LIVE NOW
Published : Jan 07, 2026, 07:03 AM ISTUpdated : Jan 07, 2026, 11:56 PM IST

Karnataka News Live: ಕೋಲಾರ - ಸೆಕ್ಯೂರಿಟಿ ಕ್ಯಾಬಿನ್‌ನಲ್ಲಿ ಅಗ್ನಿ ಅವಘಡ; ಚಿಕಿತ್ಸೆ ಫಲಕಾರಿಯಾಗದೆ ತಂದೆ-ಮಗು ದುರ್ಮರಣ!

ಸಾರಾಂಶ

ಬೆಂಗಳೂರು: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸುಳ್ಳು ಹೇಳುವ, ಮಿಸ್‌ಗೈಡ್ ಮಾಡುವ ಚಟವಿದೆ. ಮಾಧ್ಯಮದ ಮುಂದೆ ಹೋಗೋ ಚಟವಿದೆ’. ಗಲಾಟೆಯಲ್ಲಿ ಮೃತಪಟ್ಟ ಯುವಕನ ದೇಹವನ್ನು 2 ಬಾರಿ ಪೋಸ್ಟ್‌ ಮಾರ್ಟಂ ಮಾಡಲಾಗಿದೆ ಎಂದು ಎಚ್‌ಡಿಕೆ ಮಾಧ್ಯಮಗಳಿಗೆ ಹೇಳಿದ್ದಾರೆ. ಅವರು ಬಳ್ಳಾರಿಗೇ ಬಂದಿಲ್ಲ. ಅವರಿಗೆ ಹೇಗೆ ಗೊತ್ತಾಯಿತು ಎಂದು ಡಿಕೆಶಿ ಪ್ರಶ್ನಿಸಿದರು.

ಬ್ಯಾನರ್‌ ಗಲಾಟೆ ವೇಳೆ ಕೊಲ್ಲಲು ಸಂಚು ರೂಪಿಸಲಾಗಿತ್ತು ಎಂದು ಗಾಲಿ ಜನಾರ್ದನ ರೆಡ್ಡಿ ಅವರು ಹೇಳಿದ್ದು, ಬುಲೆಟ್‌ ಸಹ ಪ್ರದರ್ಶಿಸಿದ್ದಾರೆ. ಆದರೆ ಬುಲೆಟ್‌ ಮೈಗೆ ಬಿತ್ತಾ, ಕೈಗೆ ಬಿದ್ದಿತಾ? ಯಾವ ಭಾಗಕ್ಕೆ ಬಿತ್ತು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ವ್ಯಂಗ್ಯವಾಡಿದರು. ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಕ್ಕೆ ಅನುಮತಿಯೇ ಇರಲಿಲ್ಲ ಎಂದು ತಿಳಿಸಿದರು.

11:56 PM (IST) Jan 07

ಕೋಲಾರ - ಸೆಕ್ಯೂರಿಟಿ ಕ್ಯಾಬಿನ್‌ನಲ್ಲಿ ಅಗ್ನಿ ಅವಘಡ; ಚಿಕಿತ್ಸೆ ಫಲಕಾರಿಯಾಗದೆ ತಂದೆ-ಮಗು ದುರ್ಮರಣ!

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಸೆಕ್ಯೂರಿಟಿ ಕ್ಯಾಬಿನ್‌ಗೆ ಬೆಂಕಿ ತಗುಲಿದ ಪರಿಣಾಮ, ನಿದ್ರೆಯಲ್ಲಿದ್ದ ತಂದೆ ಮತ್ತು ಎರಡು ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದು, ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Full Story

11:38 PM (IST) Jan 07

ಚಿಟ್ಸ್ ಫಂಡ್ ಹೆಸರಲ್ಲಿ ಹತ್ತು ಕೋಟಿ ವಂಚಿಸಿದವ ಕೋರ್ಟ್‌ಗೆ ಬಂದಾಗ ಹಿಡಿದ ಗ್ರಾಹಕರು! ರಸ್ತೆಯಲ್ಲಿ ಮೆರವಣಿಗೆ ಶಿಕ್ಷೆ!

ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ 'ಸಾಲೇಶ್ವರ ಪಟ್ಟಜ್ಯೋತಿ ಚಿಟ್ಸ್ ಫಂಡ್' ಮಾಲೀಕ ಈಶ್ವರ ಚಿನ್ನಿಕಟ್ಟಿ, ಸಾರ್ವಜನಿಕರಿಗೆ ಸುಮಾರು 10 ಕೋಟಿ ರೂ. ವಂಚಿಸಿದ ಆರೋಪ ಹೊತ್ತಿದ್ದಾನೆ. ನ್ಯಾಯಾಲಯಕ್ಕೆ ಹಾಜರಾಗಲು ಬಂದಿದ್ದ ಆತನನ್ನು, ಆಕ್ರೋಶಿತ ಗ್ರಾಹಕರು ಪೊಲೀಸ್ ವಾಹನದಿಂದಿಳಿಸಿ ಬೀದಿ ಮೆರವಣಿಗೆ ಮಾಡಿದರು.

Read Full Story

11:11 PM (IST) Jan 07

ಉತ್ತರಕನ್ನಡ ಜಿಲ್ಲೆಯಲ್ಲಿ ವರ್ಷದ ಮೊದಲ 'ಮಂಗನ ಕಾಯಿಲೆ' ಪತ್ತೆ; ಸಿದ್ದಾಪುರದಲ್ಲಿ ಹೈ ಅಲರ್ಟ್!

ಎರಡು ವರ್ಷಗಳ ನಂತರ ಉತ್ತರಕನ್ನಡ ಜಿಲ್ಲೆಯಲ್ಲಿ ಮತ್ತೆ ಮಂಗನ ಕಾಯಿಲೆ (KFD) ಪ್ರಕರಣ ಕಾಣಿಸಿಕೊಂಡಿದೆ. ಸಿದ್ದಾಪುರ ತಾಲೂಕಿನ 80 ವರ್ಷದ ವೃದ್ಧೆಯೊಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
Read Full Story

10:47 PM (IST) Jan 07

ಅಧಿಕಾರ ಬಂದರೂ ಬದಲಾಗದ ಬದುಕು - ಇವರು ಶಾಸಕರು, ಪತ್ನಿ ಅಂಗನವಾಡಿ ಟೀಚರ್, ತಮ್ಮಂದಿರು ಗಾರೆ ಕೆಲಸಗಾರರು!

ಖಾನಾಪುರದ ಶಾಸಕ ವಿಠ್ಠಲ ಹಲಗೆಕರ್, ಗಣಿತ ಮೇಷ್ಟ್ರಾಗಿ ಒಂದು ರೂಪಾಯಿ ಶುಲ್ಕದಿಂದ ಸಾವಿರಾರು ಕೋಟಿಯ ಸ್ವಸಹಾಯ ಸಂಘ ಕಟ್ಟಿದವರು. ಅಧಿಕಾರವಿದ್ದರೂ ಅವರ ಪತ್ನಿ ಅಂಗನವಾಡಿ ಶಿಕ್ಷಕಿಯಾಗಿ, ಸಹೋದರರು ಗಾರೆ ಕೆಲಸಗಾರರಾಗಿ ಸ್ವತಃ ಇವರು ರೈತರಾಗಿ ಮುಂದುವರಿದಿದ್ದು, ಇವರ ಸರಳ ಜೀವನ ಸಮಾಜಕ್ಕೆ ಪ್ರೇರಣೆಯಾಗಿದೆ.

Read Full Story

10:29 PM (IST) Jan 07

'ನಿಮ್ಮ ಪ್ರೀತಿ ಸದಾ ಸ್ಮರಿಸುತ್ತೇನೆ..' ಜನ್ಮದಿನಕ್ಕೂ ಮುನ್ನ ಅಭಿಮಾನಿಗಳಿಗೆ ಸಂದೇಶ ಕಳಿಸಿದ ರಾಕಿಂಗ್‌ ಸ್ಟಾರ್‌ ಯಶ್‌!

ನಟ ಯಶ್ ತಮ್ಮ ಮುಂಬರುವ 'ಟಾಕ್ಸಿಕ್' ಸಿನಿಮಾದ ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿರುವುದರಿಂದ, ಈ ವರ್ಷದ ಜನ್ಮದಿನದಂದು ಅಭಿಮಾನಿಗಳನ್ನು ಖುದ್ದಾಗಿ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. 

Read Full Story

09:17 PM (IST) Jan 07

ಡಿಕೆಶಿಗೆ ಎಐಸಿಸಿ ಬಿಗ್ ಶಾಕ್ - ಮುಗಿಯಿತು ಸಿಎಂ ಕುರ್ಚಿ ಚರ್ಚೆ, ಅಸ್ಸಾಂ 'ವೀಕ್ಷಕ ಹುದ್ದೆ' ವರವೋ? ಶಾಪವೋ?

ಎಐಸಿಸಿ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆಯ ಹಿರಿಯ ವೀಕ್ಷಕರ ಜವಾಬ್ದಾರಿ ನೀಡಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಪಟ್ಟದ ಚರ್ಚೆ ನಡೆಯುತ್ತಿರುವಾಗಲೇ ಈ ನೇಮಕಾತಿ ನಡೆದಿದ್ದು, ಸಿಎಂ ಚರ್ಚೆಗೆ ಹೈಕಮಾಂಡ್ ಹಾಕಿದ ಪೂರ್ಣವಿರಾಮವೇ ?

Read Full Story

08:46 PM (IST) Jan 07

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಭೀಕರ ಅಗ್ನಿ ಅವಘಡ; ಲಾಂಡ್ರಿ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ!

ಎಲೆಕ್ಟ್ರಾನಿಕ್ ಸಿಟಿಯ ಶಾಂತಿಪುರದಲ್ಲಿನ ಲಾಂಡ್ರಿ ಅಂಗಡಿಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಈ ಘಟನೆ ಅಂಗಡಿ ಮತ್ತು ವಾಹನಗಳಿಗೆ ಹಾನಿಯಾಗಿದ್ದು, ಮೂವರಿಗೆ ಸಣ್ಣಪುಟ್ಟ ಗಾಯ.. ಅಗ್ನಿಶಾಮಕ ದಳವು ಬೆಂಕಿ ನಂದಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read Full Story

08:46 PM (IST) Jan 07

ಚೇಸ್‌ ಮಾಡಿ ರಷ್ಯಾ ಧ್ವಜ ಹೊಂದಿದ್ದ ಹಡಗು ಸೀಜ್‌ ಮಾಡಿದ ಅಮೆರಿಕ!

ಉತ್ತರ ಅಟ್ಲಾಂಟಿಕ್‌ ಸಾಗರದಲ್ಲಿ ನಡೆದ ನಾಟಕೀಯ ಚೇಸಿಂಗ್ ನಂತರ, ಅಮೆರಿಕದ ಪಡೆಗಳು ವೆನೆಜುವೆಲಾ ಸಂಬಂಧಿತ ರಷ್ಯಾ ಧ್ವಜ ಹೊತ್ತ ಹಡಗನ್ನು ವಶಪಡಿಸಿಕೊಂಡಿವೆ. ಅಮೆರಿಕದ ನಿರ್ಬಂಧಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಕೆರಿಬಿಯನ್ ಸಮುದ್ರದಿಂದ ಈ ಹಡಗನ್ನು ಬೆನ್ನಟ್ಟಲಾಗಿತ್ತು.
Read Full Story

07:52 PM (IST) Jan 07

ಬೆಂಗಳೂರು ಮೆಟ್ರೋದಲ್ಲಿ 2 ಲಕ್ಷ ವೇತನದ ಉದ್ಯೋಗ! ಯಾರು ಅರ್ಜಿ ಸಲ್ಲಿಸಬಹುದು? ಇಂದೇ ಅರ್ಜಿ ಸಲ್ಲಿಸಿ

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಕಂಪನಿ ಕಾರ್ಯದರ್ಶಿ ಮತ್ತು ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಪದವಿ, ಸ್ನಾತಕೋತ್ತರ ಪದವಿ, ಎಂಬಿಎ, ಅಥವಾ ಸಿಎ ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.  

Read Full Story

07:26 PM (IST) Jan 07

Bengaluru Airport ಸಂಯೋಜಿತ ಘನತ್ಯಾಜ್ಯ ನಿರ್ವಹಣಾ ಕೇಂದ್ರ ಆರಂಭಿಸಿದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ!

 ಬೆಂಗಳೂರು ವಿಮಾನ ನಿಲ್ದಾಣ ತನ್ನದೇ ಆದ ಸಂಯೋಜಿತ ಘನತ್ಯಾಜ್ಯ ನಿರ್ವಹಣಾ ಕೇಂದ್ರವನ್ನು ಆರಂಭಿಸಿದೆ.  ಪ್ರತಿದಿನ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ, ಜೈವಿಕ ಅನಿಲ, ಗೊಬ್ಬರ ಉತ್ಪಾದನೆ ಮತ್ತು ಮರುಬಳಕೆಯ ಮೂಲಕ ಸುಸ್ಥಿರತೆ ಹಾಗೂ ವೃತ್ತಾಕಾರದ ಆರ್ಥಿಕತೆಯನ್ನು ಬಲಪಡಿಸುತ್ತಿದೆ.

Read Full Story

06:47 PM (IST) Jan 07

'ಗಂಡಸರ ಮನಸ್ಥತಿ ಕೂಡ ಅರ್ಥವಾಗಲ್ಲ, ಯಾವಾಗ ರೇ*ಪ್‌/ಕೊ*ಲೆ ಮಾಡ್ತಾನೋ ಗೊತ್ತಿಲ್ಲ..' ರಮ್ಯಾ ಹೀಗಂದಿದ್ಯಾಕೆ?

ಬೀದಿನಾಯಿಗಳ ಅನಿರೀಕ್ಷಿತ ಮನಸ್ಥಿತಿಯ ಕುರಿತ ಸುಪ್ರೀಂ ಕೋರ್ಟ್ ಅಭಿಪ್ರಾಯಕ್ಕೆ ನಟಿ ರಮ್ಯಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಪುರುಷರ ಮನಸ್ಥಿತಿಯೂ ಅನಿರೀಕ್ಷಿತ, ಹಾಗಂತ ಎಲ್ಲರನ್ನೂ ಜೈಲಿಗೆ ಹಾಕುತ್ತೀರಾ ಎಂದು ಪ್ರಶ್ನಿಸುವ ಮೂಲಕ ಅವರು ಹೊಸ ಚರ್ಚೆಗೆ ಕಾರಣರಾಗಿದ್ದಾರೆ.
Read Full Story

06:39 PM (IST) Jan 07

ಅಬ್ಬಬ್ಬಾ! Bigg Boss ಗಿಲ್ಲಿ ಮೇಲೆ ಇದೆಂಥ ಆರೋಪ? ಇದೆಂಥ ಸಾಕ್ಷಿ? ಬಡವ ಎಂದು ಈ ಪರಿ ಹಣ ಸುರೀತಿರೋದು ನಿಜನಾ?

ಬಿಗ್​ಬಾಸ್​ 12ರ ಫೈನಲಿಸ್ಟ್ ಗಿಲ್ಲಿ ನಟನೇ ವಿನ್ನರ್ ಎನ್ನುವ ಮಾತುಗಳು ಕೇಳಿಬರುತ್ತಿರುವಾಗಲೇ, ಅವರು ದುಬಾರಿ ಪಿಆರ್ ಏಜೆನ್ಸಿಯನ್ನು ನೇಮಿಸಿಕೊಂಡಿದ್ದಾರೆ ಎಂಬ ಪೋಸ್ಟ್ ವೈರಲ್ ಆಗಿದೆ. ತಮ್ಮನ್ನು ಬಡವ ಎಂದು ಬಿಂಬಿಸಿಕೊಂಡಿದ್ದ ನಟನ ಈ ನಡೆಯ ಬಗ್ಗೆ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.ಇದು ನಿಜನಾ?

Read Full Story

06:37 PM (IST) Jan 07

ಹುಬ್ಬಳ್ಳಿಯಲ್ಲಿ ಮಹಿಳೆಯ ವಿವಸ್ತ್ರಗೊಳಿಸಿದ ಪ್ರಕರಣ - ಕಮಿಷನರ್ ಎನ್‌ ಶಶಿಕುಮಾರ್ ಮಹತ್ವದ ಹೇಳಿಕೆ

ಹುಬ್ಬಳ್ಳಿಯ ಕೇಶ್ವಾಪುರ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿದ ಆರೋಪದ ಮೇಲೆ ತೀವ್ರ ವಿವಾದ ಸೃಷ್ಟಿಯಾಗಿದೆ. ಈ ಘಟನೆಗೆ ಸಂಬಂಧ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಡಿಸಿಪಿ ನೇತೃತ್ವದಲ್ಲಿ ಪಾರದರ್ಶಕ ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆ

Read Full Story

06:26 PM (IST) Jan 07

Bengaluru - 16ನೇ ಮಹಡಿಯಿಂದ ಬಿದ್ದು ಟೆಕ್ಕಿ ನಿಕ್ಷೇಪ್‌ ಬಂಗೇರಾ ಆ*ತ್ಮಹ*ತ್ಯೆ

ಬೆಂಗಳೂರಿನ ಬಾಗಲಗುಂಟೆಯಲ್ಲಿ 26 ವರ್ಷದ ಟೆಕ್ಕಿ ನಿಕ್ಷೇಪ್ ಬಂಗೇರಾ ಅಪಾರ್ಟ್‌ಮೆಂಟ್‌ನ 16ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳೂರು ಮೂಲದವರಾದ ಇವರು, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಶಂಕಿಸಲಾಗಿದೆ. 

Read Full Story

06:15 PM (IST) Jan 07

ಬೆಳಗಾವಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ, ಮೂವರು ಕಾರ್ಮಿಕರು ಬಲಿ, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ!

ಬೆಳಗಾವಿಯ ಬೈಲಹೊಂಗಲ ತಾಲೂಕಿನ ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಪೋಟಗೊಂಡು ಭೀಕರ ದುರಂತ ಸಂಭವಿಸಿದೆ. ರಿಪೇರಿ ಕಾರ್ಯದ ವೇಳೆ ನಡೆದ ಈ ಘಟನೆಯಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದು, ಐದು ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Read Full Story

06:05 PM (IST) Jan 07

Shivaleela Movie - ಸದನದಲ್ಲಿ ಚರ್ಚೆಯಾದ್ರೂ ಸಿಗ್ತಿಲ್ಲ ಚಿತ್ರಮಂದಿರ! ಚಪ್ಪಾಳೆ ತಟ್ಟಿದ್ರೆ ಮಾತ್ರ ನಿಮ್ಗೆ ಖುಷಿನಾ?

ಸಮಾಜದಿಂದ ತಿರಸ್ಕೃತರಾಗಿ ಕಷ್ಟದ ಜೀವನ ನಡೆಸುತ್ತಿರುವ ಮಂಗಳಮುಖಿಯರ ನೋವಿನ ಕಥೆಯನ್ನು ಸಿನಿಮಾ ರೂಪದಲ್ಲಿ ತರಲಾಗಿದೆ. ಆದರೆ, ಪದ್ಮಶ್ರೀ ಮಂಜಮ್ಮ ಜೋಗತಿ ನಟಿಸಿರುವ ಈ ಚಿತ್ರವನ್ನು ಯಾರೂ ವೀಕ್ಷಿಸುತ್ತಿಲ್ಲ ಎಂಬುದು ಅವರ ನೋವಿಗೆ ಕಾರಣವಾಗಿದೆ.
Read Full Story

06:00 PM (IST) Jan 07

'ದಿನಗಳು ಎಷ್ಟು ಬೇಗನೇ ಹೋಗುತ್ತಿದೆ..' ಕ್ಯೂಟಿ ಅಮ್ಮ ಪವಿತ್ರಾ ಗೌಡಗೆ ಬರ್ತ್‌ಡೇ ವಿಶ್‌ ಮಾಡಿದ ಮಗಳು ಖುಷಿ!

Pavithra Gowda Birthday: Daughter Khushi Shares Emotional Post from Jail ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಮಗಳು ಖುಷಿ ಗೌಡ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. 

Read Full Story

05:42 PM (IST) Jan 07

ಚಿಕ್ಕೋಡಿ - ತಂದೆಯಿಂದಲೇ ಮಗನ ಹತ್ಯೆ! ಭೀಕರ ಕೊಲೆ ರಹಸ್ಯ ಬಯಲಿಗೆಳೆದ ಸ್ನೇಹಿತರು, ಅಪ್ಪನ ಶವಸಂಸ್ಕಾರದಿಂದ ಹುಟ್ಟಿತು ಅನುಮಾನ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ, ತಂದೆಯೊಬ್ಬ ಮಗನನ್ನು ಕೊಂದು ಹೃದಯಾಘಾತವೆಂದು ನಾಟಕವಾಡಿದ್ದಾನೆ. ಮಗನ ಸ್ನೇಹಿತರಿಗೆ ಅಂತ್ಯಸಂಸ್ಕಾರದ ವೇಳೆ ಅನುಮಾನ ಮೂಡಿ ತನಿಖೆ ನಡೆಸಿದಾಗ, ಈ ಭೀಕರ ಕೊಲೆ ರಹಸ್ಯ ಬಯಲಾಗಿದ್ದು, ಪೊಲೀಸರು ತಂದೆ ಹಾಗೂ ಆತನ ಸಹಚರನನ್ನು ಬಂಧಿಸಿದ್ದಾರೆ.
Read Full Story

05:18 PM (IST) Jan 07

ಸಿಎಂ ಸಿದ್ದರಾಮಯ್ಯ ಅರಸು ದಾಖಲೆ ಮುರಿದಿದ್ದಕ್ಕೆ ನಮಗೆಲ್ಲ ಹೆಮ್ಮೆ - ಸತೀಶ್ ಜಾರಕಿಹೊಳಿ

ಸಚಿವ ಸತೀಶ್ ಜಾರಕಿಹೊಳಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷಗಳ ಪೂರ್ಣಾವಧಿ ಪೂರೈಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಸಿಎಂ ಬದಲಾವಣೆ ಕುರಿತ ನಿರ್ಧಾರ ಹೈಕಮಾಂಡ್‌ಗೆ ಸೇರಿದ್ದು ಎಂದ ಅವರು, ಅರಸು ದಾಖಲೆ ಮುರಿದ ಸಿದ್ದರಾಮಯ್ಯರ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Read Full Story

05:03 PM (IST) Jan 07

ಜೆಡಿಎಸ್ ಕೋಟೆಯಲ್ಲಿ ದಳಪತಿಗಳ ದಂಡಯಾತ್ರೆ - ಹಾಸನ ವಶಕ್ಕೆ ದೇವೇಗೌಡರ ಸಮಾವೇಶ, ಅರಸೀಕೆರೆಗೆ ರೇವಣ್ಣ ಜಿಗಿತ!

2028ರ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಎಚ್.ಡಿ. ರೇವಣ್ಣ ಅರಸೀಕೆರೆ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಕಾಂಗ್ರೆಸ್ ಶಾಸಕ ಕೆ.ಎಂ. ಶಿವಲಿಂಗೇಗೌಡರನ್ನು ಸೋಲಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾರೆ.

Read Full Story

05:02 PM (IST) Jan 07

ಮೆಜೆಸ್ಟಿಕ್‌ನಿಂದ ಮಲ್ಲೇಶ್ವರಂ ಸಂಪರ್ಕಿಸುವ ಪ್ರಮುಖ ರಸ್ತೆ 3 ತಿಂಗಳು ಬಂದ್! ಪರ್ಯಾಯ ಮಾರ್ಗ ಯಾವುದು?

ವೈಟ್ ಟಾಪಿಂಗ್ ಕಾಮಗಾರಿಯ ಹಿನ್ನೆಲೆಯಲ್ಲಿ, ಮೆಜೆಸ್ಟಿಕ್‌ನಿಂದ ಮಲ್ಲೇಶ್ವರಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಯನ್ನು ಮುಂದಿನ ಮೂರು ತಿಂಗಳ ಕಾಲ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಈ ನಿರ್ಧಾರದಿಂದಾಗಿ ಪರ್ಯಾಯ ಮಾರ್ಗಗಳಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿದೆ.

Read Full Story

04:48 PM (IST) Jan 07

ನೆಲಮಂಗಲ - ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನೇ ಭೀಕರವಾಗಿ ಕೊಂದ ಪಾಪಿ!

Nelamangala wife murder case:ನೆಲಮಂಗಲ ತಾಲೂಕಿನ ಹುಣಸೇಘಟ್ಟೆಪಾಳ್ಯದಲ್ಲಿ ಕ್ಷುಲ್ಲಕ ಕಾರಣಕ್ಕೆ ಪತಿ ಆನಂದ್, ತನ್ನ ಪತ್ನಿ ಅರ್ಚನಾಳನ್ನು ಕೇಬಲ್ ವೈರ್‌ನಿಂದ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಕೊಲೆಯ ನಂತರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಕಥೆ ಕಟ್ಟಿ ಪರಾರಿಯಾಗಿದ್ದ ಆರೋಪಿ ಬಂಧನ

Read Full Story

04:39 PM (IST) Jan 07

ಆಗ 'ನಿಮ್ಮಜ್ಜಿಗೆ ಅವ್ನು ಗೊತ್ತಾ' ಎಂದ್ರು, ಈಗ ಇವಳಿಗೆ ಛಾನ್ಸ್​ ಕೊಟ್ರು - ನಂದೇನು ತಪ್ಪು? ಕಣ್ಣೀರಿಟ್ಟ ವೈರಲ್​ ಹುಡುಗಿ ನಿತ್ಯಶ್ರೀ

‘ಹೂವಿನ ಬಾಣದಂತೆ’ ಹಾಡಿನಿಂದ ವೈರಲ್ ಆದ ಮೈಸೂರಿನ ನಿತ್ಯಶ್ರೀ, ಇದೀಗ ಜೀ ಕನ್ನಡದ ‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಅವಕಾಶ ಪಡೆದಿದ್ದಾರೆ. ಈ ಬೆಳವಣಿಗೆಯಿಂದಾಗಿ ತೀವ್ರ ಟ್ರೋಲ್‌ಗೆ ಒಳಗಾದ ಅವರು, ಸೋಷಿಯಲ್ ಮೀಡಿಯಾ ಲೈವ್‌ನಲ್ಲಿ ಕಣ್ಣೀರಿಟ್ಟು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.  

Read Full Story

04:02 PM (IST) Jan 07

ಬೆಂಗಳೂರು - Namma Metro ಫೇಸ್‌-3 ನಿರ್ಮಾಣಕ್ಕಾಗಿ ರಿಂಗ್‌ರೋಡ್‌ನ 4,500 ಮರಗಳಿಗೆ ಕತ್ತರಿ!

ನಮ್ಮ ಮೆಟ್ರೋದ 3ನೇ ಹಂತದ ಯೋಜನೆಯಿಂದ 6,868 ಮರಗಳ ಮೇಲೆ ಪರಿಣಾಮ ಬೀರಲಿದೆ ಎಂದು ಇಐಎ ವರದಿ ಬಹಿರಂಗಪಡಿಸಿದೆ. ಈ ಪೈಕಿ 4,500 ಮರಗಳನ್ನು ಕಡಿಯಲಾಗುತ್ತಿದ್ದು, ಇದಕ್ಕೆ ಪ್ರತಿಯಾಗಿ ಸಸಿಗಳನ್ನು ನೆಡುವುದಾಗಿ ಬಿಎಂಆರ್‌ಸಿಎಲ್ ಹೇಳಿದೆ. 

Read Full Story

03:52 PM (IST) Jan 07

ಪುತ್ರನ ಹಿಟ್ & ರನ್ ಕೇಸ್, ಪರಿಹಾರ ಕೊಡುವ ನೆಪದಲ್ಲಿ ಕರೆದು ಸಂತ್ರಸ್ತ ಕುಟುಂಬಕ್ಕೆ ಅವಮಾನ, ಪ್ರತಿಕ್ರಿಯೆಗೆ ನಿರಾಕರಿಸಿದ ರೇವಣ್ಣ

ಮಾಜಿ ಸಚಿವ ಹೆಚ್.ಎಂ.ರೇವಣ್ಣ ಪುತ್ರನ ಹಿಟ್ & ರನ್ ಪ್ರಕರಣ ಹೊಸ ತಿರುವು ಪಡೆದಿದೆ. ಪರಿಹಾರ ನೀಡುವ ಬದಲು, 'ನಮ್ಮ ಕಾರೇ ಬೇಕಿತ್ತಾ ಸಾಯೋಕೆ' ಎಂದು ಅವಮಾನಿಸಿ ದರ್ಪ ತೋರಿದ್ದಾರೆಂದು ಮೃತನ ಕುಟುಂಬ ಗಂಭೀರ ಆರೋಪ ಮಾಡಿದೆ. ಹಣ ಬೇಡ, ನ್ಯಾಯ ಬೇಕು ಎಂದು ಕುಟುಂಬಸ್ಥರು ಪಟ್ಟು ಹಿಡಿದಿದೆ.

Read Full Story

03:38 PM (IST) Jan 07

BBK 12 Ticket to Finale Task - ಆಟದ ನೆಪದಲ್ಲಿ ಮನುಷ್ಯತ್ವ ಮರೆತರಾ ರಾಶಿಕಾ; ಪ್ಲಸ್ ಆಗಿದ್ದು ಯಾರಿಗೆ?

ಬಿಗ್ ಬಾಸ್ ಕನ್ನಡ ಸೀಸನ್ 12ರ 'ಟಿಕೆಟ್ ಟು ಸಿಕ್ಸ್ ಫಿನಾಲೆ' ಟಾಸ್ಕ್‌ನಲ್ಲಿ ರಾಶಿಕಾ ಮತ್ತು ಅಶ್ವಿನಿ ಗೌಡ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಅಶ್ವಿನಿ ಅವರ 20 ವರ್ಷಗಳ ನಟನಾ ವೃತ್ತಿಯನ್ನು ನಾಟಕ ಎಂದು ರಾಶಿಕಾ ಜರೆದಿದ್ದು, ಇದಕ್ಕೆ ಅಶ್ವಿನಿ ಕೂಡ ಖಾರವಾಗಿಯೇ ತಿರುಗೇಟು ನೀಡಿದ್ದಾರೆ.
Read Full Story

02:48 PM (IST) Jan 07

ಮಗಳನ್ನು ಮದುವೆ ಮಾಡಿಕೊಡಲು ವಿರೋಧಿ ಸಿದ್ದಕ್ಕೆ ತಾಯಿಗೆ ಬೆಂಕಿ - 20 ದಿನಗಳ ಸಾವು ಬದುಕಿನ ಹೋರಾಟದ ಬಳಿಕ ಮಹಿಳೆ ನಿಧನ

ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದ್ದ ತಾಯಿ, 20 ದಿನಗಳ ಕಾಲ ಚಿಕಿತ್ಸೆ ಪಡೆದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ, ಆರೋಪಿಯ ವಿರುದ್ಧ ಕೊಲೆ  ಪ್ರಕರಣ ದಾಖಲಾಗಿದೆ.

Read Full Story

02:42 PM (IST) Jan 07

ಸರ್ಕಾರಿ ಕೆಲಸ ಕೊಡಿಸೋದಾಗಿ ಯುವತಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಿದ ಮಂಗಳಮುಖಿ; ಮುಂದಾಗಿದ್ದು ದುರಂತ!

ಬೆಂಗಳೂರಿನಲ್ಲಿ ಸರ್ಕಾರಿ ಕೆಲಸದ ಆಮಿಷವೊಡ್ಡಿ ಬಿ.ಕಾಂ ಪದವೀಧರೆಯೊಬ್ಬರಿಗೆ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ನಂತರ, ಶಸ್ತ್ರಚಿಕಿತ್ಸೆಯ ಖರ್ಚು ತೀರಿಸಲು ಅವರನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿದ ಅಮಾನವೀಯ ಘಟನೆ ನಡೆದಿದೆ.

Read Full Story

02:34 PM (IST) Jan 07

Infosys - 250 ಕೋಟಿ ಮೌಲ್ಯದ ಭೂಮಿ ಅಕ್ರಮ ಮಾರಾಟ; ಇನ್ಫೋಸಿಸ್‌ಗೆ ಶಾಕ್ ನೀಡಿದ ರಾಜ್ಯ ಸರ್ಕಾರ

ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆಯು ಅಕ್ರಮವಾಗಿ ಭೂಮಿ ಮಾರಾಟ ಮಾಡಿದೆ ಎಂಬ ಆರೋಪ ಎದುರಿಸುತ್ತಿದೆ. ಈ ₹250 ಕೋಟಿ ಮೌಲ್ಯದ ವ್ಯವಹಾರದ ಬಗ್ಗೆ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದ್ದು, ಐವರು ಸಿಬ್ಬಂದಿಯನ್ನು ಅಮಾನತುಗೊಳಿಸಿದೆ. ಇನ್ಫೋಸಿಸ್ ನಿಯಮಾನುಸಾರ ಮಾರಾಟ ಮಾಡಲಾಗಿದೆ ಎಂದು ಹೇಳಿಕೊಂಡಿದೆ.
Read Full Story

01:32 PM (IST) Jan 07

ಕೋಗಿಲು ಲೇಔಟ್ ಕೇಸಲ್ಲಿ ಎಚ್ಚೆತ್ತ ಸರ್ಕಾರ - ಸರ್ಕಾರಿ ಜಾಗದಲ್ಲಿ ಮನೆ ಕಟ್ಟಲು ಹಣ ವಸೂಲಿ ಮಾಡಿದ ನಾಲ್ವರ ಮೇಲೆ FIR!

ಯಲಹಂಕದ ಕೋಗಿಲು ಗ್ರಾಮದಲ್ಲಿ ಜಿಬಿಎಗೆ ಸೇರಿದ ಸರ್ಕಾರಿ ಜಾಗ ಒತ್ತುವರಿ ಮಾಡಿ, ಅಕ್ರಮ ಮನೆ ನಿರ್ಮಾಣಕ್ಕೆ ಪ್ರಚೋದಿಸಿ ಹಣ ವಸೂಲಿ ಮಾಡಿದ ಆರೋಪದ ಮೇಲೆ ನಾಲ್ವರ ವಿರುದ್ಧ FIR ದಾಖಲಾಗಿದೆ. ಈ ಜಾಗದಲ್ಲಿ ನಿರ್ಮಿಸಲಾಗಿದ್ದ 160ಕ್ಕೂ ಹೆಚ್ಚು ಮನೆಗಳನ್ನು ಜಿಲ್ಲಾಡಳಿತ ಈಗಾಗಲೇ ತೆರವುಗೊಳಿಸಿದೆ.

Read Full Story

01:14 PM (IST) Jan 07

ಶಾಸಕ ಸಿ.ಕೆ. ರಾಮಮೂರ್ತಿ ಇನ್‌ಸ್ಟಾಗ್ರಾಮ್‌ನಿಂದ ಯುವತಿಗೆ ಮೆಸೇಜ್ - ಖಾತೆ ಹ್ಯಾಕ್ ಆಗಿರುವ ದೂರು ದಾಖಲು!

ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಅವರ ಇನ್‌ಸ್ಟಾಗ್ರಾಮ್ ಖಾತೆಯಿಂದ ಯುವತಿಗೆ ಸಂದೇಶ ಕಳುಹಿಸಲಾಗಿದೆ ಎಂಬ ಆರೋಪ ವೈರಲ್ ಆಗಿದೆ. ಈ ಘಟನೆಯಿಂದ ತಮ್ಮ ತೇಜೋವಧೆಯಾಗಿದೆ ಎಂದು ಹೇಳಿರುವ ಶಾಸಕರು, ತಮ್ಮ ಖಾತೆ ಹ್ಯಾಕ್ ಆಗಿದ್ದು, ಈ ಬಗ್ಗೆ ಸೈಬರ್ ಪೊಲೀಸರಿಗೆ ದೂರು ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ.
Read Full Story

01:08 PM (IST) Jan 07

'ಗಿಲ್ಲಿ, ಗಿಲ್ಲಿ, ಗಿಲ್ಲಿ ಏನ್​ ದಬ್ಬಾಕಿದ್ಯಾ ಇಲ್ಲಿ?' ಎಂದು ಭರ್ಜರಿ ಸ್ಟೆಪ್​ ಹಾಕಿದ Bigg Boss ಜಾಹ್ನವಿ- 10 ದಿನ ಕಾಯಮ್ಮಾ ಎಂದ ನೆಟ್ಟಿಗರು

ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದ್ದು, ಸ್ಪರ್ಧಿ ಗಿಲ್ಲಿ ನಟ ಹೇಳಿದ್ದ 'ದೊಡ್ಡವ್ವ ದೊಡ್ಡವ್ವ ದೋಸೆ ಕೊಡು' ಡೈಲಾಗ್ ಇದೀಗ ಹಾಡಾಗಿ ವೈರಲ್ ಆಗಿದೆ. ಇದೇ ಹಾಡಿಗೆ ಎಲಿಮಿನೇಟ್ ಆದ ಸ್ಪರ್ಧಿ ಜಾಹ್ನವಿ ಭರ್ಜರಿ ಸ್ಟೆಪ್ಸ್ ಹಾಕಿದ್ದು, ಈ ವಿಡಿಯೋ  ಸದ್ದು ಮಾಡುತ್ತಿದೆ.

Read Full Story

01:06 PM (IST) Jan 07

ಮಗಳ ಮೇಲೆ ಹಲ್ಲೆ, ನಮ್ಮ ಮೇಲೆ ಕೇಶ್ವಾಪುರ ಪೊಲೀಸರ ಒತ್ತಡ - ಹುಬ್ಬಳ್ಳಿಯಲ್ಲಿ ಸುಜಾತಾ ಕುಟುಂಬದ ಅಳಲು

ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದೆ ಎಂದು ಅವರ ಕುಟುಂಬ ಆರೋಪಿಸಿದೆ. ಪೊಲೀಸರೇ ಬಟ್ಟೆ ಬಿಚ್ಚಿ ಹಲ್ಲೆ ನಡೆಸಿದ್ದು, ಈಗ ತಾವಾಗಿಯೇ ಬಟ್ಟೆ ಬಿಚ್ಚಿಕೊಂಡಿದ್ದಾರೆಂದು ಹೇಳಿಕೆ ನೀಡಲು ಒತ್ತಡ ಹೇರುತ್ತಿದ್ದಾರೆ ಎಂದು ಸುಜಾತಾ ತಾಯಿ ದೂರಿದ್ದಾರೆ. 

Read Full Story

12:55 PM (IST) Jan 07

BBK 12 - ಅಶ್ವಿನಿ ಗೌಡ ಮಾತು ಕೇಳಿಸಿಕೊಂಡು ಪರ ಪರ ಅಂತ ತಲೆ ಕೆರೆದುಕೊಂಡ ರಕ್ಷಿತಾ ಶೆಟ್ಟಿ

ಬಿಗ್‌ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ನಡುವಿನ ಕಿರಿಕ್ ಮುಂದುವರೆದಿದೆ. ಟಾಸ್ಕ್ ಒಂದರಲ್ಲಿ ಅಶ್ವಿನಿ ಆಡಿದ ಅನಿರೀಕ್ಷಿತ ಮಾತುಗಳು ಮತ್ತು ಕ್ಷಮೆ ಕೇಳಿದ್ದು ರಕ್ಷಿತಾರನ್ನು ಗೊಂದಲಕ್ಕೀಡು ಮಾಡಿದೆ. ಇದು ಅಶ್ವಿನಿಯ ಹೊಸ ಆಟದ ತಂತ್ರವೇ ಎಂಬ ಪ್ರಶ್ನೆ ಮೂಡಿದೆ.
Read Full Story

12:53 PM (IST) Jan 07

ಊರಲ್ಲಿ ಹೇಳೋದಕ್ಕೆ ದೊಡ್ಡ ರೌಡಿ, ಹೆಂಡತಿ ಕೈಗೆ ಸಿಕ್ಕು ಮೂಳೆ ಪುಡಿ-ಪುಡಿ; ರಕ್ಷಣೆಗಾಗಿ ಪೊಲೀಸ್ ಠಾಣೆಗೆ ದಾಂಗುಡಿ!

ಬೆಂಗಳೂರಿನಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾದ ರೌಡಿಶೀಟರ್ ಸೈಯದ್ ಅಸ್ಗರ್, ತನ್ನ ಪತ್ನಿಯಿಂದ ಹಲ್ಲೆಗೊಳಗಾಗಿದ್ದಾನೆ. 2ನೇ ಪತ್ನಿ ಬಿಟ್ಟು ತನ್ನೊಂದಿಗೆ ಸಂಸಾರ ಮಾಡುವಂತೆ ಒತ್ತಾಯಿಸಿ ಖಾರದ ಪುಡಿ ಎರಚಿ, ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದು, ರಕ್ಷಣೆ ಕೋರಿ ರೌಡಿಶೀಟರ್ ಪೊಲೀಸ್ ಠಾಣೆಗೆ ಬಂದಿದ್ದಾನೆ.

Read Full Story

12:46 PM (IST) Jan 07

Bigg Boss Kannada 12 - ಟಾಪ್ 5 ಸ್ಪರ್ಧಿಗಳು ಇವರು, ವಿನ್ನರ್ ಯಾರು?.. ಭವಿಷ್ಯ ಹೇಳಿದ ಕಿರಿಕ್ ಕೀರ್ತಿ!

ಬಿಗ್ ಬಾಸ್ ಕನ್ನಡ ಶೋ ಶುರುವಾಗುತ್ತಲೇ ಇಲ್ಲಿ ಚಿತ್ರವಿಚಿತ್ರ ಜನರು ಕಾಣಸಿಗುತ್ತಾರೆ. ಕಾರಣ, ಹೆಚ್ಚೂಕಡಿಮೆ ಎಲ್ಲಾ ಕ್ಷೇತ್ರಗಳ ಜನರು ಅಲ್ಲಿ ಬರುತ್ತಾರೆ. ಹೆಚ್ಚಿನವರು ಈಗಾಗಲೇ ಸೆಲೆಬ್ರೆಟಿಗಳು ಆಗಿರೋರು ಎಂದರೂ ಕೂಡ ಅವರವರ ಕ್ಷೇತ್ರ ಬೇರೆಯದೇ ಆಗಿರುತ್ತದೆ. ಆ ಕಾರಣಕ್ಕೆ ಬಿಗ್ ಬಾಸ್ ಹಲವರ ಫೇವರೆಟ್. 

Read Full Story

12:26 PM (IST) Jan 07

ಹುಣಸೂರು - 6 ನಿಮಿಷದಲ್ಲಿ 8 ಕೆಜಿ ಚಿನ್ನ ಕದ್ದ ಪ್ರಕರಣ, 10 ದಿನ ನಾಲ್ಕು ರಾಜ್ಯ ಸುತ್ತಿದ್ರೂ ಕಳ್ಳರ ಸುಳಿವಿಲ್ಲ

ಹುಣಸೂರಿನ ಸ್ಕೈ ಗೋಲ್ಡ್ ಶೋರೂಂನಲ್ಲಿ ನಡೆದ ಭಾರೀ ದರೋಡೆಯಲ್ಲಿ, ಖದೀಮರು ಕೇವಲ 6 ನಿಮಿಷಗಳಲ್ಲಿ 8 ಕೆಜಿ ಚಿನ್ನವನ್ನು ದೋಚಿದ್ದಾರೆ. ಘಟನೆ ನಡೆದು 10 ದಿನ ಕಳೆದರೂ, ವಿಪಿಎನ್ ಕರೆಗಳಂತಹ ತಂತ್ರಜ್ಞಾನ ಬಳಸಿರುವ ದರೋಡೆಕೋರರ ಸುಳಿವು ಪತ್ತೆಹಚ್ಚಲು ತಡವಾಗುತ್ತಿದೆ.

Read Full Story

12:17 PM (IST) Jan 07

ಅಮ್ಮ ಪಕ್ಕದ ಮನೆಯವರೊಂದಿಗೆ ಜಗಳ ಮಾಡಿದ್ದಕ್ಕೆ, 6 ವರ್ಷದ ಮಗು ಕೊಲೆಗೈದು ಚರಂಡಿಗೆ ಎಸೆದ ದುರುಳ!

ಬೆಂಗಳೂರಿನ ವೈಟ್‌ಫೀಲ್ಡ್ ಬಳಿ, ನೆರೆಮನೆಯವರ ನಡುವಿನ ಜಗಳವು 6 ವರ್ಷದ ಬಾಲಕಿಯ ಬರ್ಬರ ಕೊಲೆಯಲ್ಲಿ ಅಂತ್ಯಗೊಂಡಿದೆ. ತಾಯಿಯ ಮೇಲಿನ ಸೇಡಿಗಾಗಿ ಆರೋಪಿಯು ಮಗುವನ್ನು ಕೊಂದು, ಶವವನ್ನು ಬ್ಯಾಗ್‌ನಲ್ಲಿ ತುಂಬಿ ಚರಂಡಿಗೆ ಎಸೆದಿದ್ದು, ಪೊಲೀಸರು ಆರೋಪಿಗಾಗಿ ತನಿಖೆ ನಡೆಸುತ್ತಿದ್ದಾರೆ.
Read Full Story

11:56 AM (IST) Jan 07

ಸರ್ಕಾರಕ್ಕೆ ಶಾಕ್ ಕೊಟ್ಟ ಕೋಗಿಲು ಅಕ್ರಮ ನಿವಾಸಿಗಳು - 28 ವರ್ಷದಿಂದ ವಾಸವಿರುವ ನಮಗೆ ಮನೆ ಬೇಕು-ಹೈಕೋರ್ಟ್‌ ಮೊರೆ!

ನಾವು 28 ವರ್ಷಗಳಿಂದ 3000 ಜನರು ಕೋಗಿಲು ಬಡಾವಣೆಯಲ್ಲಿ ವಾಸವಿದ್ದೇವೆ. ಸರ್ಕಾರ ನಮ್ಮನ್ನ ತೆರವು ಮಾಡಿದ್ದು ಸ್ವಂತ ಮನೆಯನ್ನು ಕೊಡಲೇಬೇಕು ಎಂದು ಹೈಕೋರ್ಟ್ ಮೊರೆ ಹೋಗಿದ್ದಾರೆ. ಅಕ್ರಮ ನಿವಾಸಿಗಳ ಅರ್ಜಿ ಮತ್ತು ವಾದ ಮಂಡನೆಗೆ ಸರ್ಕಾರವೇ ಶಾಕ್ ಆಗಿದೆ.

Read Full Story

11:54 AM (IST) Jan 07

'ಯಾರಿವಳು, ಯಾರಿವಳು ಭಯಂಕರ ಕಣ್ಣವಳು' ಎಂದು ತಲೆ ಕೆಡಿಸಿಕೊಂಡಿದ್ರಾ? ಕೊನೆಗೂ ರಿವೀಲ್​ ಆಗೋಯ್ತು!

ಕರ್ನಾಟಕದಾದ್ಯಂತ ಕಟ್ಟಡಗಳು ಮತ್ತು ಹೊಲಗಳಲ್ಲಿ ದೃಷ್ಟಿ ಗೊಂಬೆಯಾಗಿ ಬಳಸಲಾಗುತ್ತಿರುವ ದೊಡ್ಡ ಕಣ್ಣುಗಳ ಮಹಿಳೆಯ ಫೋಟೋ ವೈರಲ್ ಆಗಿದೆ. ಈಕೆ ಯೂಟ್ಯೂಬರ್ ನಿಹಾರಿಕಾ ರಾವ್ ಎಂದು ಹೇಳಲಾಗುತ್ತಿದೆಯಾದರೂ, ಈಕೆಯ ನಿಜವಾದ ಗುರುತು ಮತ್ತು ಫೋಟೋದ ಹಿಂದಿನ ಸತ್ಯ ಇನ್ನೂ ನಿಗೂಢವಾಗಿಯೇ ಉಳಿದಿದೆ.
Read Full Story

More Trending News