- Home
- Entertainment
- Cine World
- Allu Arjun: ಚಿರಂಜೀವಿ ಆ ಸಿನಿಮಾ ಮಾಡಬಾರದಿತ್ತು.. ಪುಷ್ಪ 2 ಬಳಿಕ ಬನ್ನಿ ಕೊಟ್ಟ ಉತ್ತರವೇನು?
Allu Arjun: ಚಿರಂಜೀವಿ ಆ ಸಿನಿಮಾ ಮಾಡಬಾರದಿತ್ತು.. ಪುಷ್ಪ 2 ಬಳಿಕ ಬನ್ನಿ ಕೊಟ್ಟ ಉತ್ತರವೇನು?
ಚಿರಂಜೀವಿ ಅವರ ಮಾಸ್ ಇಮೇಜ್ ತುಂಬಾ ದೊಡ್ಡದು. ಇದೇ ಕಾರಣಕ್ಕೆ ಒಂದು ಕ್ಲಾಸ್ ಸಿನಿಮಾ ಫ್ಲಾಪ್ ಆಯ್ತು ಎಂದು ನಿರ್ಮಾಪಕ ಅಲ್ಲು ಅರವಿಂದ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಜೊತೆಗೆ 'ಪುಷ್ಪ 2' ನಂತರ ಮಗ ಅಲ್ಲು ಅರ್ಜುನ್ ತಮಗೆ ನೀಡಿದ ಉತ್ತರದ ಬಗ್ಗೆಯೂ ಮಾತನಾಡಿದ್ದಾರೆ.

ಅಭಿಮಾನಿಗಳಿಗೆ ಹಬ್ಬ
ಎನ್ಟಿಆರ್ ನಂತರ ಟಾಲಿವುಡ್ನಲ್ಲಿ ಅಂತಹ ಮಾಸ್ ಇಮೇಜ್ ಗಳಿಸಿದ್ದು ಚಿರಂಜೀವಿ. ಅವರ ಕ್ರೇಜ್ ಉತ್ತುಂಗದಲ್ಲಿತ್ತು. ಚಿರಂಜೀವಿ ಮಾಸ್ ಸಿನಿಮಾ ಮಾಡಿದರೆ ಅಭಿಮಾನಿಗಳಿಗೆ ಹಬ್ಬವಾಗಿತ್ತು. ಡ್ಯಾನ್ಸ್, ನಟನೆ, ಫೈಟ್ಸ್ ವಿಚಾರದಲ್ಲಿ ಚಿರಂಜೀವಿಗೆ ಯಾರೂ ಸಾಟಿಯಿರಲಿಲ್ಲ. ಕೆಲವು ಬಾರಿ ಚಿರಂಜೀವಿ ತಮ್ಮ ಮಾಸ್ ಇಮೇಜ್ ಬದಿಗಿಟ್ಟು ನಟನೆಗೆ ಪ್ರಾಮುಖ್ಯತೆ ಇರುವ ಸಿನಿಮಾಗಳನ್ನೂ ಮಾಡಿದ್ದಾರೆ.
ತೆಲುಗಿನಲ್ಲಿ ಫ್ಲಾಪ್
ಅವುಗಳಲ್ಲಿ ಆರಾಧನ, ಸ್ವಯಂಕೃಷಿ, ರುದ್ರವೀಣ, ಆಪದ್ಭಾಂಧವುಡು ಅಂತಹ ಸಿನಿಮಾಗಳಿವೆ. 'ಆರಾಧನ' ಚಿತ್ರ 1987ರಲ್ಲಿ ಬಿಡುಗಡೆಯಾಯಿತು. ಭಾರತಿರಾಜ ನಿರ್ದೇಶನದ ಈ ಚಿತ್ರವನ್ನು ಅಲ್ಲು ಅರವಿಂದ್ ನಿರ್ಮಿಸಿದ್ದರು. ಮಾಸ್ ಅಂಶಗಳಿಲ್ಲದೆ, ಕ್ಲಾಸ್ ಕಥೆಯೊಂದಿಗೆ ತೆರೆಕಂಡ ಈ ಚಿತ್ರ ತಮಿಳು ಸಿನಿಮಾದ ರಿಮೇಕ್ ಆಗಿತ್ತು. ತಮಿಳಿನಲ್ಲಿ ಹಿಟ್ ಆದರೂ, ತೆಲುಗಿನಲ್ಲಿ ಫ್ಲಾಪ್ ಆಯಿತು. 'ಆರಾಧನ' ಚಿತ್ರದ ಸೋಲಿಗೆ ಕಾರಣವನ್ನು ಅಲ್ಲು ಅರವಿಂದ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಅಪ್ರತಿಮ ಮಾಸ್ ಹೀರೋ
ಅಲ್ಲು ಅರವಿಂದ್ ಮಾತನಾಡಿ, 'ಆ ಸಮಯದಲ್ಲಿ ಚಿರಂಜೀವಿ ಅಪ್ರತಿಮ ಮಾಸ್ ಹೀರೋ. 'ಆರಾಧನ' ಕಥೆಗಿಂತ ಚಿರಂಜೀವಿ ಇಮೇಜ್ ತುಂಬಾ ದೊಡ್ಡದಾಗಿತ್ತು. ಆ ಸಿನಿಮಾವನ್ನು ಚಿರಂಜೀವಿ ಬದಲು ಬೇರೆ ಚಿಕ್ಕ ಹೀರೋ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ಯಾಕೆಂದರೆ ಅಭಿಮಾನಿಗಳು ಚಿರಂಜೀವಿಯಿಂದ ಮಾಸ್ ಸಿನಿಮಾಗಳನ್ನೇ ಹೆಚ್ಚು ನಿರೀಕ್ಷಿಸುತ್ತಿದ್ದರು. ಅದಕ್ಕಾಗಿಯೇ 'ಆರಾಧನ' ವರ್ಕೌಟ್ ಆಗಲಿಲ್ಲ. ಆದರೆ ನಿರ್ದೇಶಕ ಭಾರತಿರಾಜ ಅದ್ಭುತವಾಗಿ ಸಿನಿಮಾ ಮಾಡಿದ್ದರು. ಕಥೆಗಿಂತ ಚಿರಂಜೀವಿ ಇಮೇಜ್ ದೊಡ್ಡದಾಗಿದ್ದರಿಂದ ಸಿನಿಮಾ ವಿಫಲವಾಯಿತು' ಎಂದು ಅಲ್ಲು ಅರವಿಂದ್ ತಿಳಿಸಿದರು.
ಸಿನಿಮಾಗಳಲ್ಲೂ ಹಿಟ್ಗಳಿವೆ
ಚಿರಂಜೀವಿ ನಟಿಸಿದ ಕ್ಲಾಸ್ ಸಿನಿಮಾಗಳಲ್ಲೂ ಹಿಟ್ಗಳಿವೆ. 'ಶುಭಲೇಖ', 'ವಿಜೇತ' ಅಂತಹ ಸಿನಿಮಾಗಳು ಯಶಸ್ಸು ಕಂಡಿವೆ ಎಂದು ಅರವಿಂದ್ ಹೇಳಿದರು. ಚಿರಂಜೀವಿಗೆ ಮಾಸ್ ಇಮೇಜ್ ಇದ್ದರೂ, ತಮ್ಮ ಪಾತ್ರಗಳಲ್ಲಿ ವೈವಿಧ್ಯತೆ ಇರುವಂತೆ ನೋಡಿಕೊಂಡು ಎಲ್ಲಾ ಬಗೆಯ ಸಿನಿಮಾಗಳನ್ನು ಮಾಡುತ್ತಿದ್ದರು. ಆದರೆ, ಈಗಿನ ತಲೆಮಾರಿನ ಹೀರೋಗಳು ಮಾಸ್ ಇಮೇಜ್ ಬಂದ ತಕ್ಷಣ ಕ್ಲಾಸ್ ಸಿನಿಮಾಗಳನ್ನು ಸಂಪೂರ್ಣವಾಗಿ ಬದಿಗಿಡುತ್ತಿದ್ದಾರೆಯೇ ಎಂಬ ಪ್ರಶ್ನೆ ಅಲ್ಲು ಅರವಿಂದ್ಗೆ ಎದುರಾಯಿತು.
ಸಾಫ್ಟ್ ರೋಲ್ ಮಾಡಿದರೆ ಹೇಗಿರುತ್ತೆ?
ಇದಕ್ಕೆ ಉತ್ತರಿಸಿದ ಅಲ್ಲು ಅರವಿಂದ್, 'ಹೌದು, ಈಗಿನ ಸ್ಟಾರ್ ಹೀರೋಗಳು ಕ್ಲಾಸ್ ಸಿನಿಮಾಗಳನ್ನು ಬದಿಗಿಡುತ್ತಿದ್ದಾರೆಂದೇ ನಾನೂ ಭಾವಿಸುತ್ತೇನೆ. 'ಪುಷ್ಪ 2' ನಂತರ ನನ್ನ ಮಗ ಅಲ್ಲು ಅರ್ಜುನ್ನನ್ನು, ಈಗ ಯಾವ ತರಹದ ಸಿನಿಮಾ ಮಾಡಲು ಬಯಸುತ್ತೀಯಾ ಎಂದು ಕೇಳಿದೆ. ಕ್ಯಾಶುವಲ್ ಆಗಿ ಚರ್ಚಿಸುತ್ತಾ, 'ನೀನು ಈಗ ಸಾಫ್ಟ್ ರೋಲ್ ಮಾಡಿದರೆ ಹೇಗಿರುತ್ತೆ? ಒಂದು ಕುಟುಂಬದಲ್ಲಿ ಚಿಕ್ಕ ಮಗನಾಗಿ, ಕುಟುಂಬಕ್ಕಾಗಿ ತ್ಯಾಗ ಮಾಡುವ ಪಾತ್ರದಲ್ಲಿ ನಟಿಸಿದರೆ ಏನಾಗುತ್ತೆ?' ಎಂದು ಕೇಳಿದೆ. ಅದಕ್ಕೆ ಬನ್ನಿ, 'ಡ್ಯಾಡಿ, ಸದ್ಯಕ್ಕೆ ನಾನು ಗೊಂದಲದಲ್ಲಿದ್ದೇನೆ. ನೀವು ಕಥೆ ತನ್ನಿ. ಕಥೆ ಅದ್ಭುತ ಎನಿಸಿದರೆ ನಾನು ಆ ಸಿನಿಮಾ ಮಾಡುವ ಧೈರ್ಯ ಮಾಡಬಹುದು' ಎಂದನು' ಎಂದು ಅಲ್ಲು ಅರವಿಂದ್ ತಿಳಿಸಿದರು. 'ಪುಷ್ಪ 2' ನಂತರ ಅಲ್ಲು ಅರ್ಜುನ್, ಅಟ್ಲಿ ನಿರ್ದೇಶನದಲ್ಲಿ 800 ಕೋಟಿ ಬಜೆಟ್ನ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

