Asianet Suvarna News Asianet Suvarna News

ಸಸ್ಯಾಹಾರಿ ಪತ್ರಕರ್ತೆಗೆ ಮಾಂಸ ತಿನ್ನಿಸಿದ್ರಾ ಆಲಿಯಾ! ರಾಮನ ಪಾತ್ರಕ್ಕೆ ರಣಬೀರ್ ಮದ್ಯ ಬಿಟ್ಟಿದ್ದು ಸುಳ್ಳಾ?

ರಾಮಾಯಣಕ್ಕಾಗಿ ಮಾಂಸಹಾರ, ಮದ್ಯ ಬಿಟ್ಟಿದ್ದೇನೆ ಎಂದ ರಣಬೀರ್​ ಕೈಯಲ್ಲಿ ಗ್ಲಾಸ್ ಕಾಣಿಸಿಕೊಂಡಿದೆ​, ಇದೇ ವೇಳೆ ಸಸ್ಯಾಹಾರಿಯೊಬ್ಬರಿಗೆ ಮಾಂಸ ತಿನ್ನಿಸಿದ್ದಾರೆ ಆಲಿಯಾ! ಏನಪ್ಪಾ ಈ ದಂಪತಿ ಕಥೆ?
 

Alia Bhatts old video of feeding chicken to a  vegetarian host goes viral  fans are furious suc
Author
First Published Jun 15, 2024, 2:55 PM IST

 ನಿತೀಶ್ ತಿವಾರಿ ಅವರು ರಾಮಾಯಾಣವನ್ನು ಮೂರು ಭಾಗದಲ್ಲಿ ತೆರೆಮೇಲೆ ತರುತ್ತಿದ್ದಾರೆ.   ರಾಮನಾಗಿ ಮಿಂಚಲಿರುವ ರಣಬೀರ್​ ಕಪೂರ್​ ಮದ್ಯ, ಮಾಂಸಾಹಾರ ಸೇವನೆಯನ್ನು ಬಿಟ್ಟಿರುವುದಾಗಿ ಘೋಷಿಸಿದ್ದರು. ಇವರು  ರಾಮನ ಪಾತ್ರ ಮಾಡುತ್ತಿರುವ ಬಗ್ಗೆ ಅದರಲ್ಲಿಯೂ ಅನಿಮಲ್​ ಚಿತ್ರದ ಸಾಕಷ್ಟು ವಿವಾದದ ಬಳಿಕ ರಾಮನಾಗಿ ಇವರು ಕಾಣಿಸಿಕೊಳ್ತಿರೋ ಬಗ್ಗೆ ಸಾಕಷ್ಟು ಅಪಸ್ವರ ಕೇಳಿ ಬಂದ ಬೆನ್ನಲ್ಲೇ ಇದನ್ನು ಅವರು ಘೋಷಿಸಿದ್ದರು. ನಟಿ, ಸಂಸದೆ ಕಂಗನಾ ರಣಾವತ್​ ಕೂಡ ರಣಬೀರ್​ ಅವರ ಈ ಪಾತ್ರದ ಬಗ್ಗೆ ಟೀಕಿಸಿದ್ದರು. ಆ ಬಳಿಕ ಘೋಷಣೆ ಮಾಡಿದ್ದ ರಣಬೀರ್​ ಅವರು, ರಾಮಾಯಣದ ಶೂಟಿಂಗ್ ಮುಗಿಯುವವರೆಗೂ ತಾವು ಮದ್ಯ ಮತ್ತು ಮಾಂಸ ಸೇವನೆ ಮಾಡುವುದಿಲ್ಲ ಎಂದಿದ್ದರು. ಆದರೆ ಈಚೆಗೆ ನಡೆದ  ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭದಲ್ಲಿ ಕೈಯಲ್ಲಿ ಗ್ಲಾಸ್​ ಹಿಡಿದಿರುವ ಫೋಟೋಗಳು ವೈರಲ್​ ಆಗಿದ್ದವು. ಜೊತೆಗೆ ನಾನ್​ವೆಜ್​ ಕೂಡ ಇರುವುದಾಗಿ ಹೇಳಲಾಗುತ್ತಿದ್ದು, ಇದರ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ನಟನ ಬಗ್ಗೆ ಇನ್ನಿಲ್ಲದಂತೆ ಹಲವರು ಕಿಡಿ ಕಾರುತ್ತಿದ್ದಾರೆ.

ಇದರ ಮಧ್ಯೆಯೇ, ರಣಬೀರ್​ ಪತ್ನಿ, ನಟಿ ಆಲಿಯಾ ಭಟ್​ ವಿಷಯ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಇವರ ವಿಡಿಯೋ ಒಂದು ವೈರಲ್​ ಆಗಿದೆ. ಅದರಲ್ಲಿ ತಮ್ಮನ್ನು ಸಂದರ್ಶಿಸಲು ಬಂದಿದ್ದ ಸಸ್ಯಾಹಾರ ಪತ್ರಕರ್ತೆಗೆ ಆಲಿಯಾ ಭಟ್​ ಚಿಕನ್​ ತಿನ್ನಿಸಿರುವ ವಿಡಿಯೋ ಇದಾಗಿದೆ. ತನ್ನ ಸಂದರ್ಶನಕ್ಕೆ ಬಂದಿರುವ ಪತ್ರಕರ್ತೆ ಪ್ರಶ್ನೆಗೆ ಉತ್ತರಿಸುತ್ತಿದ್ದ ಆಲಿಯಾ ಕೈಯಲ್ಲಿ ಚಿಕನ್​ನಿಂದ ಮಾಡಿದ ಖಾದ್ಯವನ್ನು ಹಿಡಿದಿರುವುದನ್ನು ನೋಡಬಹುದು. ನಂತರ ಅದನ್ನು ಆಕೆ, ಪತ್ರಕರ್ತೆಗೆ ತಿನ್ನಿಸಿದ್ದಾರೆ. ಅದನ್ನು ತಿಂದ ಬಳಿಕ ಇದು ವೆಜ್​ ಅಥ್ವಾ ನಾನ್​ ವೆಜ್​ ಎಂದು ಪತ್ರಕರ್ತೆ ಕೇಳಿದ್ದಾರೆ. ಇದು ಚಿಕನ್​ ಎಂದಾಗ ಪತ್ರಕರ್ತೆ ಮುಖವನ್ನು ಒಂದು ರೀತಿ ಮಾಡಿದ್ದಾರೆ. ಆಗ ಆಲಿಯಾ ನೀವು ವೆಜಿಟೇರಿಯನ್ನಾ ಕೇಳಿದ್ದಾರೆ. ಅದಕ್ಕೆ ಆಕೆ ಹೌದು ಎಂದಿದ್ದಾರೆ. ಇದರ ಹೊರತಾಗಿಯೂ ಆಲಿಯಾ ಮುಖದಲ್ಲಿ ಯಾವುದೇ ಪಶ್ಚಾತ್ತಾಪ ಇರದೇ ಇರುವುದನ್ನು ವಿಡಿಯೋದಲ್ಲಿ ನೋಡಬಹುದು.

ಬೆತ್ತಲಾದರೂ ಬರಲ್ಲ ಇಷ್ಟು ಡಿಮಾಂಡ್​! ಆಲಿಯಾ ಫುಲ್​ಡ್ರೆಸ್​ ಡೀಪ್​ಫೇಕ್​ ವಿಡಿಯೋಗೆ 2 ಕೋಟಿ ವೀಕ್ಷಣೆ

ಈ ವಿಡಿಯೋ ಇದೀಗ ಭಾರಿ ವೈರಲ್​ ಆಗಿದ್ದು, ರಣಬೀರ್​ ಮತ್ತು ಆಲಿಯಾ ದಂಪತಿ ವಿರುದ್ಧ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. ನನಗೇನಾದರೂ ಈ ರೀತಿ ಕೊಟ್ಟಿದ್ದರೆ ಆಕೆಯ ಮುಖದ ಮೇಲೆ ಅದನ್ನು ಉಗಿಯುತ್ತಿದ್ದೆ ಎಂದು ಕೆಲವು ಬಳಕೆದಾರರು ಬರೆದಿದ್ದರೆ, ಆ ಪತ್ರಕರ್ತೆಗೆ ವಾಸನೆ ನೋಡಿಯೂ ತಿಳಿಯಲಿಲ್ಲವೆ, ಅಷ್ಟೂ ಗೊತ್ತಾಗಲಿಲ್ಲವೇ ಎಂದು ಪತ್ರಕರ್ತೆಯ ವಿರುದ್ಧ ಇನ್ನು ಕೆಲವರು ಕಮೆಂಟ್​ ಮಾಡಿದ್ದಾರೆ. ನಿಮಗೆ  ಯಾರಾದರೂ ಏನಾದರೂ ತಿನ್ನಿಸಲು ಬಂದಾಗ ಅದು ಏನು ಎಂದು ಯಾರಾದರೂ ಕೇಳ್ತಾರೆ, ಇದರಲ್ಲಿ ನಟಿಯ ತಪ್ಪೇನಿದೆ ಎಂದು ನಟಿಯ ಫ್ಯಾನ್ಸ್​ ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ತಿನ್ನಿಸುವ ಮೊದಲು ಅದು ಏನು ಎಂದು ಹೇಳಿ ಕೊಡಬೇಕಿತ್ತು. ನಟಿಯದ್ದು ಅತಿಯಾಯಿತು ಎಂದು ಆಲಿಯಾ ಭಟ್​ ವಿರುದ್ಧ ಕಿಡಿ ಕಾರುತ್ತಿದ್ದಾರೆ.
 
ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಪತಿ-ಪತ್ನಿಯ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಪತಿ ಸುಳ್ಳುಗಾರನಾದರೆ, ಆಲಿಯಾ ಭಟ್​ ಕಂತ್ರಿ ಬುದ್ಧಿ ತೋರಿದ್ದಾಳೆ ಎಂದು ಹಲವರು ಟೀಕಿಸುತ್ತಿದ್ದಾರೆ. ರಣಬೀರ್​ ತಾವು ರಾಮಾಯಣ ಶೂಟಿಂಗ್​ ಮುಗಿಯುವವರೆಗೂ ಮದ್ಯ, ಮಾಂಸ ಮುಟ್ಟುವುದಿಲ್ಲ ಎಂದಾಗ, ಅವರ ಈ ಹೇಳಿಕೆ ಸ್ಟಂಟ್​ಗಾಗಿ, ಪಬ್ಲಿಸಿಟಿಗಾಗಿ ಎಂದು ಟ್ರೋಲ್​ ಮಾಡಲಾಗಿತ್ತು. ಆದರೆ  ಯಾರು ಏನೇ ಹೇಳಿದರೂ ತಾವು ತಮ್ಮ ಮಾತಿಗೆ ಬದ್ಧ ಎಂದಿದ್ದರು ರಣಬೀರ್​.

ಅವ್ರು ಮಲಗಲು ರೆಡಿ ಇದ್ರೆ ತಾನೇ ಇವ್ರೂ ಮುಂದಾಗೋದು! ಕಾಸ್ಟಿಂಗ್ ಕೌಚ್​ ಅನ್ನೋರಿಗೆ ನಟಿ ಲಕ್ಷ್ಮಿ ತಿರುಗೇಟು 

 
 
 
 
 
 
 
 
 
 
 
 
 
 
 

A post shared by Rani.♡🧚 (@ranigossips)

Latest Videos
Follow Us:
Download App:
  • android
  • ios