Asianet Suvarna News Asianet Suvarna News

ಅಂದು ಶಿವಣ್ಣ ಫೋನ್ ಮಾಡಿ ಹೇಳಿದ್ದೇನು? DKD ವೇದಿಕೆಯಲ್ಲಿ ಕಣ್ಣೀರಿಟ್ಟ ನಟಿ ಛಾಯ ಸಿಂಗ್

ಅಂದು ಶಿವಣ್ಣ ಫೋನ್ ಮಾಡಿ ಹೇಳಿದ್ದೇನು? DKD ವೇದಿಕೆಯಲ್ಲಿ ನಟಿ ಛಾಯ ಸಿಂಗ್  ಕಣ್ಣೀರಿಟ್ಟಿದ್ದಾರೆ. 

Actress Chaya Singh gets emotional on Shivaraj kumar words sgk
Author
First Published May 28, 2023, 11:35 AM IST

ಖ್ಯಾತ ನಟಿ ಛಾಯಾ ಸಿಂಗ್ ಮತ್ತೆ ಬಣ್ಣದ ಲೋಕಕ್ಕೆ ಪಾವಾಸ್ ಆಗಿದ್ದಾರೆ. ಗ್ಯಾಪ್‌ನ ಬಳಿಕ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಛಾಯಾ ಸಿಂಗ್ ಇದೀಗ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಅನೇಕ ವರ್ಷಗಳ ಬಳಿಕ ಛಾಯಾ ಸಿಂಗ್ ಜೀ ಕನ್ನಡ ವಾಹಿನಿಗೆ ಮರಳಿದ್ದು ಅಮೃತಧಾರೆ ಧಾರಾವಾಹಿ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಅಮೃತಧಾರೆ ಧಾರಾವಾಹಿ ಪ್ರಮೋಷನ್ ವಿಚಾರವಾಗಿ ಛಾಯಾ ಸಿಂಗ್ ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದರು. ಛಾಯಾ ಸಿಂಗ್ ಜೊತೆಗೆ ಧಾರಾವಾಹಿಯ ಹೀರೋ ರಾಜೇಶ್ ಕೂಡ ಭಾಗಿಯಾಗಿದ್ದರು. 

ಮುಫ್ತಿ ದೃಶ್ಯ ಮರುಸೃಷ್ಟಿ

ಛಾಯಾ ಸಿಂಗ್ ಅವರನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಡಿಹೊಗಳಿದರು. ಅಂದಹಾಗೆ ಶಿವರಾಜ್ ಕುಮಾರ್ ಜೊತೆ ಛಾಯಾ ಸಿಂಗ್ ರೌಡಿ ಅಳಿಯ ಸಿನಿಮಾದಲ್ಲಿ ನಟಿಸಿದ್ದರು. ಬಳಿಕ ಇತ್ತೀಚಿಗಷ್ಟೆ ಬಂದ ಸೂಪರ್ ಹಿಟ್ ಮಫ್ತಿ ಸಿನಿಮಾದಲ್ಲೂ ಒಟ್ಟಿಗೆ ನಟಿಸಿದ್ದಾರೆ. ಶಿವಣ್ಣ ತಂಗಿಯ ಪಾತ್ರದಲ್ಲಿ ಛಾಯಾ ಸಿಂಗ್ ಮಿಂಚಿದ್ದರು. ಅಣ್ಣ-ತಂಗಿಯ ಕಾಂಬಿನೇಷನ್ ಅಭಿಮಾನಿಗಳ ಹೃದಯ ಗೆದ್ದಿತ್ತು. ವೇದಿಕೆ ಮೇಲೆ ಮಫ್ತಿ ಸಿನಿಮಾದ ಭಾವನಾತ್ಮಕ ದೃಶ್ಯವನ್ನು ಮರುಸೃಷ್ಟಿ ಮಾಡಲಾಯಿತು. ಛಾಯಾ ಸಿಂಗ್ ಮತ್ತು ಶಿವಣ್ಣ ನಟನೆಗೆ ಕಾರ್ಯಕ್ರಮದಲ್ಲಿ ಇದ್ದವರು ಎದ್ದು ನಿಂತು ಚಪ್ಪಾಳೆ ತಟ್ಟಿದರು. 

ಶಿವಣ್ಣ ಕಾಲಿಗೆ ನಮಸ್ಕರಿಸಿದ ಛಾಯಾ ಸಿಂಗ್ 

ಛಾಯಾ ಸಿಂಗ್ ಶಿವಣ್ಣ ಕಾಲು ಮುಟ್ಟಿ ನಮಸ್ಕರಿಸಿದರು. ಬಳಿಕ ಛಾಯಾ ಸಿಂಗ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹೇಳಿದರು. ಅದ್ಭುತವಾದ ನಟಿ, ಭಾವನೆಗಳನ್ನು ಸೆಟಲ್ ಆಗಿರುತ್ತೆ. ನನ್ನ ತಂಗಿ ನೋಡಿದ ಹಾಗೆ ಆಯಿತು' ಎಂದು ಹೇಳಿದರು. ಬಳಿಕ ಶಿವಣ್ಣನ ಬಗ್ಗೆ ಛಾಯಾ ಸಿಂಗ್ ಮಾತನಾಡಿ ಭಾವುಕರಾದರು. ಮಫ್ತಿ ಸಿನಿಮಾ ಶೂಟಿಂಗ್ ಸಮಯದಲ್ಲಿ ಒಂದು ಘಟನೆಯನ್ನು ವಿವರಿಸಿದರು. 

