MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಸಿನಿಮಾದಲ್ಲಿ ವಿಲನ್, ರಿಯಲ್ ಲೈಫ್ ಹೀರೋ: ತಾಯಿ ತೂಕದಷ್ಟೇ ಸಸ್ಯ ಬೀಜ ಕ್ರಾಂತಿ ಮಾಡಿದ 'ಉಪ್ಪಿ 2' ನಟ Sayaji Shinde‌

ಸಿನಿಮಾದಲ್ಲಿ ವಿಲನ್, ರಿಯಲ್ ಲೈಫ್ ಹೀರೋ: ತಾಯಿ ತೂಕದಷ್ಟೇ ಸಸ್ಯ ಬೀಜ ಕ್ರಾಂತಿ ಮಾಡಿದ 'ಉಪ್ಪಿ 2' ನಟ Sayaji Shinde‌

ಸಿನಿಮಾಗಳಲ್ಲಿ, ಸೀರಿಯಲ್‌ಗಳಲ್ಲಿ ವಿಲನ್‌ ಆಗಿ ಅಬ್ಬರಿಸಿದ ಅನೇಕ ಕಲಾವಿದರು ರಿಯಲ್‌ ಲೈಫ್‌ನಲ್ಲಿ ನಿಜಕ್ಕೂ ಮಾನವೀಯ ಮೌಲ್ಯಗಳನ್ನು ಹೊಂದಿರುತ್ತಾರೆ, ಸಾಮಾಜಿಕ ಕೆಲಸಗಳನ್ನು ಮಾಡಿರುತ್ತಾರೆ ಎನ್ನೋದಿಕ್ಕೆ ನಟ ಸಯಾಜಿ ಶಿಂಧೆ ಉತ್ತಮ ಉದಾಹರಣೆ.

1 Min read
Padmashree Bhat
Published : Dec 21 2025, 02:00 PM IST
Share this Photo Gallery
  • FB
  • TW
  • Linkdin
  • Whatsapp
15
ರಿಯಲ್‌ ಹೀರೋಗಳಿದ್ದಾರೆ
Image Credit : sayaji shinde facebook

ರಿಯಲ್‌ ಹೀರೋಗಳಿದ್ದಾರೆ

ಸಿನಿಮಾಗಳಲ್ಲಿ ಅಬ್ಬರದ ಡೈಲಾಗ್‌ ಹೊಡೆದು, ನೂರಾರು ರೌಡಿಗಳ ಜೊತೆ ಫೈಟ್‌ ಮಾಡುವ ಕೆಲ ಹೀರೋಗಳು ರಿಯಲ್‌ ಲೈಫ್‌ನಲ್ಲಿ ಕೂಡ ಹೀರೋ ಆದ ಉದಾಹರಣೆಗಳು ತುಂಬ ಇವೆ. ಎಷ್ಟೋ ಕಲಾವಿದರು ಶಿಕ್ಷಣ, ಪರಿಸರ ಎಂದೋ ಅಥವಾ ಅಸಹಾಯಕರಿಗೆ ಸಹಾಯ ಮಾಡಿ ಹೀರೋಗಳಾದ ನಿದರ್ಶನಗಳು ನಮ್ಮಲ್ಲಿವೆ.

25
ಪರಿಸರ ಪ್ರೇಮ ಬಂದಿದ್ದು ಹೇಗೆ?
Image Credit : sayaji shinde facebook

ಪರಿಸರ ಪ್ರೇಮ ಬಂದಿದ್ದು ಹೇಗೆ?

“97 ವರ್ಷದಲ್ಲಿ ತಾಯಿ ತೀರಿಕೊಂಡರು. ನನ್ನ ಬಳಿ ಹಣವಿದ್ದರೂ ಕೂಡ ತಾಯಿಯನ್ನು ಉಳಿಸಿಕೊಳ್ಳಲು ಆಗಲಿಲ್ಲ. ಒಂದು ಕಡೆ ತಾಯಿಯನ್ನಿಟ್ಟು, ಇನ್ನೊಂದು ಕಡೆ ಸಸ್ಯಗಳ ಬೀಜ ಇಟ್ಟು ತೂಕ ಮಾಡಿದೆ. ಆ ಮರದ ಬೀಜಗಳನ್ನು ಇಟ್ಟು ಬೆಳೆಸುವೆ. ಆ ಬೀಜ, ಗಿಡವಾಗಿ ಮರಗಳಾಗಬೇಕು. ಆ ಮರಗಳು ದೊಡ್ಡವಾಗುತ್ತವೆ, ಹೂವು ಬಿಡುತ್ತವೆ, ನನ್ನ ತಾಯಿ ನಂತರ ಮರಗಳೇ ತಾಯಿ ಎಂದು ಅಂದುಕೊಂಡಿದ್ದೆ” ಎಂದು ಸಯಾಜಿ ಶಿಂಧೆ ಅವರು ತೆಲುಗು ಬಿಗ್‌ ಬಾಸ್‌ ವೇದಿಕೆಯಲ್ಲಿ ಹೇಳಿದ್ದರು.

Related Articles

Related image1
ರವಿಚಂದ್ರನ್ ಜೊತೆ ನಟಿಸಿದ ಈಕೆ 15 ವರ್ಷದಿಂದ ಸಿನಿಮಾ ಮಾಡದಿದ್ದರೂ ದೇಶದ ಶ್ರೀಮಂತ ನಟಿ: ಯಾರೀಕೆ?
Related image2
'ಧುರಂಧರ್' ಸಿನಿಮಾ ಭಾರತೀಯರ ಗರ್ವ: ಆರ್‌ಜಿವಿ ಹೊಗಳಿಕೆ ಕೇಳಿ ಕಣ್ಣೀರಾದ ನಿರ್ದೇಶಕ ಆದಿತ್ಯ ಧರ್!
35
ಪರಿಸರ ಕ್ರಾಂತಿ ಮಾಡಿದ್ರು
Image Credit : sayaji shinde facebook

ಪರಿಸರ ಕ್ರಾಂತಿ ಮಾಡಿದ್ರು

ಇಂದು ಅವರು ಮಹಾರಾಷ್ಟ್ರ ಸತಾರಾ ಕಡೆಗೆ 25000 ಮರಗಳನ್ನು ನೆಟ್ಟಿದ್ದಾರೆ. ಅಷ್ಟೇ ಅಲ್ಲದೆ ಗಿಡ ನೆಟ್ಟು, ಪೋಷಿಸಿ ಎಂದು ಸಾಕಷ್ಟು ಕಡೆ ಅವರು ಸಂದೇಶವನ್ನು ನೀಡಿದ್ದಾರೆ. ಈಗಾಗಲೇ ಅನೇಕ ಕಡೆ ಅವರು ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

45
ಹೋರಾಟ ಮಾಡಿದ್ರು
Image Credit : sayaji shinde facebook

ಹೋರಾಟ ಮಾಡಿದ್ರು

ಮರ ಕಡಿಯೋದನ್ನು ವಿರೋಧಿಸಿ ಅವರು ಅನೇಕ ಕಡೆ ಹೋರಾಟಗಳನ್ನು ಕೂಡ ಮಾಡಿದ್ದರು. ಇದಕ್ಕೆ ಪ್ರತಿಫಲ ಕೂಡ ಸಿಕ್ಕಿದೆ. ಹೀಗಾಗಿ ಸಾಕಷ್ಟು ಕಡೆ ಅವರಿಗೆ ಸನ್ಮಾನ ಮಾಡಿ, ಪುರಸ್ಕಾರ ಕೂಡ ನೀಡಲಾಗಿದೆ. ಮಹಾರಾಷ್ಟ್ರದ ರೈತ ಕುಟುಂಬದಲ್ಲಿ ಜನಿಸಿದ ಸಯಾಜಿ ಶಿಂಧೆ ಅವರು, ತಾವು ಬೆಳೆದ ನೆಲವನ್ನು ಮರೆತಿಲ್ಲ ಎನ್ನೋದು ಖುಷಿಯ ವಿಷಯ.

55
ಕನ್ನಡ ಸಿನಿಮಾಗಳಲ್ಲಿ ನಟನೆ
Image Credit : sayaji shinde facebook

ಕನ್ನಡ ಸಿನಿಮಾಗಳಲ್ಲಿ ನಟನೆ

1971ರಿಂದ ನಟನೆ ಆರಂಭಿಸಿದ ಸಯಾಜಿ ಶಿಂಧೆ ಅವರು ಕನ್ನಡ, ತೆಲುಗು, ತಮಿಳು, ಹಿಂದಿ, ಭೋಜಪುರಿ, ಇಂಗ್ಲಿಷ್‌, ಗುಜರಾತಿ, ಮಲಯಾಳಂ, ಪಂಜಾಬಿ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಅದರಲ್ಲಿಯೂ ಕನ್ನಡದಲ್ಲಿ ಪತಿತ ಪಾವನಿ, ವೀರ ಕನ್ನಡಿಗ, ಲವ ಕುಶ, ಪೊರ್ಕಿ, ಶ್ರೀಮತಿ, ಆರಕ್ಷಕ, ಶಕ್ತ, ವೀರ, ಬ್ರಹ್ಮ, ಜೈ ಲಲಿತಾ, ಲವ್‌ಯು ಆಲಿಯಾ, ಉಪ್ಪಿ 2, ಕೆಂಪಿರುವೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಕೃಷಿ
ಪರಿಸರ ಸಂರಕ್ಷಣೆ
ಮಹಾರಾಷ್ಟ್ರ
ಸೆಲೆಬ್ರಿಟಿಗಳು

Latest Videos
Recommended Stories
Recommended image1
15 ವರ್ಷಗಳಿಂದ ನಾಗಾರ್ಜುನರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆ ಯಾವುದು? ಯಾಕೆ ಕಡಿಮೆಯಾಗಿಲ್ಲ?
Recommended image2
ಆತ ನನ್ನ ಕ್ಲಾಸ್‌ಮೇಟ್.. ಗೆಳೆಯ ಶ್ರೀನಿವಾಸನ್ ನಿಧನ ಆಘಾತ ತಂದಿದೆ: ಭಾವುಕರಾದ ರಜನಿಕಾಂತ್
Recommended image3
ಶಾರುಖ್ ಖಾನ್ ಜೊತೆ ಮಲ್ಟಿಸ್ಟಾರರ್ ಚಿತ್ರದಲ್ಲಿ ಜೂ.ಎನ್‌ಟಿಆರ್‌: 'ವಾರ್ 2' ಸೋತರೂ ಜಗ್ಗದ ಯಂಗ್ ಟೈಗರ್!
Related Stories
Recommended image1
ರವಿಚಂದ್ರನ್ ಜೊತೆ ನಟಿಸಿದ ಈಕೆ 15 ವರ್ಷದಿಂದ ಸಿನಿಮಾ ಮಾಡದಿದ್ದರೂ ದೇಶದ ಶ್ರೀಮಂತ ನಟಿ: ಯಾರೀಕೆ?
Recommended image2
'ಧುರಂಧರ್' ಸಿನಿಮಾ ಭಾರತೀಯರ ಗರ್ವ: ಆರ್‌ಜಿವಿ ಹೊಗಳಿಕೆ ಕೇಳಿ ಕಣ್ಣೀರಾದ ನಿರ್ದೇಶಕ ಆದಿತ್ಯ ಧರ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved