- Home
- Entertainment
- TV Talk
- BBK 12: ಮಲಗಿದ್ದ ಉತ್ತರ ಕರ್ನಾಟಕ ಹುಲಿ ಎಬ್ಬಿಸಿದ್ರು; ಮೂರನೇ ಕಣ್ಣು ಬಿಟ್ಟ ಮಾಳು ನಿಪನಾಳ
BBK 12: ಮಲಗಿದ್ದ ಉತ್ತರ ಕರ್ನಾಟಕ ಹುಲಿ ಎಬ್ಬಿಸಿದ್ರು; ಮೂರನೇ ಕಣ್ಣು ಬಿಟ್ಟ ಮಾಳು ನಿಪನಾಳ
Bigg Boss Kannada Season 12 Updates: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಕಿಚನ್ ಏರಿಯಾದಲ್ಲಿ ಮಾಳು ನಿಪನಾಳ, ರಘು ಅವರು ಇದ್ದರು. ಆಗ ರಿಷಾ ನಕ್ಕಿದ್ದಾರೆ. ಅಲ್ಲಿಂದ ಒಂದು ಜಗಳ ಶುರು ಆಗಿದೆ. ಮಾಳು ಇದ್ದಕ್ಕಿದ್ದಂತೆ ಕೂಗಾಡಿದ್ದಾರೆ.

ಮಾಳು ನಿಪನಾಳ ಮಾತಾಡೋದು ಕಮ್ಮಿ
ಮಾಳು ನಿಪನಾಳ ಮಾತನಾಡೋದಿಲ್ಲ, ಮಾತೇ ಬರಲ್ಲ ಎಂದುಕೊಂಡಿದ್ದರು. ಆದರೆ ಕ್ಯಾಪ್ಟನ್ಸಿ ಟಾಸ್ಕ್ ವೇಳೆ ವೀಕ್ಷಕರ ಮುಂದೆ ಭರ್ಜರಿಯಾಗಿ ಮಾತನಾಡಿದ್ದರು. ಇದು ಎಲ್ಲರಿಗೂ ಆಶ್ಚರ್ಯ ಆಗಿತ್ತು. ಅವರೇ ಕ್ಯಾಪ್ಟನ್ ಕೂಡ ಆಗಿದ್ದರು.
ಮಾಳು ಮಾತು ಕೇಳೋದು ಅಪರೂಪ
ಬಿಗ್ ಬಾಸ್ ಮನೆಯಲ್ಲಿ ಮಾಳು ಮಾತು ಕೇಳೋದು ತುಂಬ ಅಪರೂಪ. ಈಗ ಕಿಚನ್ ಏರಿಯಾದಲ್ಲಿ ರಿಷಾ ಗೌಡ ನಕ್ಕಿದ್ದಾರೆ. ಅದನ್ನು ಕೇಳಿ ಮಾಳು ಅವರು, “ಸುಮ್ ಸುಮ್ನೆ ನಕ್ಕಿದ್ರೆ ಹುಚ್ಚರು ಅಂತಾರೆ” ಎಂದಿದ್ದಾರೆ.
ನಿಂದೇ ದೊಡ್ಡ ಸಮಸ್ಯೆ
ಆಗ ರಿಷಾ ಅವರು, “ಡೇ ಒನ್ನಿಂದ ನಿಮಗೆ ಏನು ಸಮಸ್ಯೆ ಅಂತ ಗೊತ್ತಿಲ್ಲ” ಎಂದಿದ್ದಾರೆ. ಆಗ ಮಾಳು ಅವರು, “ನಿಂದೇ ದೊಡ್ಡ ಸಮಸ್ಯೆ, ನಿನ್ನನ್ನು ಯಾರು ಮಾತನಾಡಿಸಿದ್ರು?” ಎಂದಿದ್ದಾರೆ.
ಏನು ಕಿರುಚೋದು?
ರಿಷಾ ಅವರು, “ಇದನ್ನೆಲ್ಲ ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ. ಇದು ನಿಮ್ಮನೇನಾ? ಏನು ಕಿರುಚೋದು?” ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಮಾಳು ಅವರು, “ಮನೆ ಅಂತ ಮಾಡೋಕೆ ಶುರು ಮಾಡಿದ್ರೆ? ಲಾಸ್ಟ್ ವಾರ್ನಿಂಗ್ ಕೊಡ್ತಿದೀನಿ” ಎಂದಿದ್ದಾರೆ.
ವೈಲ್ಡ್ಕಾರ್ಡ್ ಎಂಟ್ರಿ ಕೊಟ್ಟ ರಿಷಾ ಗೌಡ
ಅಂದಹಾಗೆ ಅಭಿಷೇಕ್ ಅಬರು ಈ ಗಲಾಟೆಯನ್ನು ನಿಲ್ಲಿಸಿದ್ದಾರೆ. ವೈಲ್ಡ್ಕಾರ್ಡ್ ಎಂಟ್ರಿ ಕೊಟ್ಟ ರಿಷಾ ಗೌಡ ಅವರು ಈಗಾಗಲೇ ಸಾಕಷ್ಟು ಜಗಳ ಆಡಿದ್ದರು. ಗಿಲ್ಲಿ ನಟನಿಗೆ ಹೊಡೆದಿದ್ದರು. ಅಷ್ಟೇ ಅಲ್ಲದೆ ಧ್ರುವಂತ್ ಹೆಸರು ಬಂದಾಗ ವಾಮಿಟ್ ಮಾಡೋ ಥರ ಮಾಡಿದ್ದರು. ಸಾಕಷ್ಟು ಬಾರಿ ಅವರು ಕಿಚ್ಚ ಸುದೀಪ್ರಿಂದ ಕಿವಿ ಹಿಂಡಿಸಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

