LIVE NOW
Published : Jul 06, 2026, 04:51 AM ISTUpdated : Jul 06, 2026, 11:48 PM IST

Karnataka News Live: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಲ್ಲ - ಬಿಜೆಪಿ ವಿರುದ್ಧ ಸಿಎಂ ಡಿಕೆಶಿ ವಾಗ್ದಾಳಿ

ಸಾರಾಂಶ

ಬೆಂಗಳೂರು: ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮಾಹಿತಿ ಪರಿಶೀಲನೆ ವೇಳೆ ಆಧಾರ್ ಮಾಹಿತಿ ಅಪ್‌ಡೇಟ್‌ ಕುರಿತು ‘ಬಾಡಿಗೆದಾರರು’ ಗೊಂದಲ, ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ. ಹಿಂದೆ ವಾಸವಿದ್ದ ಬಾಡಿಗೆದಾರರ ಆಧಾರ್ ಮಾಹಿತಿ ತೆರವಿನಿಂದ ತಮಗೆ ಈಗ ಸಿಗುತ್ತಿರುವ ಯೋಜನೆಯ ಅನುಕೂಲ ನಿಲ್ಲಲಿದೆಯೇ ಎಂಬ ಆತಂಕ ಅನೇಕರಲ್ಲಿ ಇರುವುದರಿಂದ ಬೆಸ್ಕಾಂ ಈ ಸ್ಪಷ್ಟನೆ ನೀಡಿದೆ.

ಬೆಸ್ಕಾಂ ಮೀಟರ್ ರೀಡರ್ ಹಾಗೂ ಸಿಬ್ಬಂದಿ ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿದಾಗ ಹಳೇ ಬಾಡಿಗೆದಾರರ ಆಧಾರ್ ವಿವರ ತೆಗೆದು, ಪ್ರಸ್ತುತ ವಾಸವಿರುವ ಬಾಡಿಗೆದಾರರ ಆಧಾರ್ ವಿವರಗಳನ್ನು ಅಪ್‌ಡೇಟ್‌ ಮಾಡಿಕೊಳ್ಳುತ್ತಾರೆ. ಹಾಗಾಗಿ, ಯೋಜನೆ ಸ್ಥಗಿತಗೊಳ್ಳಲಿದೆ ಎಂಬ ಆತಂಕ ಬೇಡ ಎಂದು ಬೆಸ್ಕಾಂ ತಿಳಿಸಿದೆ.

11:47 PM (IST) Jul 06

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಲ್ಲ - ಬಿಜೆಪಿ ವಿರುದ್ಧ ಸಿಎಂ ಡಿಕೆಶಿ ವಾಗ್ದಾಳಿ

ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದಾಗ ಬಿಜೆಪಿ ನಾಯಕರು ನಮ್ಮನ್ನು ಟೀಕಿಸಿ ನಕ್ಕಿದ್ದರು. ಆದರೆ ಇಂದು ಅದೇ ಬಿಜೆಪಿ ವಿವಿಧ ರಾಜ್ಯಗಳಲ್ಲಿ ಗ್ಯಾರಂಟಿಗಳ ಮಾತನ್ನಾಡುತ್ತಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.

Read Full Story

11:06 PM (IST) Jul 06

ವಿವಾಹಿತ ಮಹಿಳೆ ವಿಲ್ ಬರೆಯದೆ ಸತ್ತರೆ ಆಸ್ತಿ ಯಾರಿಗೆ? ಪೋಷಕರಿಗೋ ಅಥವಾ ಗಂಡನ ಕುಟುಂಬಕ್ಕೋ?

ಭಾರತದಲ್ಲಿ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದರೂ, ಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 15ರ ಪ್ರಕಾರ, ವಿಲ್ ಬರೆಯದಿದ್ದರೆ ಅವರ ಸ್ವಯಾರ್ಜಿತ ಆಸ್ತಿ ಯಾರಿಗೆ ದೊರೆಯುತ್ತದೆ? ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ. 

Read Full Story

10:08 PM (IST) Jul 06

ಅಮೀರ್ ಖಾನ್ ಮೂರನೇ ಪತ್ನಿ ಗೌರಿ ಸ್ಪ್ರಾಟ್ ಮಾಜಿ ಪತಿ ಯಾರು? ಈಗ ಏನ್ಮಾಡ್ತಿದ್ದಾರೆ?

Gauri Spratt ex husband: ಅಮೀರ್ ಖಾನ್ ಅವರ ಮೂರನೇ ಪತ್ನಿ ಗೌರಿ ಸ್ಪ್ರಾಟ್ ಅವರ ವೈಯಕ್ತಿಕ ಜೀವನದ ಮೇಲೆ ಈ ಸ್ಟೋರಿ ಬೆಳಕು ಚೆಲ್ಲುತ್ತದೆ. ಅವರ ಮೊದಲ ಪತಿ, ಮಗ ಕ್ವಿನ್ ಮತ್ತು ಅವರ ವೃತ್ತಿಪರ ಹಿನ್ನೆಲೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಜೊತೆಗೆ, ಅಮೀರ್ ಮತ್ತು ಗೌರಿಯವರ ವಿವಾಹದ ವಿವರಗಳನ್ನು ಸಹ ಒಳಗೊಂಡಿದೆ.

Read Full Story

10:00 PM (IST) Jul 06

ದರ್ಶನ್‌ಗೇ ಚಾಲೆಂಜ್.. ಬೇಲ್‌ಗಾಗಿ ಪದೇ ಪದೇ ಅರ್ಜಿ ಹಾಕ್ತಿದ್ರೂ 'ವಜಾ' ಆಗ್ತಿರೋದ್ಯಾಕೆ?

ದಾಸ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಗಳ ಪೀಠದ ಮುಂದೆ ವಿಚಾರಣೆಗೆ ಹೋಗುವ ಮೊದಲೇ ರಿಜೆಕ್ಟ್ ಆಗಿದೆ. ಈ ಪ್ರಕರಣದ ಟ್ರಯಲ್ ಅನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕು ಎಂದು ನ್ಯಾಯಾಲಯ ಸ್ಪಷ್ಟ ನಿರ್ದೇಶನ ನೀಡಿದೆ.

Read Full Story

09:58 PM (IST) Jul 06

ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಅಪರೂಪದ ಎಂಜಿನಿಯರಿಂಗ್ ಮೈಲಿಗಲ್ಲು ಸಾಧಿಸಿದ MEIL

ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ, 'ಮೇಘಾ ಇಂಜಿನಿಯರಿಂಗ್' (MEIL) ಸಂಸ್ಥೆಯು 5 ಮತ್ತು 6ನೇ ಘಟಕಗಳಿಗಾಗಿ ಐತಿಹಾಸಿಕ ಬೃಹತ್ ಕಾಂಕ್ರೀಟ್ ಹಾಕುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಕಾರ್ಯಾಚರಣೆಯು ಭಾರತೀಯ ಅಣುಶಕ್ತಿ ಇತಿಹಾಸದಲ್ಲೇ ಒಂದು ದೊಡ್ಡ ಮೈಲಿಗಲ್ಲಾಗಿದೆ,

Read Full Story

09:50 PM (IST) Jul 06

ಮಲ್ಲಳ್ಳಿ ಜಲಪಾತದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿದ ಆಂಧ್ರದ ವಿದ್ಯಾರ್ಥಿಗಳು - ಕೊನೆಗೂ ನಡೆದ ರೋಚಕ ರಕ್ಷಣೆ

ಪ್ರವಾಸಿ ತಾಣವಾದ ಮಲ್ಲಳ್ಳಿ ಜಲಪಾತದಲ್ಲಿ ಅಪಾಯವನ್ನು ಮೈಮೇಲೆ ಎಳೆದುಕೊಂಡಿದ್ದ ಆಂಧ್ರಪ್ರದೇಶದ ಇಬ್ಬರು ಕಾಲೇಜು ವಿದ್ಯಾರ್ಥಿಗಳನ್ನು ಅಗ್ನಿಶಾಮಕ ಸಿಬ್ಬಂದಿ ಸಾಹಸಮಯ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

Read Full Story

09:33 PM (IST) Jul 06

Theft - ಹೈವೇಯಲ್ಲಿ ಹೈಡ್ರಾಮಾ; 13 ಕಿಮೀ ಬೆನ್ನಟ್ಟಿ ಪೊಲೀಸ್‌ನ ಕಾಲರ್ ಹಿಡಿದು ಧರ್ಮದೇಟು ನೀಡಿದ ಟ್ರಕ್‌ ಚಾಲಕ!

police officer stealing money:  ಬೇಲಿನೇ ಎದ್ದು ಹೊಲ ಮೇಯ್ದಂತೆ, ಪೊಲೀಸ್‌ನೆ ಕಳ್ಳತನ ಮಾಡಿ ನಡು ರಸ್ತೆಯಲ್ಲಿ ಧರ್ಮದೇಟು ತಿಂದ ಘಟನೆಯೊಂದು ಸಂಭವಿಸಿದೆ. ಈ ಕಥೆಯನ್ನು ಕೇಳಿದರೆ, ನೀವು ಬೆಚ್ಚಿಬೀಳ್ತೀರಾ. ಈ ಸ್ಟೋರಿ ಸಂಪೂರ್ಣ ವಿವರ ಇಲ್ಲಿದೆ.

Read Full Story

08:52 PM (IST) Jul 06

Kalasa Bridge - ಇಂಜಿನಿಯರ್ ತಪ್ಪಿಗೆ ಜೀವ ಪಣಕ್ಕಿಟ್ಟ ಗ್ರಾಮಸ್ಥರು - ಜಾಗೃತಿ ಮೂಡಿಸುತ್ತಿರುವ ಪಿಎಸ್‌ಐ

ಹೊಸ ಸೇತುವೆಯ ಕಾಮಗಾರಿ ಪೂರ್ಣಗೊಂಡಿಲ್ಲ ಎಂಬುದು ಗ್ರಾಮಸ್ಥರ ಪ್ರಮುಖ ಆರೋಪ. ಸೇತುವೆ ನಿರ್ಮಾಣವಾದರೂ ಎರಡೂ ಬದಿಯ ಸಂಪರ್ಕ ರಸ್ತೆ ಹಾಗೂ ಸೈಡ್‌ವಾಲ್ ಕಾಮಗಾರಿ ಇನ್ನೂ ಅಪೂರ್ಣವಾಗಿದೆ. 

Read Full Story

08:45 PM (IST) Jul 06

Vaibhav - ಬೆಳಗಿನ ಉಪಹಾರಕ್ಕೆ ಬ್ರೇಕ್‌ ಹಾಕಿದ ಸೂರ್ಯವಂಶಿ; ಖಾಲಿ ಹೊಟ್ಟೆಯಲ್ಲೇ ಕ್ರೀಸ್‌ಗೆ ಇಳಿತಾರಂತೆ! ಕಾರಣ ಕೇಳಿದ್ರೆ ಶಾಖ್ ಆಗ್ತೀರಾ!

15 ವರ್ಷದ ಕ್ರಿಕೆಟಿಗ ವೈಭವ್ ಪಂದ್ಯಕ್ಕೂ ಮುನ್ನ ಏನನ್ನೂ ತಿನ್ನದೆ ಆಡುವ ರಹಸ್ಯವನ್ನು ಈ ಲೇಖನವು ಬಯಲು ಮಾಡುತ್ತದೆ. ಇದರ ಹಿಂದೆ ವೈಜ್ಞಾನಿಕ ಕಾರಣವಿದ್ದು, ಹಿಂದಿನ ರಾತ್ರಿ 'ಕಾರ್ಬೋಹೈಡ್ರೇಟ್ ಲೋಡಿಂಗ್' ಮಾಡುವುದರಿಂದ ಮತ್ತು ದೇಹದ ಕೊಬ್ಬನ್ನು ಶಕ್ತಿಯಾಗಿ ಬಳಸುವುದರಿಂದ ಇದು ಸಾಧ್ಯವಾಗುತ್ತದೆ.  

Read Full Story

08:18 PM (IST) Jul 06

ಡೈರೆಕ್ಟರ್‌ಗೆ ಹೆದರಿ ಹಲೋ-ಹಾಯ್ ಬಿಟ್ಟರೆ ಮಾತೇ ಇರಲಿಲ್ಲ - ಸಮಂತಾ ಸೀಕ್ರೆಟ್ ಬಿಚ್ಚಿಟ್ಟ ಕಿಚ್ಚ ಸುದೀಪ್

ಟಾಲಿವುಡ್‌ನಲ್ಲಿ ನಂಬರ್ 1 ನಾಯಕಿ ಯಾರು ಅಂದ್ರೆ ಮೊದಲು ಕೇಳಿಬರುವ ಹೆಸರು ಸಮಂತಾ. ಮೂರು ವರ್ಷಗಳ ಗ್ಯಾಪ್ ನಂತರ 'ಮಾ ಇಂಟಿ ಬಂಗಾರಂ' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. 

Read Full Story

08:18 PM (IST) Jul 06

Bengaluru Airport ರಸ್ತೆ ಶೀಘ್ರದಲ್ಲೇ ಸಂಪೂರ್ಣ ಸಿಗ್ನಲ್ ಮುಕ್ತ!; ಮುಂದಿನ ವಾರದಿಂದ ಸಾದಹಳ್ಳಿ ಅಂಡರ್‌ಪಾಸ್ ಕಾಮಗಾರಿ

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ಹೆಬ್ಬಾಳ-ಏರ್‌ಪೋರ್ಟ್‌ ಕಾರಿಡಾರ್ ಸಂಪೂರ್ಣ ಸಿಗ್ನಲ್ ಮುಕ್ತಗೊಳಿಸುವ ನಿಟ್ಟಿನಲ್ಲಿ, ದಶಕದಿಂದ ಬಾಕಿಯಿದ್ದ ಸಾದಹಳ್ಳಿ ಜಂಕ್ಷನ್ ಅಂಡರ್‌ಪಾಸ್ ಯೋಜನೆಗೆ ಚಾಲನೆ ಸಿಕ್ಕಿದೆ. NHAI 15 ತಿಂಗಳ ಅವಧಿಯ ಈ ಕಾಮಗಾರಿಯನ್ನು ಶೀಘ್ರದಲ್ಲೇ ಆರಂಭಿಸಲಿದೆ.

Read Full Story

07:41 PM (IST) Jul 06

LPG - ಅಡುಗೆ ಅನಿಲ ಕೊರತೆಗೆ ಬ್ರೇಕ್; ಕೇಂದ್ರದ ಮಾಸ್ಟರ್ ಪ್ಲಾನ್! ಆಗಿದ್ದೇನು ಗೊತ್ತಾ?

Cooking gas shortage solution: ಬಿಕ್ಕಟ್ಟಿನ ಸಮಯದಲ್ಲಿ ದೇಶದ ಜನರಿಗೆ ಎಲ್‌ಪಿಜಿ ಪೂರೈಕೆಯಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಪ್ರಮುಖ ಕ್ರಮಗಳನ್ನು ತೆಗೆದುಕೊಂಡಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. 

Read Full Story

07:35 PM (IST) Jul 06

ಬೆಂಗಳೂರಿನಲ್ಲಿ ವಾಹನ ಸವಾರರಿಗೆ Towing ಬಿಸಿ!; ದಂಡಕ್ಕಿಂತ ಟೋಯಿಂಗ್ ಚಾರ್ಜ್‌ ಜಾಸ್ತಿ, ಸಾರ್ವಜನಿಕರ ತೀವ್ರ ಆಕ್ರೋಶ!

ಬೆಂಗಳೂರಿನಲ್ಲಿ ಮರುಜಾರಿಯಾದ ವಾಹನ ಟೋಯಿಂಗ್ ವ್ಯವಸ್ಥೆಯು ಭಾರಿ ದಂಡದ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸೂಕ್ತ ಪಾರ್ಕಿಂಗ್ ಸೌಲಭ್ಯವಿಲ್ಲದೆ ಅಧಿಕ ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ವಿಪರ್ಯಾಸವೆಂದರೆ ಸಾರ್ವಜನಿಕರಿಂದ ಹೆಚ್ಚು ಹಣ ಸಂಗ್ರಹವಾದರೂ ಪಾಲಿಕೆಗಳು ನಷ್ಟ ಅನುಭವಿಸುತ್ತಿವೆ.
Read Full Story

07:33 PM (IST) Jul 06

ರೈಲ್ವೆ ಅಂಡರ್ ಪಾಸ್‌ಗಾಗಿ ಹಕ್ಕೊತ್ತಾಯ - ರೈತರು ಹಾಗೂ ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ!

ಚಾಮರಾಜನಗರ ಜಿಲ್ಲೆಯ ಪಣ್ಯದಹುಂಡಿ ಬಳಿ ರೈಲು ಮಾರ್ಗದ ಮೇಲೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ವಿವಾದಕ್ಕೆ ಗುರಿಯಾಗಿದೆ. ಕಾಮಗಾರಿ ಆರಂಭವಾಗುತ್ತಿದ್ದಂತೆ ಸುತ್ತಮುತ್ತಲ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.

Read Full Story

06:58 PM (IST) Jul 06

ಬೆಂಗಳೂರಿನಲ್ಲಿ ಕೆಲಸ ಮಾಡಿದ್ರೆ ಹೆಚ್ಚಿನ ಹಣ ಸಿಗುತ್ತಾ? ಊರಿನಲ್ಲಿದ್ರೆ ಜಾಸ್ತಿ ಹಣ ಉಳಿಸಬಹುದಾ?

ಉದ್ಯೋಗ, ಉತ್ತಮ ಸಂಬಳಕ್ಕಾಗಿ ಬೆಂಗಳೂರಿಗೆ ವಲಸೆ ಬಂದ ಕಾರ್ಪೊರೇಟ್ ಕೆಲಸ ಮಾಡುತ್ತಿರುವ ದಂಪತಿಯೊಬ್ಬರು, ಸಣ್ಣ ನಗರಗಳಲ್ಲಿ ಸಿಗುವ ನೆಮ್ಮದಿಯ ಜೀವನದ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

Read Full Story

06:55 PM (IST) Jul 06

ಕೋರ್ಟ್ ಮೆಟ್ಟಿಲೇರಿದ್ದ 341 OBC ಶಿಕ್ಷಕಿಯರಿಗೆ ಕೊನೆಗೂ ಸಿಕ್ತು ಮುಕ್ತಿ!; ಷರತ್ತುಬದ್ಧ ಸೇರ್ಪಡೆಗೆ ಶಾಲಾ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್!

ಪ್ರಮಾಣಪತ್ರಗಳ ತಾಂತ್ರಿಕ ವಿವಾದದಿಂದ ನೇಮಕಾತಿ ವಂಚಿತರಾಗಿದ್ದ 341 ವಿವಾಹಿತ ಮಹಿಳಾ ಶಿಕ್ಷಕಿಯರಿಗೆ ಹೈಕೋರ್ಟ್ ಮಧ್ಯಂತರ ಆದೇಶದಿಂದ ರಿಲೀಫ್ ಸಿಕ್ಕಿದೆ. ಶಾಲಾ ಶಿಕ್ಷಣ ಇಲಾಖೆಯು ಷರತ್ತುಬದ್ಧ ಅನುಮತಿಯೊಂದಿಗೆ ಇವರಿಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಸೂಚಿಸಿದೆ.

Read Full Story

06:52 PM (IST) Jul 06

ಪೋಸ್ಟ್ ಆಫೀಸ್ FD vs RD ಯೋಜನೆ; 50,000 ರೂ. ಹೂಡಿಕೆಗೆ ಮಾಡಿದರೆ 10 ವರ್ಷಗಳಲ್ಲಿ ಎಲ್ಲಿ ಸಿಗಲಿದೆ ಹೆಚ್ಚಿನ ಲಾಭ?

Post office investment schemes: ನಿಮ್ಮ ಬಳಿ ₹50,000 ಇದ್ದರೆ, ಅದನ್ನು ಪೋಸ್ಟ್ ಆಫೀಸ್‌ನ  FD ಅಥವಾ RD ಹೂಡಿಕೆ ಮಾಡುವುದರಲ್ಲಿ ಯಾವುದು ಉತ್ತಮ ಎಂಬುದನ್ನು ಈ ಲೇಖನ ವಿಶ್ಲೇಷಿಸುತ್ತದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. 

Read Full Story

06:43 PM (IST) Jul 06

ಕನ್ನಡದ 'ಮಹಾಕವಿ'ಗೆ ಜಾಗತಿಕ ಮನ್ನಣೆ - ಹಾಲಿವುಡ್ ಚಿತ್ರೋತ್ಸವದಲ್ಲಿ ಬರಗೂರರ ಸಿನಿಮಾ

Mahakavi Movie: ಹಿರಿಯ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದಲ್ಲಿ, ಬಹುಭಾಷಾ ನಟ ಕಿಶೋರ್ ಅಭಿನಯಿಸಿರುವ 'ಮಹಾಕವಿ' ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.

Read Full Story

06:26 PM (IST) Jul 06

Pinaka Movie - ಯಾವ ಸಿನಿಮಾದಲ್ಲೂ ಇರದ ಕ್ಲೈಮ್ಯಾಕ್ಸ್‌ 'ಪಿನಾಕ'ದಲ್ಲಿ ಇರುತ್ತೆ - Golden Star Ganesh

Golden Star Ganesh Pinaka Kannada Movie: ಪೀಪಲ್ ಮೀಡಿಯಾ ಫ್ಯಾಕ್ಟರಿ ಲಾಂಛನದಲ್ಲಿ ವಿಶ್ವಪ್ರಸಾದ್ ಅವರು ಅದ್ದೂರಿಯಾಗಿ ನಿರ್ಮಿಸುತ್ತಿರುವ, ನೃತ್ಯ ನಿರ್ದೇಶಕ ಧನಂಜಯ್ ಚೊಚ್ಚಲ ನಿರ್ದೇಶನದ, ಗೋಲ್ಟನ್ ಸ್ಟಾರ್ ಗಣೇಶ್‍ ಅಭಿನಯದ ‘ಪಿನಾಕ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. 

 

Read Full Story

06:24 PM (IST) Jul 06

'ಹೆಣ್ಣೇ ಸಮಾಜದ ಶಕ್ತಿ' - ಅಕ್ಕಪಡೆ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಸಂದೇಶ

Women Empowerment Karnataka: ಕಲ್ಯಾಣ ಕರ್ನಾಟಕ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಬಸವಕಲ್ಯಾಣದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಮಹಿಳಾ ಸುರಕ್ಷತೆ..

Read Full Story

06:01 PM (IST) Jul 06

Udupi - ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಕಳ್ಳಿಯರ ಕೈಚಳಕ - ಭಕ್ತೆಯ ಬ್ಯಾಗ್‌ನಿಂದ ₹80 ಸಾವಿರ ಕಳವು!

Udupi: ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತೆಯೊಬ್ಬರ ವ್ಯಾನಿಟಿ ಬ್ಯಾಗ್‌ನಿಂದ ₹80 ಸಾವಿರ ನಗದು ಕಳವು ಮಾಡಿದ ಪ್ರಕರಣವನ್ನು ಪೊಲೀಸರು ಕೇವಲ 24 ಗಂಟೆಗಳಲ್ಲೇ ಭೇದಿಸಿದ್ದಾರೆ.

Read Full Story

05:45 PM (IST) Jul 06

Food - ಮಾವಿನ ಉಪ್ಪಿನಕಾಯಿ ಬೇಗ ಹಾಳಾಗುತ್ತಿದೆಯೇ? ವರ್ಷ ಪೂರ್ತಿ ಫಂಗಸ್ ಬರದಂತೆ ತಡೆಯಲು ಈ ದೇಶಿ ವಿಧಾನ ಬಳಸಿ!

ಜನರು ಸಾಮಾನ್ಯವಾಗಿ ತಾವು ತಯಾರಿಸಿದ ಉಪ್ಪಿನಕಾಯಿ ಕೆಲವು ತಿಂಗಳುಗಳಲ್ಲಿ ಹಾಳಾಗಲು ಪ್ರಾರಂಭಿಸುತ್ತದೆ ಎಂದು ದೂರುತ್ತಾರೆ. ಆದ್ದರಿಂದ ಇಂದು ನಿಮಗೆ ರುಚಿಕರವಾದ ಮಾವಿನ ಉಪ್ಪಿನಕಾಯಿಯ ಸುಲಭ ಮತ್ತು ಸಾಂಪ್ರದಾಯಿಕ ಪಾಕವಿಧಾನವನ್ನು ಹೇಳಲಿದ್ದೇವೆ, ಇದರೊಂದಿಗೆ ನೀವು ಮಾಡಿದ ಉಪ್ಪಿನಕಾಯಿ ಇಡೀ ವರ್ಷ ಹಾಳಾಗುವುದಿಲ್ಲ. ಅದು ಹೇಗೆ ಎನ್ನುವುದನ್ನು ನೊಡೋಣ ಬನ್ನಿ. 

Read Full Story

05:44 PM (IST) Jul 06

ಬಾದ್‌ಷಾ ಕಿಚ್ಚ ಸುದೀಪ್‌ಗೆ ಜುಲೈ 6 ಯಾಕೆ ಅಷ್ಟು ವಿಶೇಷ? ಈ ಎರಡು ಸಿನಿಮಾಗಳಲ್ಲಿದೆ ಆ ಉತ್ತರ!

ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ, ಬಾದ್‌ಷಾ ಕಿಚ್ಚ ಸುದೀಪ್‌ ಅವರ ಸಿನಿ ಪಯಣದಲ್ಲಿ ಜುಲೈ 6 ವಿಶೇಷ ಸ್ಥಾನ ಹೊಂದಿದೆ. ಅವರ ಸಿನಿ ಪಯಣಕ್ಕೆ ಹೊಸ ತಿರುವು ನೀಡಿದ 'ಹುಚ್ಚ' ಚಿತ್ರಕ್ಕೆ 25 ವರ್ಷಗಳು ಪೂರ್ಣಗೊಂಡಿದೆ.

Read Full Story

05:13 PM (IST) Jul 06

ಪುನರ್ಜನ್ಮದ ಕಥೆಯೊಂದಿಗೆ ಬರುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ - 'ಪಿನಾಕ' ಟೀಸರ್‌ನಲ್ಲಿ ರೋಚಕ ಝಲಕ್

ಟೀಸರ್‌ನ ಪ್ರಮುಖ ಆಕರ್ಷಣೆ ಗಣೇಶ್ ಅವರ ಎರಡು ವಿಭಿನ್ನ ಗೆಟಪ್‌ಗಳು. ಒಂದು ಕಡೆ ಸ್ಟೈಲಿಷ್ ಮಾಡರ್ನ್ ಲುಕ್‌ನಲ್ಲಿ ಕಾಣಿಸಿಕೊಂಡರೆ, ಮತ್ತೊಂದು ಕಡೆ ರಾಜನ ಅವತಾರದಲ್ಲಿ ಅದ್ದೂರಿಯಾಗಿ ಮಿಂಚಿದ್ದಾರೆ.

Read Full Story

05:12 PM (IST) Jul 06

ಎಚ್‌ಎಂಟಿಗೆ ಬಿಗ್ ಶಾಕ್! 15,000 ಕೋಟಿ ರೂ. ಮೌಲ್ಯದ 430 ಎಕರೆ ಅರಣ್ಯ ಭೂಮಿ ಸರ್ಕಾರಕ್ಕೆ ಹಿಂತಿರುಗಿಸಲು ಆದೇಶ

ಬೆಂಗಳೂರಿನ ಜಾಲಹಳ್ಳಿ ಬಳಿಯ HMT ಸಂಸ್ಥೆಯ 430 ಎಕರೆ ಭೂಮಿಯನ್ನು ಅರಣ್ಯ ಇಲಾಖೆ 'ಅರಣ್ಯ ಭೂಮಿ' ಎಂದು ಘೋಷಿಸಿದೆ. 15,000 ಕೋಟಿ ರೂ. ಮೌಲ್ಯದ ಈ ಭೂಮಿಯನ್ನು 30 ದಿನಗಳಲ್ಲಿ ಹಸ್ತಾಂತರಿಸಲು ಆದೇಶಿಸಿದ್ದು, ಇಸ್ರೋ ಸೇರಿದಂತೆ ಇತರ ಸಂಸ್ಥೆಗಳಿಗೆ ಮಾಡಿದ ಭೂ ವರ್ಗಾವಣೆಯೂ ಮರುಪರಿಶೀಲನೆಗೆ ಒಳಪಡಲಿದೆ.

Read Full Story

04:53 PM (IST) Jul 06

ಬೆಂಗಳೂರು ಮೂಲದ ಒಬೆನ್ ರೋರ್ ಇವಿಗೆ ಮುಗಿಬಿದ್ದ ಜನ, 25 ಸಾವಿರ ಬುಕಿಂಗ್ ಕಂಡ ಕೈಗೆಟುಕುವ ಬೈಕ್

ಬೆಂಗಳೂರು ಮೂಲದ ಒಬೆನ್ ಇವಿ ಬೈಕ್ ಭಾರಿ ಬೇಡಿಕೆ ವ್ಯಕ್ತವಾಗಿದೆ. ಬರೋಬ್ಬರಿ 25000 ಬೈಕ್ ಬುಕಿಂಗ್ ಆಗಿದೆ. ವಿಶೇಷ ಅಂದರೆ 15 ದಿನದಲ್ಲಿ 25000 ಬೈಕ್ ಬುಕಿಂಗ್ ಆಗಿದೆ. ಇದರ ಬೆಲೆ ಇತರ ಪೆಟ್ರೋಲ್ ಬೈಕ್‌ಗಳಿಂತ ಅತೀ ಕಡಿಮೆ.

Read Full Story

04:51 PM (IST) Jul 06

Daali Dhananjaya ಪುತ್ರನ ಮೊದಲ ಫೋಟೋ ರಿವೀಲ್ - ಅಭಿಮಾನಿಗಳ ಮನ ಗೆದ್ದ 'ಮದರ್ ಪ್ರಾಮಿಸ್' ಪೋಸ್ಟ್

ನಟ ರಾಕ್ಷಸ ಡಾಲಿ ಧನಂಜಯ್ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಇತ್ತೀಚೆಗೆ ಪತ್ನಿ ಧನ್ಯಾ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ, ಇದೀಗ ಮೊದಲ ಬಾರಿಗೆ ತಮ್ಮ ಮುದ್ದು ಮಗನ ಫೋಟೋವನ್ನು ಹಂಚಿಕೊಂಡಿದ್ದಾರೆ.

Read Full Story

04:18 PM (IST) Jul 06

Rishab Shetty ಹುಟ್ಟುಹಬ್ಬ ವಿಶೇಷ - ‘ಜೈ ಹನುಮಾನ್’, ‘ರಂಡಮೂಳಂ’ ಹಾಗೂ ಹೊಸ ಕನಸು

ರಿಷಬ್ ಶೆಟ್ಟಿ ನಾಳೆ (ಜು.7) 43ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಲವೂ ಅವರು ಕುಟುಂಬದ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಾಧ್ಯತೆ ಇದೆ. ಪ್ರಸ್ತುತ ಅವರು ‘ಜೈ ಹನುಮಾನ್’ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.

Read Full Story

04:01 PM (IST) Jul 06

ರಾಹುಲ್ ಗಾಂಧಿ ಹೂಡಿಕೆಯ ‘ಲಕ್ಕಿ 7’ ಮ್ಯೂಚುವಲ್ ಫಂಡ್ಸ್; ಕೇವಲ 1 ವರ್ಷದಲ್ಲೇ ಕೋಟಿ ಕೋಟಿ ಕಮಾಯಿ!

Rahul Gandhi mutual funds: ಈ ಸ್ಟೋರಿಯಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಹೂಡಿಕೆ ಮಾಡಿರುವ ಏಳು ಪ್ರಮುಖ ಮ್ಯೂಚುವಲ್ ಫಂಡ್‌ಗಳ ಬಗ್ಗೆ ವಿವರಿಸಲಾಗಿದೆ. ಈ ಫಂಡ್‌ಗಳು ಹೂಡಿಕೆದಾರರಿಗೆ ಉತ್ತಮ ಲಾಭ ತಂದುಕೊಟ್ಟಿದ್ದು, ಅವುಗಳ ಕಾರ್ಯಕ್ಷಮತೆ ಮತ್ತು ರಾಹುಲ್ ಹೂಡಿಕೆಯ ವಿವರಗಳನ್ನು ಇಲ್ಲಿ ನೀಡಲಾಗಿದೆ.

Read Full Story

03:06 PM (IST) Jul 06

ಟಿಕೆಟ್‌ನಲ್ಲಿ ಬೆಂಗಳೂರಿನ 1 ವರ್ಷದ ಮಗು ಏಕಾಂಗಿ ಪ್ರಯಾಣ ಎಂದು ತೋರಿಸ್ತಿತ್ತು.. ಆಮೇಲೆ?

ಬೆಂಗಳೂರಿನ ಪ್ರಯಾಣಿಕರೊಬ್ಬರು ಟ್ರೈನ್ ಟಿಕೆಟ್‌ನಲ್ಲಿ ತಮ್ಮ ವಯಸ್ಸನ್ನು 24ರ ಬದಲು 1 ವರ್ಷ ಎಂದು ತಪ್ಪಾಗಿ ನಮೂದಿಸಿದ್ದಕ್ಕೆ ₹7,035 ದಂಡ ತೆತ್ತಿದ್ದಾರೆ. ಗುರುತಿನ ಚೀಟಿ ತೋರಿಸಿದರೂ ಟಿಟಿಇ ದಂಡ ವಿಧಿಸಿದ್ದು, ರೈಲ್ವೆ ಇಲಾಖೆ ಈ ಕ್ರಮವನ್ನು ಸಮರ್ಥಿಸಿಕೊಂಡಿದೆ. ಆದರೆ, 1 ವರ್ಷದ ಮಗುವಿಗೆ ಟಿಕೆಟ್ ಬುಕ್ ಆದ ಸಿಸ್ಟಮ್ ದೋಷದ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದೆ.
Read Full Story

02:48 PM (IST) Jul 06

116ರ ಕನ್ನಡದ ಅಜ್ಜಿಗೆ ರಾಷ್ಟ್ರಪತಿಗೆ ಕೊಡೋ ದರ್ಶನ ಕೊಡಿಸಿದ್ಯಾಕೆ ಟಿಟಿಡಿ? ಅತೀ ಸಮೀಪದಿಂದ ತಿಮ್ಮಪ್ಪನ ದರ್ಶನ!

116 ವರ್ಷ ವಯಸ್ಸಿನ ನವನೀತಮ್ಮ ಎಂಬ ವೃದ್ಧೆಯೊಬ್ಬರು ಯಾರ ಸಹಾಯವೂ ಇಲ್ಲದೆ ತಿರುಪತಿ ಬೆಟ್ಟದ 3,500 ಮೆಟ್ಟಿಲುಗಳನ್ನು ಕಾಲ್ನಡಿಗೆಯಲ್ಲಿ ಏರಿದ್ದಾರೆ. ಅವರ ಅಚಲ ಭಕ್ತಿಗೆ ಮೆಚ್ಚಿದ ಟಿಟಿಡಿ ಆಡಳಿತ ಮಂಡಳಿಯು ಅವರಿಗೆ ಮತ್ತು ಅವರ ಕುಟುಂಬಕ್ಕೆ ವಿಶೇಷ ವಿಐಪಿ ದರ್ಶನದ ವ್ಯವಸ್ಥೆ ಮಾಡಿ ಗೌರವಿಸಿದೆ. ಈ ಸ್ಪೂರ್ತಿದಾಯಕ ಘಟನೆಯು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
Read Full Story

01:33 PM (IST) Jul 06

ನಾನು ಇರೋವರೆಗೂ RSS ಪಥ ಸಂಚಲನಕ್ಕೆ ಅನುಮತಿ ಕಡ್ಡಾಯ -ಪ್ರಿಯಾಂಕ್ ಖರ್ಗೆ ವಾರ್ನಿಂಗ್

ಸಚಿವ ಪ್ರಿಯಾಂಕ್ ಖರ್ಗೆ ಮತ್ತೆ RSS ವಿರುದ್ಧ ಗುಡುಗಿದ್ದಾರೆ. ನಾನು ಸಚಿವನಾಗಿ ಇರುವ ತನಕ ರಾಜ್ಯದಲ್ಲಿ RSS ಪಥಸಂಚಲನಕ್ಕೆ ನನ್ನ ಅನುಮತಿ ಕಡ್ಡಾಯ ಎಂದು ಕಿಡಿಕಾರಿದ್ದಾರೆ. ಖರ್ಗೆ ಹೇಳಿದ್ದೇನು ಅನ್ನೋ ವಿವರ ಇಲ್ಲಿದೆ.   

Read Full Story

01:17 PM (IST) Jul 06

Photos - ಸ್ವರ್ಗಕ್ಕೆ ಕಿಚ್ಚು ಹಚ್ಚಬೇಕು; ಪ್ರಕೃತಿ ಮಡಿಲಲ್ಲಿ ಬೃಹತ್‌ ಮನೆ ಕಟ್ಟಿದ Anchor Akul Balaji

Anchor Akul Balaji Home Photos: ನಿರೂಪಕ ಅಕುಲ್‌ ಬಾಲಾಜಿ ಅವರು ಮೂಲತಃ ಆಂಧ್ರದವರು, ಆದರೆ ಕನ್ನಡ ಕಲಿತು, ಕನ್ನಡದಲ್ಲಿ ಅತಿ ಹೆಚ್ಚು ನಿರೂಪಣೆ ಮಾಡಿ ಇಲ್ಲಿಯೇ ಹೆಸರು ಗಳಿಸಿದ್ದಾರೆ. ಈಗ ಇಲ್ಲಿಯೆ ಹೊಸದಾಗಿ ಮನೆ ಕೂಡ ಕಟ್ಟಿದ್ದಾರೆ. ಸುಂದರ ಫೋಟೋಗಳು ಇಲ್ಲಿವೆ. 

 

Read Full Story

12:52 PM (IST) Jul 06

ತೆಲಂಗಾಣ ಡಿಎಸ್‌ಪಿಯ ಅಕ್ರಮ ಆಸ್ತಿ ಕರ್ನಾಟಕದಲ್ಲಿ ಪತ್ತೆ, ಬರೋಬ್ಬರಿ 200 ಕೋಟಿ ಬೇನಾಮಿ ಆಸ್ತಿ!

ತೆಲಂಗಾಣದ ಡಿಎಸ್‌ಪಿ ಸಂಕಿರೆಡ್ಡಿ ಭೀಮ್ ರೆಡ್ಡಿ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಎಸಿಬಿ ಬಲೆಗೆ ಬಿದ್ದಿದ್ದಾರೆ. ತೆಲಂಗಾಣ ಮತ್ತು ಕರ್ನಾಟಕದಲ್ಲಿ ನಡೆದ ದಾಳಿಗಳಲ್ಲಿ 200 ಕೋಟಿಗೂ ಅಧಿಕ ಮೌಲ್ಯದ ಆಸ್ತಿ, ನಗದು, ಚಿನ್ನಾಭರಣ ಪತ್ತೆಯಾಗಿದ್ದು, ಬೇನಾಮಿಗಳ ವಿವರಗಳಿದ್ದ ರಹಸ್ಯ ಡೈರಿ ತನಿಖೆಗೆ ಮಹತ್ವದ ಸುಳಿವು ನೀಡಿದೆ.
Read Full Story

11:36 AM (IST) Jul 06

ಮಳೆ ಕೊರತೆಯಿಂದ ಬೆಳೆ ಒಣಗುತ್ತಿದೆ; ಮೋಡ ಬಿತ್ತನೆ ಮಾಡುವಂತೆ ಶಾಸಕ ಕೋನರೆಡ್ಡಿ ಪತ್ರ

ಧಾರವಾಡ ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದಾಗ, ಶಾಸಕ ಎನ್‌.ಎಚ್‌. ಕೋನರಡ್ಡಿ ಮೋಡ ಬಿತ್ತನೆಗೆ ಆಗ್ರಹಿಸಿದ್ದರು. ಆದರೆ, ಜುಲೈ ತಿಂಗಳಲ್ಲಿ ಸುರಿದ ಅನಿರೀಕ್ಷಿತ ಮಳೆಯು ಒಣಗುತ್ತಿದ್ದ ಬೆಳೆಗಳಿಗೆ ಮರುಜೀವ ನೀಡಿ, ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.
Read Full Story

11:17 AM (IST) Jul 06

ಮೈಸೂರು ಚಾಮುಂಡಿ ದರ್ಶನ ಟಿಕೆಟ್‌ ದರ 6 ಪಟ್ಟು ಏರಿಕೆ! ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತೀವ್ರ ಅಸಮಾಧಾನ

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರದ ವಿಶೇಷ ದರ್ಶನಕ್ಕೆ 2,000 ರೂ. ಟಿಕೆಟ್ ದರ ನಿಗದಿಪಡಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ದುಬಾರಿ ದರ ಏರಿಕೆಯನ್ನು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಖಂಡಿಸಿದ್ದು, ಇದು ಸಾಮಾನ್ಯ ಭಕ್ತರಿಗೆ ಮಾಡುವ ಅನ್ಯಾಯ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Read Full Story

10:45 AM (IST) Jul 06

ಕರ್ನಾಟಕಲ್ಲಿಂದು ಭಾರೀ ಮಳೆ ಸೂಚನೆ - 11 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಬಂಗಾಳಕೊಲ್ಲಿಯ ವಾಯುಭಾರ ಕುಸಿತದಿಂದಾಗಿ ವ್ಯಾಪಕ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯು 11 ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಮತ್ತು 8 ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಿದ್ದು, ಮೀನುಗಾರರಿಗೆ ಕಡಲಿಗಿಳಿಯದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
Read Full Story

10:40 AM (IST) Jul 06

ಪದೇ ಪದೇ ಆರೋಪ, ಚುಚ್ಚು ಮಾತುಗಳು; 'ಬೇರೆ ದಾರಿ ಇಲ್ಲ; ದುಃಖದ ಜೊತೆ ಬದುಕ್ತೀನಿ'- Actress Krishi Thapanda

Actress Krishi Thapanda: ನಟಿ ಕೃಷಿ ತಾಪಂಡ ಅವರ ಮನೆಯಲ್ಲಿ ಗೆಳೆಯ ವೈಶಾಖ್‌ ನೇ*ಣು ಹಾಕಿಕೊಂಡು ಸಾವನ್ನಪ್ಪಿದ್ದರು. ಇದಾಗಿ ಕೆಲವು ದಿನಗಳ ಬಳಿಕ ಕೃಷಿ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ. ಈ ಮೂಲಕ ಮನಸ್ಸಿನಲ್ಲಿರೋದನ್ನು ಹಂಚಿಕೊಂಡಿದ್ದಾರೆ.

 

Read Full Story

10:38 AM (IST) Jul 06

ಅಯ್ಯೋ, ಪಾಪಿಗಳಾ.. ಬಸ್ ನಿಲ್ದಾಣದಲ್ಲಿ 10 ದಿನದ ಕಂದಮ್ಮನ ಬಿಟ್ಟು ಹೋದ ಅಪ್ಪ-ಅಮ್ಮ

ಶಿವಮೊಗ್ಗ ಜಿಲ್ಲೆಯ ಗವಟೂರು ಗ್ರಾಮದ ಬಸ್ ನಿಲ್ದಾಣದಲ್ಲಿ ಕೈಚೀಲವೊಂದರಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ. ಸ್ಥಳೀಯರ ಸಮಯಪ್ರಜ್ಞೆಯಿಂದ ಮಗುವನ್ನು ರಕ್ಷಿಸಲಾಗಿದ್ದು, ಪೊಲೀಸರು ಮಗುವನ್ನು ಬಿಟ್ಟುಹೋದ ಪೋಷಕರಿಗಾಗಿ ತನಿಖೆ ನಡೆಸುತ್ತಿದ್ದಾರೆ.
Read Full Story

09:56 AM (IST) Jul 06

ಆಂಬ್ಯುಲೆನ್ಸ್‌ನಲ್ಲಿ ಜೀವಕ್ಕಾಗಿ ಹೋರಾಟ.. ದಾರಿಬಿಡದೇ ಪುಂಡರ ಚೆಲ್ಲಾಟ.. ಆ ಮಧ್ಯರಾತ್ರಿ ನಡೆದಿದ್ದೇನು?

ಬೆಂಗಳೂರಿನಲ್ಲಿ ಆಂಬ್ಯುಲೆನ್ಸ್‌ನಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ರೋಗಿಯ ಜೀವದ ಜೊತೆ ಪುಂಡರು ಚೆಲ್ಲಾಟವಾಡಿದ್ದಾರೆ. ಯಶವಂತಪುರ-ಗೊರಗುಂಟೆಪಾಳ್ಯ ರಸ್ತೆಯಲ್ಲಿ ಆಂಬ್ಯುಲೆನ್ಸ್‌ಗೆ ಅಡ್ಡಿಪಡಿಸಿ ವೀಲಿಂಗ್ ಮಾಡುತ್ತಾ ವಿಕೃತಿ ಮೆರೆದಿದ್ದು, ಈ ವಿಡಿಯೋ ವೈರಲ್ ಆಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
Read Full Story

More Trending News