ಸೀತಾರಾಮ ಸೀರಿಯಲ್​ ಮುಗಿಯುತ್ತಿದ್ದಂತೆಯೇ ನಟರೆಲ್ಲಾ ಕಣ್ಣೀರಿನ ವಿದಾಯ ಹೇಳಿದ್ದಾರೆ. ಅದರಲ್ಲಿಯೂ ರಾಮ್​ ಮತ್ತು ಸಿಹಿ ದುಃಖ ತಡೆದುಕೊಳ್ಳಲಾಗದೇ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಒಂದು ಧಾರಾವಾಹಿ ಎಂದರೆ ಅದರಲ್ಲಿ ನಟಿಸುವ ಕಲಾವಿದರಿಗೆ ಅದೊಂದು ರೀತಿಯಲ್ಲಿ ಮನೆಯೇ ಆಗಿಬಿಟ್ಟಿರುತ್ತದೆ. ಅಲ್ಲಿ ಇರುವವರೆಲ್ಲರೂ ಕುಟುಂಬದವರೇ ಆಗಿಬಿಡುತ್ತಾರೆ. 3-4 ವರ್ಷಗಳ ವರೆಗೆ ದಿನಂಪ್ರತಿ ಮನೆಗಿಂತಲೂ ಹೆಚ್ಚಾಗಿ, ಮನೆಯ ಸದಸ್ಯರಿಗಿಂತಲೂ ಹೆಚ್ಚಾಗಿ ಆ ಸೀರಿಯಲ್​ ನಟ-ನಟಿಯರ ಜೊತೆ ಹೆಚ್ಚು ಕಾಲ ಕಳೆಯುವ ಕಾರಣದಿಂದ ಅದೊಂದು ರೀತಿಯ ಸುಮಧುರ ಬಾಂಧವ್ಯ ಮೂಡಿಬಿಟ್ಟಿರುತ್ತದೆ. ಹಲವಾರು ಕಲಾವಿದರು ಸೀರಿಯಲ್​ಗಳಲ್ಲಿ ತುಂಬಾ ಎಂಜಾಯ್​ ಮಾಡುತ್ತಾ, ಅಲ್ಲಿರುವ ನಟ-ನಟಿಯರ ಜೊತೆ ತಮಾಷೆ ಮಾಡುತ್ತಾ ಕಾಲ ಕಳೆಯುತ್ತಿರುತ್ತಾರೆ. ಆದ್ದರಿಂದ ಅವರಿಗೆ ಮನೆಯವರಂತೆಯೇ ಸಹ ನಟರೂ ತುಂಬಾ ಕ್ಲೋಸ್​ ಆಗಿರುತ್ತಾರೆ. ಇಂಥ ಸಂದರ್ಭಗಳಲ್ಲಿ ಆ ಸೀರಿಯಲ್​ ಮುಗಿಯುತ್ತೆ ಎಂದಾಗ ಹೇಳಿಕೊಳ್ಳಲಾಗದ ನೋವು, ಸಂಕಟ ಉಂಟಾಗುವುದು ಸಹಜ. ತಮ್ಮದೇ ಮನೆಯವರಿಂದ ದೂರ ಆಗ್ತಿದ್ದವೋ ಎನ್ನುವ ಭಾವನೆ ಬರುತ್ತದೆ.

ಅದೇ ರೀತಿ ಇದೀಗ ಕಳೆದ ಎರಡೂವರೆ ವರ್ಷಗಳಿಂದ ಲಕ್ಷಾಂತರ ವೀಕ್ಷಕರನ್ನು ರಂಜಿಸಿದ್ದ ಸೀತಾರಾಮ ಸೀರಿಯಲ್​ನ ಬಹುತೇಕ ಕಲಾವಿದರಿಗೂ ಇದೇ ರೀತಿ ಆಗಿದೆ. ಕೆಲವು ಕಲಾವಿದರು ಈ ಸಂಕಟವನ್ನು ತಡೆದುಕೊಳ್ಳುತ್ತಾರೆ. ಮತ್ತೆ ಕೆಲವರಿಗೆ ಇನ್ನೊಂದು ಸೀರಿಯಲ್​ನಲ್ಲಿ ನಟಿಸುವ ಅವಕಾಶ ಇರುವುದಿಂದ ಅದರಲ್ಲಿ ಬಿಜಿಯಾಗಿ, ಹಿಂದಿನ ಸೀರಿಯಲ್​ ಮರೆತೇ ಬಿಡುತ್ತಾರೆ. ಮತ್ತೆ ಕೆಲವರು ತಾವೊಬ್ಬರು ಕಲಾವಿದರು ಅಷ್ಟೇ ಎನ್ನುವುದನ್ನು ಅರ್ಥ ಮಾಡಿಕೊಂಡಿರುತ್ತಾರೆ. ಮತ್ತೆ ಕೆಲವರಿಗೆ ಇದುಕಲಾವಿದನ ಲೈಫ್​ ಅಷ್ಟೇ ಎನ್ನುವುದು ತಿಳಿದಿರುತ್ತದೆ. ಆದರೆ ಕೆಲವರು ಹಾಗಲ್ಲ. ತುಂಬಾ ಭಾವನಾಜೀವಿಗಳಾಗಿ ಬಿಟ್ಟಿರುತ್ತಾರೆ. ಅದರಲ್ಲಿಯೂ ರಿಯಲ್​ ಲೈಫ್​ನಲ್ಲಿ ಏನೇನೋ ನೋವು ಅನುಭವಿಸಿದ ಕಲಾವಿದರ ವಿಷಯಕ್ಕೆ ಬಂದರೆ, ಸೀರಿಯಲ್​ ನಟರನ್ನೇ ತಮ್ಮ ಬಂಧುಗಳು ಎಂದುಕೊಂಡಿರುವ ಅವರಿಗೆ ಈ ವಿದಾಯ ಅಕ್ಷರಶಃ ನಲುಗಿಸಿಬಿಡುತ್ತದೆ.

