LIVE NOW
Published : Feb 05, 2026, 07:39 AM ISTUpdated : Feb 05, 2026, 10:41 AM IST

State News Live: ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ

ಸಾರಾಂಶ

ಬೆಂಗಳೂರು (ಫೆ.5): ನವದೆಹಲಿ: ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ಚೆನ್ನೈ-ಬೆಂಗಳೂರು, ಹೈದರಾಬಾದ್- ಬೆಂಗಳೂರು ಹೈಸ್ಪೀಡ್ ರೈಲು ಕಾರಿಡಾರ್ ಜತೆಗೆ ಪುಣೆ- ಬೆಂಗಳೂರು ರೈಲು ಕಾರಿಡಾರ್ ಕೂಡ ಅನುಷ್ಠಾನವಾಗುವ ಸೂಚನೆ ಸಿಕ್ಕಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹೈಸ್ಪೀಡ್ ರೈಲು ಕಾರಿಡಾರ್ ಮಾರ್ಗಕ್ಕೆ ಪುಣೆ- ಬೆಂಗಳೂರು ಸೇರಿಸುವಂತೆ ಮನವಿ ಮಾಡಿದರು. ಇದಕ್ಕೆ ವೈಷ್ಣವ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಚೆನ್ನೈ, ಹೈದ್ರಾಬಾದ್‌ ಬದಲಿಗೆ ಪುಣೆ-ಬೆಂಗಳೂರು ಮಾರ್ಗದಲ್ಲಿ ಹೈಸ್ಪೀಡ್ ರೈಲು ಓಡಿಸಿದರೆ ಬೆಳಗಾವಿ, ಹುಬ್ಬ ಳ್ಳಿ, ಹಾವೇರಿ, ದಾವಣಗೆರೆ, ತುಮಕೂರಿಗೆ ಅನುಕೂಲವಾಗಲಿದೆ ಎಂದು ಬಜೆಟ್ ಬಳಿಕ ಸಿಎಂ ಸಿದ್ದರಾಮಯ್ಯ ಸೇರಿ ರಾಜ್ಯ ಸರ್ಕಾರದ ಸಚಿವರು ಆಗ್ರಹಿಸಿದ್ದರು.ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

 

10:41 AM (IST) Feb 05

ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ

 ಯಶವಂತಪುರ ರೈಲು ನಿಲ್ದಾಣದ ಪುನರ್‌ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಿಲ್ದಾಣದ ಮೆಟ್ರೋ ಬದಿಯ ಪ್ರವೇಶದ್ವಾರವನ್ನು ತಾತ್ಕಾಲಿಕವಾಗಿ ಪ್ಲಾಟ್‌ಫಾರ್ಮ್‌ 6ರ ಬಳಿ ಸುಮಾರು 150 ಮೀ. ಮುಖ್ಯ ರಸ್ತೆಯ ಕಡೆಗೆ ಸ್ಥಳಾಂತರಿಸಲಾಗಿದೆ.

Read Full Story

10:33 AM (IST) Feb 05

ಭಾರತೀಯರಿಗೆ ಸಿಗೋ ಅಪರೂಪದ ಆಫರ್‌ ಮಿಸ್‌ ಮಾಡ್ಕೊಂಡ Bigg Boss ರಜತ್;‌ ಹಣೆಬರಹಕ್ಕೆ ಹೊಣೆ ಯಾರು ಎಂದಂಗಾಯ್ತು!

Bigg Boss Rajath News: ರಜತ್‌ ಅವರು ಒಂದಾದ ಮೇಲೆ ಒಂದರಂತೆ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ಬಾರಿಯ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಕೂಡ ಅತಿಥಿಯಾಗಿ ಭಾಗವಹಿಸಿದ್ದರು.

 

Read Full Story

10:32 AM (IST) Feb 05

ಫಸ್ಟ್ ಟೈಂ ಕಳ್ಳತನಕ್ಕೆ ಹೋಗಿ ಯಡವಟ್ಟು, 'ಹೊಡೆದ್ರೂ' ಅಂತಾ ಪೊಲೀಸ್ ಠಾಣೆಗೆ ದೂರು ನೀಡಿದ ಕಳ್ಳ!

