ನಟ, ಬರಹಗಾರ ಮತ್ತು ನಿರ್ದೇಶಕ, ಆರ್ ಮಾಧವನ್ ಇತ್ತೀಚೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಹೊಸದಾಗಿ ತೆರೆಯಲಾದ ಟರ್ಮಿನಲ್‌ನಲ್ಲಿನ ಮೂಲಸೌಕರ್ಯವನ್ನು ಶ್ಲಾಘಿಸಿದ್ದಾರೆ. ಇದಕ್ಕೆ ಪ್ರಧಾನಿ ಮೋದಿ ಸಹ ಪ್ರತಿಕ್ರಿಯೆ ನೀಡಿದ್ದಾರೆ. 

ಬೆಂಗಳೂರು (ಸೆಪ್ಟೆಂಬರ್ 17, 2023): ಬೆಂಗಳೂರು ಏರ್‌ಪೋರ್ಟ್‌ನ ಟರ್ಮಿನಲ್‌ 2 ಗೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಖ್ಯಾತ ನಟ, ನಟಿಯರು ಕೂಡ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ ಸೌಂದರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ನಟಿ ಸನ್ನಿ ಲಿಯೋನ್‌ ಬೆಂಗಳೂರು ಏರ್‌ಪೋರ್ಟ್‌ ಟರ್ಮಿನಲ್ 2 ಸೌಂದರ್ಯವನ್ನು ಹಾಡಿ ಹೊಗಳಿದ್ದರು. ಈಗ ನಟ ಆರ್. ಮಾಧವನ್‌ ಸರದಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಟ, ಬರಹಗಾರ ಮತ್ತು ನಿರ್ದೇಶಕ, ಆರ್ ಮಾಧವನ್ ಇತ್ತೀಚೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಹೊಸದಾಗಿ ತೆರೆಯಲಾದ ಟರ್ಮಿನಲ್‌ನಲ್ಲಿನ ಮೂಲಸೌಕರ್ಯವನ್ನು ಶ್ಲಾಘಿಸಿದ್ದಾರೆ. ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಇದನ್ನು ಓದಿ: ಬೆಂಗಳೂರು ಏರ್‌ಪೋರ್ಟ್‌ ಹಾಡಿ ಹೊಗಳಿದ ಸನ್ನಿ ಲಿಯೋನ್‌: ಟರ್ಮಿನಲ್‌ - 2 ಅನ್ನು ಕಲಾಕೃತಿಗೆ ಹೋಲಿಸಿದ ಹಾಟ್‌ ನಟಿ!

ಈ ವಿಡಿಯೋದಲ್ಲಿ ನಟ ಐಷಾರಾಮಿ ಉದ್ಯಾನ- ಥೀಮ್‌ ಅಂತಾರಾಷ್ಟ್ರೀಯ ಟರ್ಮಿನಲ್ ಬಗ್ಗೆ ಮಾತನಾಡಿದ್ದಾರೆ ಮತ್ತು ಅದನ್ನು ಎಕ್ಸಾಟಿಕ್‌ ಎಂದು ಕರೆದಿದ್ದು, ಟರ್ಮಿನಲ್ "ಅತ್ಯುತ್ತಮ ಮೂಲಸೌಕರ್ಯ" ಹೊಂದಿದೆ ಎಂದು ಘೋಷಿಸಿದ್ದಾರೆ. "ಭಾರತದಲ್ಲಿ ಮೂಲಸೌಕರ್ಯ ಏನಾಗುತ್ತಿದೆ ಎಂಬುದು ನಂಬಲಾಗದ ಸಂಗತಿ! ನಾನು ಹೊಸ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದೇನೆ. ಮತ್ತು ನಾನು ನಿಮಗೆ ಹೇಳುತ್ತೇನೆ, ಇದು ಎಕ್ಸಾಟಿಕ್‌.. ಎಕ್ಸಾಟಿಕ್‌ ಸ್ಥಳದಂತೆ ಕಾಣುತ್ತದೆ! ಯಾರೂ ನಂಬುವುದಿಲ್ಲ! ಇದು ವಿಮಾನ ನಿಲ್ದಾಣ ಎಂದು’’ ಎಂದು ಮಾಧವನ್‌ ಹೇಳಿದ್ದಾರೆ.

View post on Instagram

"ಮತ್ತು ನೀವು ವಿಮಾನ ನಿಲ್ದಾಣದ ವಿವಿಧ ಭಾಗಗಳಲ್ಲಿ ಸೀಲಿಂಗ್‌ನಿಂದ ನೇತಾಡುತ್ತಿರುವುದನ್ನು ನೀವು ನೋಡುವ ಎಲ್ಲಾ ಸಸ್ಯಗಳು ವಾಸ್ತವವಾಗಿ ನಿಜವಾದ ಸಸ್ಯಗಳಾಗಿವೆ, ಅದಕ್ಕೆ ಪ್ರತಿದಿನ ಸೀಲಿಂಗ್‌ನಿಂದ ನೀರು ಹಾಕಲಾಗುತ್ತದೆ. ಮತ್ತು ನೀವು ಮೇಲೆ ನೋಡುವಂತೆ ಬಹಳಷ್ಟು ನಿರ್ಮಾಣಗಳಾಗಿದ್ದು, ಬಿದಿರಿನಿಂದ ಮಾಡಲಾಗಿದೆ. ಸೀಲಿಂಗ್ ಅನ್ನು ನೋಡಿ. ಮತ್ತು ಇದು ಭಾರತದಲ್ಲಿ ಸುಸ್ಥಿರತೆಯ ವಿಷಯವಾಗಿದೆ. ತುಂಬಾ ಹೆಮ್ಮೆ! ತುಂಬಾ ಚೆನ್ನಾಗಿದೆ!" ಎಂದೂ ಹೇಳಿದ್ದಾರೆ.

ಇದನ್ನೂ ಓದಿ: Bengaluru Airport: ವಿಮಾನ ಪ್ರಯಾಣಿಕನ ಬ್ಯಾಗ್‌ನಿಂದ 2 ಐಫೋನ್‌ ಕದ್ದ ಕೆಂಪೇಗೌಡ ಏರ್‌ಪೋರ್ಟ್ ಸಿಬ್ಬಂದಿ

ನಟ ತನ್ನ Instagram ಹ್ಯಾಂಡಲ್‌ನಲ್ಲಿ ಮತ್ತೊಂದು ವಿಟಿಯೋ ಹಂಚಿಕೊಂಡಿದ್ದು, ಮತ್ತು ಅವರ ಅಭಿಮಾನಿಗಳಿಗೆ ಟರ್ಮಿನಲ್‌ನ ಕಿರು ನೋಟವನ್ನು ತೋರಿಸಿದರು. "ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ... ಅತ್ಯುತ್ಕೃಷ್ಟವಾಗಿದೆ ... ಎಕ್ಸಾಟಿಕ್‌ಮತ್ತು ದಕ್ಷವಾಗಿದೆ .. ಮೂಲಸೌಕರ್ಯವು ವಿಶ್ವದ ಅತ್ಯುತ್ತಮವಾದದ್ದು. ಆದ್ದರಿಂದ ಹೆಮ್ಮೆಯಿದೆ." ಎಂದು ಶೀಷಿfಕೆಯಲ್ಲಿ ಬರೆದಿದ್ದಾರೆ. 

ಅವರ ಪೋಸ್ಟ್ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ 5 ಲಕ್ಷ 10 ಸಾವಿರಕ್ಕೂ ಹೆಚ್ಚು ಲೈಕ್‌ ಗಳಿಸಿದ್ದು ಮತ್ತು ಹಲವಾರು ಕಾಮೆಂಟ್‌ಗಳನ್ನು ಗಳಿಸಿದೆ.ಇನ್ನು, ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರಧಾನಿ ಮೋದಿ ಸಹ ಮಾಧವನ್‌ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. "ಭಾರತದ ಬೆಳವಣಿಗೆಗೆ ಮುಂದಿನ ಜನರೇಷನ್‌ನ ಮೂಲಸೌಕರ್ಯ" ಎಂದು ಪ್ರಧಾನಿ ಮೋದಿ ಬರೆದಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭಾರಿ ಭದ್ರತಾ ಲೋಪ: ಮಾನವ ದೋಷ ಎಂದು ಸಮರ್ಥಿಸಿಕೊಂಡ ಅಧಿಕಾರಿಗಳು