ಸೀತಾರಾಮ ಸೀರಿಯಲ್​ನಲ್ಲಿ ತುಂಬಾ ನೋವು, ಸಂಕಟ ಅನುಭವಿಸುತ್ತಲೇ ಆ ದುಃಖವನ್ನು ನಿಯಂತ್ರಿಸಿಕೊಳ್ಳಲು ಆಗದವರು ಎಂದರೆ ರಾಮ್​ ಪಾತ್ರಧಾರಿ ಗಗನ್​ ಚಿನ್ನಪ್ಪ ಮತ್ತು ಸೀರಿಯಲ್​ನ ಸೆಂಟರ್​ ಆಫ್​ ಅಟ್ರಾಕ್ಷನ್​ ಸಿಹಿ-ಸುಬ್ಬಿ ರೀತು ಸಿಂಗ್​. ಸೀತಾ ಪಾತ್ರಧಾರಿ ವೈಷ್ಣವಿಗೆ ಮದುವೆ ಫಿಕ್ಸ್​ ಆಗಿದ್ದು, ಅದರ ಬಿಜಿಯಲ್ಲಿದ್ದಾರೆ. ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ ಅವರದ್ದೂ ಜಸ್ಟ್​ ಮ್ಯಾರೇಜ್​ ಆಗಿದೆ. ಅಶೋಕ್​ ಪಾತ್ರಧಾರಿ ಅಶೋಕ್​ ಶರ್ಮಾ ಇದಾಗಲೇ ಸಂದರ್ಶನವೊಂದರಲ್ಲಿ ತಮಗೂ ಸಂಕಟ ಆಗಿದ್ದರೂ ಅದನ್ನು ಮ್ಯಾಜೇಜ್ ಮಾಡಿದೆ ಎಂದಿದ್ದಾರೆ. ಉಳಿದ ಕಲಾವಿದರು ಹಿರಿಯ ಕಲಾವಿದರಾಗಿದ್ದು, ಅವರಿಗೆ ಇದಾಗಲೇ ಸಾಕಷ್ಟು ಅನುಭವವಾಗಿದೆ. ಈ ಸೀರಿಯಲ್​ ದೊಡ್ಡ ಬ್ರೇಕ್​ ಕೊಟ್ಟಿರೋದು ರಾಮ್​ ಆಗಿರೋ ಗಗನ್​ ಮತ್ತು ಸಿಹಿ ಆಗಿರೋ ರೀತು ಸಿಂಗ್​ಗೆ. ಅದರಲ್ಲಿಯೂ ರೀತು ದೊಡ್ಡ ಮಟ್ಟದ ಸ್ಟಾರ್​ ಆಗಿ ಬೆಳೆದುಬಿಟ್ಟಿದ್ದಾಳೆ.

ಕೊನೆಯ ದಿನದ ಶೂಟಿಂಗ್​ ಜೀ ಕನ್ನಡ ವಾಹಿನಿ ಶೇರ್​ ಮಾಡಿದ್ದು, ಅದರಲ್ಲಿ ಗಗನ್​ ಮತ್ತು ಸಿಹಿ ಬಿಕ್ಕಿ ಬಿಕ್ಕಿ ಅತ್ತಿರುವುದನ್ನು ಕಾಣಬಹುದು. ಈ ಕುರಿತು ಇದಾಗಲೇ ಸಂದರ್ಶನದಲ್ಲಿ ಅಶೋಕ್​ ಶರ್ಮ ಕೂಡ ಹೇಳಿದ್ದರು. ಅವರಿಬ್ಬರಿಗೂ ಅಳು ತಡೆದುಕೊಳ್ಳಲು ಆಗಲಿಲ್ಲ. ಗಗನ್​ ಅವರು ತುಂಬಾ ಭಾವುಕ ಜೀವಿ. ಅವರಿಗೆ ಈ ಅಗಲಿಕೆ ಸಹಿಸಲು ಆಗಲಿಲ್ಲ. ಇನ್ನು ರೀತು ಸಿಂಗ್​, ಮುಂದೆ ನಾನು ಏನು ಮಾಡಲಿ ಎಂದೇ ಪದೇ ಪದೇ ಅಳುತ್ತಿದ್ದಳು. ಅವಳನ್ನು ಸಮಾಧಾನ ಪಡಿಸೋದೇ ಕಷ್ಟವಾಗಿತ್ತು ಎಂದಿದ್ದರು. ಆ ನೋವನ್ನು ಇಲ್ಲಿಯೂ ನೋಡಬಹುದಾಗಿದೆ.

View post on Instagram