Published : Nov 21, 2025, 06:33 AM ISTUpdated : Nov 21, 2025, 11:31 PM IST

Karnataka News Live: ಚಿತ್ರದುರ್ಗದಲ್ಲಿ ನಿಂತಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ, ಅಣ್ಣ-ತಮ್ಮ ಇಬ್ಬರು ಸ್ಥಳದಲ್ಲೇ ಸಾವು

ಸಾರಾಂಶ

ಕೋಲಾರ: ಧರ್ಮದ ಹೆಸರಲ್ಲಿ ಸರ್ಕಾರಿ ಜಾಗ ಒತ್ತುವರಿ ಹಾಗೂ ದೇವರ ಹೆಸರಲ್ಲಿ ರಿಯಲ್ ಎಸ್ಟೇಟ್ ನಡೆಸಲು ಅವಕಾಶ ನೀಡಲಾಗದು ಎಂದು ಹೈಕೋರ್ಟ್ ಕಟುವಾಗಿ ಹೇಳಿದೆ. ಕೋಲಾರ ತಾಲೂಕಿನ ವೇಮಗಲ್ ಹೋಬಳಿಯ ಕ್ಯಾಲನೂರು ಗ್ರಾಮದ ಸರ್ಕಾರಿ ಶಾಲೆ ಕಾಂಪೌಂಡ್ ಗೋಡೆ ಹಾಗೂ ಗ್ರಾಮದ ರಸ್ತೆಯ ಸರ್ಕಾರಿ ಜಾಗದಲ್ಲಿ ಕಟ್ಟಿರುವ ಮಳಿಗೆಗಳ ತೆರವಿಗೆ ತಹಶೀಲ್ದಾ‌ರ್ ಜಾರಿಗೊಳಿಸಿರುವ ನೋಟಿಸ್ ಪ್ರಶ್ನಿಸಿ ಗ್ರಾಮದ ವಿರಾಟ್ ಹಿಂದೂ ಸೇವಾ ಜಾರಿ ಟೇಬಲ್ ಟ್ರಸ್ಟ್(ರಿ) ಹಾಗೂ ಜಾಮೀಯಾ ಮಸ್ಟಿದ್ ಕಮಿಟಿ ಹೈಕೋರ್ಟ್‌ಗೆ ಅರ್ಜಿ ಸಲಿಸಿದ್ದವು. ಇದರ ವಿಚಾರಣೆ ನಡೆಸಿದ ಹೈಕೋರ್ಟ್ ವೇಮಗಲ್‌ನ ಕ್ಯಾಲನೂರಿನ ಸರ್ಕಾರಿ ಜಾಗದಲ್ಲಿ ಮಳಿಗೆ ನಿರ್ಮಿಸಿದ್ದ ಹಿಂದೂ ಟ್ರಸ್ಟ್ ಹಾಗೂ ಮಸೀದಿ ಕಮಿಟಿ ಎರಡಕ್ಕೂಸರ್ಕಾರಿ ಜಾಗದಲ್ಲಿ ಧಾರ್ಮಿಕ ಸಂಸ್ಥೆಗಳಿಗೆ ಕೆಲಸ ಏನಿದೆ ಎಂದು ತೀವ್ರ ತರಾಟೆಗೆ ತೆಗೆದುಕೊಂಡಿದೆ.

Ambulance

11:31 PM (IST) Nov 21

ಚಿತ್ರದುರ್ಗದಲ್ಲಿ ನಿಂತಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ, ಅಣ್ಣ-ತಮ್ಮ ಇಬ್ಬರು ಸ್ಥಳದಲ್ಲೇ ಸಾವು

ಚಿತ್ರದುರ್ಗದಲ್ಲಿ ನಿಂತಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ, ಅಣ್ಣ-ತಮ್ಮ ಇಬ್ಬರು ಸ್ಥಳದಲ್ಲೇ ಸಾವು , ವೇಗವಾಗಿ ಸಾಗುತ್ತಿದ್ದ ಬೈಕ್ ಟ್ರಾಕ್ಟರ್‌ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಸ್ಥಳೀಯರು ಅಪಘಾತಕ್ಕೆ ಕಾರಣ ಹೇಳಿದ್ದಾರೆ.

Read Full Story

11:04 PM (IST) Nov 21

ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಮೊರೆ ಹೋದ ಡಿಕೆಶಿ, ಇದೇ ದೇಗುಲ ಭೇಟಿ ಬಳಿಕ BSYಗೆ ಒಲಿದಿತ್ತು ಸಿಎಂ ಸ್ಥಾನ

ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಮೊರೆ ಹೋದ ಡಿಕೆಶಿ, ಇದೇ ದೇಗುಲ ಭೇಟಿ ಬಳಿಕ BSYಗೆ ಒಲಿದಿತ್ತು ಸಿಎಂ ಸ್ಥಾನ, ಇದೀಗ ಅರಸಿಕೆರೆಯ ಪ್ರಸಿದ್ದ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಉತ್ಸವ ಮೂರ್ತಿ ಪಲ್ಲಕ್ಕಿ ನೇರವಾಗಿ ಡಿಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿದೆ.

 

Read Full Story

09:55 PM (IST) Nov 21

ಬೆಂಗಳೂರು-ಕಲಬುರಗಿ ಪ್ರಯಾಣಿಕರಿಗೆ ಸಿಹಿಸುದ್ದಿ, ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ..

ವಾರಾಂತ್ಯದ ಪ್ರಯಾಣಿಕರ ದಟ್ಟಣೆ ನಿಭಾಯಿಸಲು, ನೈಋತ್ಯ ರೈಲ್ವೆಯು ಬೆಂಗಳೂರು ಕಂಟೋನ್ಮೆಂಟ್ ಮತ್ತು ಕಲಬುರಗಿ ನಡುವೆ ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳನ್ನು ಘೋಷಿಸಿದೆ. ಇದರೊಂದಿಗೆ, ಹುಬ್ಬಳ್ಳಿ-ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಿರ್ಲೋಸ್ಕರವಾಡಿ ನಿಲ್ದಾಣದಲ್ಲಿ ಹೊಸ ನಿಲುಗಡೆ ನೀಡಲಾಗಿದೆ.

Read Full Story

09:46 PM (IST) Nov 21

'ಬಾಹ್ಯಾಕಾಶಕ್ಕೆ ಹೋಗೋದೇ ಸುಲಭ..' ಪ್ರಿಯಾಂಕ್‌ ಖರ್ಗೆ ಎದುರಲ್ಲೇ ಬೆಂಗಳೂರು ಟ್ರಾಫಿಕ್‌ ಬಗ್ಗೆ ತಮಾಷೆ ಮಾಡಿದ ಗಗನಯಾತ್ರಿ ಶುಭಾಂಶು ಶುಕ್ಲಾ!

ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ, ಭಾರತೀಯ ವಾಯುಪಡೆಯ ಅಧಿಕಾರಿ ಮತ್ತು ಪರೀಕ್ಷಾ ಪೈಲಟ್. 2027 ರಲ್ಲಿ ಉಡಾವಣೆಯಾಗಲಿರುವ ಭಾರತದ ಮೊದಲ ಮಾನವಸಹಿತ ಮಿಷನ್ ಗಗನಯಾನಕ್ಕೆ ಆಯ್ಕೆಯಾಗಿ ತರಬೇತಿ ಪಡೆದ ನಾಲ್ಕು ಗಗನಯಾತ್ರಿಗಳಲ್ಲಿ ಅವರು ಒಬ್ಬರು.

 

Read Full Story

09:04 PM (IST) Nov 21

ಸಿದ್ದರಾಮಯ್ಯನವರೇ ಸಿಎಂ, ದೊಡ್ಡವ್ರು ಹೇಳಿದ ಮೇಲೆ ನಾವು ನಮ್ರತೆಯಿಂದ ಇರ್ಬೇಕು, ಡಿಕೆ ಶಿವಕುಮಾರ್

ಸಿದ್ದರಾಮಯ್ಯನವರೇ ಸಿಎಂ, ದೊಡ್ಡವ್ರು ಹೇಳಿದ ಮೇಲೆ ನಾವು ನಮ್ರತೆಯಿಂದ ಇರ್ಬೇಕು, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡದೇ ಮನೆಗೆ ಮರಳಿದ ಡಿಕೆ ಶಿವಕುಮಾರ್, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

Read Full Story

08:55 PM (IST) Nov 21

ಕನ್ನಡದ ಸೀರಿಯಲ್‌ ನಟಿಗೆ ತಮಿಳು ಸೂಪರ್‌ ಸ್ಟಾರ್‌ ಧನುಷ್‌ ಮ್ಯಾನೇಜರ್‌ನಿಂದ ಕಾಸ್ಟಿಂಗ್‌ ಕೌಚ್‌ ಬೇಡಿಕೆ?

ನಟಿ ಮಾನ್ಯ ಆನಂದ್‌, ಧನುಷ್‌ ಮ್ಯಾನೇಜರ್‌ ಶ್ರೇಯಸ್‌ ಹೆಸರಿನಲ್ಲಿ ವ್ಯಕ್ತಿಯೊಬ್ಬ ಕಾಸ್ಟಿಂಗ್‌ ಕೌಚ್‌ಗೆ ಆಹ್ವಾನಿಸಿದ್ದಾಗಿ ಆರೋಪಿಸಿದ್ದರು. ಬಳಿಕ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ಧನುಷ್‌ ಹೆಸರು ದುರುಪಯೋಗಪಡಿಸಿಕೊಳ್ಳುವ ಉದ್ದೇಶ ತಮಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Read Full Story

08:51 PM (IST) Nov 21

Bigg Bossನಲ್ಲಿ ಸು ಫ್ರಂ ಸೋ - ಎಲ್ಲ ಬಿದ್ದೂ ಬಿದ್ದೂ ನಕ್ಕರೂ, ನಗಲಿಲ್ಲ ಅಶ್ವಿನಿ ಗೌಡ! ರಾಜಮಾತೆ ಸ್ಥಿತಿ ಗಂಭೀರ

ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ನಡುವೆ ಜಗಳ ತಾರಕಕ್ಕೇರಿದೆ. ಹೆಸರಿನಿಂದ ಕರೆದಿದ್ದಕ್ಕೆ ಅಶ್ವಿನಿ ಗೌಡರಿಗೆ ಕೋಪ ಬಂದಿದ್ದು, ಗಿಲ್ಲಿ ನಟ ಹಾಸ್ಯದ ಮೂಲಕ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸುತ್ತಿದ್ದಾರೆ. 

Read Full Story

08:47 PM (IST) Nov 21

ಕುಟುಂಬದ ಮೂರು ತಲೆಮಾರನ್ನು ಬಾವಿಗೆ ದೂಟಿ ಆತ್ಮ*ಹತ್ಯೆಗೆ ಶರಣಾದ ಪುತ್ರ, ಒಂದೇ ಕುಟುಂಬದ 4 ಮಂದಿ ಸಾವು!

ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ, ನಾರಾಯಣ ಶಿಂಧೆ ಎಂಬಾತ ತನ್ನ ಇಬ್ಬರು ಮಕ್ಕಳು ಹಾಗೂ ವೃದ್ಧ ತಂದೆಯೊಂದಿಗೆ ಬಾವಿಗೆ ಹಾರಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಸಾಲಬಾಧೆಯಿಂದ ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ.

Read Full Story

08:14 PM (IST) Nov 21

ಸಿಎಂ ಬದಲಾವಣೆ ವ್ಯಾಪಕ ಚರ್ಚೆ, ಅಚ್ಚರಿಯ ಹೇಳಿಕೆ ಕೊಟ್ರು ಸಚಿವ ಬೋಸರಾಜ್

ಕೊಡಗು ಜಿಲ್ಲೆಯಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಸಚಿವ ಎಸ್.ಎನ್. ಭೋಸರಾಜ್, ರಾಜ್ಯ ಕಾಂಗ್ರೆಸ್‌ನಲ್ಲಿನ ಅಧಿಕಾರ ಹಂಚಿಕೆ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅಧಿಕಾರ ಹಂಚಿಕೆ ವಿಷಯ ತಮ್ಮ ಗಮನದಲ್ಲಿಲ್ಲ ಮತ್ತು ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Read Full Story

08:08 PM (IST) Nov 21

ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಮತ್ತೆ ಕುಸಿದ ಚಿನ್ನದ ಬೆಲೆ, ಖರೀದಿಗೆ ಸುವರ್ಣಾವಕಾಶ?

Gold prices in your city today: ನವೆಂಬರ್ 21 ರಂದು ದೇಶೀಯ ಫ್ಯೂಚರ್ ಮಾರುಕಟ್ಟೆಯಲ್ಲಿ ಚಿನ್ನ ಕುಸಿದಿದ್ದು, ಎಂಸಿಎಕ್ಸ್ ಗೋಲ್ಡ್ ಡಿಸೆಂಬರ್ ಫ್ಯೂಚರ್‌ಗಳು 0.52% ಇಳಿಕೆಯಾಗಿ 10 ಗ್ರಾಂಗೆ ₹1,22,085 ಕ್ಕೆ ತಲುಪಿದೆ. ಬೆಳ್ಳಿ ಬೆಲೆಯೂ ಸಹ 1.82% ರಷ್ಟು ಕಡಿಮೆಯಾಗಿದೆ.

 

Read Full Story

07:45 PM (IST) Nov 21

ಸಿಎಂ ಸಿದ್ದರಾಮಯ್ಯ ಬಳಿಕ ಡಿ ಕೆ ಶಿವಕುಮಾರ್ ಗೆ ನಾಯಕತ್ವ, ತಕ್ಷಣವೇ ಅಲ್ಲ ಎಂದ ಶಾಸಕ ಪೊನ್ನಣ್ಣ

ಸಿಎಂ ಸಿದ್ದರಾಮಯ್ಯ ನಂತರ ಡಿ.ಕೆ. ಶಿವಕುಮಾರ್ ಅವರೇ ಪಕ್ಷದ ನಾಯಕರು, ಆದರೆ ಅದು ತಕ್ಷಣ ಆಗಬೇಕಿಲ್ಲ ಎಂದು ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ. ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾಗುವುದನ್ನು ಬಣ ರಾಜಕೀಯ ಎನ್ನಲಾಗದು  ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Read Full Story

07:29 PM (IST) Nov 21

ಚಿಕ್ಕಮಗಳೂರು ಗ್ರಾಮದಲ್ಲಿ ಪತ್ತೆಯಾದ ಹೊಸ ಜಾತಿಯ ಜೇಡ, ಮಲೆನಾಡಿಗರಿಗೆ ಹೆಮ್ಮೆ ಮೂಡುವಂಥ ಹೆಸರಿಟ್ಟ ಸಂಶೋಧಕರು

ಚಿಕ್ಕಮಗಳೂರಿನ ಮಧುಗುಂಡಿ ಗ್ರಾಮದಲ್ಲಿ ಸಂಶೋಧಕರು 'ಪಿಲಿಯಾ ಮಲೆನಾಡು' ಎಂಬ ಹೊಸ ಜಿಗಿಯುವ ಜೇಡದ ಪ್ರಭೇದವನ್ನು ಕಂಡುಹಿಡಿದಿದ್ದಾರೆ. ಸುಮಾರು 123 ವರ್ಷಗಳ ನಂತರ ಈ ಕುಲದ ಜೇಡ ಪತ್ತೆಯಾಗಿದ್ದು, ಇದೇ ಮೊದಲ ಬಾರಿಗೆ ಗಂಡು ಮತ್ತು ಹೆಣ್ಣು ಎರಡೂ ಜೇಡಗಳು ಪತ್ತೆಯಾಗಿವೆ. 

Read Full Story

07:22 PM (IST) Nov 21

ಡೇಂಜರಸ್​ ಜಾಗದ ಚಾಲೆಂಜ್​ ಜೊತೆ ಮತ್ತೆ ಡಾ.ಬ್ರೋ ಪ್ರತ್ಯಕ್ಷ - ಈ ಬಾರಿ ಸೀದಾ ಪಾತಾಳ ಲೋಕದ ದರ್ಶನ!

ಕೆಲಕಾಲ ಯುಟ್ಯೂಬ್​ನಿಂದ ದೂರವಿದ್ದ ಡಾ.ಬ್ರೋ ಅಲಿಯಾಸ್ ಗಗನ್, ಇದೀಗ ಮಾರಿಟೇನಿಯಾ ದೇಶದ ವೀಡಿಯೋದೊಂದಿಗೆ ಮರಳಿದ್ದಾರೆ. ಇಲ್ಲಿನ ಭೂಗತ ಕೊಳವೆ ವ್ಯವಸ್ಥೆಯನ್ನು 'ಪಾತಾಳ ಲೋಕ' ಎಂದು ಹಾಸ್ಯಮಯವಾಗಿ ವರ್ಣಿಸಿ, ಅದರ ನಿಜವಾದ ಉದ್ದೇಶವನ್ನು ಕುತೂಹಲಕಾರಿಯಾಗಿ ವಿವರಿಸಿದ್ದಾರೆ.
Read Full Story

07:09 PM (IST) Nov 21

ಕರ್ನಾಟಕ ಹೊಸ ಐಟಿ ನೀತಿ - ಬೆಂಗಳೂರಿಂದ ಹೊರಗೆ ಸಿಟಿಗಳಲ್ಲಿ ಕೆಲಸ ಮಾಡೋರಿಗೆ 50 ಸಾವಿರ ಪ್ರೋತ್ಸಾಹ ಧನ!

ಕರ್ನಾಟಕ ಹೊಸ ಐಟಿ ನೀತಿ 2025-30 ಅನ್ನು ಘೋಷಿಸಿದ್ದು, ಬೆಂಗಳೂರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಲು 2ನೇ ಹಂತದ ನಗರಗಳ ಅಭಿವೃದ್ಧಿಗೆ ಒತ್ತು ನೀಡಿದೆ. ಈ ನೀತಿಯಡಿ, ಉದ್ಯೋಗಿಗಳನ್ನು ಸ್ಥಳಾಂತರಿಸುವ ಕಂಪನಿಗಳಿಗೆ ಆಸ್ತಿ ತೆರಿಗೆ ವಿನಾಯಿತಿ ಮತ್ತು ಪ್ರತಿ ಉದ್ಯೋಗಿಗೆ ₹50,000 ವರೆಗೆ ಪ್ರೋತ್ಸಾಹ ಧನ.

Read Full Story

05:52 PM (IST) Nov 21

ಅನಿಷ್ಠ ಪದ್ದತಿ ಇನ್ನೂ ಜೀವಂತ! ಬಹಿಷ್ಕಾರ ಹಿಂಪಡೆಯಲು 16 ಊರು ಕಟ್ಟೆಮನೆಯವರ ವಿರೋಧ 80 ಕುಟುಂಬಗಳ ಮೌನ ರೋಧನೆ!

ಚಾಮರಾಜನಗರ ಜಿಲ್ಲೆಯ ಯಡವನಹಳ್ಳಿ ಗ್ರಾಮದಲ್ಲಿ, ಎರಡು ವರ್ಷಗಳ ಹಿಂದೆ ಸಾಮಾಜಿಕ ಬಹಿಷ್ಕಾರದಿಂದ ಆತ್ಮ*ಹತ್ಯೆ ಮಾಡಿಕೊಂಡ ವ್ಯಕ್ತಿಯ ಕುಟುಂಬವನ್ನು ಬೆಂಬಲಿಸಿದ್ದಕ್ಕಾಗಿ 80 ಕುಟುಂಬಗಳನ್ನು ಕುಲದಿಂದ ಹೊರಹಾಕಲಾಗಿದೆ. ಕಟ್ಟೆಮನೆಯ ಈ ತೀರ್ಪಿನಿಂದಾಗಿ ಯಾವುದೇ ಶುಭ ಸಮಾರಂಭಗಳಲ್ಲಿ ಹೋಗುವಂತಿಲ್ಲ.

Read Full Story

05:44 PM (IST) Nov 21

ನನ್ನ ನಂಬರ್ ಯಾಕೆ? ₹7 ಕೋಟಿ ರಾಬರಿ ಕೇಸ್‌ಲ್ಲಿ ಪೊಲೀಸ್ ಕದ ತಟ್ಟಿದಾಗ ಬೆಚ್ಚಿ ಬಿದ್ದ ಹಿರಿಯ ನಾಗರೀಕ

ನನ್ನ ನಂಬರ್ ಯಾಕೆ? ₹7 ಕೋಟಿ ರಾಬರಿ ಕೇಸ್‌ಲ್ಲಿ ಪೊಲೀಸ್ ಕದ ತಟ್ಟಿದಾಗ ಬೆಚ್ಚಿ ಬಿದ್ದ ಹಿರಿಯ ನಾಗರೀಕ, ನಿವೃತ್ತಿ ಜೀವನದಲ್ಲಿ ತಾನಾಯ್ತು, ತನ್ನ ಪಾಡಾಯ್ತು ಅಂತ ಇದ್ದ 78 ವರ್ಷದ ಹಿರಿಯ ನಾಗರೀಕನ ಪ್ರಶ್ನೆಗೆ ಸದ್ಯ ಪೊಲೀಸರ ಬಳಿಯೂ ಉತ್ತರ ಸಿಕ್ಕಿಲ್ಲ.

 

Read Full Story

05:03 PM (IST) Nov 21

ಟ್ರೋಲಿಗರಿಗೆ ಉತ್ತರಿಸುತ್ತಲೇ ಪತಿಯನ್ನು ಬೀಳ್ಕೊಟ್ಟ ನವ ವಿವಾಹಿತೆ ನಟಿ ರಜಿನಿ ಹೇಳಿದ್ದೇನು?

'ಅಮೃತವರ್ಷಿಣಿ' ಖ್ಯಾತಿಯ ನಟಿ ರಜಿನಿ, ತಮ್ಮ ಜಿಮ್ ಟ್ರೈನರ್ ಹಾಗೂ ರೀಲ್ಸ್ ಪಾರ್ಟನರ್ ಆಗಿದ್ದ ಅರುಣ್ ವೆಂಕಟೇಶ್ ಜೊತೆ ದಿಢೀರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮಿಬ್ಬರ ಸಂಬಂಧವನ್ನು 'ವಿಡಿಯೋ ಪಾರ್ಟನರ್' ಎಂದು ಹೇಳಿಕೊಳ್ಳುತ್ತಿದ್ದ ಈ ಜೋಡಿ, ಮದುವೆಯಾಗಿ ಅಚ್ಚರಿ ಮೂಡಿಸಿದ್ದಾರೆ.

Read Full Story

04:56 PM (IST) Nov 21

ಅದ್ದೂರಿ ಮದುವೆಯಾಗಿ, ಹನಿಮೂನ್‌ಗೆ ಹೊರಟ Amruthadhaare Serial ನಟಿ ಮೇಘಾ ಶೆಣೈ; ಫೋಟೋಗಳಿವು

Amruthadhaare Serial Actress Megha Shenoy Photos: ಅಮೃತಧಾರೆ ಧಾರಾವಾಹಿಯ ಸುಧಾ ಪಾತ್ರಧಾರಿ ನಟಿ ಮೇಘಾ ಶೆಣೈ ಅವರು ಇತ್ತೀಚೆಗೆ ಮದುವೆಯಾಗಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಅವರು ಮದುವೆಯ ಅದ್ದೂರಿ ಫೋಟೋಗಳನ್ನು ಹಂಚಿಕೊಂಡಿದ್ದರು. ಈಗ ಹನಿಮೂನ್‌ಗೆ ತೆರಳಿದ್ದಾರೆ. 

 

Read Full Story

04:18 PM (IST) Nov 21

Bigg Boss - ಮಲಗಿರೋ ಸೂರಜ್​ನ ಮಧ್ಯರಾತ್ರಿ ಎಬ್ಬಿಸಿ ಪಕ್ಕದಲ್ಲಿ ಬಂದು ರಾಶಿಕಾ ಶೆಟ್ಟಿ ಹೀಗೆ ಮಾಡೋದಾ?

ಬಿಗ್ ಬಾಸ್ ಮನೆಯಲ್ಲಿ ಸೂರಜ್ ಸಿಂಗ್ ಮತ್ತು ರಾಶಿಕಾ ನಡುವಿನ ಪ್ರೇಮ ಕಹಾನಿ ಸದ್ದು ಮಾಡುತ್ತಿದೆ. ವೀಕೆಂಡ್ ಟೆನ್ಷನ್ ನಡುವೆಯೂ, ರಾಶಿಕಾ ಶೆಟ್ಟಿ ನೀರಿನಲ್ಲಿ ಏನೋ ಕಾಣಿಸುತ್ತಿದೆ ಎಂದು ಸೂರಜ್ ತಲೆ ಕೆಡಿಸಿದ್ದು, ಇವರಿಬ್ಬರ ಜೋಡಿಗೆ ಅಭಿಮಾನಿಗಳು 'ಸುರಾಶಿ' ಎಂದು ಹೆಸರಿಟ್ಟಿದ್ದಾರೆ.

Read Full Story

04:14 PM (IST) Nov 21

ನಾನೇ ಸಿಎಂ, ನಾನೇ ಇನ್ನೂ ಎರಡು ಬಜೆಟ್ ಮಂಡಿಸುತ್ತೇನೆ, ಮೈಸೂರಿನಿಂದ ಸಿದ್ದರಾಮಯ್ಯ ಖಡಕ್ ಸಂದೇಶ!

ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳನ್ನು ತಳ್ಳಿಹಾಕಿದ್ದು, ತಾವೇ ಸಿಎಂ ಆಗಿ ಮುಂದುವರೆಯುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ,  ಕೇಂದ್ರ ಸರ್ಕಾರದ ಆಮದು ನೀತಿಯನ್ನು ವಿರೋಧಿಸಿ ಪತ್ರ ಬರೆಯುವುದಾಗಿ ಭರವಸೆ ನೀಡಿದ್ದಾರೆ.

Read Full Story

03:27 PM (IST) Nov 21

BBK 12 - ಮಲಗಿದ್ದ ಉತ್ತರ ಕರ್ನಾಟಕ ಹುಲಿ ಎಬ್ಬಿಸಿದ್ರು; ಮೂರನೇ ಕಣ್ಣು ಬಿಟ್ಟ ಮಾಳು ನಿಪನಾಳ

Bigg Boss Kannada Season 12 Updates: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಕಿಚನ್‌ ಏರಿಯಾದಲ್ಲಿ ಮಾಳು ನಿಪನಾಳ, ರಘು ಅವರು ಇದ್ದರು. ಆಗ ರಿಷಾ ನಕ್ಕಿದ್ದಾರೆ. ಅಲ್ಲಿಂದ ಒಂದು ಜಗಳ ಶುರು ಆಗಿದೆ. ಮಾಳು ಇದ್ದಕ್ಕಿದ್ದಂತೆ ಕೂಗಾಡಿದ್ದಾರೆ.

Read Full Story

03:21 PM (IST) Nov 21

ಬೆಂಗಳೂರು ದರೋಡೆ ಪ್ರಕರಣ, 8 ಮಂದಿ ಬಂಧನ ಚಿತ್ತೂರಿನಲ್ಲಿ ಕಾರು ಪತ್ತೆ, 5.5 ಕೋಟಿ ರಿಕವರಿ, ಮಿಕ್ಕ ಹಣವೆಲ್ಲಿ?

ಬೆಂಗಳೂರಿನ 7.11 ಕೋಟಿ ದರೋಡೆ ಪ್ರಕರಣದಲ್ಲಿ ಪೊಲೀಸರು ಐದೂವರೆ ಕೋಟಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕಾನ್ಸ್‌ಟೇಬಲ್ ಸೇರಿದಂತೆ ಒಟ್ಟು 8 ಮಂದಿಯನ್ನು ಬಂಧಿಸಲಾಗಿದ್ದು, ದರೋಡೆಗೆ ಬಳಸಿದ್ದ ಶಂಕಿತ ಇನೋವಾ ಕಾರು ಚಿತ್ತೂರು ಬಳಿ ಪತ್ತೆಯಾಗಿದೆ.

Read Full Story

03:05 PM (IST) Nov 21

BBK 12 - ಅಶ್ವಿನಿ ಗೌಡಗೆ ನಂಬೋಕೆ ಆಗ್ಲಿಲ್ಲ; ಚದುರಂಗದಾಟ ಆಡಿದ ಜಗತ್‌ ಕಿಲಾಡಿ ಗಿಲ್ಲಿ ನಟ!

Bigg Boss Kannada Season 12 Update: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ, ಜಾಹ್ನವಿ ಮಧ್ಯೆ ಮನಸ್ತಾಪ ಇದೆ. ಈ ಬಾರಿ ಅಶ್ವಿನಿ, ಗಿಲ್ಲಿ ನಟ ಅವರು ಎರಡು ಟೀಂಗಳಾಗಿ ಆಟ ಆಡಿದ್ದಾರೆ. ಅಶ್ವಿನಿ ಗೌಡ ಲೆಕ್ಕಾಚಾರವನ್ನು ಗಿಲ್ಲಿ ಅವರು ಉಲ್ಟಾ ಮಾಡಿದ್ದಾರೆ.

Read Full Story

02:44 PM (IST) Nov 21

ಡಿಕೆಶಿ ಪರ ಹಿರಿಯ ಶಾಸಕ 'ಬ್ಯಾಟಿಂಗ್'; ಹೈಕಮಾಂಡ್ ಅಂಗಳಕ್ಕೆ ಚೆಂಡು ಎಸೆದ ಜಿಎಸ್ ಪಾಟೀಲ್!

ಹಿರಿಯ ಶಾಸಕ ಜಿಎಸ್ ಪಾಟೀಲ್, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ, ಅವರನ್ನು ತಮ್ಮ ಹಳೆಯ ಸ್ನೇಹಿತ ಎಂದು ಬಣ್ಣಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚಿಸಿದ್ದಾಗಿ ಹೇಳಿದರೂ, ಡಿಕೆಶಿ ಪರ ಬ್ಯಾಟಿಂಗ್ ಬೀಸಿದ್ದು ಹಾಗೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದಿರುವುದು ಕುತೂಹಲ..

Read Full Story

02:02 PM (IST) Nov 21

Bigg Bossನಲ್ಲಿ ಹವಾ ಸೃಷ್ಟಿಸಿರೋ ಗಿಲ್ಲಿ ನಟನ ಯುಟ್ಯೂಬ್​ ಆದಾಯ ಎಷ್ಟು ಗೊತ್ತಾ? ನಲ್ಲಿಮೂಳೆಯಿಂದ್ಲೇ ಸಕತ್​ ಫೇಮಸ್​ ಇವ್ರು!