ಬೆಂಗಳೂರಿನಲ್ಲಿ ಕಳ್ಳತನಕ್ಕೆ ಯತ್ನಿಸಿದ ಆಟೋ ಚಾಲಕನೊಬ್ಬ ಸಾರ್ವಜನಿಕರಿಂದ ಒದೆ ತಿಂದಿದ್ದಾನೆ. ನಂತರ, ತನ್ನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಮತ್ತು ತನ್ನನ್ನು ಬಿಟ್ಟು ಓಡಿಹೋದ ಸ್ನೇಹಿತರ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಅಚ್ಚರಿ ಮೂಡಿಸಿದ್ದಾನೆ. 

Read Full Story

09:59 AM (IST) Feb 05

ಮುಸ್ಲಿಂ ದಂಪತಿಯ ಸಹಾಯಕ್ಕೆ ಬಂದ ಹಿಂದೂ ಯುವಕನ ಮೇಲೆ SDPI ಕಾರ್ಯಕರ್ತರಿಂದ ಹಲ್ಲೆ! ಯುವಕನ ತಪ್ಪಿಲ್ಲ ಎಂದರೂ ಕೇಳದೆ ಥಳಿತ!

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ, ನೆರೆಯ ಮುಸ್ಲಿಂ ಕುಟುಂಬಕ್ಕೆ ಸಹಾಯ ಮಾಡಲು ಹೋದ ಹಿಂದೂ ಯುವಕ ವೆಂಕಟೇಶನ ಮೇಲೆ, ಆತ ಮುಸ್ಲಿಂ ಯುವತಿಯೊಂದಿಗೆ ಪ್ರೇಮ ಸಲ್ಲಾಪ ನಡೆಸುತ್ತಿದ್ದಾನೆಂದು ತಪ್ಪು ತಿಳಿದು ಮುಸ್ಲಿಂ ಯುವಕರ ಗುಂಪು ಹಲ್ಲೆ ನಡೆಸಿದೆ.

Read Full Story

09:50 AM (IST) Feb 05

ಮೊಮ್ಮಕ್ಕಳಲ್ಲೇ ಭೇದಭಾವ ಮಾಡ್ತಿದ್ದಾರೆ; ಪತ್ರಕರ್ತನನ್ನು ತರಾಟೆಗೆ ತಗೊಂಡ Megastar Chiranjeevi ಸೊಸೆ!

Actor Chiranjeevi News: ನಟ ಚಿರಂಜೀವಿ ಅವರ ಮಗ ರಾಮ್‌ ಚರಣ್‌ ತೇಜಗೆ ಅವಳಿ ಮಕ್ಕಳು ಜನಿಸಿದ್ದಾರೆ. ಈ ಹಿಂದೆ ಮಗಳು ಜನಿಸಿದ್ದು, ಈಗ ಓರ್ವ ಮಗ, ಮಗಳು ಜನಿಸಿದ್ದರು. ಈ ಬಗ್ಗೆ ಪತ್ರಕರ್ತರೊಬ್ಬರು ಮಾಡಿದ ಟ್ವೀಟ್‌ಗೆ ಸೊಸೆ ಲಾವಣ್ಯಾ ತ್ರಿಪಾಠಿ ಕ್ಲಾಸ್‌ ತಗೊಂಡಿದ್ದಾರೆ. ಏನದು?

Read Full Story

09:44 AM (IST) Feb 05

ದೇಶದ ಮೊದಲ ಸ್ಟೆಲ್ತ್‌ ಯುದ್ಧ ವಿಮಾನ ರೇಸಿಂದ ಬೆಂಗ್ಳೂರಿನ ಎಚ್‌ಎಎಲ್‌ ಔಟ್‌

ಭಾರತದ ಮೊದಲ ಐದನೇ ತಲೆಮಾರಿನ ಸ್ಟೆಲ್ತ್‌ (ಕಣ್ಣುತಪ್ಪಿಸುವ) ಯುದ್ಧ ವಿಮಾನ ಎಎಂಸಿಎ ಅಭಿವೃದ್ಧಿಪಡಿಸಿ, ಉತ್ಪಾದನೆ ಮಾಡುವ ಹೊಣೆಯಿಂದ ಬೆಂಗಳೂರು ಮೂಲದ ಎಚ್‌ಎಎಲ್‌ (ಹಿಂದುಸ್ಥಾನ ಏರೋನಾಟಿಕ್‌ ಲಿಮಿಟೆಡ್‌) ಹೊರಬಿದ್ದಿದೆ.

Read Full Story

09:31 AM (IST) Feb 05

ಫ್ಲೈಯಿಂಗ್‌ ಕಿಸ್‌, ಕಣ್ಣು ಹೊಡೆವುದು ಕೂಡಾ ಲೈಂ*ಗಿಕ ಕಿರುಕುಳ - ಕೋರ್ಟ್‌ ಮಹತ್ವದ ತೀರ್ಪು!

ಚಂಡೀಗಢ: ಮಹಿಳೆಯರ ಮೇಲೆ ಲೈಂ*ಗಿಕ ಕಿರುಕುಳ ನೀಡುವ ಲಂಪಟರಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಚಂಡೀಗಢ ಕೋರ್ಟ್ ಮಾಡಿದ್ದು, ಫ್ಲೈಯಿಂಗ್‌ ಕಿಸ್‌, ಕಣ್ಣು ಹೊಡೆವುದು ಕೂಡಾ ಲೈಂ*ಗಿಕ ಕಿರುಕುಳ ಎಂದು ಮಹತ್ವದ ತೀರ್ಮಾನ ನೀಡಿದೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ ನೋಡಿ

 

Read Full Story

09:30 AM (IST) Feb 05

ಚಿತ್ರರಂಗ ‘ಇಂಡಸ್ಟ್ರಿ’ ಆಗಬೇಕು, ಸಬ್ಸಿಡಿ ಬೇಕೇಬೇಕು - ಜಯಮಾಲಾ

ಹೆಣ್ಣುಮಕ್ಕಳ ಹಕ್ಕು ರಕ್ಷಿಸುವ ಫೈರ್‌ ಸಂಸ್ಥೆ ಅವಶ್ಯಕತೆ ನಮಗಿಲ್ಲ, ಚಿತ್ರರಂಗದಲ್ಲಿ ಬೀಳುವವರು ಇದ್ದಾರಂದ್ರೆ, ತಳ್ಳುವವರೂ ಇರ್ತಾರೆ. ಗಟ್ಟಿಯಾಗಿ ನಿಂತರೆ ಅವರನ್ನೇ ನೀವು ಬೀಳಿಸಬಹುದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾದ ಜಯಮಾಲಾ ಹೇಳಿದ್ದಾರೆ.

 

Read Full Story

09:22 AM (IST) Feb 05

129 ವರ್ಷದ ಹಳೆಯ ಮೈಸೂರಿನ ಪಾರಂಪರಿಕ ಕಟ್ಟಡದಲ್ಲಿ ಎಡವಟ್ಟು ಮಾಡ್ಕೊಂಡ Bigg Boss ರಜತ್;‌ ಹೊಸ ವಿವಾದ ಎಳ್ಕೊಂಡ್ರು

Bigg Boss Rajath: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ರಜತ್‌ ಅವರು ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಹೌದು, ಅಂದು ಮಚ್ಚು ಬಳಸಿ ರೀಲ್ಸ್‌ ಮಾಡಿದ್ದ ರಜತ್‌ ಈ ಬಾರಿ ಮೈಸೂರಿನ ಪಾರಂಪರಿಕ ಕಟ್ಟದಲ್ಲಿ ಸಿಗರೇಟ್‌ ಸೇದಿದ್ದಾರೆ.

 

Read Full Story

08:58 AM (IST) Feb 05

ರಾಹುಲ್‌, ಸಚಿವ ಬಿಟ್ಟು ನಡುವೆ ದ್ರೋಹಿ, ದೇಶದ್ರೋಹಿ ಸಮರ - ಮಾಜಿ ಸ್ನೇಹಿತರ ವಾಕ್ಸಮರ

ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕೇಂದ್ರ ಸಚಿವ ರವನೀತ್‌ ಸಿಂಗ್‌ ಬಿಟ್ಟು, ಪರಸ್ಪರರನ್ನು ದ್ರೋಹಿ, ದೇಶದ್ರೋಹಿ ಎಂದು ಬೈದಾಡಿಕೊಂಡ ಘಟನೆಗೆ ಸಂಸತ್ತಿನ ಪ್ರವೇಶ ದ್ವಾರ ಬುಧವಾರ ಸಾಕ್ಷಿಯಾಯಿತು.

Read Full Story

08:58 AM (IST) Feb 05

ಶಿವರಾಜ್‌ಕುಮಾರ್‌, ರಚಿತಾ ರಾಮ್‌ರಿಂದ ಬಂಪರ್‌ ಆಫರ್‌ ಪಡೆದ Shravani Subramanya Serial Hero ಅಮೋಘ್!

Shravani Subramanya Serial Amogh: ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಹಾಗೂ 'ಕಾಮಿಡಿ ಕಿಲಾಡಿಗಳು ಜೂನಿಯರ್ಸ್' ಶೋಗಳು ಈಗಾಗಲೇ ಪ್ರೇಕ್ಷಕರ ಮನಗೆದ್ದಿವೆ. ಈಗ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ನಟ ಅಮೋಘ್‌ಗೆ ಬಂಪರ್‌ ಆಫರ್‌ ಸಿಕ್ಕಿದೆ.

 

Read Full Story

08:40 AM (IST) Feb 05

ಮೆಟ್ರೋ ಟಿಕೆಟ್ ದರ ಸೋಮವಾರದಿಂದ ಮತ್ತೆ ಏರಿಕೆ;  ಗ್ಯಾರಂಟಿ ಹೊರೆ ನಮ್ಮೇಲೆ ಹಾಕ್ತೀರಾ? ಪ್ರಯಾಣಿಕರು ಆಕ್ರೋಶ!

ರಾಜ್ಯ ಸರ್ಕಾರವು ನಮ್ಮ ಮೆಟ್ರೋ ದರವನ್ನು 5% ಹೆಚ್ಚಿಸಲು ಅನುಮೋದನೆ ನೀಡಿದ್ದು, ಇದು ಫೆಬ್ರವರಿ 9 ರಿಂದ ಜಾರಿಗೆ ಬರಲಿದೆ. ಈ ಹಿಂದಿನ ಏರಿಕೆಯೊಂದಿಗೆ ಒಟ್ಟು ದರ 76% ಹೆಚ್ಚಳವಾದಂತಾಗಿದ್ದು, ಸರ್ಕಾರದ ಗ್ಯಾರಂಟಿ ಯೋಜನೆಗಳಿಗಾಗಿ ಈ ಹೊರೆ ವಿಧಿಸಲಾಗಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ

Read Full Story

08:34 AM (IST) Feb 05

ಮತ್ತೆ ಜಿಗಿದ ಬೆಳ್ಳಿ - ಒಂದೇ ದಿನ ₹40000 ಏರಿಕೆ!

ಕುಸಿತ ಕಂಡಿದ್ದ ಬೆಳ್ಳಿ ಬೆಲೆ ಮಂಗಳವಾರ 40,000 ರೂ.ಗಳಷ್ಟು ಭಾರೀ ಏರಿಕೆ ಕಂಡಿದೆ. ಇದರೊಂದಿಗೆ ಚಿನ್ನದ ದರವೂ ಗಣನೀಯವಾಗಿ ಹೆಚ್ಚಾಗಿದ್ದು, ಬಜೆಟ್ ನಂತರ ಮಾರುಕಟ್ಟೆಯಲ್ಲಿ ಉಂಟಾದ ಈ ಏರಿಳಿತ ಹೂಡಿಕೆದಾರರಲ್ಲಿ ಸಂಚಲನ ಮೂಡಿಸಿದೆ.

Read Full Story

08:12 AM (IST) Feb 05

ಪುನೀತ್ ಕೆರೆಹಳ್ಳಿ ಮಾಡಿದ್ದು ಅಪರಾಧವೋ ಅಥವಾ ಸರ್ಕಾರದ ಕೆಲಸವೋ? ಅಕ್ರಮ ವಲಸಿಗರ ವಿಚಾರದಲ್ಲಿ ಪೊಲೀಸರಿಗೆ ಹೈಕೋರ್ಟ್ ತಪರಾಕಿ!

ಬೆಂಗಳೂರಿನಲ್ಲಿ ಸುಮಾರು 20 ಲಕ್ಷ ಅಕ್ರಮ ವಲಸಿಗರು ನೆಲೆಸಿದ್ದು, ಅವರಿಂದ ದೇಶದ ಭದ್ರತೆಗೆ ಅಪಾಯವಿದೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಈ ವಲಸಿಗರನ್ನು ಪತ್ತೆಹಚ್ಚಿ ಗಡಿಪಾರು ಮಾಡಲು ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

Read Full Story

07:55 AM (IST) Feb 05

ಸಂಪಾಯಿತಲೇ ಪರಾಕ್ - ಮೈಲಾರ ಕಾರ್ಣಿಕ ನುಡಿದ್ದೇನು ?

ಸಂಪಾಯಿತಲೇ ಪರಾಕ್...

ಮೈಲಾರಲಿಂಗೇಶ್ವರ ಸ್ವಾಮಿ ಮೈಲಾರ ಪುಣ್ಯ ಭೂಮಿ ಡೆಂಕಣ ಮರಡಿಯಲ್ಲಿ ಲಕ್ಷಾಂತರ ಭಕ್ತರ ಸಮೂಹದ ಮಧ್ಯೆ ತುಪ್ಪ ಸವರಿದ 20 ಅಡಿ ಎತ್ತರದ ಐತಿಹಾಸಿಕ ಬಿಲ್ಲನ್ನೇರಿದ ಗೊರವಯ್ಯ ಕಾರ್ಣಿಕ

Read Full Story

07:42 AM (IST) Feb 05

ಬೆಂಗಳೂರು ಕೆಮಿಕಲ್‌ ಫ್ಯಾಕ್ಟರಿಗಳ ಮೇಲೀಗ ಪೊಲೀಸರಿಂದ ಅಲರ್ಟ್‌

ಕರ್ನಾಟಕದ ಡ್ರಗ್ಸ್ ತಯಾರಿಕಾ ಘಟಕಗಳ ಮೇಲೆ ಹೊರ ರಾಜ್ಯಗಳ ಪೊಲೀಸರ ದಾಳಿ ಬೆನ್ನಲ್ಲೇ ಎಚ್ಚೆತ್ತಿರುವ ರಾಜಧಾನಿ ಪೊಲೀಸರು, ಈಗ ನಗರ ವ್ಯಾಪ್ತಿಯ ಕೆಮಿಕಲ್ ಫ್ಯಾಕ್ಟರಿಗಳ ವಹಿವಾಟು ಹಾಗೂ ಥಾಯ್ಲೆಂಡ್‌ ಪ್ರವಾಸಿಗರ ಮೇಲೆ ಕಣ್ಗಾವಲಿಟ್ಟಿದ್ದಾರೆ.

 

Read Full Story

07:42 AM (IST) Feb 05

2000 ಬೋಧಕ ಹುದ್ದೆ ಭರ್ತಿಗೆ ಅಸ್ತು : ನೇರ ನೇಮಕಾತಿ ಮೂಲಕ ಭರ್ತಿ

ರಾಜ್ಯ ಸರ್ಕಾರಿ ