ಬೆಂಗಳೂರು (ಆ.29): ಕಳೆದ ಕೆಲವು ವಾರಗಳಿಂದ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನೇತೃತ್ವದಲ್ಲಿ ನಡೆಯತ್ತಿದ್ದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು, ವಾಲ್ಮೀಕಿ ಹಗರಣದಲ್ಲಿ 2ನೇ ಬಾರಿ ಸಚಿವ ನಾಗೇಂದ್ರ ಅವರ ತಲೆದಂಡವಾಗಿದೆ. ಅದರೊಂದಿಗೆ ದೋಸ್ತಿ ಹೋರಾಟಕ್ಕೆ ಕಾಂಗ್ರೆಸ್ ಮಣಿದಿದ್ದು, ಡಿಕೆ ಸಂಪುಟದ ಮೊದಲ ವಿಕೆಟ್ ಪತನವಾದಂತಾಗಿದೆ.ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಪಟ್ಟಂತೆ 2ನೇ ವರ್ಷದಲ್ಲಿ 2ನೇ ಬಾರಿಗೆ ಸಚಿವ ಸ್ಥಾನಕ್ಕೆ ಕಾಂಗ್ರೆಸ್ ನಾಯಕ ರಾಜೀನಾಮೆ ನೀಡಿದ್ದಾರೆ. ಸಚಿವರಾಗಿ ಪದಗ್ರಹಣ ಮಾಡಿದ 25 ದಿನಕ್ಕೆ ಪದತ್ಯಾಗ ಮಾಡಿದಂತಾಗಿದೆ. ನಾಗೇಂದ್ರ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದ ಬಿಜೆಪಿ-ಜೆಡಿಎಸ್ ಹೋರಾಟಕ್ಕೆ ದೊಡ್ಡ ಗೆಲುವು ಸಿಕ್ಕಂತಾಗಿದೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್ಡೇಟ್ ಇಲ್ಲಿದೆ.

12:01 AM (IST) Aug 30
ಅವರು ಈಗಾಗಲೇ ಒಮ್ಮೆ ನೋಡಿ ಇಷ್ಟಪಟ್ಟು ಮತ್ತೆ ನೋಡೋಕೆ ಬಂದಿದಾರೆ.. ಯಾರೂ ಬೇರೆಯವರ ಒಪಿನಿಯನ್ ಕೇಳಿ, ಸಿನಿಮಾ ನೋಡದೇ ಇರಬೇಡಿ.. ನೀವು ಒಮ್ಮೆ ನೋಡಿ.. ಹಾಗೇ, ಎಲ್ಲರೂ ಥೇಟರ್ಗೇ ಹೋಗಿ ಈ ಮೂವಿ ನೋಡಿ..' ಎಂದು ಹೇಳಿದ್ದಾರೆ ರಕ್ಷಿತಾ ಪ್ರೇಮ್.
11:40 PM (IST) Aug 29
ಅಕ್ಬರ್-ಬೀರಬಲ್ ಕಥೆಗಳಲ್ಲಿ ಬೀರಬಲ್ನ ಚಾಣಾಕ್ಷತನಕ್ಕೆ ಮತ್ತೊಂದು ಉದಾಹರಣೆ ಈ ಯಮುನಾ ನದಿ ಕಥೆ. ಮಳೆಗಾಲದ ಒಂದು ರಾತ್ರಿ ಯಮುನಾ ನದಿಯ ಭೋರ್ಗರೆತ ಅಕ್ಬರ್ಗೆ ಅಳುವಿನಂತೆ ಕೇಳಿಸುತ್ತದೆ. ಮರುದಿನ ದರ್ಬಾರ್ನಲ್ಲಿ ಅಕ್ಬರ್ ಇದೇ ಪ್ರಶ್ನೆಯನ್ನು ಸಭಿಕರ ಮುಂದಿಡುತ್ತಾರೆ.
11:07 PM (IST) Aug 29
ವಿಶೇಷ ಚೇತನ ಬಾಲಕ ತನ್ನ ತಾಯಿ ಜೊತೆ ಸಲಕರಣೆ ಪಡೆಯಲು ಆಗಮಿಸಿದ್ದರು. ಈ ವೇಳೆ ಬಾಲಕನ ಜೊತೆ ಹೆಚ್ಡಿ ಕುಮಾರಸ್ವಾಮಿ ಮಾತನಾಡುತ್ತಾ ಏನು ಬೇಕು ನಿನಗೆ ಎಂದು ಕೇಳಿದ್ದಾರೆ. ಬಾಲಕನ ಮಂದಿಟ್ಟ ಮನವಿಗೆ ತಕ್ಷಣ ಸ್ಪಂದಿಸಿದ ಘಟನೆ ನಡೆದಿದೆ.
10:38 PM (IST) Aug 29
ಪಿಡಿಒ ಮೆಹಬೂಬ್ ಪಟೇಲ್, ಖಾತೆ ಬದಲಾವಣೆಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಫೋನ್ ಪೇ ಮೂಲಕ ₹12,000 ಲಂಚ ಸ್ವೀಕರಿಸುತ್ತಿದ್ದಾಗ, ಲೋಕಾಯುಕ್ತ ಪೊಲೀಸರು ಡಿಜಿಟಲ್ ಸಾಕ್ಷ್ಯದೊಂದಿಗೆ ಅಧಿಕಾರಿಯನ್ನು ರೆಡ್ಹ್ಯಾಂಡ್ ಆಗಿ ಬಂಧಿಸಿದ್ದಾರೆ.
09:52 PM (IST) Aug 29
ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI)ವು 'ಎವರೆಸ್ಟ್' ಮತ್ತು 'ಲಾಲ್ಜಿ ಗೋಧು' ಕಂಪನಿಗಳ ಇಂಗು ಉತ್ಪನ್ನಗಳನ್ನು ಕಳಪೆ ಗುಣಮಟ್ಟ ಮತ್ತು ತಪ್ಪು ಬ್ರಾಂಡಿಂಗ್ ಕಾರಣದಿಂದ ನಿಷೇಧಿಸಿದೆ. ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಈ ಇಂಗಿನಲ್ಲಿ ನಿಗದಿತ ಸಾರ ಇಲ್ಲದಿರುವುದು ಮತ್ತು ಪಿಷ್ಟವನ್ನು ಕಲಬೆರಕೆ ಮಾಡಿರುವುದು ದೃಢಪಟ್ಟಿದೆ.
09:05 PM (IST) Aug 29
ಕೆಲವು ದಿನಗಳ ಹಿಂದಷ್ಟೇ ವಿನಯ್ ಗೌಡ ಅವರು ಅಗ್ನಿಪರೀಕ್ಷೆ ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ಮೇಲೆ ಸ್ವಲ್ಪ ಗರಂ ಆಗಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದರು. ಆದರೆ ಈಗ ಈ ಫೋನ್ ಗಿಫ್ಟ್ ಕೊಟ್ಟ ವಿಡಿಯೋ ವೈರಲ್ ಆಗ್ತಿದ್ದಂತೆ, ಟ್ರೋಲರ್ಗಳೆಲ್ಲಾ ಸೈಲೆಂಟ್ ಆಗಿದ್ದಾರೆ. ಏನಿದು ಹೊಸ ಕತೆ? ನೋಡಿ..
08:55 PM (IST) Aug 29
08:31 PM (IST) Aug 29
‘ಟಾಕ್ಸಿಕ್’ ಸಿನಿಮಾ ಕುರಿತ ಟ್ರೋಲ್ಗಳ ನಡುವೆ ಯಶ್ ಇನ್ಸ್ಟಾಗ್ರಾಮ್ ಬಯೋದಲ್ಲಿನ ‘Original’ ಸಾಲು ವೈರಲ್ ಆಗಿದೆ. ಫ್ಯಾನ್ಸ್ ಈ ಮಾತನ್ನು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಶೇರ್ ಮಾಡುತ್ತಿದ್ದಾರೆ.
08:19 PM (IST) Aug 29
ಅನ್ನ ಬಸಿದ ಗಂಜಿಯನ್ನು ಸುಮ್ಮನೆ ಚೆಲ್ಲುತ್ತೇವೆ. ಆದರೆ ಗಂಜಿ ನೀರಿನಲ್ಲಿ ಹಲವಾರು ಪ್ರಯೋಜನಗಳಿವೆ. ಇದು ಚರ್ಮದ ಆರೋಗ್ಯವನ್ನು ಸುಧಾರಿಸಲು ತುಂಬಾ ಒಳ್ಳೆಯದು. ಇದರ ಪ್ರಯೋಜನಗಳೇನು ಎಂದು ತಿಳಿಯೋಣ.
07:49 PM (IST) Aug 29
ಈ ವೀಕೆಂಡ್ ಬೆಂಗಳೂರಲ್ಲಿ ಏನ್ ಮಾಡೋದು ಅಂತ ಯೋಚ್ನೆ ಮಾಡ್ತಿದ್ದೀರಾ? ಕಬ್ಬನ್ ಪಾರ್ಕ್ ಸೈಕ್ಲಿಂಗ್ನಿಂದ ಹಿಡಿದು ಚರ್ಚ್ ಸ್ಟ್ರೀಟ್ ಸುತ್ತಾಟದವರೆಗೆ, ಇಲ್ಲಿದೆ 5 ಮಸ್ತ್ ಐಡಿಯಾಗಳು. ಲಾಲ್ಬಾಗ್, ಮೈಕ್ರೋಬ್ರೂವರಿ, ಕೆ.ಆರ್. ಮಾರ್ಕೆಟ್ ಕೂಡ ಲಿಸ್ಟ್ನಲ್ಲಿದೆ.
07:34 PM (IST) Aug 29
07:28 PM (IST) Aug 29
ಸೋನಿಯಾ ಗಾಂಧಿಯವರ ಮುಂಬರುವ ಆತ್ಮಕಥೆ "ಬಿಲಾಂಗಿಂಗ್; ಎ ಜರ್ನಿ ಆಫ್ ಲವ್" ಬಿಡುಗಡೆಗೂ ಮುನ್ನವೇ ವಿವಾದಕ್ಕೆ ಕಾರಣವಾಗಿದೆ. ಪುಸ್ತಕದಲ್ಲಿನ ಚೀನಾ ಗಡಿ, ಪ್ರಧಾನಿ ಮೋದಿ, ಮತ್ತು ಆರ್ಎಸ್ಎಸ್ ಕುರಿತ ಸೂಕ್ಷ್ಮ ಭಾಗಗಳನ್ನು ಬದಲಾಯಿಸಲು ಸೋನಿಯಾ ನಿರಾಕರಿಸಿದ ಕಾರಣ, ಪೆಂಗ್ವಿನ್ ಇಂಡಿಯಾ ಪ್ರಕಾಶನ ಸಂಸ್ಥೆಯು ಭಾರತದಲ್ಲಿ ಇದನ್ನು ಪ್ರಕಟಿಸಲು ನಿರಾಕರಿಸಿದೆ.
07:24 PM (IST) Aug 29
ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರ ಮೊದಲ ಬಾಲಿವುಡ್ ಸಿನಿಮಾಗೆ ‘ಒರಿಜಿನಲ್ ಮಾನ್ಸ್ಟರ್’ ಎಂದು ಟೈಟಲ್ ಇಡಲಾಗಿದೆ. ಆರ್. ಚಂದ್ರು ನಿರ್ದೇಶನದ ಈ ಚಿತ್ರಕ್ಕೆ ‘ಓಎಂ’ ಎಂಬ ಶಾರ್ಟ್ ಟೈಟಲ್ ಬಳಸಲಾಗುತ್ತಿದೆ.
06:31 PM (IST) Aug 29
ಜೈಲರ್ ಚಿತ್ರದ ಯಶಸ್ಸಿನ ನಂತರ ಈ ನಟನಿಗೆ ಬೇಡಿಕೆ ಹೆಚ್ಚಿದೆ, ಕೈತುಂಬಾ ಸಿನಿಮಾಗಳಿವೆ. ಆದರೆ, "ಮನೆಗೆ ಹೋದರೆ ಮಾತನಾಡಿಸಲು ಯಾರೂ ಇಲ್ಲ" ಎನ್ನುವ ಅವರ ಮಾತುಗಳು ಯಶಸ್ಸಿನ ಹಿಂದಿರುವ ಕರಾಳ ಸತ್ಯವನ್ನು ಬಿಚ್ಚಿಟ್ಟಿವೆ. ಆದರೆ, ಗಂಡ-ಹೆಂಡ್ತಿ ಬೇರಾಗಿದ್ದು ಏಕೆ ಗೊತ್ತೇ? ಈ ಸ್ಟೋರಿ ನೋಡಿ..
06:25 PM (IST) Aug 29
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ಜೂಜಾಟದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದಾಗ ಹೆದರಿ ಓಡುತ್ತಿದ್ದ ರಮೇಶ್ ಎಂಬಾತ ಜಾರಿ ಬಿದ್ದು ತಲೆ ಬಂಡೆಗೆ ಒಡೆದು ಮೃತಪಟ್ಟಿದ್ದಾನೆ. ರಾತ್ರಿಯಿಂದ ನಾಪತ್ತೆಯಾಗಿದ್ದ ರಮೇಶ್ ಅವರ ಶವ ಇಂದು ಅರಣ್ಯ ಹಾಗೂ ಕಾಫಿ ತೋಟದ ಪ್ರದೇಶದಲ್ಲಿ ತೀವ್ರ ರಕ್ತಸ್ರಾವವಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
05:52 PM (IST) Aug 29
04:50 PM (IST) Aug 29
04:40 PM (IST) Aug 29
ಸದ್ಯ ಅಲ್ಲು ಅರ್ಜುನ್ ಜೊತೆಗಿನ 'ರಾಕಾ' ಸಿನಿಮಾ ಬಿಟ್ಟರೆ ನಟಿ ಜಾನ್ವಿ ಕಪೂರ್ ಬೇರೆ ಯಾವುದೇ ದಕ್ಷಿಣ ಭಾರತದ ಚಿತ್ರಕ್ಕೆ ಸಹಿ ಹಾಕಿಲ್ಲ ಎನ್ನಲಾಗಿದೆ. ಅವರು ಬಲವಾದ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
04:02 PM (IST) Aug 29
ಜಿಮ್ನಲ್ಲಿ ವ್ಯಾಯಾಮ ಮಾಡುವಾಗ ಸಂಗೀತ ಕೇಳುವುದು ದೈಹಿಕ ಆಯಾಸದ ಮೇಲಿರುವ ಗಮನವನ್ನು ಕಡಿಮೆ ಮಾಡುತ್ತದೆ ಮತ್ತು ವರ್ಕೌಟ್ ಮಾಡುವ ಉತ್ಸಾಹವನ್ನು ಹೆಚ್ಚಿಸುತ್ತದೆ. ವ್ಯಾಯಾಮದ ಅವಧಿಯನ್ನು ಶೇಕಡಾ 20 ರಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ, ಆದರೆ ಸುರಕ್ಷತೆಯ ದೃಷ್ಟಿಯಿಂದ ಹೆಡ್ಫೋನ್ ಸೌಂಡ್ ಮಿತವಾಗಿಡಬೇಕು.
03:40 PM (IST) Aug 29
ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದ ನಂತರವೂ ಎಂಎಸ್ ಧೋನಿ ಕೋಟಿಗಟ್ಟಲೆ ಗಳಿಸುತ್ತಿದ್ದಾರೆ. ಬಿಸಿಸಿಐನಿಂದ ಮಾಸಿಕ ಪಿಂಚಣಿ, ಐಪಿಎಲ್ ಸಂಬಳ, ಮತ್ತು ಬ್ರಾಂಡ್ ಅನುಮೋದನೆಗಳಿಂದ ಅವರ ಆದಾಯ ಹರಿದುಬರುತ್ತಿದೆ. ನಿವೃತ್ತಿಯ ನಂತರವೂ ಅವರು ತಿಂಗಳಿಗೆ ಎಷ್ಟು ಗಳಿಸುತ್ತಿದ್ದಾರೆ ಗೊತ್ತಾ? ಈ ಕುರಿತು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
03:26 PM (IST) Aug 29
"ನಮ್ಮ ರವಿಮಾಮ ಇನ್ನು ಮುಂದೆ ಬರೀ ಸಿನಿಮಾ ಡೈಲಾಗ್ ಹೊಡೆಯಲ್ಲ, ಬದಲಾಗಿ ವಿಧಾನ ಪರಿಷತ್ತಿನಲ್ಲಿ ಜನರ ಧ್ವನಿಯಾಗಿ ಗರ್ಜಿಸುತ್ತಾರೆ" ಎಂದು ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ. ಚಿತ್ರರಂಗದ ಸಮಸ್ಯೆಗಳ ಜೊತೆಗೆ ಸಾಂಸ್ಕೃತಿಕ ಲೋಕದ ಏಳಿಗೆಗೆ ರವಿಚಂದ್ರನ್ ಅವರ ಅನುಭವ ಆಸ್ತಿಯಾಗಲಿದೆಯಾ?
02:32 PM (IST) Aug 29
02:19 PM (IST) Aug 29
ರಾಜ್ಯ ಸರ್ಕಾರದ ಗೃಹ ಲಕ್ಷ್ಮಿ ಯೋಜನೆ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಈ ಸಂಭ್ರಮದ ಸವಿನೆನಪಿಗಾಗಿ ಬೆಂಗಳೂರಿನ ವಿಧಾನಸೌಧ, ಮೈಸೂರು ಅರಮನೆ ಸೇರಿದಂತೆ ರಾಜ್ಯದ ಪ್ರಮುಖ ಕಟ್ಟಡಗಳು ಗುಲಾಬಿ ಬಣ್ಣದ ಬೆಳಕಿನಲ್ಲಿ ಕಂಗೊಳಿಸಲಿವೆ.
02:01 PM (IST) Aug 29
ಇಸ್ರೋದ ಇನ್ಸಾಟ್-3ಡಿಆರ್ ಉಪಗ್ರಹವು ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಏಕಕಾಲದಲ್ಲಿ ಸಕ್ರಿಯವಾಗಿರುವ ಎರಡು ದೈತ್ಯ ಮಳೆ ಮಾರುತಗಳ ಚಿತ್ರಗಳನ್ನು ಸೆರೆಹಿಡಿದಿದೆ. ಈ ಹವಾಮಾನ ವ್ಯವಸ್ಥೆಗಳು ದೇಶದಾದ್ಯಂತ ಭಾರಿ ಮಳೆಯನ್ನು ಸುರಿಸುತ್ತಿದ್ದು, ಮುಂಬರುವ ಕೆಲವು ದಿನಗಳವರೆಗೆ ಮುಂಗಾರು ಸಕ್ರಿಯವಾಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
01:27 PM (IST) Aug 29
ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ರಾಜೀನಾಮೆ ನೀಡಿರುವ ಬಿ. ನಾಗೇಂದ್ರ ಅವರು ಏನೂ ತಪ್ಪು ಮಾಡಿಲ್ಲ, ಅವರನ್ನು ಬಿಜೆಪಿ ಬಲಿ ಕೊಟ್ಟಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಅಭಿವೃದ್ಧಿ ಬಿಟ್ಟು ರಾಜಕಾರಣ ಮಾಡುತ್ತಿರುವ ಬಿಜೆಪಿ ಹಾಗೂ ಬಾಯಿ ಚಪಲಕ್ಕೆ ಮಾತನಾಡುವ ಹೆಚ್ಡಿಕೆಗೆ ತಿರುಗೇಟು.
01:20 PM (IST) Aug 29
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ನಡೆದ ದಿಶಾ ಸಭೆಯಲ್ಲಿ, ಅಭಿವೃದ್ಧಿ ಕಾಮಗಾರಿ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
12:52 PM (IST) Aug 29
12:47 PM (IST) Aug 29
ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಿದ ಬೆನ್ನಲ್ಲೇ, ಮಾಜಿ ಸಚಿವ ಜನಾರ್ದನ ರೆಡ್ಡಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾಗೇಂದ್ರ ರಾಜೀನಾಮೆ ವೇಳೆ ಹಾಕಿದ್ದು 'ಕರ್ಮದ ಕಣ್ಣೀರು' ಎಂದಿರುವ ಅವರು, ಹಗರಣದ ಹಣದಲ್ಲಿಯೇ ವೈಯಕ್ತಿಕ ಲಾಭ ಪಡೆದಿದ್ದಾರೆ ಎಂದು ಆರೋಪಿಸಿದರು.
12:41 PM (IST) Aug 29
ಗೀತು ಮೋಹನದಾಸ್ ನಿರ್ದೇಶನದ, ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಮೊದಲ ದಿನವೇ 100 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ, ಚಿತ್ರವು ಬಿಡುಗಡೆಯಾದ ಮೂರೇ ದಿನಗಳಲ್ಲಿ ಉತ್ತಮ ಕಲೆಕ್ಷನ್ ದಾಟಿ, ಪ್ಯಾನ್-ಇಂಡಿಯಾ ಮಟ್ಟದಲ್ಲಿ ತನ್ನ ಯಶಸ್ಸನ್ನು ಸಾಬೀತುಪಡಿಸಿದೆ.
12:28 PM (IST) Aug 29
12:00 PM (IST) Aug 29
ಕಬ್ಜ ಚಿತ್ರದ ಮೂಲಕ ಸೌಂಡ್ ಮಾಡಿದ್ದ ನಿರ್ದೇಶಕ ಆರ್. ಚಂದ್ರು ಈಗ ಬಾಲಿವುಡ್ನ ಖ್ಯಾತ ನಿರ್ಮಾಪಕ ಆನಂದ್ ಪಂಡಿತ್ ಜೊತೆ ಕೈಜೋಡಿಸಿದ್ದಾರೆ. ಈ ಚಿತ್ರದಲ್ಲಿ ಶಿವಣ್ಣನ ಜೊತೆಗೆ ತೆಲುಗಿನ ಖ್ಯಾತ ನಟ ಸುನೀಲ್ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದ್ರೆ, ಟಾಕ್ಸಿಕ್ ಬಗ್ಗೆ ಶಿವಣ್ಣ ಹೇಳಿದ್ದೇನು? ನೋಡಿ..
11:43 AM (IST) Aug 29
11:35 AM (IST) Aug 29
10:37 AM (IST) Aug 29
10:22 AM (IST) Aug 29
10:01 AM (IST) Aug 29
ಗೋವಾದ ಪರ್ತಗಾಳಿಯ ಶ್ರೀ ಸಂಸ್ಥಾನ ಗೋಕರ್ಣ ಮಠದಲ್ಲಿ ಸ್ಥಾಪಿಸಲಾದ ಶ್ರೀರಾಮನ ಕಂಚಿನ ಪ್ರತಿಮೆಯು ಅತ್ಯಂತ ಎತ್ತರದ ಕಂಚಿನ ಪ್ರತಿಮೆ ಎಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗಿದೆ.
09:54 AM (IST) Aug 29
08:53 AM (IST) Aug 29
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ನಡೆದ ಎಇಇ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಹಗರಣಕ್ಕೆ ಸಂಬಂಧಿಸಿದಂತೆ ದಾಖಲೆ ಬಿಡುಗಡೆ. ರಾಜೀನಾಮೆಗೆ ಆಗ್ರಹ
08:52 AM (IST) Aug 29
ಓಣಂ ಹಬ್ಬದ ಪ್ರಯಾಣಿಕರ ದಟ್ಟಣೆ ನಿಭಾಯಿಸಲು, ದಕ್ಷಿಣ ರೈಲ್ವೆಯು ಮಂಗಳೂರು ಜಂಕ್ಷನ್ನಿಂದ ಬೆಂಗಳೂರಿನ SMVT ಟರ್ಮಿನಲ್ಗೆ ಏಕಮುಖ ವಿಶೇಷ ಎಕ್ಸ್ಪ್ರೆಸ್ ರೈಲು (06072) ಓಡಿಸಲಿದೆ. ಶನಿವಾರ ಮಂಗಳೂರಿನಿಂದ ಹೊರಟು, ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಿ, ಭಾನುವಾರ ಮುಂಜಾನೆ ಬೆಂಗಳೂರು ತಲುಪಲಿದೆ.
08:51 AM (IST) Aug 29
ಬಾಲಿವುಡ್ ನಟಿ ರಾಖಿ ಸಾವಂತ್ ಮಕ್ಕಾದಲ್ಲಿ ಉಮ್ರಾ ನೆರವೇರಿಸುವ ವೇಳೆ ನೇಪಾಳದ ಭೀಕರ ಪ್ರವಾಹ ಪೀಡಿತರ ರಕ್ಷಣೆಗಾಗಿ ಕಣ್ಣೀರಿಟ್ಟು ಪ್ರಾರ್ಥಿಸಿದ್ದಾರೆ. ಪವಿತ್ರ ಕಾಬಾ ಮುಂದೆ ಅವರು ಭಾವುಕರಾಗಿ ಪ್ರಾರ್ಥಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.