Published : Oct 04, 2025, 08:08 AM ISTUpdated : Oct 05, 2025, 12:09 AM IST

State News Live: ಹಮಾಸ್‌ಗೆ ಟ್ರಂಪ್ ಎಚ್ಚರಿಕೆ - ಬೇಗ ಡೀಲ್ ಒಪ್ಪಿಕೊಳ್ಳಿ, ಇಲ್ಲದಿದ್ದರೆ ಎಲ್ಲ ಮುಗಿದಂತೆ..!

ಸಾರಾಂಶ

ಬೆಂಗಳೂರು (ಅ.4): ಕರ್ನಾಟಕದಲ್ಲಿ ಪಂಚ ಯೋಜನೆಗಳಿಂದ ಇಡೀ ಸಮಾಜ ಸಬಲವಾಗಿದೆ. ಗ್ಯಾರಂಟಿಗಳಿಂದ ಜೀವನ ಭಾರೀ ಸುಧಾರಣೆಯಾಗಿದೆ ಎಂದು ಅಧ್ಯಯನ ವರದಿಯೊಂದು ಮೆಚ್ಚುಗೆ ವ್ಯಕ್ತಪಡಿಸಿದೆ. ಹೆಚ್ಚಿನ ಆದಾಯ, ಒಳ್ಳೆ ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗ ಭಾಗ್ಯ ಜನರಿಗೆ ದೊರೆತಿದೆ ಎಂದು ಹೇಳಿದೆ. ಪೊಲಿಟಿಕಲ್‌ಶಕ್ತಿ ಮತ್ತು ಸಿಟಿಜನ್ಸ್‌ಫಾರ್ ಬೆಂಗಳೂರು ಸಂಸ್ಥೆಗಳ ಸಹ-ಸಂಸ್ಥಾಪಕಿ ತಾರಾ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ 4 ಸಂಶೋಧನಾ ಮತ್ತು ಶೈಕ್ಷಣಿಕ ಸಂಸ್ಥೆಗಳು ಗ್ಯಾರಂಟಿಗಳ ಬಗ್ಗೆ ಸಮಗ್ರವಾಗಿ ನಡೆಸಿದ ಅಧ್ಯಯನದ ಆಧಾರದಲ್ಲಿ ಈ ವರದಿಯನ್ನು ತಯಾರಿಸಲಾಗಿದೆ. ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

 

12:09 AM (IST) Oct 05

ಹಮಾಸ್‌ಗೆ ಟ್ರಂಪ್ ಎಚ್ಚರಿಕೆ - ಬೇಗ ಡೀಲ್ ಒಪ್ಪಿಕೊಳ್ಳಿ, ಇಲ್ಲದಿದ್ದರೆ ಎಲ್ಲ ಮುಗಿದಂತೆ..!

Trump's warning to Hamas: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಗಾಝಾ ಶಾಂತಿ ಒಪ್ಪಂದ ತಕ್ಷಣವೇ ಒಪ್ಪಿಕೊಳ್ಳದಿದ್ದರೆ ಎಲ್ಲವೂ ಮುಗಿದುಹೋಗುತ್ತದೆ ಎಂದು ಪ್ಯಾಲೆಸ್ತೀನ್  ಹಮಾಸ್‌ಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ. ತಾತ್ಕಾಲಿಕವಾಗಿ ಬಾಂಬ್ ದಾಳಿ ನಿಲ್ಲಿಸಿದ್ದಕ್ಕಾಗಿ ಇಸ್ರೇಲ್ ಹೊಗಳಿದ್ದಾರೆ..

 

Read Full Story

11:52 PM (IST) Oct 04

ಭಾರತದ ಟಾಪ್ 5 ಬಿಲಿಯನೇರ್‌ಗಳು ಮತ್ತು ಅವರ ಯಶಸ್ಸಿನ ಕಥೆ, ಅಪಾರ ಸಂಪತ್ತು ಗಳಿಸಿದ್ದು ಹೇಗೆ?

ಭಾರತದ ಟಾಪ್ ಬಿಲಿಯನೇರ್‌ಗಳ ಯಶಸ್ಸಿನ ಕಥೆ: 2025ರ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ, ಗೌತಮ್ ಅದಾನಿ ಹೆಸರುಗಳಿವೆ. ಈ ಬಿಲಿಯನೇರ್‌ಗಳು ತಮ್ಮ ಶ್ರಮ, ಶಿಕ್ಷಣ ಮತ್ತು ಸ್ಮಾರ್ಟ್ ಆಲೋಚನೆಯಿಂದ ಹೇಗೆ ಅಪಾರ ಸಂಪತ್ತು ಹೇಗೆ ಗಳಿಸಿದರು ತಿಳಿಯಿರಿ.

Read Full Story

11:33 PM (IST) Oct 04

ಚಿಕ್ಕೋಡಿ - ಬಾಲಕಿ ರೇಪ್ ಕೇಸ್, ಆರೋಪಿಗೆ ಗಲ್ಲು ಶಿಕ್ಷೆ, ಶಿಕ್ಷೆಗೆ ಗ್ರಾಮಸ್ಥರು ಸಂಭ್ರಮ, ಪಿಎಸ್‌ಐ ಭಾವುಕ!

ಬೆಳಗಾವಿ ಜಿಲ್ಲೆಯ ಪರಮಾನಂದವಾಡಿ ಗ್ರಾಮದಲ್ಲಿ 2019ರಲ್ಲಿ ನಡೆದಿದ್ದ ಅಪ್ರಾಪ್ತ ಬಾಲಕಿಯ ಅತ್ಯಾ೧ಚಾರ, ಕೊಲೆ ಪ್ರಕರಣದಲ್ಲಿ ಆರೋಪಿ ಭರತೇಶ ಮಿರ್ಜಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಈ ತೀರ್ಪಿನ ಬಳಿಕ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ತನಿಖಾಧಿಕಾರಿ ಪಿಎಸ್‌ಐ ಗಿರಿಮಲ್ಲಪ್ಪ ಉಪ್ಪಾರ ಭಾವುಕರಾದರು.

Read Full Story

11:32 PM (IST) Oct 04

BBK 12 - ಹೆಣ್ಣು ಹೂವಿನ ಥರ ಇರಬೇಕು, ಚಪ್ಪಡಿ ಕಲ್ಲಿನ ಥರ ಇದ್ರೆ ಹೇಗೆ ಮುದ್ದು ಮಾಡೋದು? - ಕಾಕ್ರೋಚ್‌ ಸುಧಿ

ಬಿಗ್‌ ಬಾಸ್‌ ಕನ್ನಡ ಶೋನಲ್ಲಿ ಲವ್‌ ಸ್ಟೋರಿ ಶುರುವಾಗುತ್ತವೆ, ವಿವಾದಾತ್ಮಕ ಮಾತುಗಳು ಕೇಳಿ ಬರುತ್ತವೇ, ವೈಯಕ್ತಿಕ ವಿಷಯವೂ ಒಪನ್‌ ಆಗುತ್ತವೆ. ಈಗ ಕಾಕ್ರೋಚ್‌ ಸುಧಿ ಅವರು ಹೆಣ್ಣು ಹೂವಿನ ಥರ ಇರಬೇಕು ಎಂದು ಹೇಳಿದ್ದಾರೆ.

 

 

Read Full Story

11:05 PM (IST) Oct 04

BBK 12 - ನಾನು ಬಿಗ್‌ ಬಾಸ್‌ ಮನೆಯಲ್ಲಿ ಅದೊಂದು ಮಾತು ಹೇಳಬಾರದಿತ್ತು, ತಪ್ಪು ಮಾಡಿದೆ-ರಕ್ಷಿತಾ ಶೆಟ್ಟಿ

Bigg Boss Kannada Rakshita Shetty: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋಗೆ ರಕ್ಷಿತಾ ಶೆಟ್ಟಿ ಕಂಬ್ಯಾಕ್‌ ಮಾಡಿದ್ದಾರೆ. ಮೊದಲೇ ಊಹಿಸಿದಂತೆ ರಕ್ಷಿತಾ ಅವರು ಸೀಕ್ರೇಟ್‌ ರೂಮ್‌ನಲ್ಲಿ ಇದ್ದರಂತೆ. ಈ ವಿಷಯವನ್ನು ಅವರು ಕಿಚ್ಚ ಸುದೀಪ್‌ ಮುಂದೆ ಹೇಳಿದ್ದರು.

 

Read Full Story

11:00 PM (IST) Oct 04

ಬಂಜೆತನ ಚಿಕಿತ್ಸೆಯಲ್ಲಿ ಹೊಸ ಆವಿಷ್ಕಾರ; ಚರ್ಮದ ಕೋಶಗಳಿಂದ ಅಂಡಾಣು ಸೃಷ್ಟಿಸಿದ ಸಂಶೋಧಕರು!

Reproductive technology: ಮಾನವನ ಚರ್ಮದ ಕೋಶಗಳನ್ನು ಬಳಸಿ ಕಾರ್ಯಸಾಧ್ಯವಾದ ಅಂಡಾಣುಗಳನ್ನು ಸೃಷ್ಟಿಸಲು ಸಾಧ್ಯವಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. 

Read Full Story

10:58 PM (IST) Oct 04

ಮಲ್ಲಮ್ಮ ಮತ್ತು 1 ನಿಮಿಷ 20 ಸೆಕೆಂಡ್; ನಿಮ್ಮ ಬುಡ ನೀವು ನೋಡ್ಕೊಳ್ಳಿ ಎಂದ ಸುದೀಪ್

Mallamma swimming pool task ಬಿಗ್‌ಬಾಸ್ ಮನೆಯಲ್ಲಿ ಒಂಟಿಯಾಗಿ ಆಡುತ್ತಿರುವ ಮಲ್ಲಮ್ಮ ಅವರ ಸಾಮರ್ಥ್ಯವನ್ನು ಸುದೀಪ್ ಶ್ಲಾಘಿಸಿದ್ದಾರೆ. ಈಜುಕೊಳದ ಟಾಸ್ಕ್‌ನಲ್ಲಿ ಮಲ್ಲಮ್ಮ ವೇಗದ ಪ್ರದರ್ಶನ ನೀಡಿದ್ದನ್ನು ಉಲ್ಲೇಖಿಸಿದ್ದಾರೆ.

Read Full Story

10:39 PM (IST) Oct 04

ಬೆಂಗಳೂರು - ಪತಿಯಿಂದ ವರದಕ್ಷಿಣೆ ಕಿರುಕುಳ ಆರೋಪ; ಗೃಹಿಣಿ ನೇಣಿಗೆ ಶರಣು!

ಬೆಂಗಳೂರಿನ ತಲಘಟ್ಟಪುರದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆಯಾದ ನಾಲ್ಕು ವರ್ಷಗಳ ನಂತರ ಪತಿ ಶೈಲೇಶ್ ಅವರ ಕುಟುಂಬದವರು ನೀಡುತ್ತಿದ್ದ ಕಿರುಕುಳವೇ ಸಾವಿಗೆ ಕಾರಣ ಎಂದು ಮೃತ ನವ್ಯ ಅವರ ಕುಟುಂಬಸ್ಥರು ಆರೋಪಿಸಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲು

Read Full Story

10:38 PM (IST) Oct 04

ಭಾರಿ ಮೆಚ್ಚುಗೆ ನಡುವೆ ರಿಷಬ್ ಶೆಟ್ಟಿಗೆ ಎದುರಾದ ಆತಂಕ, ಕಾಂತಾರ 1 ವೀಕ್ಷಕರಲ್ಲಿ ಕೈಜೋಡಿಸಿ ಮನವಿ

ಭಾರಿ ಮೆಚ್ಚುಗೆ ನಡುವೆ ರಿಷಬ್ ಶೆಟ್ಟಿಗೆ ಎದುರಾದ ಆತಂಕ, ಕಾಂತಾರ 1 ವೀಕ್ಷಕರಲ್ಲಿ ಕೈಜೋಡಿಸಿ ಮನವಿ ಮಾಡಿದ್ದಾರೆ. ರಿಷಬ್ ಶೆಟ್ಟಿ ದಿಢೀರ್ ವೀಕ್ಷಕರಲ್ಲಿ ಈ ರೀತಿ ಮನವಿ ಮಾಡಲು ಕಾರಣವೇನು? ದೇಶವೇ ಮೆಚ್ಚುವಂತೆ ಸಿನಿಮಾ ನೀಡಿದ ಕಲಾವಿದನ ಮನವಿ ಏನು?

Read Full Story

10:32 PM (IST) Oct 04

BBK 12 - ಆಟವಾಡ್ಲಿಲ್ಲ, ಮನರಂಜನೆ ಕೊಡ್ಲಿಲ್ಲ - ಹಾಗಿದ್ರೆ ಈ ವಾರದ ಕಿಚ್ಚನ ಚಪ್ಪಾಳೆ ಯಾರಿಗೆ?

Bigg Boss Kannada Season 12 Show: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಪ್ರತಿ ವಾರ ಕಿಚ್ಚ ಸುದೀಪ್‌ ಅವರು, ತಮಗೆ ಇಷ್ಟವಾಗುವ ಹಾಗೆ ಆಟ ಆಡಿದ ಸ್ಪರ್ಧಿಗೆ ಚಪ್ಪಾಳೆ ಕೊಡುತ್ತಾರೆ, ಇದಕ್ಕೆ ಕಾರಣವನ್ನು ಕೂಡ ನೀಡುತ್ತಾರೆ. ಈ ಬಾರಿ ಅವರು ಯಾರಿಗೆ ಚಪ್ಪಾಳೆ ಕೊಟ್ಟಿದ್ದಾರೆ.

 

Read Full Story

10:29 PM (IST) Oct 04

ಸುದೀಪ್ ಕ್ಲಾಸ್ - ಕಾಕ್ರೋಚ್ ಸುಧಿಯ ಆಟದ ಅಸಲಿಯತ್ತು ಬಯಲು?

Cockroach Sudhi game truth: ಬಿಗ್‌ಬಾಸ್ ಟಾಸ್ಕ್‌ನಲ್ಲಿ ತಮಗೆ ಮೋಸವಾಗಿದೆ ಎಂದು ಕಾಕ್ರೋಚ್ ಸುಧಿ ಆರೋಪಿಸಿದ್ದರು. ವೀಕೆಂಡ್ ಪಂಚಾಯ್ತಿಯಲ್ಲಿ ಸುದೀಪ್ ಅವರು, ಸುಧಿಗೆ ಆಟದ ನಿಯಮಗಳ ಬಗ್ಗೆ ಪಾಠ ಮಾಡಿ ಎಚ್ಚರಿಕೆ ನೀಡಿದರು. 

Read Full Story

10:10 PM (IST) Oct 04

Nanda Gokula Serial ಮೀನಾ ರಿಯಲ್‌ ಪತಿ ಕೂಡ ನಟ, ಖಳನಾಯಕನನ್ನೇ ಪ್ರೀತಿಸಿ ಮದುವೆಯಾಗಿದ್ದ ನಟಿ! ಯಾರದು?

Nanda Gokula Serial Meena Real Name: ನಂದಗೋಕುಲ ಧಾರಾವಾಹಿಯಲ್ಲಿ ಮೀನಾ ಪಾತ್ರ ಮಾಡುತ್ತಿರುವ ನಟಿ ಮೇಘಾ ಎಸ್‌ವಿ ಅವರ ರಿಯಲ್‌ ಪತಿ ಕೂಡ ನಟ. ಸೀರಿಯಲ್‌ನಲ್ಲಿ ನಟಿಸುತ್ತಿರುವಾಗಲೇ ಅವರು ಲವ್‌ ಮಾಡಿ, ಕುಟುಂಬದ ಒಪ್ಪಿಗೆ ಪಡೆದು ಮದುವೆಯಾಗಿದ್ದರು. 

Read Full Story

10:08 PM (IST) Oct 04

'ಖರ್ಗೆ ಸರ್ ನಮಗೆ ಸ್ಫೂರ್ತಿ, ಅವರು ಆರಾಮಿದ್ದಾರೆ ಅಷ್ಟೇ ಸಾಕು - ನಟಿ ರಮ್ಯಾ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೃದಯ ಶಸ್ತ್ರಚಿಕಿತ್ಸೆಯ ನಂತರ ವಿಶ್ರಾಂತಿ ಪಡೆಯುತ್ತಿದ್ದು, ನಟಿ ರಮ್ಯಾ ಅವರು ಖರ್ಗೆಯವರ ಯೋಗಕ್ಷೇಮ ವಿಚಾರಿಸಿದರು. ಈ ಸಂದರ್ಭದಲ್ಲಿ, ಖರ್ಗೆಯವರು ರಮ್ಯಾ ಅವರ ರಾಜಕೀಯ ಪುನರಾಗಮನದ ಬಗ್ಗೆ ಪ್ರಶ್ನಿಸಿದ್ದು, ಅದಕ್ಕೆ ಅವರು ಹಾಸ್ಯಮಯವಾಗಿ ಉತ್ತರಿಸಿದರು.

Read Full Story

09:48 PM (IST) Oct 04

ಟ್ರಾಫಿಕ್ ಸಮಸ್ಯೆ ಪ್ರಶ್ನಿಸಿದವರ ಮೇಲೆ ನೆಲಮಂಗಲ ಸ್ವಾಮೀಜಿಯಿಂದ ಹಲ್ಲೆ, ಬಿಗುವಿನ ವಾತಾವರಣ

ಟ್ರಾಫಿಕ್ ಸಮಸ್ಯೆ ಪ್ರಶ್ನಿಸಿದವರ ಮೇಲೆ ನೆಲಮಂಗಲ ಸ್ವಾಮೀಜಿಯಿಂದ ಹಲ್ಲೆ, ಬಿಗುವಿನ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ. ಸ್ವಾಮೀಜಿ ಕಾಲು ಹಿಡಿದರೂ ಹಿಂಬಾಲಕರ ಮೂಲಕ ಸ್ವಾಮೀಜಿ ಹಲ್ಲೆ ಮಾಡಿಸಿರುವ ಆರೋಪ ಕೇಳಿಬಂದಿದೆ.

Read Full Story

09:28 PM (IST) Oct 04

ತೆಲುಗಿನಲ್ಲಿ ಸಾಧನೆಯ ಏಣಿ ಹತ್ತಿದ Bigg Boss Kannada ಶೋಭಾ ಶೆಟ್ಟಿ! ಇದಪ್ಪಾ ಸಾಧನೆ ಅಂದ್ರೆ..!

Bigg Boss Kannada Shobha Shetty: ಅಗ್ನಿಸಾಕ್ಷಿ ಸೇರಿದಂತೆ ಕನ್ನಡದ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದ ಶೋಭಾ ಶೆಟ್ಟಿ ಅವರು ಈಗ ಒಂದಾದ ಮೇಲೆ ಒಂದರಂತೆ ಸಾಧನೆಯ ಏಣಿಯನ್ನು ಹತ್ತುತ್ತಿದ್ದಾರೆ. ಈಗ ಅವರು ಹೈದರಾಬಾದ್‌ನಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಹಾಗಾದರೆ ಏನದು? 

 

Read Full Story

09:17 PM (IST) Oct 04

ತುಮಕೂರು ಬಳಿ ಕಾರು ಬಸ್ ನಡುವೆ ಭೀಕರ ಅಪಘಾತ, ಸ್ಥಳದಲ್ಲೇ ಮೂವರ ಸಾವು

ತುಮಕೂರು ಬಳಿ ಕಾರು ಬಸ್ ನಡುವೆ ಭೀಕರ ಅಪಘಾತ, ಸ್ಥಳದಲ್ಲೇ ಮೂವರ ಸಾವು ಸಂಭವಿಸಿದೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Read Full Story

08:51 PM (IST) Oct 04

ಉತ್ತರ ಕನ್ನಡ - ರಾಜ್ಯ ಸರ್ಕಾರದ ವಿರುದ್ಧ ಅರಣ್ಯ ಭೂ ಒತ್ತುವರಿದಾರರ ಹೋರಾಟ

ಕರ್ನಾಟಕದಲ್ಲಿ ಶೇ. 87ರಷ್ಟು ಅರಣ್ಯವಾಸಿಗಳ ಭೂ ಹಕ್ಕು ಅರ್ಜಿಗಳು ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ, ಉತ್ತರ ಕನ್ನಡ ಜಿಲ್ಲೆಯಲ್ಲಿ 20,000ಕ್ಕೂ ಹೆಚ್ಚು ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಸರ್ಕಾರದ ನಿಯಮಬಾಹಿರ ನಡೆಯಿಂದಾಗಿ ಸಾಗುವಳಿದಾರರು ತಮ್ಮನ್ನು ಒಕ್ಕಲೆಬ್ಬಿಸುವ ಭೀತಿಯಲ್ಲಿದ್ದಾರೆ.

Read Full Story

08:46 PM (IST) Oct 04

Amruthadhaare Serial - ಅಮೃತ ಘಳಿಗೆಬಂತು, ಕೊನೆಗೂ ಗೌತಮ್‌ಗೆ ಮಗಳು ಸಿಕ್ಕಿದಳು, ಈಗ ಹೇಗಾಗಿದ್ದಾಳೆ ಗೊತ್ತಾ?

Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ಗೆ ಕೊನೆಗೂ ಮಗಳು ಸಿಕ್ಕಿದ್ದಾಳೆ. ಈ ಸೀರಿಯಲ್‌ನಲ್ಲಿ ಇದು ನಿಜಕ್ಕೂ ರೋಚಕ ಗಳಿಗೆ ಎನ್ನಬಹುದು. ಹಾಗಾದರೆ ಮುಂದೆ ಏನಾಗಬಹುದು? 

Read Full Story

08:27 PM (IST) Oct 04

ಕೊಡಗು - ಸ್ವಂತ ಕಟ್ಟಡವಿದ್ದರೂ 41,500 ರೂ. ಮಾಸಿಕ ಬಾಡಿಗೆ! ಭೂದಾಖಲೆ ಕಚೇರಿಯ ವಿಚಿತ್ರ ನಡೆ!

Kodagu land records office rent: ಮಡಿಕೇರಿಯಲ್ಲಿ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಸುಸಜ್ಜಿತ ಸ್ವಂತ ಕಟ್ಟಡವಿದ್ದರೂ, ತಿಂಗಳಿಗೆ 41,500 ರೂ. ಬಾಡಿಗೆ ನೀಡಿ ಖಾಸಗಿ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿದೆ. ಐದು ತಿಂಗಳಾದರೂ ಸ್ಥಳಾಂತರಗೊಂಡಿಲ್ಲ. ದಲ್ಲಾಳಿ ಹಿತಾಸಕ್ತಿ ಇರಬಹುದೆಂಬ ಅನುಮಾನ.

Read Full Story

08:07 PM (IST) Oct 04

'ಬ್ಯಾಡ್ ಗರ್ಲ್' ಶಾಂತಿಪ್ರಿಯಾ ಭಾರೀ ಸಾಹಸ; ಬೋಳು ತಲೆಯೊಂದಿಗೆ ಕ್ಲೈಮ್ಯಾಕ್ಸ್ ಶೂಟಿಂಗ್!

'ಬ್ಯಾಡ್ ಗರ್ಲ್' ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಶಾಂತಿಪ್ರಿಯಾ ಹೇಗಿದ್ದಾರೆ ಎಂಬುದನ್ನು ನೋಡಲು ಪ್ರೇಕ್ಷಕರು ಇನ್ನಿಲ್ಲದ ಕುತೂಹಲದಿಂದ ಕಾಯುತ್ತಿದ್ದಾರೆ. ಬೋಳು ತಲೆಯೊಂದಿಗೆ ಚಿತ್ರೀಕರಣ ಮುಗಿಸಿದ ಶಾಂತಿಪ್ರಿಯಾ ಅವರ ಈ ಸಾಹಸಗಾಥೆ ನಿಜಕ್ಕೂ ಸಿನಿ ರಸಿಕರಿಗೆ ಒಂದು ರೋಚಕ ವಿಷಯವಾಗಿದೆ.

Read Full Story

08:06 PM (IST) Oct 04

ಕೊಪ್ಪಳಕ್ಕೆ ಸಿಎಂ ಆಗಮನ ಹಿನ್ನೆಲೆ, ಕೇಸರಿ ಬಂಟಿಂಗ್ಸ್ ತೆಗೆಯಲು ಸೂಚನೆ, ಪೊಲೀಸರ ನಿರ್ಧಾರಕ್ಕೆ ಹಿಂದೂ ಸಮುದಾಯ ಆಕ್ರೋಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಪ್ಪಳ ಭೇಟಿಯ ಹಿನ್ನೆಲೆಯಲ್ಲಿ, ದಸರಾ ಹಬ್ಬಕ್ಕಾಗಿ ಹಾಕಲಾಗಿದ್ದ ಕೇಸರಿ ಬಂಟಿಂಗ್ಸ್‌ಗಳನ್ನು ತೆಗೆಯಲು ಪೊಲೀಸರು ಮುಂದಾಗಿದ್ದಾರೆ. ಈ ಕ್ರಮಕ್ಕೆ ಹಿಂದೂ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
Read Full Story

07:29 PM (IST) Oct 04

ತಮಿಳುನಾಡಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೇರಲು ಕೈ ಜೋಡಿಸುತ್ತಾರಾ ವಿಜಯ್? ಬಹಿರಂಗವಾಯ್ತು ರಾಜಕೀಯ ಲೆಕ್ಕಾಚಾರ!

ಕರೂರ್ ದುರಂತದ ನಂತರ, ತಮಿಳುನಾಡಿನ 2026ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಮತ್ತು ನಟ ವಿಜಯ್‌ರ ಟಿವಿಕೆ ಪಕ್ಷದ ನಡುವೆ ಮೈತ್ರಿಯ ಸಾಧ್ಯತೆ ಹೆಚ್ಚಾಗಿವೆ. ಡಿಎಂಕೆ ಸರ್ಕಾರದ ವಿರುದ್ಧ ಬಿಜೆಪಿಯು ವಿಜಯ್‌ಗೆ ಬೆಂಬಲ ಸೂಚಿಸಿದ್ದು, ಈ ಹೊಸ ರಾಜಕೀಯ ಸಮೀಕರಣವು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

Read Full Story

06:56 PM (IST) Oct 04

ಈ ವಿನಾಶಕಾರಿ ವಾಯು ರಕ್ಷಣಾ ಅಸ್ತ್ರ ಸದ್ಯದಲ್ಲೇ ಪಾಕ್‌ ಗಡಿಗೆ ನಿಯೋಜನೆ; ನಿಮಿಷಕ್ಕೆ 3000 ಸುತ್ತು ದಾಳಿ ನಡೆಸುವ ಸಾಮರ್ಥ್ಯ!

Mission Sudarshan Chakra details:ಪಾಕಿಸ್ತಾನದ ಗಡಿಯಲ್ಲಿ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲು, ಭಾರತೀಯ ಸೇನೆಯು 'ಮಿಷನ್ ಸುದರ್ಶನ ಚಕ್ರ'ದ ಅಡಿಯಲ್ಲಿ AK 630 ವಾಯು ರಕ್ಷಣಾ ಗನ್ ವ್ಯವಸ್ಥೆಗಳನ್ನು ಖರೀದಿಸುತ್ತಿದೆ. ಇಸ್ರೇಲ್‌ನ ಐರನ್ ಡೋಮ್‌ನಿಂದ ಪ್ರೇರಿತವಾಗಿದೆ. ಹೆಚ್ಚಿನ ಮಾಹಿತಿ ತಿಳಿಯಿರಿ.

Read Full Story

06:36 PM (IST) Oct 04

150 ಮನೆ ಬಾಡಿಗೆ ಕೊಡೋವಷ್ಟು ಆಸ್ತಿ ಇರೋ BBK 12 ಅಶ್ವಿನಿ ಗೌಡ, ಹೋರಾಟಗಾರ್ತಿ ಆಗಿದ್ಯಾಕೆ?

Bigg Boss Kannada Season Ashwini Gowda: ಅಶ್ವಿನಿ ಗೌಡ ಅವರು ಸಾಕಷ್ಟು ಆಸ್ತಿ ಇದ್ದು, ಆರಾಮಾಗಿ ಇರುವಷ್ಟು ಆದಾಯ ಹೊಂದಿದ್ದಾರೆ. ಹೀಗಿರುವಾಗ ಅವರು ಹೋರಾಟದ ಹಾದಿ ಹಿಡಿದಿದ್ದಾರೆ. ಇದಕ್ಕೆ ಕಾರಣ ಏನು?

 

Read Full Story

06:27 PM (IST) Oct 04

'ಅವರು 'ಟೂ ಮಚ್' ಅಂದಿದ್ದು ನನಗೆ ಗೊತ್ತಿಲ್ಲ' ; ಸಮೀಕ್ಷೆ ಬಗ್ಗೆ ಡಿಕೆಶಿ ಆಕ್ಷೇಪ ಆರೋಪಕ್ಕೆ ತಂಗಡಗಿ ಸ್ಪಷ್ಟನೆ

ಸಮೀಕ್ಷೆ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಅವರ 'ಟೂ ಮಚ್' ಹೇಳಿಕೆಗೆ ಕೊಪ್ಪಳದಲ್ಲಿ ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯಿಸಿದ್ದಾರೆ. ಇದು ಜಾತಿ ಗಣತಿಯಲ್ಲ, ಕೇವಲ ಒಂದು ಸಮೀಕ್ಷೆ ಎಂದ ಅವರು, ಇದರಲ್ಲಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ ಒತ್ತಡವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Read Full Story

06:01 PM (IST) Oct 04

ಚು. ಆಯೋಗದಿಂದ 6 ರಾಜಕೀಯ ಪಕ್ಷಗಳಿಗೆ ಶಾಕ್ - ಅಂಬೇಡ್ಕರ್ ಪೀಪಲ್ಸ್ ಪಾರ್ಟಿ, ವಾಟಾಳ್ ಪಾರ್ಟಿ ಸೇರಿ ನೋಂದಾಯಿತ ಮಾನ್ಯತೆ ಪಡೆಯದ್ದಕ್ಕೆ ಶೋಕಾಸ್ ನೋಟೀಸ್

Bengaluru political parties notice: ಬೆಂಗಳೂರು: ಆರು ರಾಜಕೀಯ ಪಕ್ಷಗಳು ಸತತ ಮೂರು ವರ್ಷಗಳಿಂದ ವಾರ್ಷಿಕ ಲೆಕ್ಕಪರಿಶೋಧನಾ ವರದಿ ಸಲ್ಲಿಸದ ಕಾರಣ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ಜಾರಿ . ನಿಗದಿತ ಅವಧಿಯೊಳಗೆ ಸೂಕ್ತ ಉತ್ತರ ನೀಡದಿದ್ದಲ್ಲಿ ಪಕ್ಷಗಳ ನೋಂದಣಿಯನ್ನು ರದ್ದುಗೊಳಿಸುವುದಾಗಿ ಆಯೋಗ ಎಚ್ಚರಿಕೆ

Read Full Story

05:54 PM (IST) Oct 04

Bigg Boss​ ಕ್ಲೋಸ್​ ಫ್ರೆಂಡ್ಸ್​ ತ್ರಿವಿಕ್ರಮ್​- ಭವ್ಯಾ ಮದ್ವೆ ಆಗ್ತಾ ಇದ್ದಾರಾ? ಖುದ್ದು ನಟ ಹೇಳಿದ್ದೇನು ಕೇಳಿ

ಬಿಗ್​ಬಾಸ್​ ಸೀಸನ್​ 11ರ ಜೋಡಿ ತ್ರಿವಿಕ್ರಮ ಮತ್ತು ಭವ್ಯಾ ಗೌಡ ಅವರ ಮದುವೆಯ ಬಗ್ಗೆ ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ. ಬಿಗ್​ಬಾಸ್ ಮನೆಯಲ್ಲಿ ಇವರ ನಡುವಿನ ಸ್ನೇಹ ಒಂದು ಹಂತ ಮೀರಿತ್ತು ಎನ್ನುವ ಮಾತುಗಳ ನಡುವೆಯೇ ಈ ಪ್ರಶ್ನೆ ಕೇಳಲಾಗಿದೆ. ಇದಕ್ಕೆನಟ ತ್ರಿವಿಕ್ರಮ್​ ಏನು ಹೇಳಿದ್ರು ನೋಡಿ!

Read Full Story

05:34 PM (IST) Oct 04

Coldrif cough syrup deaths - ಕರ್ನಾಟಕದಲ್ಲಿ ವಿತರಣೆಯಾಗಿಲ್ಲ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ

Coldrif cough syrup deaths case: ರಾಜಸ್ಥಾನ, ಮ ಪ್ರದೇಶದಲ್ಲಿ ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರೀಫ್ ಕಫ್ ಸಿರಪ್ ಕರ್ನಾಟಕದಲ್ಲಿ ವಿತರಣೆಯಾಗಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ. ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ ಇತರೆ ಬ್ರಾಂಡ್ ಸಿರಪ್‌ ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು.

Read Full Story

05:24 PM (IST) Oct 04

BBK 12 - ನಿಮ್‌ ಸಿನಿಮಾ ನೋಡಿ ನಮ್‌ ಮಕ್ಕಳು ಹಾಳಾಗ್ತಿದ್ದಾರೆ ಎಂದೋರಿಗೆ ಕಾಕ್ರೋಚ್‌ ಸುಧಿ ಕೊಟ್ಟ ಉತ್ತರ ಮಾತ್ರ..!

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಕಾಕ್ರೋಚ್‌ ಸುಧಿ ಕೂಡ ಸ್ಪರ್ಧಿ. ಅವರೀಗ ದೊಡ್ಮನೆಯಲ್ಲಿದ್ದಾರೆ. ಆದರೆ ಕಾಕ್ರೋಚ್‌ ಅವರು ಸಿನಿಮಾಗಳಲ್ಲಿ ವಿಲನ್‌ ಆಗಿ ಅಬ್ಬರಿಸಿದ್ದರು. ಇವರ ಸಿನಿಮಾ ಪಾತ್ರ ನೋಡಿ ಬೈದಿದ್ದರಂತೆ, ಅದಕ್ಕೆ ಕಾಕ್ರೋಚ್‌ ಉತ್ತರವನ್ನು ಕೊಟ್ಟಿದ್ದರು.

 

Read Full Story

05:06 PM (IST) Oct 04

ಭಗವಾ ಝಂಡಾ ಪಕ್ಷ ಕಟ್ಟುವ ಸೂಚನೆ ನೀಡಿದ ಯತ್ನಾಳ್, ರಾಜ್ಯದಲ್ಲಿ ಹೊಸ ಸಂಚಲನ

ಭಗವಾ ಝಂಡಾ ಪಕ್ಷ ಕಟ್ಟುವ ಸೂಚನೆ ನೀಡಿದ ಯತ್ನಾಳ್, ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ನನ್ನ ನೇತೃತ್ವದಲ್ಲೇ ಸರ್ಕಾರ ರಚನೆಯಾಗಲಿದೆ, ಸರ್ಕಾರ ರಚನೆ ದಿನ 11 ಜೆಸಿಬಿಗೆ ಪೂಜೆ ಮಾಡುತ್ತೇನೆ ಎಂದು ಯತ್ನಾಳ್ ಹೇಳಿದ್ದಾರೆ.

Read Full Story

05:02 PM (IST) Oct 04

ಹಾಟ್​ ಅವತಾರದಲ್ಲಿ ಲೇಡಿ ವಿಲನ್ಸ್ - ಸೌಂದರ್ಯ, ಶಕುಂತಲಾ ಎಂಟ್ರಿ ನೋಡಿ ಉಫ್​ ಎಂದ ಫ್ಯಾನ್ಸ್​

ಜೀ ಕುಟುಂಬ ಅವಾರ್ಡ್ಸ್ ನಾಮಿನೇಷನ್ ಕಾರ್ಯಕ್ರಮದ ರೆಡ್ ಕಾರ್ಪೆಟ್ ಮೇಲೆ 'ದೃಷ್ಟಿಬೊಟ್ಟು' ಸೌಂದರ್ಯ ಮತ್ತು 'ಅಮೃತಧಾರೆ' ಶಕುಂತಲಾ ತಮ್ಮ ಎಂದಿನ ಸೀರೆ   ಬಿಟ್ಟು ಹಾಟ್ ಅವತಾರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.  

Read Full Story

04:34 PM (IST) Oct 04

ಚುಕ್ಕಿ ಸೇರಿಸಲು ಪರದಾಡಿದ ಶ್ರಾವಣಿ-ಸುಬ್ರಹ್ಮಣ್ಯ ಜೋಡಿ! ಮುಂದಾಗಿದ್ದು ರೋಚಕ ಟ್ವಿಸ್ಟ್​- ಏನಾಯ್ತು ನೋಡಿ

ಜೀ ಕನ್ನಡದ 'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಯ ನಾಯಕ-ನಾಯಕಿ ಅಮೋಘ್ ಮತ್ತು ಆಸಿಯಾ, ಜೀ ಕುಟುಂಬ ಅವಾರ್ಡ್ಸ್‌ನ ಭಾಗವಾಗಿ ನಡೆದ ಚುಕ್ಕಿಯ ಆಟದಲ್ಲಿ ಭಾಗವಹಿಸಿದ್ದಾರೆ. ಆರಂಭದಲ್ಲಿ ಸ್ವಲ್ಪ ಎಡವಿದ ಜೋಡಿ ಮುಂದೆ ಸಕ್ಸಸ್​ ಆಯ್ತಾ? 

Read Full Story

04:30 PM (IST) Oct 04

ರಣಚಂಡಿಯಾಗಿ ಮರಳಿ ಬಂದ ರಕ್ಷಿತಾ; ಉತ್ತರ ಕೊಡ್ತಾರಾ ಸ್ಪರ್ಧಿಗಳು? ಶುರುವಾಯ್ತು ಅಸಲಿ ಆಟ

Bigg Boss Kannada Rakshitha Shetty:  ಮೊದಲ ದಿನವೇ ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದ ತುಳುನಾಡಿನ ಕನ್ನಡತಿ ರಕ್ಷಿತಾ ಶೆಟ್ಟಿ ಇದೀಗ ಮರಳಿ ಬಂದಿದ್ದಾರೆ. ತಮ್ಮನ್ನು ಹೊರಹಾಕಿದ ಸ್ಪರ್ಧಿಗಳನ್ನು ಪ್ರಶ್ನಿಸಲು ರಣಚಂಡಿಯ ರೂಪದಲ್ಲಿ ಮತ್ತೆ ಮನೆ ಪ್ರವೇಶಿಸಿದ್ದಾರೆ.

Read Full Story

04:03 PM (IST) Oct 04

ಮೆಜೆಸ್ಟಿಕ್ ನಿಲ್ದಾಣದಲ್ಲಿ ಮೆಟ್ರೋ ಟ್ರ್ಯಾಕಿಗೆ ಜಿಗಿದು ರೈಲಿನಡಿ ಸಿಲುಕಿದ ಪ್ರಯಾಣಿಕ

Bengaluru Metro: ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ( ಮೆಜೆಸ್ಟಿಕ್ ) ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಇಂದು ಮಧ್ಯಾಹ್ನ 3 ಗಂಟೆ 19 ನಿಮಿಷಕ್ಕೆ ಈ ಘಟನೆ ನಡೆದಿದೆ. ಆತ್ಮ*ಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ ಈ ವ್ಯಕ್ತಿ ಮುಂದಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

Read Full Story

03:52 PM (IST) Oct 04

BBK 12 - ಅರ್ಧ ಬ್ಯಾಚ್‌ ಎಲಿಮಿನೇಶನ್‌, 4 ವೈಲ್ಡ್‌ಕಾರ್ಡ್‌ ಎಂಟ್ರಿ - ಕಿಚ್ಚ ಸುದೀಪ್‌ ಸುಳಿವು

Bigg Boss Kannada Season 12: ಕಿಚ್ಚ ಸುದೀಪ್‌ ನಿರೂಪಣೆಯ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಮೊದಲ ಪಂಚಾಯಿತಿಯಲ್ಲಿ ಹೊಸ ಅಪ್‌ಡೇಟ್‌ ಸಿಕ್ಕಿದೆ. ಎಲಿಮಿನೇಶನ್‌, ವೈಲ್ಡ್‌ಕಾರ್ಡ್‌ ಎಂಟ್ರಿ ಬಗ್ಗೆ ಸುದೀಪ್‌ ಮಾತನಾಡಿದ್ದಾರೆ.

 

Read Full Story

03:39 PM (IST) Oct 04

ಅಮೃತಧಾರೆ ಸೀರಿಯಲ್ ಮಲ್ಲಿ ಮದುವೆ; ಹುಡುಗನ ಬಗ್ಗೆ ಅನ್ವಿತಾ ಸಾಗರ್ ಮಾತು

Amruthadhaare TV Serial Malli s marriage: 'ಅಮೃತಧಾರೆ' ಖ್ಯಾತಿಯ ಕಿರುತೆರೆ ನಟಿ ಅನ್ವಿತಾ ಸಾಗರ್ ತಮ್ಮ ಮದುವೆಯ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಆಸೆಯನ್ನು ಅನ್ವಿತಾ ಸಾಗರ್ ಹಂಚಿಕೊಂಡಿದ್ದು, ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

03:37 PM (IST) Oct 04

ಹಿಂದಿಗೆ ಡಬ್​ ಆಗಿರೋ ದಕ್ಷಿಣದ ಸಿನಿಮಾಗಳ ಪೈಕಿ Kantara-1 ಗೆ ಎಷ್ಟನೇ ಸ್ಥಾನ? ಡಿಟೇಲ್ಸ್​ ಇಲ್ಲಿದೆ

'ಕಾಂತಾರ ಚಾಪ್ಟರ್-1' ಚಿತ್ರವು ಹಿಂದಿ ಡಬ್ಬಿಂಗ್‌ನಲ್ಲಿ ಉತ್ತಮ ಆರಂಭ ಪಡೆದಿದೆ. ಹಿಂದಿಯಲ್ಲಿ ಅತಿ ಹೆಚ್ಚು ಆರಂಭಿಕ ಗಳಿಕೆ ಮಾಡಿದ ದಕ್ಷಿಣ ಭಾರತದ ಸಿನಿಮಾಗಳ ಪಟ್ಟಿಯಲ್ಲಿ 'ಪುಷ್ಪ 2' ಮತ್ತು 'ಕೆಜಿಎಫ್ 2' ಮೊದಲ ಎರಡು ಸ್ಥಾನಗಳಲ್ಲಿದ್ದರೆ, 'ಕಾಂತಾರ ಚಾಪ್ಟರ್-1' ಎಷ್ಟನೇ ಸ್ಥಾನದಲ್ಲಿದೆ? 

Read Full Story

02:44 PM (IST) Oct 04

ಕಂಟೆಂಟ್​ ಕ್ರಿಯೇಟರ್ಸ್​ಗೆ Bigg Boss ಭರ್ಜರಿ ಆಫರ್​! ಟಿವಿಯಲ್ಲಿ ಮಿಂಚಲು ನಿಮಗೂ ಅವಕಾಶ

ಬಿಗ್​ಬಾಸ್​ ಕನ್ನಡ ಸೀಸನ್​ 12 ರ ಕುರಿತು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡುವ ಕಂಟೆಂಟ್​ ಕ್ರಿಯೇಟರ್ಸ್​ಗಳ ಪ್ರತಿಭೆಯನ್ನು ಕಲರ್ಸ್​ ಕನ್ನಡ ವಾಹಿನಿ ಗುರುತಿಸಿದೆ. ಅವರ ವಿಡಿಯೋಗಳನ್ನು ತಮ್ಮ ಪೇಜ್​ನಲ್ಲಿ ಶೇರ್​ ಮಾಡುವ ಕೊಲ್ಯಾಬೋರೇಷನ್​ ಆಫರ್​ ನೀಡಿದೆ. ಡಿಟೇಲ್ಸ್​ ಇಲ್ಲಿದೆ… 

Read Full Story

02:41 PM (IST) Oct 04

ಬಿಗ್‌ಬಾಸ್ ಮನೆಯಲ್ಲಿ ಸಿಗುತ್ತೋ ಇಲ್ಲೋ ಗೊತ್ತಿರಲಿಲ್ಲ, 5 ಗ್ಲಾಸ್ ಕುಡಿದು ಬಂದೆ ಎಂದ ಸ್ಪರ್ಧಿ

Bigg Boss Kannada contestants life: ಬಹುತೇಕರು ತಮ್ಮ ಜವಾಬ್ದಾರಿಗಳನ್ನು ಬೇರೆಯವರ ಹೆಗಲಿಗೆ ವರ್ಗಾಯಿಸಿ ಬರುತ್ತಾರೆ. ತಮ್ಮ ಅನುಪಸ್ಥಿತಿಯಲ್ಲಿ ಕುಟುಂಬದ ಜವಾಬ್ದಾರಿಯನ್ನು ನಂಬಿಕಸ್ಥರಿಗೆ ನೀಡಿರುತ್ತಾರೆ.

Read Full Story

02:09 PM (IST) Oct 04

ಮೈತ್ರಿ ಆಗುವುದೇ ಬಿಜೆಪಿ-ಜೆಡಿಎಸ್ ಶಕ್ತಿ ಹೆಚ್ಚಿಸಿಕೊಳ್ಳಲು.. ದೇವೇಗೌಡರ ನಿರ್ಧಾರ ಸ್ವಾಗತಿಸಿದ ಅಶ್ವಥ್ ನಾರಾಯಣ

ಮೈತ್ರಿ ಆಗುವುದೇ ಶಕ್ತಿ ಹೆಚ್ಚಿಸಿಕೊಳ್ಳಲು, ಈ ಬಗ್ಗೆ ರಾಜ್ಯಾಧ್ಯಕ್ಷರು, ದೇವೇಗೌಡರು ಎಲ್ಲಾ ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಧೂಳ್ ಮಾಡಿದಂತೆ ಮುಂದುವರಿದ ಭಾಗ ಇರುತ್ತದೆ ಎಂದು ಮಾಜಿ ಡಿಸಿಎಂ ಡಾ.ಸಿ.ಎನ್ ಅಶ್ವಥ್ ನಾರಾಯಣ ಹೇಳಿದರು.

Read Full Story

More Trending News