ಜೀ ಕನ್ನಡದಲ್ಲಿ ಮತ್ತೊಂದು ಮಧ್ಯ ವಯಸ್ಸಿನ ಲವ್‌ಸ್ಟೋರಿ ಅಮೃತಧಾರೆ

ಶಿವಣ್ಣ ಫೋನ್ ಮಾಡಿ ಹೇಳಿದ್ದೇನು?

'ಅಣ್ಣನ ಜೊತೆ ಕೆಲಸ ಮಾಡುವಾಗ ಗ್ಲಿಸರಿನ್ ಹಾಕಿಕೊಳ್ಳೋದು ಏನ್ ಇಲ್ಲ. ಭಾವನೆಗಳು ಹಾಗೆ ಬರುತ್ತೆ. ಮಫ್ತಿ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಬಂದೆ. ಆಗ ಶಿವಣ್ಣ ಪೋನ್ ಮಾಡಿದ್ರು. ಯಾಕೆ ಅಂತ ಅಚ್ಚರಿಯಲ್ಲಿ ಫೋನ್ ರಿಸೀವ್ ಮಾಡಿದೆ. ಇವತ್ತು ರಾಖಿ ಹಬ್ಬ ವಿಶ್ ಮಾಡಲು ಕಾಲ್ ಮಾಡಿದೆ ಅಂತ ಶಿವಣ್ಣ ಹೇಳಿದ್ರು. ನನಗೆ ಆ ಕ್ಷಣ ಕಣ್ಣೀರು ತಡೆಯಲು ಆಗಿಲ್ಲ. ನಾನು ಆ ದಿನ ಅಲ್ಲಿಇದ್ದು ಅಣ್ಣನಿಗೆ ರಾಖಿ ಕಟ್ಟಿ ಬರಬೇಕಿತ್ತು ಅಂತ ತುಂಬಾ ಅನಿಸ್ತು. ಇವತ್ತಿಗೂ ಆ ನೋವು ಇದೆ' ಅಂತ ಭಾವುಕರಾದರು. 'ಯಾಕೆ ಇದನ್ನು ಹೇಳಿದೆ ಅಂದರೆ ಎಷ್ಟು ದೊಡ್ಡ ಮನಸ್ಸು ಅವರದ್ದು. ಅವರು ನನಗೆ ಕಾಲ್ ಹೇಳುವ ಅವಶ್ಯತೆ ಇರಲಿಲ್ಲ. ಆದರೂ ಹೇಳಿದ್ರು. ನನ್ನ ತಂಗಿನ ನೋಡಿದ ಹಾಗೆ ಆಯ್ತು ಅಂತ ಹೇಳಿದ್ರಲ್ಲ ಅದು ಕೇವಲ ಪದಗಳಲ್ಲ' ಎಂದು ಮಾತನಾಡುತ್ತಾ ಭಾವುಕರಾದರು. ಬಳಿಕ ವೇದಿಕೆಯಲ್ಲೇ ಶಿವಣ್ಣನಿಗೆ ರಾಖಿ ಕಟ್ಟಿದರು ಛಾಯಾ ಸಿಂಗ್. 

ಬೈರತಿ ರಣಗಲ್: 'ಮಫ್ತಿ' ನಿರ್ದೇಶಕರ ಜೊತೆ ಶಿವಣ್ಣ ಸಿನಿಮಾ; ಹ್ಯಾಟ್ರಿಕ್ ಹೀರೋ ಪಾತ್ರ ನೆಗೆಟಿವ್ or ಪಾಸಿಟಿವ್?

ಬೈರತಿ ರಣಗಲ್ ಮತ್ತೆ ಒಟ್ಟಿಗೆ ನಟನೆ

ಇಬ್ಬರ ನಟನೆ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಜೀ ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋಗೆ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಸೂಪರ್ ಎಂದು ಹೇಳುತ್ತಿದ್ದಾರೆ. ಅಂದಹಾಗೆ ಶಿವಣ್ಣ ಮತ್ತು ಛಾಯಾ ಸಿಂಗ್ ಮತ್ತೆ ಒಟ್ಟಿಗೆ ನಟಿಸುತ್ತಿದ್ದಾರೆ. ಮಫ್ತಿ ಪ್ರಿಕ್ವೆಲ್‌ನಲ್ಲಿ ಮತ್ತೆ ಅಣ್ಣ ತಂಗಿಯಾಗಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಬೈರತಿ ರಣಗಲ್ ಸಿನಿಮಾ ಅನೌನ್ಸ್ ಆಗಿದ್ದು ನರ್ತನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ಮತ್ತೆ ಶಿವಣ್ಣ ಮತ್ತು ಛಾಯಾ ಸಿಂಗ್ ಕಾಂಬಿನೇಷನ್ ಅನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಲಿದ್ದಾರೆ. 
 

Follow Us:
Download App:
  • android
  • ios