ಅಮೃತಧಾರೆಯಲ್ಲಿ ಮಲ್ಲಿ ಪಾತ್ರ ಮಾಡ್ತಿದ್ದ ರಾಧಾ ಭಗವತಿ ಈಗ ಭಾರ್ಗವಿಯಾಗಿ ಬದಲಾಗಿದ್ದರೂ ಜೈದೇವನ ಜೊತೆಗಿರುವ ರೀಲ್ಸ್ ವೈರಲ್ ಆಗುತ್ತಲೇ ನೆಟ್ಟಿಗರು ತಮಾಷೆ ಮಾಡಿದ್ದೇನು?
ಅಮೃತಧಾರೆಯ ಮಲ್ಲಿ ಭಾರ್ಗವಿ ಎಲ್ಎಲ್ಬಿಯ ಭಾರ್ಗವಿ ಆಗಿ ಬಹಳ ದಿನಗಳೇ ಕಳೆದು ಬಿಟ್ಟಿವೆ. ಪೆದ್ದು ಪೆದ್ದು ಮಲ್ಲಿ ಈಗ ಫುಲ್ ಉಲ್ಟಾ ಭಾರ್ಗವಿಯಾಗಿ ಮಿಂಚುತ್ತಿದ್ದಾಳೆ. ಹೌದು. ಇದು ನಟಿ ರಾಧಾ ಭಗವತಿ ಸ್ಟೋರಿ. ಅಮೃತಧಾರೆಯಲ್ಲಿ ಮಲ್ಲಿಯ ಪಾತ್ರ ಬದಲಾದರೂ ರಾಧಾ ಅವರ ಅಭಿಮಾನಿಗಳು ಅವರನ್ನೇ ಇಂದಿಗೂ ನೆನಪಿಸಿಕೊಳ್ಳುವುದು ಇದೆ. ಪೆದ್ದುಪೆದ್ದಾಗಿ ಮಾತನಾಡುತ್ತಿದ್ದ ರಾಧಾ ಅವರು ಜನರ ಮನಸ್ಸಿಗೆ ಹತ್ತಿರವಾಗಿದ್ದರು. ಅಷ್ಟಕ್ಕೂ ಒಂದು ಪಾತ್ರವನ್ನು ಮೊದಲಿನಿಂದಲೂ ನೋಡಿದವರಿಗೆ ಆ ಪಾತ್ರಧಾರಿ ಇಷ್ಟವಾಗುವುದು ಸಹಜವೇ. ಆದರೆ ಭಾರ್ಗವಿ ಎಲ್ಎಲ್ಬಿ ಸೀರಿಯಲ್ನಲ್ಲಿ ನಾಯಕಿ ರೋಲ್ ಸಿಕ್ಕಿದ್ದರಿಂದ ರಾಧಾ ಭಗವತಿ ಅವರು ಅಮೃತಧಾರೆ ಬಿಟ್ಟು ಹೋದರು. ಅಲ್ಲಿ ಅವರು ರಾಧಾ ಪಾತ್ರಕ್ಕೆ ತದ್ವಿರುದ್ಧ ಆಗಿರೋ ಖಡಕ್ ನಾಯಕಿ ರೋಲ್ ಮಾಡುತ್ತಿದ್ದಾರೆ.
ಸೀರಿಯಲ್ನ ಯಾವುದೇ ಪಾತ್ರಕ್ಕೆ ಬೇರೆಯವರು ಬಂದರೆ ಅದನ್ನು ವೀಕ್ಷಕರು ಸಹಿಸಿಕೊಳ್ಳುವುದಿಲ್ಲ. ಆ ಪಾತ್ರಕ್ಕೆ ಬಂದವರು ಎಷ್ಟೇ ಚೆನ್ನಾಗಿನಟನೆ ಮಾಡಿದರೂ ಆ ಪಾತ್ರಕ್ಕೆ ಒಗ್ಗಿಕೊಳ್ಳಲು ವೀಕ್ಷಕರಿಗೆ ಬಹಳ ಸಮಯ ಹಿಡಿಯುವುದು ಇದೆ. ಅದೇ ರೀತಿ ಮಲ್ಲಿ ಪಾತ್ರಧಾರಿ ಬದಲಾಗಿದ್ದರೂ, ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ರಾಧಾ ಭಗವತಿ ಅವರನ್ನು ಮಿಸ್ ಮಾಡಿಕೊಳ್ಳುತ್ತಲೇ ಇದ್ದಾರೆ. 'ಗಟ್ಟಿಮೇಳ' ಧಾರಾವಾಹಿಯಲ್ಲಿ ಆದ್ಯಾ ಆಗಿ ನಟಿಸಿ ಕಿರುತೆರೆ ಲೋಕದಲ್ಲಿ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಅನ್ವಿತಾ ಸಾಗರ್ ಮಲ್ಲಿ ಪಾತ್ರಧಾರಿಯಾಗಿದ್ದಾರೆ. ಇವರನ್ನು ಆದ್ಯಾ ರೂಪದಲ್ಲಿ ನೋಡಿದವರಿಗೆ ಯಾಕೋ ಮಲ್ಲಿಯ ರೂಪದಲ್ಲಿ ನೋಡಲು ಇಷ್ಟವಾಗುತ್ತಿಲ್ಲ. ಆದ್ದರಿಂದ ಇಂದಿಗೂ ಹಳೆಯ ಮಲ್ಲಿಯ ನೆನಪೇ ಮಾಡಿಕೊಳ್ಳುತ್ತಿದ್ದಾರೆ ವೀಕ್ಷಕರು.
ಅದರ ನಡುವೆಯೇ, ರಾಧಾ ಭಗವತಿ ಮತ್ತು ಜೈದೇವ್ ಪಾತ್ರಧಾರಿ ರಾವಣ್ ಗೌಡ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಸ್ಟೆಪ್ ಹಾಕಿದ್ದಾರೆ. ಅದರ ವಿಡಿಯೋ ಮತ್ತೆ ಶೇರ್ ಆಗಿದೆ. ಇದನ್ನು ನೋಡಿದವರು ಭಾರ್ಗವಿಯಾದ್ರೂ ಮಲ್ಲಿಯ ನೆನೆಪು ಕಾಡ್ತಿದೆಯಾ ಎಂದು ತಮಾಷೆ ಮಾಡುತ್ತಿದ್ದಾರೆ. ಅಷ್ಟಕ್ಕೂ ಈ ರೀಲ್ಸ್ ಅನ್ನು ರಾಧಾ ಅವರು ಅಮೃತಧಾರೆಯಲ್ಲಿ ನಟಿಸುತ್ತಿದ್ದ ಸಮಯದಲ್ಲಿ ಮಾಡಿದ್ದು. ಅಂದಹಾಗೆ, ಈ ವಿಡಿಯೋ ಅನ್ನು ರಾಧಾ ಭಗವತಿ ಅವರ ಅಭಿಮಾನಿಗಳು ಮತ್ತೊಮ್ಮೆ ಶೇರ್ ಮಾಡಿಕೊಂಡಿದ್ದಾರೆ. ಆದರೆ ಬಹುತೇಕ ಮಂದಿ ಇದನ್ನು ರಾಧಾ ಅವರೇ ಶೇರ್ ಮಾಡಿಕೊಂಡಿದ್ದು ಎಂದುಕೊಂಡು ನಟಿಯ ಕಾಲೆಳೆಯುತ್ತಿದ್ದಾರೆ. ಮಲ್ಲಿ ಪಾತ್ರದಲ್ಲಿ ನಿಮ್ಮನ್ನೇ ಮತ್ತೆ ನೋಡಬೇಕು ಎನ್ನುವ ಹಂಬಲ ಎಂದು ಹೇಳುತ್ತಿದ್ದಾರೆ. ಮತ್ತೆ ಕೆಲವರು ನಿಜಕ್ಕೂ ರಾಧಾ ಭಗವತಿ ವಾಪಸ್ ಈ ಸೀರಿಯಲ್ಗೂ ಬಂದರು ಎಂದುಕೊಂಡು ಕಮೆಂಟ್ ಮಾಡುತ್ತಿದ್ದಾರೆ. ಇವರ ಜೊತೆ ಪುಟಾಣಿ ಲಚ್ಚಿ ಕೂಡ ಕಾಣಿಸಿಕೊಂಡಿದ್ದಾಳೆ.
ಅಂದಹಾಗೆ, ರಾಧಾ ಅವರು ನಟಿ ರಾಧಾ ಭಗವತಿ ಅವರು ‘ಆ 90 ದಿನಗಳು’, ‘ವಸಂತ ಕಾಲದ ಹೂಗಳು’, ‘ಅಪಾಯವಿದೆ ಎಚ್ಚರಿಕೆ’ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಇನ್ನು ‘ಬಾನಿಗೊಂದು ತಾರೆ’ ಮ್ಯೂಸಿಕ್ ವಿಡಿಯೋದಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ. ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ 'ಅಪಾಯವಿದೆ ಎಚ್ಚರಿಕೆ' ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಎಸ್. ನಾರಾಯಣ್ ನಿರ್ದೇಶನದ 'ಒಂದ್ಸಲ ಮೀಟ್ ಮಾಡೋಣ' ಸಿನಿಮಾದಲ್ಲಿ ನಾಯಕನ ತಂಗಿಯಾಗಿ ನಟಿಸುತ್ತಿದ್ದಾರೆ. ಸದ್ಯ ಒಂದಾದ ಮೇಲೆ ಒಂದರಂತೆ ಅವಕಾಶಗಳನ್ನು ಪಡೆಯುತ್ತಿದ್ದಾರೆ.
