Asianet Suvarna News Asianet Suvarna News

RRR ಬಳಿಕ ರಾಮ್ ಚರಣ್ ಬದಲಾಗಿದ್ದಾರಾ? ಕಿಯಾರಾ ಅಡ್ವಾಣಿ ರಿಯಾಕ್ಷನ್ ಹೀಗಿದೆ

RRR ಸಿನಿಮಾ ಬಳಿಕ ರಾಮ್ ಚರಣ್ ಬದಲಾಗಿದ್ದಾರಾ ಎನ್ನುವ ಬಗ್ಗೆ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಪ್ರತಿಕ್ರಿಯೆ ನೀಡಿದ್ದಾರೆ. 

Kiara Advani about meeting Ram Charan after RRR sgk
Author
First Published Mar 12, 2023, 3:48 PM IST | Last Updated Mar 12, 2023, 3:48 PM IST

ಟಾಲಿವುಡ್ ಸ್ಟಾರ್ ರಾಮ್ ಚರಣ್ ಸದ್ಯ ಗ್ಲೋಬಲ್ ಸ್ಟಾರ್ ಆಗಿದ್ದಾರೆ. ರಾಜಮೌಳಿ ನಿರ್ದೇಶಕ ಆರ್ ಆರ್ ಆರ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ರಾಮ್ ಚರಣ್ ಸದ್ಯ ಪ್ರತಿಷ್ಠಿತ ಆಸ್ಕರ್ ನಿರೀಕ್ಷೆಯಲ್ಲಿದ್ದಾರೆ. ಆಸ್ಕರ್ ಗಾಗಿ ಈಗಾಗಲೇ ಅಮೆರಿಕಾಗೆ ಹೋಗಿರುವ ರಾಮ್ ಚರಣ್ ಅಲ್ಲಿನ ಮೀಡಿಯೋಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಗಮನ ಸೆಳೆಯುತ್ತಿದ್ದಾರೆ. ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಹೆಜ್ಜೆ ಹಾಕಿರುವ ನಾಟು ನಾಟು.. ಹಾಡು ಅತ್ಯುತ್ತಮ ಮೂಲ ಹಾಡು ವಿಭಾಗದಲ್ಲಿ ಆಸ್ಕರ್‌ಗೆ  ನಾಮನಿರ್ದೇಶನ ಮಾಗಿದೆ. ಆಸ್ಕರ್ ಸಮಾರಂಭಕ್ಕೆ ಇನ್ನೇನು ಕೆಲವೇ ಕ್ಷಣ ಬಾಕಿ ಇದೆ. 

ರಾಮ್ ಚರಣ್ ಆರ್ ಆರ್ ಆರ್ ಬಳಿಕ ಮತ್ತೊಂದು ಬಹುನಿರೀಕ್ಷೆಯ ಪ್ಯಾನ್ ಇಂಡಿಯಾದಲ್ಲಿ ಬ್ಯುಸಿಯಾಗಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಇನ್ನು ಹೆಸರಿಡದ RC15 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಾಮ್ ಚರಣ್‌ಗೆ ನಾಯಕಿಯಾಗಿ ಬಾಲಿವುಡ್ ಸ್ಟಾರ್ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಕಿಯಾರಾಗೆ ಇದುಮೊದಲ ಸೌತ್ ಸಿನಿಮಾವಲ್ಲ. ಈ ಮೊದಲು ಸಹ ನಟಿಸಿದ್ದಾರೆ. 2019ರಲ್ಲಿ ತೆರೆಕಂಡ ತೆಲುಗಿನ ವಿದೇಯ ವಿನಯ ರಾಮ ಸಿನಿಮಾದಲ್ಲಿ ರಾಮ್​ ಚರಣ್​ ಜೊತೆ ಕಿಯಾರಾ ಅಡ್ವಾಣಿ ನಟಿಸಿದ್ದರು. ಇದೀಗ ಮತ್ತೆ ಒಟ್ಟಿಗೆ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಇಬ್ಬರ ನಡುವೆ ಉತ್ತಮ ಸ್ನೇಹ ಬಾಂಧವ್ಯವಿದೆ. 

