ನಿರೀಕ್ಷೆಯಂತೆ ಮಹಿಳಾ ಸಬಲೀಕರಣಕ್ಕೆ ನಿರ್ಮಲಾ ಒತ್ತು


ನವದೆಹಲಿ(ಜು.05): ಮೋದಿ 2.0 ಸರ್ಕಾರದ ಮೊದಲ ಸಾಮಾನ್ಯ ಬಜೆಟ್ ಇಂದು ಮಂಡನೆಯಾಗುತ್ತಿದ್ದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈಗಾಗಲೇ ಬಾಹಿ ಖಾತೆಯೊಂದಿಗೆ ಸಂಸತ್ತು ಪ್ರವೇಶಿಸಿದ್ದಾರೆ. ಸೂಟ್ಕೇಸ್ ಸಂಸ್ಕೃತಿಗೆ ವಿದಾಯ ಹೇಳಿರುವ ನಿರ್ಮಲಾ, ಗ್ರಾಮ ಲೆಕ್ಕಿಗರ ಬಳಿ ಇರುವ ಬಾಹಿ ಖಾತೆಯನ್ನು ಸಂಸತ್ತಿಗೆ ತರುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಬೆಳಗ್ಗೆ ಸರಿಯಾಗಿ 11 ಗಂಟೆಗೆ ಬಜೆಟ್ ಮಂಡನೆಯಾಗಲಿದ್ದು, ಈಗಾಗಲೇ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪ್ರಮುಖ ಗಣ್ಯರು ಸಂಸತ್ತು ಪ್ರವೇಶಿಸಿದ್ದಾರೆ.
ಆದಾಯ ತೆರಿಗೆ ಕಟ್ಟುವವರು ಇನ್ನು ಮತ್ತಷ್ಟು ನಿರಾಳ...
ಸುಲಭವಾಗಿ ಗುರುತಿಸುವಂತೆ ಇನ್ನು 1, 2, 5, 10 ಮತ್ತು 20 ರೂ. ಹೊಸ ನಾಣ್ಯಗಳ ಬಿಡುಗಡೆ.
ಮನೆ ಕಟ್ಟಲು ನೀಡುವ ಸಾಲದ ಮೇಲೆ ಇನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಂತ್ರಣ.
ಮೂಲ ಸೌಕರ್ಯ, ಡಿಜಿಟಲಿಕರಣಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡಿದ್ದು, ಸಾರಿಗೆ ಸಂಪರ್ಕ ಅಭಿವೃದ್ಧಿಯಿಂದ ದೇಶವನ್ನು ಮತ್ತಷ್ಟು ಸದೃಢಗೊಳಿಸುವುದು ಸರ್ಕಾರದ ಗುರಿಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು
ದೇಶದ 17 ಪ್ರವಾಸಿ ತಾಣಗಳನ್ನು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಅಭಿವೃದ್ದಿಪಡಿಸಿ, ಭಾರತೀಯ ಜಾನಪದ ಕಲೆಗೆ ಒತ್ತು. ಪ್ರವಾಸಿಗರನ್ನು ಆಕರ್ಷಿಸಲು ವಿಶೇಷ ಯೋಜನೆ.
ಪರಿಶಿಷ್ಟ ವರ್ಗ ಹಾಗೂ ವರ್ಗದವರಿಗೂ ಒಳಗೊಂಡಂತೆ ಆರ್ಥಿಕ ಸಹಕಾರ ನೀಡಿ, ಹೊಸ ಉದ್ಯಮ ಆರಂಭಿಸಲು ಮತ್ತಷ್ಟು ಪ್ರೇರೇಪಣೆ.
ಸರಕಾರ ಕಾಯಕವೇ ತತ್ವ ಪಾಲಿಸುತ್ತಿದೆ. ಬಸವಣ್ಣನ ದಾಸೋಹ ತತ್ವದಂತೆ ಸಮಾಜದ ಸುಧಾರಣೆಗೆ ಹಲವು ಯೋಜನೆಗಳು ತರುತ್ತಿದೆ. ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಮುಂದಾಗಿದೆ.
FM: We'll invest widely in agricultural infrastructure. We'll support pvt entrepreneurship in driving value addition to farmers produce & those from allied activities too, like bamboo, timber & also for generating renewable energy. Ann daata ko kyun oorja daata bana nahi sakte? pic.twitter.com/qPOcZp9d2M
— ANI (@ANI) July 5, 2019
ತ್ಯಾಜ್ಯ ವಿಲೇವಾರಿಗೆ ಪ್ರತೀ ಹಳ್ಳಿಯಲ್ಲಿಯೂ ವ್ಯವಸ್ಥೆ..
FM Sitharaman: 9.6 crore toilets have been constructed since Oct 2, 2014. More than 5.6 lakh villages have become open defecation free.We have to build on this success. I propose to expand the Swachh Bharat mission to undertake sustainable sold waste management in every village pic.twitter.com/j8dFeTyRVS
— ANI (@ANI) July 5, 2019
ಖಾಸಗಿ ಉದ್ಯಮದ ಸಹಭಾಗಿತ್ವದಲ್ಲಿ ಯುವಕರ ಕೌಶಲ್ಯ ಅಭಿವೃದ್ಧಿಗೆ ಒತ್ತು.
ಇದುವರೆಗೆ ಗ್ರಾಮ ಸಡಕ್ ಯೋಜನೆಯಡಿಯಲ್ಲಿ 30 ಸಾವಿರ ರಸ್ತೆಯನ್ನು ಪರಿಸರ ಸ್ನೇಹಿ ಮಾದರಿಯಲ್ಲಿ ನಿರ್ಮಿಸಲಾಗಿದೆ. ವೇಸ್ಟ್ ಪ್ಲಾಸ್ಟಿಕ್ ಸೇರಿ ಇತರೆ ಅನುಪಯೋಗಿ ಪದಾರ್ಥಗಳಿಂದ ನಿರ್ಮಿಸಲಾಗಿದ್ದು, ಇದನ್ನು ಮುಂದುವರಿಸಲಾಗುವುದು.
ಮೀನುಗಾರರ ಅಗತ್ಯಕ್ಕೆ ತಕ್ಕಂತೆ ಅಗತ್ಯ ಮೂಲ ಸೌಕರ್ಯಕ್ಕೆ ಒತ್ತು.
ಪ್ರತೀ ಮನೆಗೂ ಗ್ಯಾಸ್ ಕನೆಕ್ಷನ್, ಎಲ್ಲರಿಗೂ ವಿದ್ಯುತ್ ಸಂಪರ್ಕ, ರೈತ, ಬಡ, ಗ್ರಾಮೀಣ ಜನರಿಗೆ ಒತ್ತು. ಎಲ್ಲ ಗ್ರಾಮೀಣ ಭಾಗದ ಪ್ರತೀ ಕುಟುಂಬಕ್ಕೂ ಮೂಲ ಸೌಕರ್ಯಕ್ಕೆ ಒತ್ತು.
ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತ ಮಹತ್ವದ ಸಾಧನೆ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಬಾಹ್ಯಾಕಾಶ ಉಪಕರಣಗಳ ಉತ್ಪಾದನೆಗೆ ಒತ್ತು ನೀಡಲಾಗುವುದು.
![]()
Finance Minister Nirmala Sitharaman: Railway infrastructure would need an investment of Rs 50 lakh crores between 2018 and 2030. PPP to be used to unleash faster development and the delivery of passenger freight services. #Budget2019https://t.co/kvLQfaMH59
— ANI (@ANI) July 5, 2019
FM Nirmala Sitharaman: Rs 350 cr allocated for 2% interest subvention for all GST-registered MSMEs on fresh or incremental loans. Pension for shopkeepers & retailers with turnover less than Rs. 1.5 crore to be launched under Pradhan Mantri Karma Yogi Maan Dhan Scheme #Budget2019pic.twitter.com/hbjHvHB984
— ANI (@ANI) July 5, 2019
ಪರಿಸರ ಮಾಲಿನ್ಯ ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುವ ಇ-ವೆಹಕಲ್ಗೆ ಸಬ್ಸಡಿ.