‘ಪುಷ್ಪ 2’ ಲೇಡಿ ಗೆಟಪ್ ಬಗ್ಗೆ ಅಲ್ಲು ಅರ್ಜುನ್ ಬಿಗ್ ಕಾಮೆಂಟ್. ಗಂಗಮ್ಮ ಜಾತ್ರೆ ಲುಕ್ಗಾಗಿ ಪಟ್ಟ ಕಷ್ಟ ಹಾಗೂ ಅದನ್ನೇ ತಮ್ಮ ಕೆರಿಯರ್ನ ‘ಮೋಸ್ಟ್ ಆಲ್ಫಾ ಮೂಮೆಂಟ್’ ಎಂದು ಬನ್ನಿ ಹೇಳಿರುವುದು ಇದೀಗ ವೈರಲ್ ಆಗಿದೆ.
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಎಂದಾಕ್ಷಣ ನೆನಪಾಗೋದು ಅವರ ಮಾಸ್ ಲುಕ್, ಸ್ಟೈಲ್ ಹಾಗೂ ಪವರ್ಫುಲ್ ಪರ್ಫಾರ್ಮೆನ್ಸ್. ಆದರೆ ‘ಪುಷ್ಪ 2’ ಸಿನಿಮಾದಲ್ಲಿ ಅವರು ಮಾಡಿದ ಒಂದು ಪ್ರಯೋಗ ಮಾತ್ರ ಇಡೀ ದೇಶದ ಸಿನಿಪ್ರೇಕ್ಷಕರ ಗಮನ ಸೆಳೆದಿತ್ತು. ತಿರುಪತಿ ಗಂಗಮ್ಮ ಜಾತ್ರೆಯ ಹಿನ್ನೆಲೆಯಲ್ಲಿನ ಸೀರೆಯುಟ್ಟು, ಮಹಿಳಾ ವೇಷದಲ್ಲಿ ಕಾಣಿಸಿಕೊಂಡ ಬನ್ನಿ ಅವರ ಆ ಲುಕ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.
ಇದೀಗ ಇದೇ ಲೇಡಿ ಗೆಟಪ್ ಬಗ್ಗೆ ಅಲ್ಲು ಅರ್ಜುನ್ ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ಫೋರ್ಬ್ಸ್ ಇಂಡಿಯಾ’ ಮ್ಯಾಗಜೀನ್ನ ಕವರ್ ಪೇಜ್ನಲ್ಲಿ ಸ್ಥಾನ ಪಡೆದ ಹಿನ್ನೆಲೆಯಲ್ಲಿ ನೀಡಿದ ವಿಶೇಷ ಸಂದರ್ಶನದಲ್ಲಿ, ತಮ್ಮ ಕೆರಿಯರ್ನಲ್ಲೇ ಆ ಲುಕ್ ಅತ್ಯಂತ ಧೈರ್ಯಶಾಲಿ ನಿರ್ಧಾರ ಎಂದು ಬನ್ನಿ ಹೇಳಿದ್ದಾರೆ.
‘ಅದೇ ನನ್ನ ಕೆರಿಯರ್ನ ಮೋಸ್ಟ್ ಆಲ್ಫಾ ಮೂಮೆಂಟ್!’
ಸಾಮಾನ್ಯವಾಗಿ ಕಮರ್ಷಿಯಲ್ ಮಾಸ್ ಹೀರೋಗಳು ತಮ್ಮ ಇಮೇಜ್ಗೆ ವಿರುದ್ಧವಾದ ಡಿ-ಗ್ಲಾಮರೈಸ್ಡ್ ಅಥವಾ ಮಹಿಳಾ ವೇಷದ ಪಾತ್ರಗಳನ್ನು ಮಾಡಲು ಕೊಂಚ ಹಿಂದೇಟು ಹಾಕುತ್ತಾರೆ. ಆದರೆ ಕಥೆ ಕೇಳಿದಾಗ ತಮ್ಮ ಕಂಫರ್ಟ್ ಝೋನ್ನಿಂದ ಹೊರಬಂದು ಪ್ರಯೋಗ ಮಾಡಲು ನಿರ್ಧರಿಸಿದ್ದಾಗಿ ಅಲ್ಲು ಅರ್ಜುನ್ ಹೇಳಿದ್ದಾರೆ.
ತಮ್ಮ ಕೆರಿಯರ್ನಲ್ಲಿ ತಾವು ತೆಗೆದುಕೊಂಡ ಅತ್ಯಂತ ‘ಆಲ್ಫಾ’ ಅಂದರೆ ಧೈರ್ಯಶಾಲಿ ನಿರ್ಧಾರ ಯಾವುದು ಎಂದು ಕೇಳಿದರೆ, ‘ಪುಷ್ಪ 2’ನ ಗಂಗಮ್ಮ ಜಾತ್ರೆಯ ಲೇಡಿ ಗೆಟಪ್ ಎಂದೇ ಹೇಳುತ್ತೇನೆ ಎಂದು ಬನ್ನಿ ತಿಳಿಸಿದ್ದಾರೆ. ಕಥೆ ಏನು ಬೇಡುತ್ತದೆಯೋ ಅದನ್ನು ಮಾಡಲು ಸಿದ್ಧರಾಗಿದ್ದಾಗಲೇ ಒಬ್ಬ ನಟನಾಗಿ ಇಮೇಜ್ನ ಗಡಿಗಳನ್ನು ದಾಟಲು ಸಾಧ್ಯವಾಗುತ್ತದೆ. ಇದೇ ಕಾರಣಕ್ಕೆ ಆ ಪ್ರಯೋಗಕ್ಕೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿತು ಎಂದು ಅವರು ಹೇಳಿದ್ದಾರೆ.
ಸೀರೆಯುಟ್ಟು ಬರಲು ಸಿಕ್ಕಿದ್ದು ಸರ್ಪ್ರೈಸ್!
ಮೊದಲಿಗೆ ‘ಪುಷ್ಪ’ ಪಾತ್ರಕ್ಕಾಗಿ ಸಾಮಾನ್ಯ ಮಾಸ್ ಹಾಗೂ ಸ್ಟೈಲಿಶ್ ಫೋಟೋಶೂಟ್ ಮಾಡಲಾಗಿತ್ತು ಎಂದು ಅಲ್ಲು ಅರ್ಜುನ್ ನೆನಪಿಸಿಕೊಂಡಿದ್ದಾರೆ. ಆದರೆ ಅಂತಹ ರೊಟೀನ್ ಲುಕ್ಗಳು ಪ್ರೇಕ್ಷಕರಿಗೆ ದೊಡ್ಡ ಇಂಪ್ಯಾಕ್ಟ್ ನೀಡುವುದಿಲ್ಲ ಎಂದು ನಿರ್ದೇಶಕ ಸುಕುಮಾರ್ ಭಾವಿಸಿದ್ದರಂತೆ.
ಪ್ರೇಕ್ಷಕರಿಗೆ ಸಂಪೂರ್ಣ ಹೊಸ ಅನುಭವ ನೀಡಬೇಕು ಎಂಬ ಉದ್ದೇಶದಿಂದಲೇ ಗಂಗಮ್ಮ ಜಾತ್ರೆಯ ಸೀಕ್ವೆನ್ಸ್ ಹಾಗೂ ಬನ್ನಿ ಅವರ ಲೇಡಿ ಗೆಟಪ್ನ್ನು ಸಿದ್ಧಪಡಿಸಲಾಯಿತು ಎಂದು ಅವರು ಹೇಳಿದ್ದಾರೆ. ಈ ಒಂದು ನಿರ್ಧಾರವೇ ನಂತರ ‘ಪುಷ್ಪ 2’ನ ಅತ್ಯಂತ ಚರ್ಚೆಯಾದ ಸೀಕ್ವೆನ್ಸ್ಗಳಲ್ಲಿ ಒಂದಾಗಿ ಮಾರ್ಪಟ್ಟಿತು.
ದಿನಕ್ಕೆ ಎರಡೂವರೆ ಗಂಟೆ ಮೇಕಪ್!
ಈ ಲುಕ್ ಪರದೆಯ ಮೇಲೆ ಎಷ್ಟು ಪವರ್ಫುಲ್ ಆಗಿ ಕಾಣಿಸಿಕೊಂಡಿತ್ತೋ, ಅದರ ಹಿಂದಿನ ಶ್ರಮವೂ ಅಷ್ಟೇ ದೊಡ್ಡದಾಗಿತ್ತು. ಪ್ರತಿದಿನ ಶೂಟಿಂಗ್ಗೆ ಮುನ್ನ ಸುಮಾರು ಎರಡೂವರೆ ಗಂಟೆಗಳ ಕಾಲ ವಿಶೇಷ ಮೇಕಪ್ ಮಾಡಿಸಿಕೊಳ್ಳಬೇಕಾಗುತ್ತಿತ್ತು ಎಂದು ಬನ್ನಿ ಹೇಳಿದ್ದಾರೆ. ಇದರ ಜೊತೆಗೆ ಭಾರವಾದ ಆಭರಣಗಳನ್ನು ಧರಿಸಿ, ಸಾಂಪ್ರದಾಯಿಕ ರೀತಿಯಲ್ಲಿ ಸೀರೆ ಕಟ್ಟಿಕೊಂಡು ದಿನವಿಡೀ ಆ್ಯಕ್ಷನ್ ಸನ್ನಿವೇಶಗಳಲ್ಲಿ ನಟಿಸಬೇಕಾಗಿತ್ತು.