ಆಸ್ಕರ್​ ಟ್ರೋಫಿ ಚಿನ್ನದ್ದಾ? ಮಾರಿದ್ರೆ ಎಷ್ಟು ಸಿಗುತ್ತೆ? ಇಂಟರೆಸ್ಟಿಂಗ್​ ವಿಚಾರ ಇಲ್ಲಿದೆ ನೋಡಿ!

ಈ ಸಿನಿಮಾದ ಬಗ್ಗೆ ಮತ್ತು ರಾಮ್ ಚರಣ್ ಬಗ್ಗೆ ನಟಿ ಕಿಯಾರಾ ಅಡ್ವಾನಿ ಪ್ರತಿಕ್ರಿಯೆ ನೀಡಿದ್ದಾರೆ. ರಾಮ್ ಚರಣ್ ಜೊತೆ ಕೆಲಸ ಮಾಡುವುದು ಅದ್ಭುತ ಅನುಭವ ಎಂದು ಹೇಳಿದ್ದಾರೆ. 'ರಾಮ್  ಜೊತೆ ಕೆಲಸ ಮಾಡುವುದು ಯಾವಾಗಲೂ ಸುಂದರವಾದ ಅನುಭವಾಗಿದೆ. ಅದ್ಭುತ ನಟ ಮತ್ತು ಡಾನ್ಸರ್' ಎಂದು ಹೇಳಿದರು. ಬಳಿಕ ಆರ್ ಆರ್ ಆರ್ ಸಿನಿಮಾ ಬಳಿಕ ರಾಮ್ ಚರಣ್ ಬದಲಾಗಿದ್ದಾರಾ ಎನ್ನುವ ಬಗ್ಗೆಯೂ ಮಾತನಾಡಿದರು. 'ನಾನು ಅವರನ್ನು ಆರ್ ಆರ್ ಆರ್ ನಂತರ ಭೇಟಿಯಾದೆ. ಆರ್ ಆರ್ ಆರ್ ಸಿನಿಮಾ ರಿಲೀಸ್ ಆದ ಬಳಿಕ ಶೂಟಿಂಗ್ ನಲ್ಲಿ ಇಬ್ಬರೂ ಭಾಗಿಯಾದೆವು. ರಾಮ್ ಚರಣ್ ಹಾಗೆ ಇದ್ದಾರೆ, ಬದಲಾಗಿಲ್ಲ. ವಿನಮ್ರ ಮತ್ತು ಅದ್ಭತ ವ್ಯಕ್ತಿ. ಹಾಗಾಗಿ ಇವತ್ತು ಅವರು ಸ್ಟಾರ್ ಆಗಿದ್ದಾರೆ' ಎಂದು ಹೇಳಿದರು.  

ಆಸ್ಕರ್‌ಗಾಗಿ ಇಷ್ಟೊಂದು ಹಣ ಖರ್ಚು ಮಾಡಿದ್ರಾ ರಾಜಮೌಳಿ, ಗೆದ್ದರೆ ಎಷ್ಟು ಸಿಗುತ್ತೆ?

ಕಿಯಾರಾ ಮತ್ತು ಸಿದ್ಧಾರ್ಥ್ ಮದುವೆಗೆ ಭೇಟಿ ನೀಡಲು ಸಾಧ್ಯವಾಗಿಲ್ಲ ಎಂದು ರಾಮ್ ಚರಣ್ ಮತ್ತು ಉಪಾಸನಾ ಕ್ಷಮೆ ಕೇಳಿ ಪತ್ರ ಬರೆದಿದ್ದರು. ರಾಮ್ ದಂಪತಿಯ ಪತ್ರ ವೈರಲ್ ಆಗಿತ್ತು. ಕಿಯಾರಾ ಮದುವೆ ಬಳಿಕವೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸದ್ಯ ಕಾರ್ತಿಕ್ ಆರ್ಯನ್ ಜೊತೆ ಸತ್ಯ ಪ್ರೇಮ್ ಕಿ ಕತಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಜೂನ್ ತಿಂಗಳಲ್ಲಿ ರಿಲೀಸ್ ಆಗುತ್ತಿದೆ. ಕಿರಾಯಾ ಕೊನೆಯದಾಗಿ ವಿಕ್ಕಿ ಕೌಶಲ್ ಜೊತೆ ಗೋವಿಂದಾ ನಾಮ್ ಮೇರಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. 

Latest Videos
Follow Us:
Download App:
  • android
  • ios