MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಮಗನ ಬರ್ತ್‌ ಸೆರ್ಟಿಫಿಕೇಟ್‌ನಲ್ಲಿ ಧರ್ಮದ ಕಾಲಂ ಖಾಲಿಬಿಟ್ಟ 12th Fail Movie Actor Vikrant Massey

ಮಗನ ಬರ್ತ್‌ ಸೆರ್ಟಿಫಿಕೇಟ್‌ನಲ್ಲಿ ಧರ್ಮದ ಕಾಲಂ ಖಾಲಿಬಿಟ್ಟ 12th Fail Movie Actor Vikrant Massey

ಖ್ಯಾತ ನಟ ವಿಕ್ರಾಂತ್ ಮಾಸ್ಸೆ ತಮ್ಮ ಮಗ ವರದಾನ್‌ನ ಬರ್ತ್‌ ಸೆರ್ಟಿಫಿಕೇಟ್‌ನಲ್ಲಿ ಧರ್ಮದ ಕಾಲಂ ಖಾಲಿ ಬಿಟ್ಟಿರುವ ವಿಷಯವನ್ನು ಈಗ ಬಹಿರಂಗಪಡಿಸಿದ್ದಾರೆ. ಯಾರನ್ನಾದರೂ ಧರ್ಮದ ಆಧಾರದ ಮೇಲೆ ನನ್ನ ಮಗ ತಾರತಮ್ಯ ಮಾಡಿದರೆ ನನಗೆ ಬೇಸರ ಆಗುವುದು ಎಂದು ಅವರು ಹೇಳಿದ್ದಾರೆ. 

1 Min read
Author : Padmashree Bhat
| Updated : Jul 02 2025, 03:56 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : Vikrant Massey instagram

ಬಾಲಿವುಡ್ ನಟ ನಟ ವಿಕ್ರಾಂತ್ ಮಾಸ್ಸೆ ಕಳೆದ ವರ್ಷ ತಂದೆಯಾದರು. ಮಗ ವರದಾನ್‌ನ ಜನಿಸಿರುವ ವಿಷಯವನ್ನು ಅವರು ಶೇರ್‌ ಮಾಡಿಕೊಂಡಿದ್ದರು. ನನ್ನ ಕುಟುಂಬವು ಯಾವುದೇ ನಿರ್ದಿಷ್ಟ ಧರ್ಮವನ್ನು ಅನುಸರಿಸುವುದಿಲ್ಲ ಎಂದು ಹೇಳಿದ್ದರು. ಈಗ ನಟಿ ರಿಯಾ ಚಕ್ರವರ್ತಿಯವರ ಪಾಡ್‌ಕಾಸ್ಟ್‌ನಲ್ಲಿ ವಿಕ್ರಾಂತ್ ತಮ್ಮ ಮಗನ ಜನನ ಪ್ರಮಾಣಪತ್ರದಲ್ಲಿ ಧರ್ಮದ ಕಾಲಂ ಖಾಲಿ ಬಿಟ್ಟಿರುವುದನ್ನು ಬಹಿರಂಗಪಡಿಸಿದ್ದಾರೆ.

25
Image Credit : Vikrant Massey instagram

ವಿಕ್ರಾಂತ್‌ ಮಾತನಾಡಿ, “ನನಗೆ ಧರ್ಮವು ವೈಯಕ್ತಿಕ ಆಯ್ಕೆ. ಇದು ನನ್ನ ಲೈಫ್‌ಸ್ಟೈಲ್. ಪ್ರತಿಯೊಬ್ಬರಿಗೂ ಅವರವರ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿದೆ. ನನ್ನ ಮನೆಯಲ್ಲಿ ಎಲ್ಲಾ ರೀತಿಯ ಧರ್ಮದ ಆಚರಣೆಯೂ ಇದೆ. ಧರ್ಮವು ಮಾನವ ನಿರ್ಮಿತ. ನಾನು ಪೂಜೆ ಮಾಡುವೆ, ಗುರುದ್ವಾರಕ್ಕೆ ಹೋಗುವೆ, ದರ್ಗಾಕ್ಕೂ ಭೇಟಿ ನೀಡುವೆ. ಇವೆಲ್ಲವೂ ನನಗೆ ಶಾಂತಿಯನ್ನು ನೀಡುತ್ತವೆ” ಎಂದು ಹೇಳಿದ್ದಾರೆ.

Related Articles

Related image1
ಸುದೀಪ್‌ ಜೊತೆ ಅನೂಪ್ ಭಂಡಾರಿ; ವಿಕ್ರಾಂತ್‌ ರೋಣ ಚಿತ್ರಕ್ಕಿಂತ ಬಿಗ್‌ ಬಜೆಟ್‌ ಸಿನಿಮಾ
Related image2
ಐಎನ್‌ಎಸ್ ವಿಕ್ರಾಂತ್‌ ಈಗ ಎಲ್ಲಿದೆ ಎಂದು ಕೇಳಿದ ಕೇರಳದ ವ್ಯಕ್ತಿಯ ಬಂಧನ
35
Image Credit : Vikrant Massey instagram

“ನಮಗೆ ಯಾರೋ ಒಬ್ಬರು ರಕ್ಷಣೆ ನೀಡುತ್ತಿದ್ದಾರೆ ಎಂಬ ನಂಬಿಕೆ ಇದೆ. ತಮಗೆ ಸಿಕ್ಕಿರುವ ಕೆಲಸಕ್ಕಾಗಿ ಮತ್ತು ಪ್ರತಿದಿನ ರಕ್ಷಣೆ ನೀಡಿದ್ದಕ್ಕಾಗಿ ದೇವರಿಗೆ ಧನ್ಯವಾದಗಳನ್ನು ಹೇಳ್ತೀನಿ. ನಾನು ಈ ಬಗ್ಗೆ ಮಾತನಾಡಿದಾಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗಿರೋದು ನನಗೆ ಬೇಸರ ತಂದಿದೆ” ಎಂದಿದ್ದಾರೆ.

