ಪ್ರಧಾನಮಂತ್ರಿ ಮುದ್ರಾ ಯೋಜನೆಯು ಸಣ್ಣ ಉದ್ಯಮಗಳಿಗೆ ಆರ್ಥಿಕ ನೆರವು ನೀಡುತ್ತದೆ. ಇದು ಯಾವುದೇ ಭದ್ರತೆ ಇಲ್ಲದೆ ಸಾಲ ಒದಗಿಸುತ್ತದೆ. ಈ ಯೋಜನೆಯಡಿ 33 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ 52 ಕೋಟಿ ಸಾಲ ವಿತರಿಸಲಾಗಿದೆ. ಇದರಿಂದ 70% ಮಹಿಳೆಯರು ಮತ್ತು 50% SC/ST/OBC ಉದ್ಯಮಿಗಳು ಪ್ರಯೋಜನ ಪಡೆದಿದ್ದಾರೆ. ಇದು ಉದ್ಯಮಶೀಲತೆಯನ್ನು ಉತ್ತೇಜಿಸಿ, ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಿದೆ.

ಇಂದು ಸಾಕಷ್ಟು ಜನರು ಸ್ವಂತ ಉದ್ಯಮ ಕಟ್ಟಿಕೊಳ್ಳುವ ಆಸೆ ಹೊಂದಿರುತ್ತಾರೆ. ಅವರಿಗೆ ಸಾಲವೇ ಸಿಗೋದಿಲ್ಲ. ಇಂದು ಸಾಕಷ್ಟು ಕಲಾವಿದರು ಕೂಡ ನಮಗೆ ಸಾಲ ಸಿಗೋದಿಲ್ಲ ಎಂದು ಹೇಳೋದುಂಟು. ಇನ್ನು ಜನಸಾಮಾನ್ಯರ ಕಥೆಯೂ ಅಷ್ಟೇ. ಅಷ್ಟಾಗಿ ಆದಾಯ, ಆಸ್ತಿ ಇರದ ಕಾರಣ ಸಾಲ ಸಿಗೋದಿಲ್ಲ. ಆದರೆ ಪ್ರಧಾನಮಂತ್ರಿ ಅವರು ಆರಂಭಿಸಿದ ಹೊಸ ಯೋಜನೆಯಿಂದ ಶ್ಯೂರಿಟಿಯೇ ಇಲ್ಲದೆ ಸಾಲ ಸಿಗುವುದು.

ಎಷ್ಟು ಸಾಲ ನೀಡಲಾಗಿದೆ?
ಮುದ್ರಾ ಯೋಜನೆಯು ಪ್ರಾರಂಭ ಆದಾಗಿನಿಂದ ₹33 ಲಕ್ಷ ಕೋಟಿ ರೂಪಾಯಿ ಮೌಲ್ಯದ 52 ಕೋಟಿಗೂ ಹೆಚ್ಚು ಅಸುರಕ್ಷಿತ ಸಾಲಗಳನ್ನು ವಿತರಿಸಲಾಗಿದೆ. ಇದನ್ನು ಸುಮಾರು 70% ಮಹಿಳೆಯರು, 50% SC/ST/OBC ಉದ್ಯಮಿಗಳು ಪ್ರಯೋಜನವನ್ನು ಪಡೆದಿದ್ದಾರೆ. ಮೊದಲ ಬಾರಿಗೆ ವ್ಯಾಪಾರ ಮಾಡುವವರಿಗೆ ₹10 ಲಕ್ಷ ಕೋಟಿ ಸಾಲ ನೀಡುವುದರ ಜೊತೆಯಲ್ಲಿ ಮೊದಲ ಮೂರು ವರ್ಷಗಳಲ್ಲಿ 1 ಕೋಟಿಗೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದೆ. ಬಿಹಾರದಂತಹ ರಾಜ್ಯಗಳು ಸುಮಾರು 6 ಕೋಟಿ ಸಾಲಗಳನ್ನು ಮಂಜೂರು ಮಾಡಿವೆ. ಇದು ಭಾರತದಾದ್ಯಂತ ಉದ್ಯಮಶೀಲತೆಯ ಬಲವಾದ ಮನೋಭಾವವನ್ನು ತೋರಿಸುತ್ತದೆ. ಜೀವನವನ್ನು ಪರಿವರ್ತಿಸುವಲ್ಲಿ ಮುದ್ರಾ ಯೋಜನೆಯು ಪ್ರಮುಖ ಪಾತ್ರ ಹೊಂದಿದೆ ಎಂದು ಪ್ರಧಾನ ಮಂತ್ರಿ x ಖಾತೆಯಲ್ಲಿ ಹೇಳಿದ್ದಾರೆ. 

ಯಾವ ರೀತಿ ಸಾಲ ನೀಡಲಾಗುವುದು? 
ಪ್ರಧಾನ ಮಂತ್ರಿಗಳು ಪ್ರಮುಖವಾಗಿ ಸಣ್ಣ ವ್ಯವಹಾರಗಳು, ಸೂಕ್ಷ್ಮ ಉದ್ಯಮಗಳಿಗೆ ಸಹಾಯ ಮಾಡಲು ಪ್ರಾರಂಭಿಸಿದ ಪ್ರಮುಖ ಯೋಜನೆ ಇದಾಗಿದೆ. ಸುಲಭವಾಗಿ ಸಾಲ ಪಡೆಯಲು ಒದ್ದಾಡುತ್ತಿದ್ದವರಿಗೆ ಸಹಾಯ ಆಗಲೆಂದೇ ಈ ಯೋಜನೆ ಆರಂಭಿಸಲಾಗಿದೆ. ಬ್ಯಾಂಕ್‌ಗಳಿಂದ ಸಾಲ ಪಡೆಯಲು ಸಣ್ಣ ಅಂಗಡಿ ಮಾಲೀಕರು, ಬೀದಿ ವ್ಯಾಪಾರಿಗಳು, ಸ್ಥಳೀಯ ಸೇವಾ ಪೂರೈಕೆದಾರರು ಅಷ್ಟು ಆದಾಯ ಇಲ್ಲದ ಕಾರಣಕ್ಕೆ ಅಥವಾ ಭದ್ರತೆ ಇಲ್ಲದ ಕಾರಣ ಅವರ ವ್ಯವಹಾರಗಳನ್ನು ಇನ್ನಷ್ಟು ಬೆಳೆಸಲು ಸಾಧ್ಯವಾಗಿರಲಿಲ್ಲ. ಈಗ ಈ ಮುದ್ರಾ ಯೋಜನೆ ಮೂಲಕ ಯಾವುದೇ ಶ್ಯೂರಿಟಿಯ ಅಗತ್ಯವಿಲ್ಲದೆ ಸಾಲಗಳನ್ನು ನೀಡಲಾಗುವುದು. ಇದರಿಂದಾಗಿ ಸಾಕಷ್ಟು ಜನರು ತಮ್ಮ ಸಣ್ಣ ವ್ಯವಹಾರಗಳನ್ನು ಪ್ರಾರಂಭಿಸಲು, ಬೆಳೆಸಲು ಸಾಧ್ಯವಾಯಿತು ಎನ್ನಬಹುದು. 

ಯಾವೆಲ್ಲ ಬ್ಯುಸಿನೆಸ್ ಗೆ ಸಿಗುತ್ತೆ ಮುದ್ರಾ ಯೋಜನೆ ಅಡಿ ಸಾಲ?

ಮುದ್ರಾ ಯೋಜನೆ ಪರಿಣಾಮ ಏನು?
ಕಳೆದ 10 ವರ್ಷಗಳಲ್ಲಿ, ಮುದ್ರಾ ಯೋಜನೆಯು ತಳಮಟ್ಟದ ಉದ್ಯಮಶೀಲತೆಗೆ ಬಲವಾದ ನೆಲೆಯನ್ನು ಸೃಷ್ಟಿಸಿದೆ. ಅಲ್ಲಿ ಜನರು ತಮ್ಮದೇ ಆದ ಉದ್ಯಮವನ್ನು ಆರಂಭಿಸಬಹುದು, ಇತರರಿಗೆ ಉದ್ಯೋಗಗಳನ್ನು ನೀಡಲು ಸೃಷ್ಟಿ ಮಾಡಲೂಬಹುದು. 

ಈ ಬ್ಯುಸಿನೆಸ್ ಆರಂಭಿಸಿ ಲಕ್ಷ ಲಕ್ಷ ಹಣ ಎಣಿಸಿ; ಪ್ರತಿ ಅಡುಗೆಮನೆಯಲ್ಲೂ ಬಳಕೆಯಾಗೋ ಉತ್ಪನ್ನಕ್ಕೆ ವರ್ಷದ 12 ತಿಂಗಳು ಬೇಡಿಕೆ

ಬದುಕು ಬದಲಾಯಿಸಿಕೊಂಡವರು ಇವರು!

  • ಅಮರ್‌ ಅವಸ್ಥಿ ಎನ್ನುವವರು ಹತ್ತು ವರ್ಷದ ಹಳೆಯ ಅಂಗಡಿ ಲೈಸೆನ್ಸ್‌ಇಟ್ಟುಕೊಂಡು ಹತ್ತು ಲಕ್ಷ ರೂಪಾಯಿಯ ಸಾಲ ಪಡೆದರು. ಆ ನಂತರ ಅವರು ತಮ್ಮ ಅಂಗಡಿಯನ್ನು ಮೊಬೈಲ್‌ ಸ್ಟೋರ್‌ಆಗಿ ಬದಲಾಯಿಸಿದರು. ಈ ಬದಲಾವಣೆ ಅವರ ಬದುಕನ್ನೇ ಬದಲಾಯಿಸಿತು.
  • ಕೆಲಸವೇ ಇಲ್ಲದಿದ್ದ ಧೀರಜ್‌ಅವರು ಮುದ್ರಾ ಯೋಜನೆಯಿಂದ ಐದು ಲಕ್ಷ ರೂಪಾಯಿ ಸಾಲ ಪಡೆದು ಜಿಯೋ ಸ್ಟೋರ್‌ಆರಂಭಿಸಿದರು. ಆ ನಂತರ ಒಂದೂವರೆ ಕೋಟಿ ರೂಪಾಯಿಯಷ್ಟು ಮೌಲ್ಯದ ಮಾರಾಟ ಮಾಡಿದರು. 
  • ಮನೋಜ್‌ ಮೋದಿ ಅವರು ಐದು ಲಕ್ಷ ರೂಪಾಯಿ ಸಾಲ ಪಡೆದು ಅಂಗಡಿ ಆರಂಭಿಸಿದರು.
View post on Instagram
Scroll to load tweet…