ತಾಯಿಯಾಗಿರುವ ನಟಿಯಿಂದ ಜಾಸ್ತಿ ಕೆಲಸ ಮಾಡಿಸಬಾರದು: ದೀಪಿಕಾ ಪರ ಮಾತನಾಡಿದ ನಟಿಯರು!
ನಿರ್ದೇಶಕ ಸಂದೀಪ್ ರೆಡ್ಡಿ ಅವರಿಗೆ ದೀಪಿಕಾ ಪರಿಸ್ಥಿತಿ ಅರ್ಥಮಾಡಿಕೊಳ್ಳುವ ಸೂಕ್ಷ್ಮ ಇರಬೇಕಿತ್ತು. ಈಗ ದೀಪಿಕಾ ಆ ಸಿನಿಮಾದಿಂದ ಹೊರಬಂದಿದ್ದು ಸರಿಯಾಗಿಯೇ ಇದೆ ಎಂದು ಹೇಳಿದ್ದಾರೆ.

ದೀಪಿಕಾ ಪಡುಕೋಣೆ ‘ಸ್ಪಿರಿಟ್’ ಸಿನಿಮಾದಿಂದ ಹೊರ ನಡೆದದ್ದೇ ನೆವವಾಗಿ ಸಿನಿಮಾ ರಂಗದಲ್ಲಿ ತಾಯಿಯಾಗಿರುವ ನಟಿಯರ ಪರವಾದ ಅಲೆ ಎದ್ದಿದೆ.
‘ಚಿಕ್ಕ ಮಗುವಿರುವ ನಟಿಯರ ಕೆಲಸದ ಅವಧಿಯನ್ನು 6 ಅಥವಾ 8 ಗಂಟೆಗೆ ಸೀಮಿತಗೊಳಿಸಬೇಕು’ ಎನ್ನುವ ಬೇಡಿಕೆಗೆ ಖ್ಯಾತ ನಿರ್ದೇಶಕ ಮಣಿರತ್ನಂ, ಕಲಾವಿದರಾದ ರಮ್ಯಾ, ಪಂಕಜ್ ತ್ರಿಪಾಠಿ, ರಾಧಿಕಾ ಆಪ್ಟೆ, ಅಜಯ್ ದೇವಗನ್, ಕಾಜಲ್ ಮೊದಲಾದವರು ದನಿಗೂಡಿಸಿದ್ದಾರೆ.
ಈ ಕುರಿತು ರಮ್ಯಾ, ‘ಚಿಕ್ಕ ಮಗುವಿನ ತಾಯಿಯಾಗಿರುವ ಕಾರಣಕ್ಕೆ 8 ಗಂಟೆ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ದೀಪಿಕಾ ಕೇಳಿಕೊಳ್ಳುವ ನೀಡುವ ಅವಶ್ಯಕತೆಯೇ ಇರಲಿಲ್ಲ. ಅದು ಅವರ ಹಕ್ಕು.
ನಿರ್ದೇಶಕ ಸಂದೀಪ್ ರೆಡ್ಡಿ ಅವರಿಗೆ ದೀಪಿಕಾ ಪರಿಸ್ಥಿತಿ ಅರ್ಥಮಾಡಿಕೊಳ್ಳುವ ಸೂಕ್ಷ್ಮ ಇರಬೇಕಿತ್ತು. ಈಗ ದೀಪಿಕಾ ಆ ಸಿನಿಮಾದಿಂದ ಹೊರಬಂದಿದ್ದು ಸರಿಯಾಗಿಯೇ ಇದೆ’ ಎಂದು ಹೇಳಿದ್ದಾರೆ.
ಖ್ಯಾತ ನಿರ್ದೇಶಕ ಮಣಿರತ್ನಂ, ‘ದೀಪಿಕಾ ಪಡುಕೋಣೆಯದು ಉತ್ತಮ ನಡೆ. ಈ ಮೂಲಕ ಅವರು ಇತರ ಕಲಾವಿದರಿಗೂ ನ್ಯಾಯ ಸಿಗುವಂತೆ ಮಾಡುತ್ತಿದ್ದಾರೆ. ಇಂಥಾ ವಿಚಾರಗಳಲ್ಲಿ ಸಿನಿಮಾ ತಂಡಗಳು ಸ್ಪಂದಿಸಲೇ ಬೇಕು. ಚಿಕ್ಕ ಮಕ್ಕಳ ತಾಯಂದಿರಿಗೆ ಸಮಯ ಹೊಂದಾಣಿಕೆಯ ಆಯ್ಕೆ ನೀಡಬೇಕು’ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