45
Image Credit : Vikrant Massey instagram

“ನನ್ನ ಮಗನ ಬರ್ತ್‌ ಸೆರ್ಟಿಫಿಕೇಟ್‌ನಲ್ಲಿ ಧರ್ಮದ ಕಾಲಂ ಖಾಲಿ ಇಡಲಾಗಿದೆ. ಸರ್ಕಾರದಿಂದ ಬರ್ತ್‌ ಸೆರ್ಟಿಫಿಕೇಟ್‌ನ ಬಂದಾಗ, ಅದರಲ್ಲಿ ಧರ್ಮವನ್ನು ಉಲ್ಲೇಖ ಮಾಡಿರಲಿಲ್ಲ. ಸರ್ಕಾರವು ಧರ್ಮವನ್ನು ಕಡ್ಡಾಯವಾಗಿ ಬರೆಯಬೇಕು ಅಂತ ಹೇಳೋದಿಲ್ಲ, ಅದು ನಮ್ಮ ಆಯ್ಕೆ. ನಾನು ಬರ್ತ್‌ ಸೆರ್ಟಿಫಿಕೇಟ್‌ ನೋಡಿದ ಕೂಡಲೇ, ಧರ್ಮದ ಕಾಲಂನಲ್ಲಿ ಒಂದು ಡ್ಯಾಶ್ ಗುರುತು ಹಾಕಿದೆ. ನನ್ನ ಮಗ ಧರ್ಮ ನೋಡಿ ಯಾರನ್ನಾದರೂ ಅನುಸರಿಸಿ, ಆಮೇಲೆ ತಾರತಮ್ಯ ಮಾಡಿದರೆ, ಬೇಸರ ಆಗುವುದು. ನಾನು ನನ್ನ ಮಗನನ್ನು ಆ ರೀತಿ ಬೆಳೆಸ್ತಿಲ್ಲ” ಎಂದು ಹೇಳಿದ್ದಾರೆ.

55
Image Credit : Vikrant Massey instagram

“ನನ್ನ ತಂದೆ ಕ್ರಿಶ್ಚಿಯನ್, ತಾಯಿ ಸಿಖ್, ನನ್ನ ಸಹೋದರ 17ನೇ ವಯಸ್ಸಿನಲ್ಲಿ ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ನಾನು ರಜಪೂತ್ ಠಾಕೂರ್ ಕುಟುಂಬದ ಶೀತಲ್‌ರನ್ನು ಮದುವೆಯಾದೆ. ನಾನು ಯಾವುದೇ ನಿರ್ದಿಷ್ಟ ಧರ್ಮವನ್ನು ಫಾಲೋ ಮಾಡಲ್ಲ, ಆದರೆ ದೇವರಲ್ಲಿ ಗಾಢವಾದ ನಂಬಿಕೆಯನ್ನು ಹೊಂದಿದ್ದೇನೆ. ನನ್ನ ಮಗನಿಗೆ ನಾಮಕರಣ ಸಂಸ್ಕಾರವನ್ನು ಮಾಡಿದ್ದೇವೆ” ಎಂದು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಜೀವನಶೈಲಿ
ಮನರಂಜನಾ ಸುದ್ದಿ
ಸೆಲೆಬ್ರಿಟಿಗಳು
ಸುದ್ದಿ

Latest Videos
Recommended Stories
Recommended image1
ವಿಜಯ್​ ಎದುರೇ ರಶ್ಮಿಕಾ ಮಂದಣ್ಣಗೆ, ರಕ್ಷಿತ್​ ಶೆಟ್ಟಿ ಬಗ್ಗೆ ಕನ್ನಡದಲ್ಲಿ ಪ್ರಶ್ನೆ! ನಟಿ ಏನ್​ ಹೇಳಿದ್ರು? ವಿಡಿಯೋ ವೈರಲ್​
Recommended image2
ರಶ್ಮಿಕಾ-ವಿಜಯ್ ಮದುವೆಯಾಗುತ್ತಿರುವ ಹೊಟೇಲ್ ರೂಮಿನ ಒಂದು ದಿನದ ಬಾಡಿಗೆ ಇಷ್ಟೊಂದಾ?
Recommended image3
ಅಯ್ಯಪ್ಪ ಮಾಲೆ ಧರಿಸಿ ಎಣ್ಣೆ ಪಾರ್ಟಿಗೆ ಬಂದ ರಾಮ್‌ ಚರಣ್‌ ತೇಜ, ನೆಟ್ಟಿಗರ ಟ್ರೋಲ್‌!
Related Stories
Recommended image1
ಸುದೀಪ್‌ ಜೊತೆ ಅನೂಪ್ ಭಂಡಾರಿ; ವಿಕ್ರಾಂತ್‌ ರೋಣ ಚಿತ್ರಕ್ಕಿಂತ ಬಿಗ್‌ ಬಜೆಟ್‌ ಸಿನಿಮಾ
Recommended image2
ಐಎನ್‌ಎಸ್ ವಿಕ್ರಾಂತ್‌ ಈಗ ಎಲ್ಲಿದೆ ಎಂದು ಕೇಳಿದ ಕೇರಳದ ವ್ಯಕ್ತಿಯ ಬಂಧನ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved