Asianet Suvarna News Asianet Suvarna News

ಕಾಡು ಜನರ ಟಾಸ್ಕ್..ಹೆಣ್ ಮಕ್ಕಳ ಮೇಲೆ ಕೈ ಹಾಕಿದ್ರಾ ಆನಂದ್?

ಬಿಗ್ ಬಾಸ್ ಮನೆಯಲ್ಲಿ ಹೊಸ ಟಾಸ್ಕ್ ಶುರುವಾಗಿದೆ. ಎರಡನೇ ವಾರದ ಲಕ್ಸುರಿ ಬಜೆಟ್ ಟಾಸ್ಕ್ ‘ಬಾಗಿಲು ತೆಗೆಯೇ ಶೇಷಮ್ಮಾ’ ಸಖತ್ ಮಜಾ ಕೊಡುತ್ತಿದೆ. ನಾಡಿನಲ್ಲಿದ್ದವರನ್ನು ಬಿಗ್ ಬಾಸ್ ಕಾಡಿಗೆ ಕಳುಹಿಸಿದ್ದಾರೆ. ಕಾಡಿನಿಂದ ನಾಡಿಗೆ ಬಂದರೆ ಸೋಲು ಎಂಬ ತಂತ್ರವನ್ನು ಹಣೆದಿದ್ದಾರೆ.

bigg boss kannada season 6 2nd week luxury budget task starts
Author
Bengaluru, First Published Oct 30, 2018, 10:37 PM IST | Last Updated Oct 30, 2018, 10:41 PM IST

ಬಿಗ್ ಬಾಸ್ ಮನೆಯಲ್ಲಿ ಹೊಸ ಟಾಸ್ಕ್ ಶುರುವಾಗಿದೆ. ಎರಡನೇ ವಾರದ ಲಕ್ಸುರಿ ಬಜೆಟ್ ಟಾಸ್ಕ್ ‘ಬಾಗಿಲು ತೆಗೆಯೇ ಶೇಷಮ್ಮಾ’ ಸಖತ್ ಮಜಾ ಕೊಡುತ್ತಿದೆ. ನಾಡಿನಲ್ಲಿದ್ದವರನ್ನು ಬಿಗ್ ಬಾಸ್ ಕಾಡಿಗೆ ಕಳುಹಿಸಿದ್ದಾರೆ. ಕಾಡಿನಿಂದ ನಾಡಿಗೆ ಬಂದರೆ ಸೋಲು ಎಂಬ ತಂತ್ರವನ್ನು ಹಣೆದಿದ್ದಾರೆ.

ಸೋಮವಾರದ ನಾಮಿನೇಶನ್ ನಂತರ, ಲವ್ ಸ್ಟೋರಿಗಳ ನಂತರ ಪಕ್ಕಾ ಟಾಸ್ಕ್ ಶುರುವಾಗಿದೆ. ಕಾಡು ಜನರಂತೆ ಬದುಕಬೇಕು ಮನೆ ಹೊರಗೆ ಇರಬೇಕು..ಒಳಗೆ ಪ್ರವೇಶ  ಮಾಡಿದರೆ ಸೋಲು ಎಂಬ ನಿಯಮಕ್ಕೆ ಅನುಸಾರವಾಗಿ ನಾಯಕ ರವಿ ಒಳಗೊಂಡಂತೆ ಎಲ್ಲ ಸ್ಪರ್ಧಿಗಳು ಮನೆ ಹೊರಗೆ ಮಲಗಿದ್ದಾರೆ. ಡ್ರೆಸ್ ಬದಲಿಸಿದ ಕಾರಣಕ್ಕೆ ಕವಿತಾ ಗೌಡ, ನಿಯಮ್ ಉಲ್ಲಂಘಿಸಿದ್ದಕ್ಕೆ ಆಟದಿಂದ ಹೊರಬಿದ್ದಿದ್ದಾರೆ.

ಮತ್ತೆ 11 ಜನ ನಾಮಿನೇಟ್, Rapid ರಶ್ಮಿಗೆ ಎಲ್ಲೆಲ್ಲೂ ವಿರೋಧಿಗಳೇ!

ಟಾಸ್ಕ್ ಆರಂಭವಾದಾಗ ಸಖತ್ ಗಲಾಟೆ ನಡೆಯಿತು. ಹೆಣ್ಣು ಮಕ್ಕಳ ಮೇಲೆ ಬೇಕೆಂತಲೇ ಕೈ ಹಾಕುತ್ತಿದ್ದಾನೆ ಎಂಬ ಆರೋಪ ಬಸ್ ಕಂಡಕ್ಟರ್ ಆನಂದ ಮಾಲಗತ್ತಿ ಮೇಲೆ ಕೇಳಿಬಂತು. ರೀಮಾ ಗಂಭೀರಬಾಗಿ ಆರೋಪ ಮಾಡಿದರು. ಇನ್ನೊಂದು ಕಡೆ ಸಂಗೀತ ನಿರ್ದೇಶಕ ನವೀನ್ ಮತ್ತು ಸ್ನೇಹಾ ಸಖತ್ತಾಗೆ ಕಚ್ಚಾಡಿಕೊಂಡರು. ಆನಂದ್ ಗೆ ಏಟು: ಎರಡು ಗುಂಪುಗಳ ಕಿತ್ತಾಟದಲ್ಲಿ ಆನಂದ್ ಗೆ ತೊಡೆಯ ಮೇಲೆ ಗಾಯವೊಂದು ಆಗಿದ್ದು ಉಳಿದ ಸ್ಪರ್ಧಿಗಳು ಮೇಲಕ್ಕೆ ಕುಳ್ಳಿರಿಸಿದರು.

ಸಕಲ ಬಿಗ್ ಬಾಸ್ ಮನೆ ಕತೆಗಳು.. ಒಂದಕ್ಕಿಂತ ಒಂದು ಭಿನ್ನ,,!

ಒಟ್ಟಿನಲ್ಲಿ ಬೆಡ್ ಮೇಲೆ ಪವಡಿಸುತ್ತಿದ್ದ ಬಿಗ್ ಬಾಸ್ ಗಳು ಇಂದು ಮನೆ ಹೊರಗಡೆ ನಿದ್ದರಿಸಿದರು. ಬಿಗ್ ಬಾಸ್ ಕೊಟ್ಟ ಬಿರಿಯಾನಿ ಆಮಿಷಕ್ಕೂ ಬಲಿಯಾಗಲಿಲ್ಲ. ಹೊಟ್ಟೆಯಿಂದ ಆಲೋಚನೆ ಮಾಡದೇ ತಲೆಯಿಂದ ಆಲೋಚನೆ ಮಾಡುತ್ತ ಉಪವಾಸವೇ ಮಲುಗಿದ್ರು.

 

Latest Videos
Follow Us:
Download App:
  • android
  • ios