ಇದರಿಂದ ಬೆನ್ನುನೋವು ಸೇರಿದಂತೆ ಸಾಕಷ್ಟು ದೈಹಿಕ ತೊಂದರೆ ಹಾಗೂ ಮಾನಸಿಕ ಒತ್ತಡವನ್ನೂ ಅನುಭವಿಸಿದ್ದಾಗಿ ಅವರು ತಿಳಿಸಿದ್ದಾರೆ. ಆದರೂ ಪಾತ್ರದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಸ್ಟಾರ್ ಇಮೇಜ್ ಅಥವಾ ಕಂಫರ್ಟ್ ಬಗ್ಗೆ ಯೋಚಿಸದೆ ಶೂಟಿಂಗ್ನಲ್ಲಿ ತೊಡಗಿಸಿಕೊಂಡಿದ್ದಾಗಿ ಬನ್ನಿ ಹೇಳಿದ್ದಾರೆ.
‘ಪುಷ್ಪರಾಜ್’ ಲುಕ್ಗೆ ಸಿಕ್ಕಿತ್ತು ಭಾರೀ ಮೆಚ್ಚುಗೆ!
‘ಪುಷ್ಪ’ ಫ್ರಾಂಚೈಸಿಯಲ್ಲಿ ಅಲ್ಲು ಅರ್ಜುನ್ ಅವರ ವಿಭಿನ್ನ ಅಭಿನಯಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಅದರಲ್ಲೂ ಗಂಗಮ್ಮ ಜಾತ್ರೆಯ ಸಂದರ್ಭದಲ್ಲಿ ಅವರು ಕಾಣಿಸಿಕೊಂಡ ಲುಕ್ ಪ್ರೇಕ್ಷಕರಿಗೆ ಸಂಪೂರ್ಣ ಹೊಸ ಅನುಭವ ನೀಡಿತ್ತು. ಸಾಮಾನ್ಯ ಹೀರೋ ಇಮೇಜ್ನ ಚೌಕಟ್ಟನ್ನು ಮೀರಿ ಕಥೆಗಾಗಿ ರಿಸ್ಕ್ ತೆಗೆದುಕೊಂಡಿದ್ದೇ ಆ ಸೀಕ್ವೆನ್ಸ್ನ ಯಶಸ್ಸಿಗೆ ಪ್ರಮುಖ ಕಾರಣ ಎಂದು ಸಿನಿ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇದೀಗ ‘ಫೋರ್ಬ್ಸ್ ಇಂಡಿಯಾ’ ಸಂದರ್ಶನದಲ್ಲಿ ಅಲ್ಲು ಅರ್ಜುನ್ ಸ್ವತಃ ಆ ಲುಕ್ ಹಿಂದಿನ ಕಷ್ಟ ಹಾಗೂ ತಮ್ಮ ನಿರ್ಧಾರದ ಬಗ್ಗೆ ಮಾತನಾಡಿರುವುದು ಮತ್ತೊಮ್ಮೆ ಸುದ್ದಿಯಾಗಿದೆ. ಈ ಸಂದರ್ಶನದ ಮ್ಯಾಗಜೀನ್ ಕ್ಲಿಪ್ನ್ನು ಅಲ್ಲು ಅರ್ಜುನ್ ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದು, ಇದೀಗ ಈ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಮಾಸ್ ಹೀರೋ ಆಗಿದ್ದರೂ ಇಮೇಜ್ಗೆ ಅಂಟಿಕೊಳ್ಳದೆ ಪಾತ್ರಕ್ಕಾಗಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧ ಎಂಬುದನ್ನು ‘ಪುಷ್ಪ 2’ನ ಗಂಗಮ್ಮ ಜಾತ್ರೆಯ ಲುಕ್ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ ಬನ್ನಿ, ಅದನ್ನೇ ತಮ್ಮ ಕೆರಿಯರ್ನ ‘ಮೋಸ್ಟ್ ಆಲ್ಫಾ ಮೂಮೆಂಟ್’ ಎಂದು ಕರೆದಿರುವುದು ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ.


