ರಣವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿರುವ ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಆರ್. ಮಾಧವನ್, ಸಂಜಯ್ ದತ್, ಅರ್ಜುನ್ ರಾಂಪಾಲ್, ರಾಕೇಶ್ ಬೇಡಿ ಮತ್ತು ಸಾರಾ ಅರ್ಜುನ್ ಅವರಂತಹ ಪ್ರತಿಭಾವಂತ ನಟರು ನಟಿಸಿದ್ದಾರೆ. ಜಿಯೋ ಸ್ಟುಡಿಯೋಸ್ ಮತ್ತು B62 ಸ್ಟುಡಿಯೋಸ್ ನಿರ್ಮಿಸಿರುವ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುವ ನಿರೀಕ್ಷೆಯಿದೆ.

ಧುರಂಧರ್ 2 ಬಿಡುಗಡೆ ಆಯ್ತು

Add Asianetnews Kannada as a Preferred SourcegooglePreferred

ಮುಂಬೈ: ಬಾಲಿವುಡ್‌ನ ಸ್ಟಾರ್ ನಿರ್ದೇಶಕ ಆದಿತ್ಯ ಧರ್ ಸಾರಥ್ಯದಲ್ಲಿ ಮೂಡಿಬಂದಿರುವ 'ಧುರಂಧರ್: ದಿ ರಿವೇಂಜ್' (Dhurandhar: The Revenge) ಸಿನಿಮಾ ಕೊನೆಗೂ ಬೆಳ್ಳಿ ಪರದೆಯ ಮೇಲೆ ಅಬ್ಬರಿಸಲು ಸಜ್ಜಾಗಿದೆ. ರಣವೀರ್ ಸಿಂಗ್ (Ranveer Singh) ಸೇರಿದಂತೆ ಘಟಾನುಘಟಿ ಕಲಾವಿದರ ದಂಡೇ ಇರುವ ಈ ಚಿತ್ರವು ಆರಂಭದಲ್ಲಿಯೇ ಹಲವು ಏರಿಳಿತಗಳನ್ನು ಕಂಡಿದೆ. ಬಿಡುಗಡೆಯ ಮೊದಲ ದಿನವೇ ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದರೂ, ಸಿನಿಮಾದ ಬಗ್ಗೆ ಕೇಳಿಬರುತ್ತಿರುವ ಮೆಚ್ಚುಗೆಯ ಮಾತುಗಳು ಚಿತ್ರತಂಡದಲ್ಲಿ ಹೊಸ ಭರವಸೆ ಮೂಡಿಸಿವೆ.

ಅರ್ಜುನ್ ರಾಂಪಾಲ್ ಭಾವನಾತ್ಮಕ ಪೋಸ್ಟ್:

ಈ ಸಿನಿಮಾದಲ್ಲಿ ನಟ ಅರ್ಜುನ್ ರಾಂಪಾಲ್ (Arjun Rampal) ಅವರು 'ಇಕ್ಬಾಲ್' ಎಂಬ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಬಿಡುಗಡೆಯ ಬೆನ್ನಲ್ಲೇ ಅವರ ಪ್ರೇಯಸಿ ಗೇಬ್ರಿಯೆಲಾ ಡೆಮೆಟ್ರಿಯಾಡ್ಸ್ (Gabriella Demetriades) ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರದ ಬಗ್ಗೆ ಮತ್ತು ಅರ್ಜುನ್ ಅಭಿನಯದ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. "ಧುರಂಧರ್ ಸಿನಿಮಾ ನೋಡಿದೆ, ಇದು ನನ್ನ ಸಾರ್ವಕಾಲಿಕ ನೆಚ್ಚಿನ ಹಿಂದಿ ಚಿತ್ರ ಎಂದು ಹೇಳಲು ಹೆಮ್ಮೆಯಾಗುತ್ತದೆ. ಅರ್ಜುನ್ ನಿನ್ನ ತಾಳ್ಮೆ ಮತ್ತು ಸತತ ಪ್ರಯತ್ನ ನಮಗೆಲ್ಲಾ ಸ್ಫೂರ್ತಿ. ನಿರ್ದೇಶಕ ಆದಿತ್ಯ ಧರ್ ಮತ್ತು ರಣವೀರ್ ಸಿಂಗ್ ಅವರ ಕೆಲಸ ಅದ್ಭುತವಾಗಿದೆ" ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಅಷ್ಟೇ ಪ್ರೀತಿಯಿಂದ ಪ್ರತಿಕ್ರಿಯಿಸಿರುವ ಅರ್ಜುನ್ ರಾಂಪಾಲ್, "ಲವ್ ಯು... ಈ ಸಿನಿಮಾಕ್ಕಾಗಿ ಮತ್ತು ಇಕ್ಬಾಲ್ ಪಾತ್ರಕ್ಕಾಗಿ ನಾನು ಸಿದ್ಧತೆ ನಡೆಸುವಾಗ ನೀನು ತೋರಿದ ಬೆಂಬಲ ಮತ್ತು ತಾಳ್ಮೆಗೆ ನಿನಗೊಂದು ಮೆಡಲ್ ನೀಡಬೇಕು" ಎಂದು ಧನ್ಯವಾದ ಅರ್ಪಿಸಿದ್ದಾರೆ. ಈ ಜೋಡಿಯ ಸೋಷಿಯಲ್ ಮೀಡಿಯಾ ಸಂಭಾಷಣೆ ಈಗ ಸಿನಿರಂಗದಲ್ಲಿ ಸಖತ್ ವೈರಲ್ ಆಗುತ್ತಿದೆ.

ತಾಂತ್ರಿಕ ವಿಘ್ನ ಮತ್ತು ನಿರ್ದೇಶಕರ ಕ್ಷಮೆಯಾಚನೆ:

ದುರದೃಷ್ಟವಶಾತ್, ಮಾರ್ಚ್ 19 ರಂದು ಸಿನಿಮಾ ಅಧಿಕೃತವಾಗಿ ಬಿಡುಗಡೆಯಾದಾಗ ಹಲವು ನಗರಗಳಲ್ಲಿ ಪ್ರದರ್ಶನಗಳು ರದ್ದಾದವು ಅಥವಾ ವಿಳಂಬವಾದವು. ಇದು ಸಿನಿಮಾ ಪ್ರೇಮಿಗಳಲ್ಲಿ ತುಸು ಅಸಮಾಧಾನ ಮೂಡಿಸಿತು. ಈ ಕುರಿತು ತಕ್ಷಣ ಪ್ರತಿಕ್ರಿಯಿಸಿದ ನಿರ್ದೇಶಕ ಆದಿತ್ಯ ಧರ್, 'X' (ಟ್ವಿಟರ್) ಮೂಲಕ ಪ್ರೇಕ್ಷಕರ ಕ್ಷಮೆ ಕೇಳಿದ್ದಾರೆ. "ತಾಂತ್ರಿಕ ಕಾರಣಗಳಿಂದಾಗಿ ಕನ್ನಡ ಮತ್ತು ಮಲಯಾಳಂ ಭಾಷೆಯ ಪ್ರದರ್ಶನಗಳು ನಾಳೆ ಬೆಳಿಗ್ಗೆಯಿಂದ ಪ್ರಾರಂಭವಾಗಲಿವೆ. ಹಿಂದಿ ಪ್ರದರ್ಶನಗಳು ಸಕಾಲಕ್ಕೆ ಆರಂಭವಾಗಲಿವೆ. ನಿಮ್ಮ ಪ್ರೀತಿ ಮತ್ತು ಸಹಕಾರ ನಮಗೆ ಮುಖ್ಯ" ಎಂದು ಅವರು ತಿಳಿಸಿದ್ದಾರೆ.

ತಾರಾಗಣದ ಮೆರುಗು:

ರಣವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿರುವ ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಆರ್. ಮಾಧವನ್, ಸಂಜಯ್ ದತ್, ಅರ್ಜುನ್ ರಾಂಪಾಲ್, ರಾಕೇಶ್ ಬೇಡಿ ಮತ್ತು ಸಾರಾ ಅರ್ಜುನ್ ಅವರಂತಹ ಪ್ರತಿಭಾವಂತ ನಟರು ನಟಿಸಿದ್ದಾರೆ. ಜಿಯೋ ಸ್ಟುಡಿಯೋಸ್ ಮತ್ತು B62 ಸ್ಟುಡಿಯೋಸ್ ನಿರ್ಮಿಸಿರುವ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುವ ನಿರೀಕ್ಷೆಯಿದೆ. ತಾಂತ್ರಿಕ ಸಮಸ್ಯೆಗಳ ನಡುವೆಯೂ ಸಿನಿಮಾ ಪ್ರೇಮಿಗಳು ಮಾತ್ರ ನೆಚ್ಚಿನ ನಟರ ದರ್ಶನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

View post on Instagram