಂಗ್ ಹೇಳಿದ್ದೇನು?

ಕಾಂತಾರ-1 ಸಿನಿಮಾದಲ್ಲಿನ ರಿಷಭ್ ಶೆಟ್ಟಿಯವರ ಅದ್ಭುತವಾದ ಅಭಿನಯ ತೋರಿಸೋದು ನನ್ನ ಉದ್ದೇಶವಾಗಿತ್ತು. ಈ ರೀತಿಯಾಗಿ ನಟಿಸಲು ಎಷ್ಟು ಪರಿಶ್ರಮ ಬೇಕಾಗುತ್ತೆ ಎಂಬುವುದು ಓರ್ವ ನಟನಾಗಿ ನನಗೆ ಗೊತ್ತಿದೆ. ರಿಷಭ್ ನಟನೆಗೆ ಮೆಚ್ಚುಗೆ ಸೂಚಿಸಿದ್ದೇನೆ. ನಮ್ಮ ದೇಶದ ಪ್ರತಿಯೊಂದು ಸಂಸ್ಕೃತಿ, ಸಂಪ್ರದಾಯ ಮತ್ತು ನಂಬಿಕೆಯನ್ನು ನಾನು ಯಾವಾಗಲೂ ಗೌರವಿಸುತ್ತೇನೆ. ಯಾರ ಭಾವನೆಗಳಿಗೆ ನೋವುಂಟು ಮಾಡಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.

Related Articles

Related image1
ಕಾಂತಾರ ದೈವವನ್ನು 'ದೆವ್ವ' ಎಂದು ಅವಹೇಳನ.. ರಣವೀರ್ ಸಿಂಗ್ ವಿರುದ್ಧ ಭುಗಿಲೆದ್ದ ಆಕ್ರೋಶ!
Related image2
ನಟಿ ಸಮಂತಾಗೆ ಬಂದಿತ್ತು ಬೆದರಿಕೆ! ಮದುವೆಯ ಬೆನ್ನಲ್ಲೇ ಶಾಕಿಂಗ್​ ವಿಷಯವೂ ಮತ್ತೆ ಮುನ್ನೆಲೆಗೆ
34
ದೂರು ದಾಖಲು
Image Credit : @sachi_1933

ದೂರು ದಾಖಲು

ನಟ ರಣ್‌ವೀರ್ ಸಿಂಗ್ ವಿರುದ್ಧ ಗೋವಾದಲ್ಲಿ ದೂರು ದಾಖಲಾಗಿದೆ. ಹಿಂದೂ ಜನಜಾಗೃತಿ ಸಮಿತಿ (ಎಚ್‌ಜೆಎಸ್‌) ಸಮಿತಿಯ ಪ್ರಮೋದ್ ತುಯೇಕರ್ ಮತ್ತು ದಿಲೀಪ್ ಶೆಟ್ಯೆ ಅವರು, ರಣ್‌ವೀರ್‌ ಪೂಜಿಸುವ ದೈವವನ್ನು ಸ್ತ್ರೀ ಪ್ರೇತ ಎಂದು ಅವಮಾನಿಸಿದ್ದಾರೆ ಎಂದು ಪಣಜಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಲ್ಲದೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ವಿಜಯ್ ನನ್ನ ಶತ್ರುವಲ್ಲ, ನನ್ನ 'ಟಾರ್ಗೆಟ್' ಬೇರೆಯೇ ಇದೆ: ಕಮಲ್ ಹಾಸನ್ ಹೇಳಿಕೆಗೆ ಹೌಹಾರಿದ ತಮಿಳುನಾಡು!

44
 ವಿವಾದ ಸೃಷ್ಟಿ
Image Credit : @sachi_1933

ವಿವಾದ ಸೃಷ್ಟಿ

ಗೋವಾದಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವದ ಸಮಾರೋಪ ಸಮಾರಂಭದಲ್ಲಿ ರಣವೀರ್ ಸಿಂಗ್‌, ಕಾಂತಾರದಲ್ಲಿ ರಿಷಬ್‌ ಶೆಟ್ಟಿಯವರ ನಟನೆ ಹೊಗಳುತ್ತಾ, ವೇದಿಕೆ ಮೇಲೆಯೇ ಸಿನಿಮಾದ ದೈವದ ನಟನೆ ಅನುಕರಿಸಿದ್ದರು. ಅನುಕರಣೆ ಮಾಡುವ ಭರದಲ್ಲಿ ರಣವೀರ್‌ ಅವರು ದೈವದ ಅಭಿನಯವನ್ನು ‘ದೆವ್ವ’ ಎಂದು ಹೇಳಿ ವಿವಾದ ಸೃಷ್ಟಿಸಿಕೊಂಡಿದ್ದರು.

ಇದನ್ನೂ ಓದಿ: James Cameron: ಸಿನಿಮಾ ನಟರನ್ನೂ AI ಸೃಷ್ಟಿಸುವಂತಾದರೆ ಅದಕ್ಕಿಂತ ಭಯಾನಕ ಬೇರೇನಿಲ್ಲ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ರಿಷಬ್ ಶೆಟ್ಟಿ
ರಣವೀರ್ ಸಿಂಗ್
ಬಾಲಿವುಡ್
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್

Latest Videos
Recommended Stories
Recommended image1
Bigg Boss Kannada 12: ಗಿಲ್ಲಿ ನಟನ ಆಟದ ವೈಖರಿ ಅಸಲಿಯೋ? ನಕಲಿಯೋ? ಗೌರವ್ ಶೆಟ್ಟಿ ಮಾತು
Recommended image2
BBK 12: ನಾಮಿನೇಷನ್ ಜ್ವಾಲೆಯಲ್ಲಿ ಸಿಡಿದ ಗಿಲ್ಲಿ; ವಂಶದ ಕುಡಿ ದಾರಿಯಲ್ಲಿಯೇ ಹೊರಟ್ರಾ ನಟ?
Recommended image3
BBK 12: ಬೆನ್ನಿಗೆ ಚೂರಿ ಹಾಕಿದ್ರೂ ವಂಶದ ಕುಡಿ ರಕ್ಷಿತಾ ಶೆಟ್ಟಿಗೆ ಬುದ್ಧಿ ಹೇಳಿದ ಗಿಲ್ಲಿ ನಟ
Related Stories
Recommended image1
ಕಾಂತಾರ ದೈವವನ್ನು 'ದೆವ್ವ' ಎಂದು ಅವಹೇಳನ.. ರಣವೀರ್ ಸಿಂಗ್ ವಿರುದ್ಧ ಭುಗಿಲೆದ್ದ ಆಕ್ರೋಶ!
Recommended image2
ನಟಿ ಸಮಂತಾಗೆ ಬಂದಿತ್ತು ಬೆದರಿಕೆ! ಮದುವೆಯ ಬೆನ್ನಲ್ಲೇ ಶಾಕಿಂಗ್​ ವಿಷಯವೂ ಮತ್ತೆ ಮುನ್ನೆಲೆಗೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved