MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • 50 ಲಕ್ಷ ನೀಡಿ ಬದುಕಿಗೆ ದಾರಿಯಾಗಿದ್ರಿ, ಋಣ ಯಾವತ್ತೂ ಮರೆಯಲ್ಲ: Bigg Boss ಹನುಮಂತು ಕಣ್ಣೀರು

50 ಲಕ್ಷ ನೀಡಿ ಬದುಕಿಗೆ ದಾರಿಯಾಗಿದ್ರಿ, ಋಣ ಯಾವತ್ತೂ ಮರೆಯಲ್ಲ: Bigg Boss ಹನುಮಂತು ಕಣ್ಣೀರು

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿ.ಜೆ ರಾಯ್ ಅವರು ಪದೇ ಪದೇ ನಡೆಯುತ್ತಿದ್ದ ಐಟಿ ದಾಳಿಯಿಂದಾಗಿ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ.  , ರಿಯಾಲಿಟಿ ಶೋಗಳ ಮೂಲಕ ಹಲವರಿಗೆ ನೆರವಾಗಿದ್ದ ಅವರ ನಿಧನಕ್ಕೆ ಗಾಯಕ ಹನುಮಂತ ಲಮಾಣಿ ಕಂಬನಿ ಮಿಡಿದಿದ್ದಾರೆ.

2 Min read
Author : Suchethana D
Published : Jan 31 2026, 11:36 AM IST
Share this Photo Gallery
  • FB
  • TW
  • Linkdin
  • Whatsapp
16
ಸಿ.ಜೆ ರಾಯ್ ಆಘಾತಕಾರಿ ಅಂತ್ಯ
Image Credit : Asianet News

ಸಿ.ಜೆ ರಾಯ್ ಆಘಾತಕಾರಿ ಅಂತ್ಯ

ಪದೇ ಪದೇ ಐಟಿ ದಾಳಿ ಆಗುತ್ತಿದೆ ಎಂದು ಹೇಳುವ ಮೂಲಕ ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿ.ಜೆ ರಾಯ್ (CJ Roy death case) ಸಾವಿನ ಹಾದಿ ಹಿಡಿದಿದ್ದಾರೆ. ಸಾವಿರಾರು ಕೋಟಿ ರೂಪಾಯಿಗಳ ಸಾಮ್ರಾಜ್ಯ ಕಟ್ಟಿದ್ದ ಸಿ.ಜೆ. ರಾಯ್​ ಅವರ ಸಾವು ಹಲವಾರು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

26
ವಿಭಿನ್ನ ರೀತಿ ಚರ್ಚೆ
Image Credit : Asianet News

ವಿಭಿನ್ನ ರೀತಿ ಚರ್ಚೆ

ಆತ್ಮ*ಹತ್ಯೆಯ ಹಾದಿ ತುಳಿಯುವಂಥ ಕೆಲಸ ಅವರು ಮಾಡಿದ್ಯಾಕೆ ಎನ್ನುವುದು ಕೆಲವರ ಪ್ರಶ್ನೆಯಾದರೆ, ಈ ರೀತಿ ಪದೇ ಪದೇ ದಾಳಿ ನಡೆಸುತ್ತಿರುವುದು ಸರಿಯಲ್ಲ ಎಂದು ಮತ್ತೆ ಕೆಲವರು ವಾದಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಪ್ರಕರಣ ಭಾರಿ ಆಘಾತಕಾರಿಯಾಗಿದೆ. ರಿಯಲ್ ಎಸ್ಟೇಟ್ ಜೊತೆ ಜೊತೆಗೆ ಹಾಸ್ಪಿಟಾಲಿಟಿ, ನಿರ್ಮಾಣ ಕ್ಷೇತ್ರ, ಶಿಕ್ಷಣ, ಸಿನಿಮಾ ಮೊದಲಾದ ವ್ಯವಹಾರಗಳಲ್ಲಿ ಉದ್ಯಮ ಸ್ಥಾಪಿಸಿ ಇಷ್ಟು ದೊಡ್ಡ ಸಾಮ್ರಾಜ್ಯ ಕಟ್ಟಿದ್ದರು ಅವರು.

Related Articles

Related image1
ಅಜಿತ್​ ಪವಾರ್​ ವಿಮಾನ ಹತ್ತುವ ಮೊದಲೇ ವಿಕಿಪಿಡಿಯಾದಲ್ಲಿ ಸಾವಿನ ಸುದ್ದಿ! ಅಸಲಿ ಕೈವಾಡದ ಮಾಹಿತಿ ಇಲ್ಲಿದೆ
Related image2
ಕಣ್ಣಲ್ಲಿ ಮಷಿನ್​ ಇಟ್ಕೊಂಡು ಯಾಮಾರಿಸ್ತಿದ್ದ ಸುಂದರಿ! ಈಕೆ ಮಾಡ್ತಿದ್ದ ಕಿತಾಪತಿ ಭಯಾನಕ ವಿಡಿಯೋ ವೈರಲ್
36
ರಿಯಾಲಿಟಿ ಷೋಗಳಿಗೆ ಸ್ಪಾನ್ಸರ್​
Image Credit : Asianet News

ರಿಯಾಲಿಟಿ ಷೋಗಳಿಗೆ ಸ್ಪಾನ್ಸರ್​

ಸಿ.ಜೆ. ರಾಯ್​ ಅವರು ಬಿಗ್​ಬಾಸ್​ ಸೀಸನ್​ 11ರ ವಿನ್ನರ್​ಗೆ 50 ಲಕ್ಷ ರೂಪಾಯಿ ಸ್ಪಾನ್ಸರ್ ಮಾಡಿದ್ದರು. ಹಲವು ಬಡವರಿಗೆ ನೆರವಾಗುತ್ತಿದ್ದರು. ಜೊತೆಗೆ ಕೆಲವು ರಿಯಾಲಿಟಿ ಷೋಗಳಿಗೂ ಇವರು ಪ್ರಾಯೋಜಕರಾಗಿದ್ದರು.

46
ಬಿಗ್​ಬಾಸ್​​ ವಿನ್ನರ್​ಗೆ ಹಣ
Image Credit : Asianet News

ಬಿಗ್​ಬಾಸ್​​ ವಿನ್ನರ್​ಗೆ ಹಣ

ಅದೇ ರೀತಿ ಬಿಗ್​ಬಾಸ್​ 11ರ ವಿಜೇತ ಹನುಮಂತ ಲಮಾಣಿ ಅವರಿಗೆ ಬಿಗ್​ಬಾಸ್​​ ಕಡೆಯಿಂದ ಬಂದ 50 ಲಕ್ಷ ರೂಪಾಯಿ ನೀಡಿದ್ದು ಸಿ.ಜೆ.ರಾಯ್​ ಅವರೇ. ಅಷ್ಟೇ ಅಲ್ಲದೇ ಸರಿಗಮಪ ರಿಯಾಲಿಟಿ ಷೋಗೆ ಕೂಡ ಇವರು ಪ್ರಾಯೋಜಕರಾಗಿದ್ದ ಹಿನ್ನೆಲೆಯಲ್ಲಿ, 12ರ ಸೀಸನ್​ನಲ್ಲಿ ರನ್ನರ್​ ಅಪ್​ ಆಗಿದ್ದ ಹನುಮಂತ ಅವರಿಗೆ ಇವರ ಕಡೆಯಿಂದಲೇ ದುಡ್ಡು ಸಿಕ್ಕಿತ್ತು.

56
ಹನುಮಂತ ಲಮಾಣಿ ದುಃಖ
Image Credit : Instagram

ಹನುಮಂತ ಲಮಾಣಿ ದುಃಖ

ಇದೀಗ ಅವರ ಅಕಾಲಿಕ ನಿಧನದಿಂದ ಹನುಮಂತ ಲಮಾಣಿ ದುಃಖಿತರಾಗಿದ್ದಾರೆ. ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಅತೀವ ದುಃಖ ತೋಡಿಕೊಂಡಿರುವ ಹನುಮಂತ ಅವರು, ​ಸಿ.ಜೆ.ರಾಯ್​ ಅವರಿಂದ ಪ್ರಶಸ್ತಿ ಹಾಗೂ ಚೆಕ್​ ಪಡೆಯುತ್ತಿರುವ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಜೊತೆಗೆ, ಕೈ ಮುಗಿಯುವ, ಬ್ರೋಕನ್ ಹಾರ್ಟ್ ಮತ್ತು ದುಃಖದ ಎಮೋಜಿ ಹಾಕಿಕೊಂಡು ಭಾವುಕ ಪೋಸ್ಟ್​ ಹಂಚಿಕೊಂಡಿದ್ದಾರೆ.

