ದಳಪತಿ ವಿಜಯ್ ಬಳಿ ಮುಸ್ಲಿಮರು ಹೋಗುವಂತಿಲ್ಲ- ಹೊರಟಿತು ಹೀಗೊಂದು ಫತ್ವಾ...

Synopsis
ಕಾಲಿವುಡ್ ನಟ ದಳಪತಿ ವಿಜಯ್ ಅವರ ವಿರುದ್ಧ ಮುಸ್ಲಿಮರು ತಿರುಗಿ ಬಿದ್ದಿದ್ದಾರೆ. ಅವರ ವಿರುದ್ಧ ಫತ್ವಾ ಹೊರಡಿಸಿದ್ದಾರೆ ಧರ್ಮಗುರು. ಆಗಿದ್ದೇನು?
ಖ್ಯಾತ ನಟ ಹಾಗೂ ರಾಜಕಾರಣಿ ದಳಪತಿ ವಿಜಯ್ ವಿರುದ್ಧ ಫತ್ವಾ ಜಾರಿಯಾಗಿದೆ. ಉತ್ತರ ಪ್ರದೇಶದ ಬರೇಲ್ವಿ ಧರ್ಮಗುರು, ಅಖಿಲ ಭಾರತ ಮುಸ್ಲಿಂ ಜಮಾತ್ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ, ಅವರು ನಟನ ವಿರುದ್ಧ ಫತ್ವಾ ಹೊರಡಿಸಿದ್ದಾರೆ. ದಳಪತಿ ವಿಜಯ್ ಅವರು ಮುಸ್ಲಿಮರ ವಿರೋಧಿ ಆಗಿದ್ದು, ತಮಿಳುನಾಡಿನ ಮುಸ್ಲಿಮರು ಇವರಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಮೌಲಾನಾ ಸೂಚಿಸಿದ್ದಾರೆ. ಅಷ್ಟಕ್ಕು ಆಗಿದ್ದೇನೆಂದರೆ, ದಳಪತಿ ವಿಜಯ್ (Thalapathy Vijay) ಅವರು ರಂಜಾನ್ ಹಬ್ಬದ ಸಂದರ್ಭದಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದರು. ಈ ಸಮಯದಲ್ಲಿ ಅವರು ಮುಂಜಾನೆಯಿಂದ ಉಪವಾಸ ಇದ್ದು, ರಾತ್ರಿ ಊಟ ಸೇವನೆ ಮಾಡಿದ್ದರು. ಅವರು ಆಯೋಜಿಸಿದ್ದ ಇಫ್ತಾರ್ ಕೂಟದ ಫೋಟೋಗಳು ವೈರಲ್ ಆಗಿದ್ದವು. ಇದೇ ಧರ್ಮಗುರು ವಿರೋಧಕ್ಕೆ ಕಾರಣವಾಗಿದೆ.
ಹಾಗೆಂದು, ಇಫ್ತಾರ್ ಕೂಟ ಆಯೋಜಿಸಿದ್ದು ಇದಕ್ಕೆ ಕಾರಣವಲ್ಲ, ಬದಲಿಗೆ ರೋಜಾ ಇಫ್ತಾರ್ ಸಮಯದಲ್ಲಿ ಕುಡುಕರು, ಜೂಜುಕೋರರು ಮತ್ತು ಸಮಾಜ ವಿರೋಧಿಗಳನ್ನು ಆಹ್ವಾನಿಸಿದ್ದಾರೆ ನಟ ಎನ್ನುವುದು ಕಾರಣವಾಗಿದೆ. ಇಂಥ ಜನರನ್ನು ಆಹ್ವಾನಿಸುವುದು ಕಾನೂನುಬಾಹಿರ ಮತ್ತು ಪಾಪಕರ ಕೃತ್ಯ. ಫತ್ವಾದಲ್ಲಿ ಮೌಲಾನಾ ತಮಿಳುನಾಡಿನ ಮುಸ್ಲಿಮರೇ ಅಂತಹ ವ್ಯಕ್ತಿಯನ್ನು ನಂಬಬೇಡಿ ಮತ್ತು ಅವರನ್ನು ತಮ್ಮ ಕಾರ್ಯಕ್ರಮಗಳಿಗೂ ಆಹ್ವಾನಿಸಬೇಡಿ ಎಂದು ಧರ್ಮಗುರು ಹೇಳಿದ್ದಾರೆ.
ಪ್ಯಾರೀಸ್ನಲ್ಲಿ ಶಿವಣ್ಣಗೆ ಬ್ರೈನ್ ಸರ್ಜರಿ, ಹಾರ್ಟ್ಗೆ ಸ್ಟೆಂಟ್! ಶಾಕಿಂಗ್ ವಿಷ್ಯ ರಿವೀಲ್..
ತಮಿಳಗ ವೆಟ್ರಿ ಕಳಗಂ (ಟಿವಿಕೆ) ಹೆಸರಿನ ಪಕ್ಷವನ್ನು ವಿಜಯ್ ಆರಂಭಿಸಿದ್ದಾರೆ. ಈ ಕಾರಣಕ್ಕೆ ಅವರು ಸಮಾಜದ ಜೊತೆ ಬೆರೆಯುವ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಈ ಕೂಟ ಆಯೋಜಿಸಿದ್ದರು. ಆದರೆ ಅದು ಉಲ್ಟಾ ಹೊಡೆದಿದೆ. ದಳಪತಿ ವಿಜಯ್ ಮುಸ್ಲಿಂ ವಿರೋಧಿ ಎಂದು ಫತ್ವಾದಲ್ಲಿ ಹೇಳಲಾಗಿದೆ. ನಟನ ಹಿನ್ನೆಲೆ ಮತ್ತು ಇತಿಹಾಸ ಕೂಡ ಇಸ್ಲಾಂ ವಿರೋಧಿಯಾಗಿದೆ ಎಂದು ಅದರಲ್ಲಿ ತಿಳಿಸಲಾಗಿದೆ. ವಿಜಯ್ ಅವರು ಚಲನಚಿತ್ರ ಪ್ರಪಂಚದಿಂದ ರಾಜಕೀಯಕ್ಕೆ ಪ್ರವೇಶಿಸಲು ಮುಸ್ಲಿಂ ಭಾವನೆಗಳನ್ನು ಬಳಸುತ್ತಿದ್ದಾರೆ. ಆದರೆ ಅವರ ಇತಿಹಾಸವು ಮುಸ್ಲಿಂ ವಿರೋಧಿ ಭಾವನೆಗಳಿಂದ ತುಂಬಿದೆ ಎಂದು ಬರೇಲ್ವಿ ಮೌಲಾನಾ ತಿಳಿಸಿದ್ದಾರೆ.
ಈ ಹಿಂದೆ ವಿಜಯ್ ಅವರು 'ದಿ ಬೀಸ್ಟ್' ಚಿತ್ರದಲ್ಲಿ ನಟಿಸಿದ್ದರು. ಅದು ಕೂಡ ಮುಸ್ಲಿಮರ ವಿರೋಧಿಯಾಗಿದೆ. ಮತ್ತು ಇಡೀ ಮುಸ್ಲಿಂ ಸಮುದಾಯವನ್ನು ಭಯೋತ್ಪಾದನೆ ಮತ್ತು ಉಗ್ರವಾದದೊಂದಿಗೆ ಜೋಡಿಸಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಮುಸ್ಲಿಮರನ್ನು ಕೆಟ್ಟದಾಗಿ ತೋರಿಸಲು ಪ್ರಯತ್ನಿಸಿದ್ದಾರೆ ಎನ್ನುವುದು ಆಕ್ರೋಶಕ್ಕೆ ಕಾರಣವಾಗಿದೆ. ಆದರೆ, ಈಗ ಅವರು ರಾಜಕೀಯಕ್ಕೆ ಬಂದಿರುವ ಕಾರಣ, ಮುಸ್ಲಿಂ ಮತಗಳು ಬೇಕಾಗಿರುವುದರಿಂದ ಈಗ ಮುಸ್ಲಿಂ ತುಷ್ಟೀಕರಣವನ್ನು ಮಾಡುತ್ತಿದ್ದಾರೆ. ಇದಲ್ಲದೆ, ಅವರು ಇಸ್ಲಾಂ ಮತ್ತು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿರುವ ಚಲನಚಿತ್ರಗಳನ್ನು ಸಹ ಮಾಡಿದ್ದಾರೆ ಎಂದು ಧರ್ಮಗುರು ಹೇಳಿದ್ದಾರೆ. ಇಫ್ತಾರ್ ಮತ್ತು ರಂಜಾನ್ನ ಪಾವಿತ್ರ್ಯವನ್ನು ನಿರ್ಲಕ್ಷಿಸಿದ್ದಾರೆ. ಇಸ್ಲಾಂನ ತತ್ವಗಳಿಗೆ ವಿರುದ್ಧವಾಗಿ ಕೆಲಸ ಮಾಡುವ ಜನರನ್ನು ಇಫ್ತಾರ್ಗೆ ಆಹ್ವಾನಿಸಲಾಗಿದೆ ಎಂದಿದ್ದಾರೆ. ಅವರು ಉಪವಾಸ ಆಚರಿಸುತ್ತಿರಲಿಲ್ಲ ಅಥವಾ ಇಸ್ಲಾಮಿಕ್ ಪದ್ಧತಿಗಳನ್ನು ಅನುಸರಿಸುತ್ತಿರಲಿಲ್ಲ. ಈ ವಿಷಯಕ್ಕಾಗಿ ತಮಿಳುನಾಡಿನ ಸುನ್ನಿ ಮುಸ್ಲಿಮರು ಅವರ ವಿರುದ್ಧ ಪೊಲೀಸ್ ದೂರು ಕೂಡ ದಾಖಲಿಸಿದ್ದರು.
ಒಂದೇ ಮಂಟಪದಲ್ಲಿ ಹಿಂದೂ- ಮುಸ್ಲಿಂ ಸ್ನೇಹಿತರ ಮದ್ವೆ: ಎಲ್ಲರ ಗಮನ ಸೆಳೀತಿದೆ ವಿಶೇಷ ಆಹ್ವಾನ ಪತ್ರಿಕೆ...