ಸದ್ಯ ನಂದಮೂರಿ ಬಾಲಕೃಷ್ಣ ಅವರದ್ದೇ ಹವಾ. ಅವರು ಮುಟ್ಟಿದ್ದೆಲ್ಲಾ ಚಿನ್ನ ಆಗ್ತಿದೆ. ರಾಜಕೀಯ ಹಾಗೂ ಸಿನಿಮಾ ಎರಡರಲ್ಲೂ ಬ್ಯಾಕ್ ಟು ಬ್ಯಾಕ್ ಹಿಟ್ಸ್ ಕೊಡ್ತಿದ್ದಾರೆ. ಆದರೆ ಬಾಲಯ್ಯ ಜಾತಕದಲ್ಲಿ ಒಂದು ದೊಡ್ಡ ಗಂಡಾಂತರ ಇದೆಯಂತೆ, ಅದೇನು ಗೊತ್ತಾ?

ಬಾಲಕೃಷ್ಣ ಸದ್ಯ ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಮುನ್ನುಗ್ಗುತ್ತಿದ್ದಾರೆ. ಹಿಂದೂಪುರದಿಂದ ಮೂರು ಬಾರಿ ಶಾಸಕರಾಗಿ ಗೆದ್ದಿರುವ ಬಾಲಯ್ಯ, ಸತತ 5 ಹಿಟ್ ಸಿನಿಮಾಗಳನ್ನು ನೀಡಿ ಹೀರೋ ಆಗಿ ಸದ್ದು ಮಾಡುತ್ತಿದ್ದಾರೆ. ಈಗಾಗಲೇ ಹ್ಯಾಟ್ರಿಕ್ ಹಿಟ್ ಕೊಟ್ಟಿರುವ ಅವರು, ಮತ್ತೊಂದು ಸಿನಿಮಾ ಗೆದ್ದರೆ ಡಬಲ್ ಹ್ಯಾಟ್ರಿಕ್ ಸಾಧಿಸಲಿದ್ದಾರೆ. ಸದ್ಯ ಅವರು ಗೋಪಿಚಂದ್ ಮಲಿನೇನಿ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದು, ಶೂಟಿಂಗ್ ವೇಗವಾಗಿ ನಡೆಯುತ್ತಿದೆ.

ಬಾಲಕೃಷ್ಣ ಅವರಿಗೆ ಜಾತಕದ ಮೇಲೆ ಅಪಾರ ನಂಬಿಕೆ. ಅವರು ಯಾವುದೇ ಕೆಲಸ ಮಾಡುವ ಮೊದಲು ಮುಹೂರ್ತ ನೋಡುತ್ತಾರೆ. ಕೈಯಲ್ಲಿ ಬಗೆಬಗೆಯ ದಾರಗಳು, ಕುತ್ತಿಗೆಯಲ್ಲಿ ಮಾಲೆ ಮತ್ತು ಹಣೆಯಲ್ಲಿ ತಿಲಕವಿಲ್ಲದೆ ಬಾಲಯ್ಯ ಹೊರಗೆ ಕಾಣಿಸಿಕೊಳ್ಳುವುದಿಲ್ಲ. ಅಷ್ಟೇ ಅಲ್ಲ, ಬೆಳಗ್ಗೆ ಮೂರು ಗಂಟೆಗೆ ಎದ್ದು ಗಂಟೆಗಟ್ಟಲೆ ಪೂಜೆ ಮಾಡುವುದು ಅವರ ಅಭ್ಯಾಸ. ಅವರ ಸಿನಿಮಾ ಮುಹೂರ್ತದಿಂದ ಹಿಡಿದು ಪ್ಯಾಕಪ್ ಹೇಳಿ ಕುಂಬಳಕಾಯಿ ಒಡೆಯುವವರೆಗೂ ಎಲ್ಲವೂ ಪದ್ಧತಿಯ ಪ್ರಕಾರ, ಮುಹೂರ್ತ ಬಲದೊಂದಿಗೆ ನಡೆಯಬೇಕು. ತಮ್ಮ ವೈಯಕ್ತಿಕ ವಿಚಾರಗಳಲ್ಲೂ ಬಾಲಯ್ಯ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.

ಬಾಲಯ್ಯ ತಮ್ಮ ಜಾತಕಕ್ಕೆ ವಿರುದ್ಧವಾಗಿ ಯಾವುದೇ ಕೆಲಸ ಮಾಡುವುದಿಲ್ಲ. ತಮ್ಮ ನಕ್ಷತ್ರ, ರಾಶಿಗೆ ಅನುಗುಣವಾಗಿ ಡ್ರೆಸ್ಸಿಂಗ್ ಸ್ಟೈಲ್ ಕೂಡ ನಿರ್ವಹಿಸುತ್ತಾರೆ. ಪ್ರಾಣಕ್ಕೆ ಕುತ್ತು ಬಂದರೂ ಬಾಲಯ್ಯ ಬಾಬು ತಮ್ಮ ನಿಯಮಗಳನ್ನು ಬಿಟ್ಟುಕೊಡುವುದಿಲ್ಲವಂತೆ. ಒಮ್ಮೆ ಜಾತಕಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಕ್ಕೆ ಅವರು ಒಂದು ದೊಡ್ಡ ಅಪಘಾತವನ್ನು ಎದುರಿಸಬೇಕಾಯಿತು. ಈ ವಿಚಾರವನ್ನು ಬಾಲಯ್ಯ ಅವರೇ ಸ್ವತಃ ಬಹಿರಂಗಪಡಿಸಿದ್ದರು. ಹಾಗಾದರೆ ಆ ಅಪಘಾತ ಯಾವುದು? ಜಾತಕದ ಯಾವ ಗಂಡಾಂತರದಿಂದ ಬಾಲಕೃಷ್ಣಗೆ ಆ ಅಪಘಾತ ಸಂಭವಿಸಿತು ಗೊತ್ತಾ?

ಬಾಲಕೃಷ್ಣ ಅವರದ್ದು ಮೂಲಾ ನಕ್ಷತ್ರ. ಅವರ ಜಾತಕದ ಪ್ರಕಾರ, ಅವರು ಕಪ್ಪು ಬಣ್ಣವನ್ನು ಮುಟ್ಟಬಾರದು. ಕಪ್ಪು ಬಣ್ಣದ ಬಟ್ಟೆಯನ್ನೂ ಧರಿಸಬಾರದು. ಅದರಲ್ಲೂ ವಿಶೇಷವಾಗಿ ಭಾನುವಾರದಂದು ಬಾಲಕೃಷ್ಣ ಕಪ್ಪು ಬಟ್ಟೆ ಧರಿಸಿದರೆ ಯಾವುದಾದರೂ ಒಂದು ಅಪಾಯ ಸಂಭವಿಸುತ್ತದೆಯಂತೆ. ಇದೇ ಕಾರಣಕ್ಕೆ ಅವರು ತಮ್ಮ ವೃತ್ತಿಜೀವನದಲ್ಲಿ ಕಪ್ಪು ಬಟ್ಟೆ ಧರಿಸುವುದನ್ನು ನಿಲ್ಲಿಸಿದ್ದಾರೆ. ಆದರೆ ಒಮ್ಮೆ ಅನಿವಾರ್ಯವಾಗಿ ಕಪ್ಪು ಬಟ್ಟೆ ಧರಿಸಿ ಶೂಟಿಂಗ್‌ಗೆ ಹೋಗಿದ್ದರು. 'ಆದಿತ್ಯ 369' ಸಿನಿಮಾ ಶೂಟಿಂಗ್ ನಡೆಯುತ್ತಿದ್ದಾಗ, ಬಾಲಯ್ಯ ಕಪ್ಪು ಶರ್ಟ್ ಧರಿಸಿ ಹೋಗಿದ್ದರು. ಆ ಶೂಟಿಂಗ್‌ನಲ್ಲಿ ಜಾರಿ ಬಿದ್ದು ಸೊಂಟಕ್ಕೆ ಪೆಟ್ಟು ಮಾಡಿಕೊಂಡರು. ಅಂದು ಅವರು 'ಇವತ್ತು ಕಪ್ಪು ಶರ್ಟ್ ಹಾಕಿಕೊಂಡೆ, ಏನಾಗುತ್ತೋ ಏನೋ' ಎಂದು ಅಂದುಕೊಳ್ಳುತ್ತಲೇ ಇದ್ದರಂತೆ.

ನಾನು ಬಂದಿದ್ದಕ್ಕೇ ಹೀಗಾಯ್ತು

ಇಲ್ಲಿ ಮತ್ತೊಂದು ವಿಷಯವನ್ನು ಹೇಳಬೇಕು. 'ಆದಿತ್ಯ 369' ಸಿನಿಮಾಗೆ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸಹ-ನಿರ್ಮಾಪಕರಾಗಿದ್ದರು. ಈ ಸಿನಿಮಾ ಶೂಟಿಂಗ್ ನಡೆದಷ್ಟು ದಿನ ಅವರು ಸೆಟ್‌ಗೆ ಬಂದಿರಲಿಲ್ಲ. ಆದರೆ ಯಾಕೋ ಏನೋ, ಆ ಭಾನುವಾರದಂದು ಸೆಟ್‌ಗೆ ಬಂದಿದ್ದರು. ಸರಿಯಾಗಿ ಅದೇ ಸಮಯದಲ್ಲಿ ಬಾಲಯ್ಯ ಕೆಳಗೆ ಬಿದ್ದು, ಸೊಂಟಕ್ಕೆ ಪೆಟ್ಟು ಮಾಡಿಕೊಂಡಿದ್ದನ್ನು ನೋಡಿ ಬಾಲಸುಬ್ರಹ್ಮಣ್ಯಂ ಭಯದಿಂದ ಶೂಟಿಂಗ್‌ನಿಂದ ಹೊರಟು ಹೋದರಂತೆ. 'ನಾನು ಬಂದಿದ್ದಕ್ಕೇ ಹೀಗಾಯ್ತು, ಇನ್ನು ಮುಂದೆ ನಾನು ಸೆಟ್‌ಗೆ ಬರುವುದಿಲ್ಲ' ಎಂದು ಹೇಳಿಬಿಟ್ಟರಂತೆ. ಈ ವಿಷಯವನ್ನು ಬಾಲಯ್ಯ ಬಾಬು ಅವರೇ ಒಂದು ಸಿನಿಮಾ ಪ್ರಚಾರದ ಸಂದರ್ಶನದಲ್ಲಿ ಸ್ವತಃ ಬಹಿರಂಗಪಡಿಸಿದ್ದರು.