MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • BBK 12: ನಾನು ಬಿಗ್‌ ಬಾಸ್‌ ಮನೆಯಲ್ಲಿ ಅದೊಂದು ಮಾತು ಹೇಳಬಾರದಿತ್ತು, ತಪ್ಪು ಮಾಡಿದೆ-ರಕ್ಷಿತಾ ಶೆಟ್ಟಿ

BBK 12: ನಾನು ಬಿಗ್‌ ಬಾಸ್‌ ಮನೆಯಲ್ಲಿ ಅದೊಂದು ಮಾತು ಹೇಳಬಾರದಿತ್ತು, ತಪ್ಪು ಮಾಡಿದೆ-ರಕ್ಷಿತಾ ಶೆಟ್ಟಿ

Bigg Boss Kannada Rakshita Shetty: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋಗೆ ರಕ್ಷಿತಾ ಶೆಟ್ಟಿ ಕಂಬ್ಯಾಕ್‌ ಮಾಡಿದ್ದಾರೆ. ಮೊದಲೇ ಊಹಿಸಿದಂತೆ ರಕ್ಷಿತಾ ಅವರು ಸೀಕ್ರೇಟ್‌ ರೂಮ್‌ನಲ್ಲಿ ಇದ್ದರಂತೆ. ಈ ವಿಷಯವನ್ನು ಅವರು ಕಿಚ್ಚ ಸುದೀಪ್‌ ಮುಂದೆ ಹೇಳಿದ್ದರು. 

2 Min read
Padmashree Bhat
Published : Oct 04 2025, 11:05 PM IST
Share this Photo Gallery
  • FB
  • TW
  • Linkdin
  • Whatsapp
19
ಒಬ್ಬರು ಹೊರಗಡೆ ಬರಬೇಕು
Image Credit : colors kannada instagram

ಒಬ್ಬರು ಹೊರಗಡೆ ಬರಬೇಕು

ಬಿಗ್‌ ಬಾಸ್‌ ಆಟ ಶುರುವಾಗಿ ಕೆಲವೇ ಗಂಟೆಗಳಾಗಿತ್ತು. ಮಾಳು ನಿಪನಾಳ, ಸ್ಪಂದನಾ ಸೋಮಣ್ಣ ಹಾಗೂ ರಕ್ಷಿತಾ ಶೆಟ್ಟಿ ನಡುವೆ ಒಬ್ಬರು ಹೊರಗಡೆ ಬರಬೇಕಿತ್ತು. ಒಂಟಿಗಳು ಒಬ್ಬರು ಹೊರಗಡೆ ಹೋಗಬೇಕು ಎಂದು ನಿರ್ಧಾರ ತಿಳಿಸಬೇಕಿತ್ತು.

29
ರಕ್ಷಿತಾ ಶೆಟ್ಟಿ ಎಲಿಮಿನೇಶನ್
Image Credit : colors kannada instagram

ರಕ್ಷಿತಾ ಶೆಟ್ಟಿ ಎಲಿಮಿನೇಶನ್

ಸೋಶಿಯಲ್‌ ಮೀಡಿಯಾದಿಂದ ಹೆಸರು ಮಾಡಿದವರು, ಇನ್ನೂ ಚಿಕ್ಕ ವಯಸ್ಸು ಎಂದು ನೆಪ ಹೇಳಿ ರಕ್ಷಿತಾ ಶೆಟ್ಟಿ ಅವರನ್ನು ಎಲಿಮಿನೇಶನ್‌ಗೆ ನಾಮಿನೇಟ್‌ ಮಾಡಿದರು. ಆಗ ರಕ್ಷಿತಾ ಸುಮ್ಮನೆ ಮನೆಯಿಂದ ಹೊರಗಡೆ ಬಂದಿದ್ದರು.

Related Articles

Related image1
Bigg Boss​ ಕ್ಲೋಸ್​ ಫ್ರೆಂಡ್ಸ್​ ತ್ರಿವಿಕ್ರಮ್​- ಭವ್ಯಾ ಮದ್ವೆ ಆಗ್ತಾ ಇದ್ದಾರಾ? ಖುದ್ದು ನಟ ಹೇಳಿದ್ದೇನು ಕೇಳಿ
Related image2
ಒಬ್ಬರಿಗೆ ಲೀಕ್ ಆಗೋ ಭಯ, ಇನ್ನೊಬ್ರಿಗೆ ನಿದ್ದೆ ಟೆನ್ಷನ್​! Bigg Bossಗೆ ಹೋಗೋ ಮುನ್ನ ಸ್ಪರ್ಧಿಗಳಿಗೆ ಏನೇನಾಯ್ತು ಕೇಳಿ
39
ರಕ್ಷಿತಾ ಶೆಟ್ಟಿ ಮಾತು ಅರ್ಥಮಾಡಿಕೊಳ್ಳೋದು ಟಾಸ್ಕ್
Image Credit : colors kannada instagram

ರಕ್ಷಿತಾ ಶೆಟ್ಟಿ ಮಾತು ಅರ್ಥಮಾಡಿಕೊಳ್ಳೋದು ಟಾಸ್ಕ್

“ಎಲ್ಲರೂ ಒಂದಿನ ಈ ಮನೆಯಿಂದ ಹೋಗುವವರೇ, ನಾನು ಈಗ ಹೋಗ್ತಿದ್ದೀನಿ” ಎಂದು ಬಹಳ ಪ್ರೌಢಿಮೆಯ ಮಾತುಗಳನ್ನಾಡಿ ಹೊರಬಂದಿದ್ದರು. ಈಗ ಅವರು ಮತ್ತೆ ಬಿಗ್‌ ಬಾಸ್‌ ಮನೆಗೆ ಬಂದಿದ್ದು, ನನ್ನನ್ನು ಹೇಗೆ ಹೊರಗಡೆ ಕಳಿಸಿದ್ರು ಅಂತ ನಾನು ಕೇಳುವೆ ಎಂದು ಹೇಳಿದ್ದಾರೆ. ರಕ್ಷಿತಾ ಅವರು ಕನ್ನಡದಲ್ಲಿಯೇ ಮಾತನಾಡಿದ್ದು, ಕಿಚ್ಚ ಸುದೀಪ್‌ ಕೂಡ ಅರ್ಥಮಾಡಿಕೊಳ್ಳಲು ಒಂದಿಷ್ಟು ಸಮಯ ತಗೊಂಡರು.

49
ರಕ್ಷಿತಾ ಶೆಟ್ಟಿ ವಾದ ಏನು?
Image Credit : colors kannada instagram

ರಕ್ಷಿತಾ ಶೆಟ್ಟಿ ವಾದ ಏನು?

“ನಾನು ಹೇಗೆ ಅಂತ ಅಲ್ಲಿದ್ದವರಿಗೆ ಗೊತ್ತಿಲ್ಲ, ಕೆಲವೇ ಟೈಮ್‌ನಲ್ಲಿ ನನ್ನನ್ನು ಅವರು ಹೇಗೆ ನಾಮಿನೇಟ್‌ ಮಾಡ್ತಾರೆ? ಈ ಪ್ರಶ್ನೆಯನ್ನು ನಾನು ಅವರಿಗೆ ಕೇಳಬೇಕು. ಅಶ್ವಿನಿ ಮೇಡಂ ಅವರು ನನ್ನ ಬಗ್ಗೆ ಸ್ಟ್ಯಾಂಡ್‌ ತಗೊಳ್ಳಲಿಲ್ಲ, ಅದನ್ನು ಪ್ರಶ್ನೆ ಮಾಡಬೇಕು” ಎಂದು ಅವರು ಹೇಳಿದ್ದಾರೆ.

59
ಅವರಿಗೆ ಯೋಗ್ಯತೆ ಇಲ್ಲ
Image Credit : colors kannada instagram

ಅವರಿಗೆ ಯೋಗ್ಯತೆ ಇಲ್ಲ

“ಪುಸ್ತಕದ ಕವರ್‌ ನೋಡಿ ಜಡ್ಜ್‌ ಮಾಡಬಾರದು, ಅದರೊಳಗಡೆ ಏನಿದೆ ಅಂತ ಗೊತ್ತಿಲ್ಲ. ಸ್ಪಂದನಾ, ಮಾಳು ನಿಪನಾಳ ಅವರಿಗೂ ಕೂಡ ಈ ಶೋನಲ್ಲಿ ಇರಲು ಯೋಗ್ಯತೆ ಇಲ್ಲದೆ ಇರಬಹುದು, ನನಗೆ ಆ ಯೋಗ್ಯತೆ ಇರಬಹುದು” ಎಂದು ಅವರು ಹೇಳಿದ್ದಾರೆ.

69
ಎಲ್ಲರೂ ಒಂದೇ ಅಲ್ಲಿ...
Image Credit : colors kannada instagram

ಎಲ್ಲರೂ ಒಂದೇ ಅಲ್ಲಿ...

“ನಾನು ಯಂಗ್‌, ನಾಳೆ ಇನ್ನೊಂದು ಅವಕಾಶ ಸಿಗತ್ತೆ ಅಂತ ಕಾರಣ ಹೇಳಿ ಅಲ್ಲಿದ್ದವರು ನನ್ನನ್ನು ಕಳಿಸಿಕೊಟ್ಟರು. ಬಿಗ್‌ ಬಾಸ್‌ ಮನೆಗೆ ಹೋದ್ಮೇಲೆ ಎಲ್ಲರೂ ಒಂದೇ. ಅಲ್ಲಿದ್ದವರಲ್ಲಿ ಸೆಲೆಬ್ರಿಟಿ, ನಾನ್‌ ಸೆಲೆಬ್ರಿಟಿ ಅಂತ ಇರೋದಿಲ್ಲ” ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.

79
ಐದು ನಿಮಿಷದಲ್ಲಿ ಹೇಗೆ ಜಡ್ಜ್‌ ಮಾಡ್ತೀರಾ?
Image Credit : bbk rakshita shetty instagram

ಐದು ನಿಮಿಷದಲ್ಲಿ ಹೇಗೆ ಜಡ್ಜ್‌ ಮಾಡ್ತೀರಾ?

“ನಾನು ಹೇಗೆ ಆಟ ಆಡ್ತೀನಿ, ನಾನು ಒಳಗಡೆ ಏನು ಮಾಡ್ತೀನಿ ಅಂತ ಯಾರಿಗೂ ಗೊತ್ತಿಲ್ಲ. ಐದು ನಿಮಿಷದಲ್ಲಿ ನಾನು ಆ ಶೋನಲ್ಲಿ ಇರೋದು ಬೇಡ ಅಂತ ಹೇಗೆ ಡಿಸೈಡ್‌ ಮಾಡ್ತಾರೆ? ನಾನು ನನಗೋಸ್ಕರ ಮಾತನಾಡಬೇಕು, ನನ್ನ ಪರವಾಗಿ ಅಲ್ಲಿ ಯಾರೂ ಮಾತನಾಡಿಲ್ಲ” ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.

89
ನಾನು ಈ ತಪ್ಪು ಮಾಡಬಾರದಿತ್ತು
Image Credit : bbk rakshita shetty instagram

ನಾನು ಈ ತಪ್ಪು ಮಾಡಬಾರದಿತ್ತು

“ಈ ಬಗ್ಗೆ ನಾನು ಯಾಕೆ ಪ್ರಶ್ನೆ ಮಾಡಲಿಲ್ಲ ಅಂತ ಪಶ್ಚಾತ್ತಾಪ ಇದೆ. ಸಮಯ ಸಿಕ್ಕಾಗ ನಾನು ಪ್ರಶ್ನೆ ಕೇಳಬೇಕಿತ್ತು, ಆದರೆ ಈಗ ಪ್ರಶ್ನೆ ಕೇಳಿ ಪ್ರಯೋಜನವಿಲ್ಲ. ಎಲಿಮಿನೇಶನ್‌ ಆಗುವಾಗ ನನಗೆ ಅಳು ಬಂದರೂ ಕೂಡ, ಸಮಾಧಾನ ಮಾಡಿಕೊಂಡು ಬಂದೆ, ಅಲ್ಲಿದ್ದವರಿಗೂ ಕೂಡ ನಾನು ಮೊದಲು ಹೋಗ್ತೀನಿ, ಆಮೇಲೆ ನೀವು ಹೊರಗಡೆ ಬರ್ತೀರಾ” ಅಂತ ಹೇಳಿದ್ದೆ. ಇದು ನಾನು ಮಾಡಿದ ತಪ್ಪು. ಎಲಿಮಿನೇಶನ್‌ ಆದಾಗ ಬ್ಲ್ಯಾಂಕ್‌ ಆದೆ” ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.

99
ನನ್ನ ಪರವಾಗಿ ನಾನೇ ಮಾತಾಡಬೇಕು
Image Credit : Colors kannada

ನನ್ನ ಪರವಾಗಿ ನಾನೇ ಮಾತಾಡಬೇಕು

“ಬಿಗ್‌ ಬಾಸ್‌ ಮನೆಯಲ್ಲಿ ಒಂದು ವಾರ ಏನಾಗಿದೆ ಅಂತ ನನಗೆ ಗೊತ್ತಿಲ್ಲ, ಸೀಕ್ರೇಟ್‌ ರೂಮ್‌ನಲ್ಲಿ ಫೋನ್‌ ಇಲ್ಲದೆ ಇದ್ದೆ. ಎಲಿಮಿನೇಶನ್‌ ಆಗಿ ನಾನು ಸಫರ್‌ ಮಾಡಿದೆ. ಅವರಿಗೆ ಏನೂ ಸಮಸ್ಯೆ ಆಗಿಲ್ಲ. ನನಗೆ ಮತ್ತೆ ಮನೆಯೊಳಗಡೆ ಹೋಗುವ ಅವಕಾಶ ಸಿಕ್ಕಿದೆ, ಇದನ್ನು ಬಳಸಿಕೊಳ್ಳುವೆ” ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಕಲರ್ಸ್ ಕನ್ನಡ
ಕಿಚ್ಚ ಸುದೀಪ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved