ಹೆಂಡತಿಯೊಂದಿಗೆ ಜಗಳವಾಡುತ್ತಿದ್ದ ಧನುಷ್ ಈ ಕೆಲಸ ಮಾಡುತ್ತಿದ್ದರಂತೆ!
ತಮಿಳು ಸ್ಟಾರ್ ಧನುಷ್ (Dhanush) ಮತ್ತು ಐಶ್ವರ್ಯಾ ರಜನಿಕಾಂತ್ (Aishwaryaa Rajinikanth) ಅವರು 18 ವರ್ಷಗಳ ದಾಂಪತ್ಯದ ನಂತರ ಬೇರ್ಪಟ್ಟಿದ್ದಾರೆ ಎಂದು ಕೆಲವು ದಿನಗಳ ಹಿಂದೆ ಘೋಷಿಸಿದರು .ಧನುಷ್ ಅವರ ತಂದೆ ಐಶ್ವರ್ಯಾ ಮತ್ತು ಅವರ ಮಗನ ಪ್ರತ್ಯೇಕತೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅವರು ಇದನ್ನು ಕೌಟುಂಬಿಕ ಕಲಹವೆಂದ ಪರಿಗಣಿಸಿದ್ದು, ಇದು ವಿಚ್ಛೇದನವಲ್ಲ ಎಂದು ಹೇಳಿದ್ದಾರೆ.
ತಮಿಳು ಸ್ಟಾರ್ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ಅವರು 18 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಇಬ್ಬರೂ ತಮ್ಮ ಸಾಮಾಜಿಕ ಮಾಧ್ಯಮದ ಹ್ಯಾಂಡಲ್ಗಳಲ್ಲಿ ಅಧಿಕೃತ ಹೇಳಿಕೆಯೊಂದಿಗೆ ತಮ್ಮ ಪ್ರತ್ಯೇಕತೆಯನ್ನು ಘೋಷಿಸಿದರು. ಧನುಷ್ ಮತ್ತು ಐಶ್ವರ್ಯರಿಗೆ ಯಾತ್ರಾ ಮತ್ತು ಲಿಂಗ ಎಂಬ ಮಕ್ಕಳಿವೆ. ಮಕ್ಕಳಿಗಾಗಿ ಈ ಜೋಡಿ ಸಹ ಪೋಷಕರಾಗಿರುತ್ತಾರಂತೆ.
ಧನುಷ್ ಮತ್ತು ಐಶ್ವರ್ಯಾ ಅವರು ವಿಚ್ಛೇದನ ಪಡೆದಿದ್ದಾರೆ ಎಂದು ಹೇಳಿದರೆ, ಧನುಷ್ ಅವರ ತಂದೆ, ತಮಿಳು ಚಲನಚಿತ್ರ ನಿರ್ಮಾಪಕ ಕಸ್ತೂರಿ ರಾಜಾ, ದೂರವಾದ ದಂಪತಿಯ ಪ್ರತ್ಯೇಕತೆಯನ್ನು 'ಕೌಟುಂಬಿಕ ಕಲಹ' ಮತ್ತು ಇದು ವಿಚ್ಛೇದನವಲ್ಲ ಎಂದು ಹೇಳಿದ್ದಾರೆ ಹಾಗೂ ಈ ಜೋಡಿಯ ವಿಚ್ಛೇದನವನ್ನು ಅವರು ನಿರಾಕರಿಸಿದ್ದಾರೆ.
ಸ್ಥಳೀಯ ತಮಿಳು ಪತ್ರಿಕೆ ಡೈಲಿತಂಧಿಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಕಸ್ತೂರಿ ರಾಜಾ ಅವರು ತಮ್ಮ ಮಗ ಧನುಷ್ ಮತ್ತು ಐಶ್ವರ್ಯಾ ಅವರ ಪ್ರತ್ಯೇಕತೆಗೆ ಭಿನ್ನಾಭಿಪ್ರಾಯವೇ ಕಾರಣ ಎಂದು ಹೇಳಿದರು. ಚಿತ್ರ ನಿರ್ಮಾಪಕರು ಇದನ್ನು ಸಾಮಾನ್ಯವಾಗಿ ವಿವಾಹಿತ ದಂಪತಿ ನಡುವೆ ನಡೆಯುವ ಕೌಟುಂಬಿಕ ಕಲಹ ಎಂದು ಹೇಳಿದ್ದು, ಇದು ವಿಚ್ಛೇದನವಲ್ಲ ಎಂದು ಕಸ್ತೂರಿ ರಾಜ ಹೇಳಿದ್ದಾರೆ.
ಧನುಷ್ ಮತ್ತು ಐಶ್ವರ್ಯಾ ಹೈದರಾಬಾದ್ನಲ್ಲಿದ್ದಾರೆ. ಚೆನ್ನೈನಲ್ಲಿ ಅಲ್ಲ. ಆದ್ದರಿಂದ ನಾನು ಅವರಿಗೆ ಫೋನ್ ಮಾಡಿ ಕೆಲವು ಪ್ರಮುಖ ಸಲಹೆಗಳನ್ನು ನೀಡಿದ್ದೇನೆ ಎಂದು ಧನುಷ್ ಅವರ ತಂದೆ ಕಸ್ತೂರಿ ರಾಜಾ ಅವರು ಮತ್ತಷ್ಟು ಹೇಳಿದರು.
ರಜನಿಕಾಂತ್ ಕೂಡ ಈ ಬಿರುಕು ಬಿಟ್ಟ ದಂಪತಿ ನಡುವೆ ಎಲ್ಲವನ್ನೂ ಸರಿಪಡಿಸಲು ಪ್ರಯತ್ನಿಸಿದರು. ಧನುಷ್ ತಮ್ಮ ಮಾವ ರಜನಿಕಾಂತ್ ಅವರನ್ನು ಭೇಟಿಯಾಗುವುದನ್ನೇ ತಪ್ಪಿಸಿ ಕೊಂಡಿದ್ದಾರಂತೆ. ಸೂಪರ್ಸ್ಟಾರ್ಗೆ ಅಗೌರವ ತೋರಲು ಬಯಸುವುದಿಲ್ಲ ಎಂದು ಮನೆಯಿಂದಾನೇ ದೂರ ಉಳಿದರು.
ಇತ್ತೀಚಿನ ವರದಿಯು ಧನುಷ್ ಅವರ ಕೆಲಸದ ಸ್ವಭಾವವು ಇಬ್ಬರ ನಡುವೆ ಸಮಸ್ಯೆಗಳನ್ನು ಸೃಷ್ಟಿಸಿರಬಹುದು ಎಂದು ಸೂಚಿಸುತ್ತದೆ. ಧನುಷ್ ವರ್ಕ್ಹಾಲಿಕ್ ಆಗಿದ್ದು, ಎಲ್ಲದಕ್ಕೂ ಮೊದಲು ತಮ್ಮ ಕೆಲಸಕ್ಕೆ ಆದ್ಯತೆ ನೀಡುತ್ತಾರೆ ಎಂದು ದಂಪತಿ ಹತ್ತಿರದ ಮೂಲವು ಬಹಿರಂಗಪಡಿಸಿದೆ.
ಅವರು ತಮ್ಮ ಕೆಲಸದ ಬದ್ಧತೆಗಳಿಂದಾಗಿ ಬ್ಯುಸಿಯಾಗಿದ್ದರು ಮತ್ತು ಸಿನಿಮಾದ ಶೂಟಿಂಗ್ಕ್ಕಾಗಿ ಒಂದು ಊರಿಂದ ಊರಿಗೆ ಪ್ರಯಾಣಿಸುವುದು ಅವರ ವೈಯಕ್ತಿಕ ಜೀವನವನ್ನು ಬಲಿ ತೆಗೆದುಕೊಂಡಿದೆ.ಈ ಕಾರಣಕ್ಕಾಗಿ, ಧನುಷ್ ಮತ್ತು ಐಶ್ವರ್ಯಾ ಯಾವಾಗಲೂ ಜಗಳವಾಡುತ್ತಾರೆ. ಹಾಗಾಗಿ ಮನೆಯಿಂದ ದೂರ ಉಳಿಯಲು ಮತ್ತು ಜಗಳಗಳನ್ನು ತಪ್ಪಿಸಲು ನಟ ಚಿತ್ರಗಳಿಗೆ ಸಹಿ ಹಾಕುತ್ತಿದ್ದರು.
'ಪ್ರತಿ ಬಾರಿ ಧನುಷ್ ಮತ್ತು ಐಶ್ವರ್ಯಾ ನಡುವೆ ಘರ್ಷಣೆ ಉಂಟಾದಾಗ ಧನುಷ್ ಅವರು ಹೊಸ ಚಲನಚಿತ್ರಕ್ಕೆ ಸಹಿ ಹಾಕುತ್ತಾರೆ. ಬಹುಶಃ ತಮ್ಮನ್ನು ಕೆಲಸದಲ್ಲಿ ತೊಡಗಿಸಿಕೊಂದು ಬ್ಯುಸಿಯಾಗಿರಲು ಎಂದು ಮೂಲವು ಹೇಳಿದೆ.