ನಕಲಿ ಅಡ್ಮಿಶನ್: ಕೆನಡಾದಲ್ಲಿ 700 ಭಾರತೀಯ ವಿದ್ಯಾರ್ಥಿಗಳು ಅತಂತ್ರ
ಕೆನಡಾದಲ್ಲಿ ನಕಲಿ ಶಿಕ್ಷಣ ಸಂಸ್ಥೆಯ ಅಡ್ಮಿಶನ್ ಆಮಿಷಕ್ಕೆ ಬಲಿಯಾಗಿ 700 ಭಾರತೀಯ ವಿದ್ಯಾರ್ಥಿಗಳು ಅತಂತ್ರ ಸ್ಥಿತಿ ಎದುರಿಸುತ್ತಿರುವ ಪ್ರಸಂಗ ಬೆಳಕಿಗೆ ಬಂದಿದೆ. ಅಲ್ಲದೆ, ಈ ವಿದ್ಯಾರ್ಥಿಗಳು ಗಡಿಪಾರು ಭೀತಿಯಲ್ಲಿದ್ದಾರೆ.
ನವದೆಹಲಿ: ನಕಲಿ ಶಿಕ್ಷಣ ಸಂಸ್ಥೆಯ ಅಡ್ಮಿಶನ್ ಆಮಿಷಕ್ಕೆ ಬಲಿಯಾಗಿ 700 ಭಾರತೀಯ ವಿದ್ಯಾರ್ಥಿಗಳು ಅತಂತ್ರ ಸ್ಥಿತಿ ಎದುರಿಸುತ್ತಿರುವ ಪ್ರಸಂಗ ಬೆಳಕಿಗೆ ಬಂದಿದೆ. ಅಲ್ಲದೆ, ಈ ವಿದ್ಯಾರ್ಥಿಗಳು ಗಡಿಪಾರು ಭೀತಿಯಲ್ಲಿದ್ದಾರೆ. ಈ ವಿದ್ಯಾರ್ಥಿಗಳನ್ನು ಅಕ್ರಮವಾಗಿ ಅಡ್ಮಿಷನ್ ಮಾಡಿಕೊಳ್ಳಲಾಗಿತ್ತು. ಪಂಜಾಬಿಗಳೇ ಇವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರು ಕೆನಡಾದ ಕಾಯಂ ನಿವಾಸಿಗಳಾಗಲು ಅರ್ಜಿ ಸಲ್ಲಿಸಿದಾಗ ಅಡ್ಮಿಶನ್ ನಕಲಿ ಎಂದು ಬೆಳಕಿಗೆ ಬಂದಿದೆ. ಇವರ ರಕ್ಷಣೆಗೆ ಭಾರತ ಸರ್ಕಾರ ಧಾವಿಸಬೇಕು ಎಂದು ಪಂಜಾಬ್ ಎನ್ಆರ್ಐ (NRI)ಖಾತೆ ಸಚಿವ ಕುಲದೀಪ್ ಸಿಂಗ್ ಧಾಲಿವಾಲ್ ಆಗ್ರಹಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವ (Foreign Minister) ಎಸ್. ಜೈಶಂಕರ್ (S Jai shankar), ನಮ್ಮ ಸಚಿವಾಲಯ ಹಾಗೂ ಕೆನಡಾ ದೂತಾವಾಸವು ಈ ವಿಷಯವನ್ನು ಕೆನಡಾ ಸರ್ಕಾರದ ಮುಂದೆ ಇರಿಸಲಿದೆ. ಕೆನಡಾ ಸರ್ಕಾರ (Canada Govt) ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡುವ ವಿಶ್ವಾಸವಿದೆ ಎಂದಿದ್ದಾರೆ.
ಪ್ರತಿ ಸಿಗರೇಟ್ ಮೇಲೂ ಎಚ್ಚರಿಕೆಯ ಸಂದೇಶ ಮುದ್ರಿಸಲು ಕೆನಡಾ ಸರ್ಕಾರ ನಿರ್ಧಾರ
ಕೆನಡಾದಲ್ಲಿ ಇಂದಿರಾ ಹತ್ಯೆ ಸಂಭ್ರಮಾಚರಣೆ
ಕೆನಡಾದಲ್ಲಿ ಇತ್ತೀಚೆಗೆ ಸಿಖ್ ಪ್ರತ್ಯೇಕತಾವಾದಿ (Sikh separatist) ಖಲಿಸ್ತಾನಿಗಳು ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ಸಂಭ್ರಮಾಚರಣೆ ನಡೆಸಿದ ಘಟನೆ ನಡೆದಿದೆ. ಮೆರವಣಿಗೆಯೊಂದರಲ್ಲಿ ಇಂದಿರಾ ಹತ್ಯೆಯ (Indira Gandhi Murder case) ದೃಶ್ಯದ ಸ್ತಬ್ಧಚಿತ್ರವನ್ನು ನಿರ್ಮಿಸಿ ಖಲಿಸ್ತಾನಿಗಳು ಪ್ರದರ್ಶಿಸಿದ್ದಾರೆ. ಇದು ಭಾರತ ಸರ್ಕಾರದ ಕೆಂಗಣ್ಣಿಗೆ ಕಾರಣವಾಗಿದ್ದು, ‘ಇಂಥ ಪ್ರತ್ಯೇಕತಾವಾದಿಗಳು ಹಾಗೂ ಉಗ್ರವಾದಿ ಶಕ್ತಿಗಳಿಗೆ ಕೆನಡಾ ಆಶ್ರಯ ನೀಡುತ್ತಿರುವುದು ಏಕೆ?’ ಎಂದು ಖಾರವಾಗಿ ಪ್ರಶ್ನಿಸಿದೆ.
BTS Band ಜಿಮಿನ್ ತರ ಕಾಣಲು 12 ಸರ್ಜರಿ ಮಾಡಿಸಿಕೊಂಡ ಕೆನಡಿಯನ್ ನಟ ಸಾವು
ಸಾಮಾಜಿಕ ಮಾಧ್ಯಮಗಳಲ್ಲಿವ ವಿಡಿಯೋವೊಂದು ಪ್ರತ್ಯಕ್ಷವಾಗಿದ್ದು, ಕೆನಡಾದ ಬ್ರಾಂಪ್ಟನ್ ಎಂಬಲ್ಲಿ ಇತ್ತೀಚೆಗೆ ಖಲಿಸ್ತಾನಿಗಳು 5 ಕಿ.ಮೀ.ನಷ್ಟು ಮೆರವಣಿಗೆ ನಡೆಸಿದ್ದು ಕಂಡುಬರುತ್ತದೆ. ಅದರಲ್ಲಿ ಅವರು ಇಂದಿರಾ ಗಾಂಧಿ ಹತ್ಯೆಯ ಸ್ತಬ್ಧಚಿತ್ರದ ಮೆರವಣಿಗೆ ಮಾಡಿದ್ದಾರೆ. ಸ್ತಬ್ಧಚಿತ್ರದಲ್ಲಿ ಸಿಖ್ ಗನ್ಮ್ಯಾನ್ ಒಬ್ಬಾತ, ಇಂದಿರಾ ಗಾಂಧಿ ಅವರ ಕಡೆ ಗನ್ ಹಿಡಿದು ನಿಂತಿರುವುದು ಕಂಡುಬರುತ್ತದೆ. ಸಿಖ್ ಅಂಗರಕ್ಷಕನಿಂದಲೇ ಇಂದಿರಾ ಅವರು ನಿಜಜೀವನದಲ್ಲಿ ಹತ್ಯೆ ಆಗಿದ್ದು ಇಲ್ಲಿ ಗಮನಾರ್ಹ. ಈ ಬಗ್ಗೆ ಕಿಡಿಕಾರಿರುವ ಕಾಂಗ್ರೆಸ್ ಪಕ್ಷ, ‘ಇದು ಖಂಡನಾರ್ಹ ನಡವಳಿಕೆ. ಭಾರತ ಸರ್ಕಾರವು ಇದನ್ನು ಕೆನಡಾ ಸರ್ಕಾರದ ಬಳಿ ಪ್ರಸ್ತಾಪಿಸಿ ಪ್ರತಿಭಟನೆ ಸಲ್ಲಿಸಬೇಕು. ಕ್ರಮಕ್ಕೆ ಆಗ್ರಹಿಸಬೇಕು’ ಎಂದಿದೆ.
ಭಾರತ ಆಕ್ರೋಶ:
ಈ ಬಗ್ಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್, ‘ಭಾರತ ವಿರೋಧಿ ಶಕ್ತಿಗಳಿಗೆ ಮಣೆ ಹಾಕುತ್ತಿರುವ ಕೆನಡಾ ಸರ್ಕಾರದ ಈ ನಡೆ ಖಂಡನಾರ್ಹ. ದ್ವಿಪಕ್ಷೀಯ ಸಂಬಂಧದ ದೃಷ್ಟಿಯಿಂದ ಈ ವಿದ್ಯಮಾನ ಒಳ್ಳೆಯದಲ್ಲ. ಕೆನಡಾಗೂ ಒಳ್ಳೆಯದಲ್ಲ. ಆದರೆ ಕೆನಡಾದಲ್ಲಿ ಸತತವಾಗಿ ಇಂಥ ಘಟನೆಗಳು ಪುನರಾವರ್ತನೆ ಆಗುತ್ತಿರುವ ಕಾರಣ, ಇದರ ಹಿಂದೆ ಬೇರೆ ವಿಚಾರವೇ ಇದೆ ಎಂದು ನನಗೆ ಎನ್ನಿಸುತ್ತದೆ. ಅದು ಮತ ಬ್ಯಾಂಕ್ ರಾಜಕೀಯ ಇರಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆನಡಾದಲ್ಲಿ ಮತ್ತೆ ದೇಗುಲದ ಮೇಲೆ ದಾಳಿ: ಗೋಡೆಯಲ್ಲಿ ಮೋದಿ & ಭಾರತ ವಿರೋಧಿ ಬರಹ
ಕೆನಡಾ ದೂತಾವಾಸ ಖಂಡನೆ:
ಭಾರತದಲ್ಲಿನ ಕೆನಡಾ ರಾಯಭಾರಿ ಕೆಮೆರಾನ್ ಮೆಕಾರ್ತಿ ಟ್ವೀಟ್ ಮಾಡಿ, ‘ಕೆನಡಾದಲ್ಲಿ ದ್ವೇಷದ ವೈಭವೀಕರಣಕ್ಕೆ ಅವಕಾಶವಿಲ್ಲ. ಆದರೆ ಇಂದಿರಾ ಹತ್ಯೆಯ ಸಂಭ್ರಮಾಚರಣೆ ವರದಿ ನೋಡಿ ಆಘಾತವಾಗಿದೆ. ಇದು ಖಂಡನಾರ್ಹ’ ಎಂದಿದ್ದಾರೆ.