ಬಿಗ್ ಬಾಸ್‌ನಲ್ಲಿ ಜನಪ್ರಿಯರಾಗಿರುವ ಗಿಲ್ಲಿ ನಟ ಅಲಿಯಾಸ್ ನಟರಾಜ್, ಮಂಡ್ಯದ ರೈತ ಕುಟುಂಬದ ಹಿನ್ನೆಲೆಯುಳ್ಳವರು. ತಮ್ಮ 'ನಲ್ಲಿಮೂಳೆ' ಕಾಮಿಡಿ ವಿಡಿಯೋಗಳಿಂದ ಯೂಟ್ಯೂಬ್‌ನಲ್ಲಿ ಪ್ರಸಿದ್ಧರಾದ ಇವರ ಯೂಟ್ಯೂಬ್ ಆದಾಯದ ಅಂದಾಜು ಲೆಕ್ಕಾಚಾರವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Read Full Story

01:55 PM (IST) Nov 21

ಮೆಟ್ರೋ ಬಗ್ಗೆ ಗೊಂದಲ ಬೇಡ, 2ನೇ ಏರ್‌ಪೋರ್ಟ್ ತುಮಕೂರಿಗೇ ಬೇಕು - ಮಾಜಿ ಸಂಸದ ಜಿ.ಎಸ್. ಬಸವರಾಜ್ ಪಟ್ಟು!

ಮಾಜಿ ಸಂಸದ ಜಿ.ಎಸ್. ಬಸವರಾಜ್ ಅವರು, ತುಮಕೂರು ಮೆಟ್ರೋ ವಿಸ್ತರಣೆ ಕುರಿತ ಗೊಂದಲ ನಿವಾರಣೆಗೆ ಸಂವಾದಕ್ಕೆ ಆಹ್ವಾನಿಸಿದ್ದು, ಮೆಟ್ರೋವನ್ನು ವಸಂತನರಸಾಪುರದವರೆಗೂ ವಿಸ್ತರಿಸಲು ಸಲಹೆ ನೀಡಿದ್ದಾರೆ. ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರಿನಲ್ಲಿ ಸ್ಥಾಪಿಸಲು ಸರ್ಕಾರವನ್ನು ಒತ್ತಾಯ.

Read Full Story

01:22 PM (IST) Nov 21

ಬ್ಯಾಡಗಿ - ಇದು ಸಾಮೂಹಿಕ ವಿವಾಹ ಅಲ್ಲ, ಚೊಚ್ಚಲ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ!

Traditional Indian baby shower ceremony: ಬ್ಯಾಡಗಿಯ ಗರದ ದಾನಮ್ಮದೇವಿ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ 200ಕ್ಕೂ ಹೆಚ್ಚು ಚೊಚ್ಚಲ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವು ಸರ್ವಧರ್ಮೀಯರ ಭಾಗವಹಿಸುವಿಕೆಯಿಂದ ಭಾವೈಕ್ಯತೆಗೆ ಸಾಕ್ಷಿಯಾಯಿತು,

Read Full Story

01:02 PM (IST) Nov 21

ಬಿಸಿಲಿಗೆ ಮೈಬಣ್ಣ ಕಪ್ಪಾಗಿದೆಯಾ? ಪಳಪಳ ಹೊಳೆಯಲು ಮನೆಯಲ್ಲೇ ತಯಾರಿಸಿ ಈ 'ಡಿ-ಟ್ಯಾನ್' ಪ್ಯಾಕ್‌!

Homemade D-tan pack :ಬಿಸಿಲಿನಿಂದ ಕಪ್ಪಾದ ದೇಹವನ್ನು ಮೊದಲಿನಂತೆ ಹೊಳೆಯುವಂತೆ ಮಾಡಲು ಮನೆಯಲ್ಲಿಯೇ ಮಾಡಬಹುದಾದ ಸರಳ ವಿಧಾನಗಳಿವೆ. ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಕಾಫಿ ಮತ್ತು ತೆಂಗಿನ ಎಣ್ಣೆಯ ಮಿಶ್ರಣವನ್ನು ಬಳಸುವುದು ತುಂಬಾ ಒಳ್ಳೆಯದು.

 

Read Full Story

12:52 PM (IST) Nov 21

ನನಗೆ 2ನೇ ಮದುವೆಯಾಗಿ 2 ವರ್ಷವಾಯ್ತು; ಗಂಡನ ಬಗ್ಗೆ Naa Ninna Bidalaare Serial ಕೋಳಿ ರಮ್ಯ ಮಾತು

Kannada Actress Koli Ramya News: ಕನ್ನಡದ ಕೆಲವು ರಿಯಾಲಿಟಿ ಶೋ, ಪುಟ್ಟಗೌರಿ ಮದುವೆ ಧಾರಾವಾಹಿ ಖ್ಯಾತಿಯ ನಟಿ ಕೋಳಿ ರಮ್ಯಾ ಅವರೀಗ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಯುಟ್ಯೂಬ್‌ ಚಾನೆಲ್‌ ಹೊಂದಿರುವ ಅವರು ಆಗಾಗ ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿರುತ್ತಾರೆ.

 

Read Full Story

12:42 PM (IST) Nov 21

ರಾಜ್ಯ ಪೊಲೀಸ್ ಇಲಾಖೆ ಮರ್ಯಾದಿ ತೆಗೆದ ಪೇದೆ, ಬೆಂಗಳೂರು ದರೋಡೆ ಪ್ರಕರಣದ ಮಾಸ್ಟರ್‌ಮೈಂಡ್ ಕಾನ್ಸ್‌ಟೇಬಲ್!

ಬೆಂಗಳೂರನ್ನು ಬೆಚ್ಚಿಬೀಳಿಸಿದ ದರೋಡೆ ಪ್ರಕರಣದ ಮಾಸ್ಟರ್‌ಮೈಂಡ್ ಪೊಲೀಸ್ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯಕ್‌ನನ್ನು ಬಂಧಿಸಲಾಗಿದೆ. CMS ಕಂಪನಿಯ ಮಾಜಿ ಉದ್ಯೋಗಿ ಜೊತೆ ಸೇರಿ, ದರೋಡೆಗೆ ಸ್ಕೆಚ್ ಹಾಕಿ, ಆರೋಪಿಗಳಿಗೆ ತರಬೇತಿ ನೀಡಿರುವುದು ತನಿಖೆಯಿಂದ ಬಯಲಾಗಿದೆ.
Read Full Story

12:31 PM (IST) Nov 21

ಬೆಳಗಾವಿ - ಮಾತೃಭಾಷೆ ಮರಾಠಿಯಾದ್ರೂ ಕನ್ನಡವೆಂದರೆ ಪಂಚಪ್ರಾಣ! ಯಾರು ಸಂಗೀತ ಶಿಕ್ಷಕ?

ಬೆಳಗಾವಿಯ ಸಂಗೀತ ಶಿಕ್ಷಕ ವಿನಾಯಕ ಮೋರೆ, ಮಾತೃಭಾಷೆ ಮರಾಠಿಯಾದರೂ ಕನ್ನಡ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಾರೆ. ಸಾವಿರಾರು ವಿದ್ಯಾರ್ಥಿಗಳಿಗೆ ಕನ್ನಡ ನಾಡಗೀತೆ, ದೇಶಭಕ್ತಿ ಗೀತೆಗಳನ್ನು ಕಲಿಸಿ, ಸಮೂಹ ಗಾಯನದಲ್ಲಿ ವಿಶ್ವ ದಾಖಲೆಗಳನ್ನು ನಿರ್ಮಿಸಿ, ಭಾಷಾ ಸೌಹಾರ್ದತೆಗೆ ಮಾದರಿಯಾಗಿದ್ದಾರೆ.
Read Full Story

12:20 PM (IST) Nov 21

BBK 12 - ರಕ್ಷಿತಾ-ಗಿಲ್ಲಿ ನಟ ಸೇರಿದ್ರೆ ಸುನಾಮಿ; ಅಶ್ವಿನಿ ಗೌಡ ಮುಂದೆ ಗೆದ್ದು ಬೀಗಿದ ಅಣ್ಣ-ತಂಗಿ

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಈ ವಾರದ ಕೊನೆಯ ಟಾಸ್ಕ್‌ ನೀಡಿದ್ದರು. ‘ಸೇತುವೆ ಸವಾಲು’ ಎನ್ನುವ ಟಾಸ್ಕ್‌ನಲ್ಲಿ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಅವರು ತಮ್ಮ ಟೀಂನಿಂದ ಆಡುವವರನ್ನು ಆಯ್ಕೆ ಮಾಡಬೇಕಿತ್ತು. ಈ ಆಟದಲ್ಲಿ ಸಣ್ಣಗಿರುವವರು ಒಬ್ಬರು ಸಿಕ್ಕರೆ ಆಟ ಸುಲಭವಾಗುತ್ತಿತ್ತು.

Read Full Story

12:10 PM (IST) Nov 21

ಮೈಸೂರು - ರಾಜ್ಯಕ್ಕೆ ಉಚಿತ ವಿದ್ಯುತ್ ನೀಡಿದ ಸಿಎಂ ಮನೆಗೇ ಇಲ್ಲ ಪವರ್! ಗೃಹಪ್ರವೇಶದ ಹೊತ್ತಲ್ಲೇ ಎದುರಾಯ್ತು ಕಾನೂನು ಕಂಟಕ

'ಗೃಹಜ್ಯೋತಿ' ಯೋಜನೆ ಜಾರಿಗೊಳಿಸಿದ ಸಿಎಂ ಸಿದ್ದರಾಮಯ್ಯ ಅವರ ಮೈಸೂರಿನ ಹೊಸ ಮನೆಗೆ ಕಾಯಂ ವಿದ್ಯುತ್ ಸಂಪರ್ಕ ಪಡೆಯಲು ಕಾನೂನಿನ ತೊಡಕು ಎದುರಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ 'ಸ್ವಾಧೀನಾನುಭವ ಪತ್ರ' (OC) ಸಲ್ಲಿಸದ ಕಾರಣ, ಡಿಸೆಂಬರ್‌ನ ಗೃಹಪ್ರವೇಶಕ್ಕೆ ಮುನ್ನ ತಾತ್ಕಾಲಿಕ ಸಂಪರ್ಕಅವಲಂಬಿಸಬೇಕಾಗಿದೆ.

Read Full Story

11:22 AM (IST) Nov 21

ಯಲಹಂಕದಲ್ಲಿ ವಾರ್ಡ್ ಒಂದಕ್ಕೆ 'ಆಕಾಶ್' ಹೆಸರು, ಭುಗಿಲೆದ್ದ ವಿವಾದ, ಡಿಕೆಶಿ ಪುತ್ರನ ಹೆಸರೇ?, ಇದರ ಸಾಧನೆ ಏನು? ಬಿಜೆಪಿ ಶಾಸಕ ಆಕ್ಷೇಪ

ಬೆಂಗಳೂರಿನ ಯಲಹಂಕ ಕ್ಷೇತ್ರದ ವಾರ್ಡ್‌ಗೆ 'ಆಕಾಶ್' ಎಂದು ಮರುನಾಮಕರಣ ಮಾಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಹೆಸರಿಗೆ ಶಾಸಕ ಎಸ್.ಆರ್. ವಿಶ್ವನಾಥ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಡಿಸಿಎಂ ಡಿಕೆ ಶಿವಕುಮಾರ್  ಪುತ್ರನ ಹೆಸರಿರಬಹುದು, ಕೂಡಲೇ ಹೆಸರನ್ನು ಬದಲಿಸುವಂತೆ ಆಗ್ರಹಿಸಿದ್ದಾರೆ.

Read Full Story

11:11 AM (IST) Nov 21

Bigg Boss ವಿಷ್ಯ, ಕಿಚ್ಚ ಸುದೀಪ್‌ ವಿರುದ್ಧ ದೂರು ನೀಡಿದವ್ರ ಹಿಂದಿದೆ ಕ್ರಿಮಿನಲ್‌ ಹಿಸ್ಟರಿ; ನಲಪ್ಪಾಡ್‌ ಎಚ್ಚರಿಕೆ

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ವಿಚಾರವಾಗಿ ಒಂದಿಲ್ಲೊಂದು ವಿವಾದಗಳು ಕೇಳಿ ಬರುತ್ತಲೇ ಇರುತ್ತದೆ. ಈಗ ಮಾಜಿ ಕಾಂಗ್ರೆಸ್‌ ಯೂಥ್‌ ಸೆಕ್ರೆಟರಿ ಸಂಧ್ಯಾ ಪವಿತ್ರಾ ನಾಗರಾಜ್‌ ಅವರು ಕಿಚ್ಚ ಸುದೀಪ್‌, ಅಶ್ವಿನಿ ಗೌಡ, ರಿಷಾ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

Read Full Story

10:41 AM (IST) Nov 21

ಸಂಚಾರ ದಂಡ ಪಾವತಿಗೆ ಶೇ.50 ರಿಯಾಯ್ತಿ - ಇಂದಿನಿಂದ ಮತ್ತೆ ಜಾರಿ, 20 ದಿನ ಅವಕಾಶ

ರಾಜ್ಯ ಸರ್ಕಾರವು 1991-92 ರಿಂದ 2019-20ರ ಅವಧಿಯ ಹಳೆಯ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ಮತ್ತೆ ಶೇ.50 ರಷ್ಟು ರಿಯಾಯಿತಿ ಘೋಷಿಸಿದೆ. ನವೆಂಬರ್ 21 ರಿಂದ ಡಿಸೆಂಬರ್ 12ರ ವರೆಗೆ ಈ ಅವಕಾಶ ಲಭ್ಯವಿದ್ದು, ಸಂಚಾರ ಪೊಲೀಸ್ ಠಾಣೆಗಳು ಅಥವಾ ಆನ್‌ಲೈನ್ ಮೂಲಕ ದಂಡ ಪಾವತಿಸಬಹುದು.
Read Full Story

10:11 AM (IST) Nov 21

RTI ದಾಖಲೆ ಪಡೆಯಲು ಹಸು ಮಾರಿದ ರೈತ; ಎತ್ತಿನಗಾಡಿಯಲ್ಲಿ ಸಾಗಿಸಿದ 16,000 ಪುಟಗಳ ದಾಖಲೆ!

ಹಾಸನ ಜಿಲ್ಲೆಯ ರೈತರೊಬ್ಬರು ತಮ್ಮ ಗ್ರಾಪಂ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ದಾಖಲೆ ಪಡೆಯಲು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದಾರೆ.  ಶುಲ್ಕವಾದ ₹32,000 ಪಾವತಿಸಲು ಹಣವಿಲ್ಲದೆ, ತಮ್ಮ ಹಾಲು ಕೊಡುವ ಹಸುವನ್ನೇ ಮಾರಾಟ ಮಾಡಿ 16,000 ಪುಟಗಳ ದಾಖಲೆಗಳನ್ನು ಪಡೆದಿದ್ದಾರೆ.

Read Full Story

09:37 AM (IST) Nov 21

ಲಾಲ್‌ಬಾಗ್‌ನಲ್ಲಿ ಇನ್ಮುಂದೆ ರೀಲ್ಸ್, ಫೋಟೋಶೂಟ್‌ಗೆ ನೋ ಎಂಟ್ರಿ! ಈ ನಿಯಮ ಉಲ್ಲಂಘಿಸಿದರೆ ₹500 ದಂಡ!

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಸಸ್ಯ ಸಂಪತ್ತಿನ ಸಂರಕ್ಷಣೆಗಾಗಿ ಸರ್ಕಾರ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಇದರ ಅಡಿಯಲ್ಲಿ ಫೋಟೋಶೂಟ್‌, ಕ್ರೀಡೆಗಳಂತಹ ಮನರಂಜನಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ವಾಕಿಂಗ್‌ಗೆ ಮಾತ್ರ ಸೀಮಿತ ಸಮಯ ನಿಗದಿಪಡಿಸಲಾಗಿದೆ. ನಿಯಮ ಉಲ್ಲಂಘಿಸಿದವರಿಗೆ ದಂಡ 

Read Full Story

09:29 AM (IST) Nov 21

BBK 12 - ನೀವು ನನ್ನಂಥವ್ರನ್ನ ನೋಡಿರಲ್ಲ; ಅಶ್ವಿನಿ ಗೌಡ ಮರು ಮಾತನಾಡದಂತೆ ಮಾಡಿದ ಗಿಲ್ಲಿ ನಟ!

Bigg Boss ಮನೇಲಿ ಈ ವಾರವಂತೂ ಒಂದಲ್ಲ ಒಂದು ಜಗಳ ಆಗಿದೆ. ರಘು, ಅಶ್ವಿನಿಗೆ ಗೌಡಗೆ ಅಶ್ವಿನಿ ಎಂದಿದ್ದರು. ಇದರಿಂದ ದೊಡ್ಡ ಜಗಳ ಆಗಿದೆ. ಕ್ಯಾಪ್ಟನ್ಸಿ ಟಾಸ್ಕ್‌ ಇದ್ದು, ನಾನು ಆಡಬೇಕು ಎಂದು ಎಲ್ಲರೂ ಮುಗಿಬಿದ್ದಿದ್ದರು. ಕ್ಯಾಪ್ಟನ್‌ ಆದರೆ 1 ವಾರದ ಎಲಿಮಿನೇಶನ್‌ನಿಂದ ಇಮ್ಯುನಿಟಿ ಸಿಗುತ್ತದೆ. 

Read Full Story

09:14 AM (IST) Nov 21

ಬಂಡವಾಳ ಆಕರ್ಷಿಸಲು ನ.24ಕ್ಕೆ ಲಂಡನ್‌ಗೆ ನಿಯೋಗ - ಎಂಬಿ ಪಾಟೀಲ್

ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ರಾಜ್ಯಕ್ಕೆ ಹೂಡಿಕೆ ಆಕರ್ಷಿಸಲು ಉನ್ನತ ಮಟ್ಟದ ನಿಯೋಗದೊಂದಿಗೆ ಲಂಡನ್‌ಗೆ ಭೇಟಿ ನೀಡಲಿದ್ದಾರೆ. ಈ ಭೇಟಿಯ ವೇಳೆ, ಅವರು ಎಲಿಮೆಂಟ್ 6, ಎಆರ್‌ಎಂ ಲಿಂಡೆ, ಮಾರ್ಟಿನ್ ಬೇಕರ್‌ ಸೇರಿದಂತೆ ಹಲವು ಪ್ರಮುಖ ಬ್ರಿಟಿಷ್ ಕಂಪನಿಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಲಿದ್ದಾರೆ.
Read Full Story

More Trending News