66
ನೋವಿನ ಪೋಸ್ಟ್​
Image Credit : Instagram

ನೋವಿನ ಪೋಸ್ಟ್​

'ಇದು ತುಂಬಾ ದುಃಖಕರ ಸಂಗತಿ. ಅಂದು ಸರಿಗಮಪ ಸೀಸನ್ 15ರಲ್ಲಿ ನಾನು ರನ್ನರ್-ಅಪ್ ಆಗಿದ್ದಾಗ, ನನಗೆ ಹಣ ನೀಡಿ ನನ್ನ ಬದುಕಿಗೆ ದಾರಿ ದೀಪವಾಗಿದ್ದವರು ನೀವು. ಅಲ್ಲಿಂದ ಹಿಡಿದು ಬಿಗ್ ಬಾಸ್ ಸೀಸನ್ 11ರಲ್ಲೂ ಕೂಡಾ ವಿಜೇತನಾದಾಗ ನನಗೆ ಪ್ರೀತಿಯಿಂದ ಹಣ ಕೊಡುವುದರ ಮೂಲಕ ನನ್ನ ಗೆಲುವನ್ನು ಸಂಭ್ರಮಿಸಿದವರು ನೀವು. ನಿಮ್ಮ ಈ ಋಣವನ್ನು ಯಾವತ್ತೂ ಮರೆಯೋಕೆ ಸಾಧ್ಯವೇ ಇಲ್ಲ ಸರ್. ನಿಮ್ಮ ಅಗಲಿಕೆ ಸುದ್ದಿ ಕೇಳಿ ಮನಸ್ಸು ಭಾರವಾಗಿದೆ ಸರ್. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಮಿಸ್​ ಯು ರಾಯ್​ ಸರ್' ಎಂದು ಬರೆದುಕೊಂಡಿದ್ದಾರೆ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಸಿ.ಜೆ. ರಾಯ್
ವ್ಯವಹಾರ
ಭಾರತ ಸುದ್ದಿ
ಕ್ರೈಮ್ ನ್ಯೂಸ್
ಕರ್ನಾಟಕ ಸರ್ಕಾರ
ಐಟಿ ದಾಳಿ

Latest Videos
Recommended Stories
Recommended image1
ಬೆಂಗಳೂರಿನ ಹೃದಯಭಾಗದಲ್ಲಿ 'ವೈಟ್‌ಹೌಸ್‌' ರೀತಿ ಅರಮನೆ, ವೈಭೋಗದ ರಾಯನಂತಿದ್ದ ಸಿಜೆ ರಾಯ್‌!
Recommended image2
Union Budget 2026: ಬಜೆಟ್‌ನಲ್ಲಿ ಯಾವ ರಾಜ್ಯಕ್ಕೆ ದಂಡಿಯಾಗಿ ಸಿಗಲಿದೆ ದುಡ್ಡು?
Recommended image3
ಸಿ.ಜೆ ರಾಯ್ ಆತ್ಮ*ಹತ್ಯೆ ಕೇಳಿ ಕಣ್ಣೀರಿಟ್ಟ ಬಿಗ್ ಬಾಸ್ ವಿನ್ನರ್ ಹನುಮಂತ! ಕೊನೆಗೂ ಈಡೇರಲಿಲ್ಲ ಅದೊಂದು ಆಸೆ
Related Stories
Recommended image1
ಅಜಿತ್​ ಪವಾರ್​ ವಿಮಾನ ಹತ್ತುವ ಮೊದಲೇ ವಿಕಿಪಿಡಿಯಾದಲ್ಲಿ ಸಾವಿನ ಸುದ್ದಿ! ಅಸಲಿ ಕೈವಾಡದ ಮಾಹಿತಿ ಇಲ್ಲಿದೆ
Recommended image2
ಕಣ್ಣಲ್ಲಿ ಮಷಿನ್​ ಇಟ್ಕೊಂಡು ಯಾಮಾರಿಸ್ತಿದ್ದ ಸುಂದರಿ! ಈಕೆ ಮಾಡ್ತಿದ್ದ ಕಿತಾಪತಿ ಭಯಾನಕ ವಿಡಿಯೋ ವೈರಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved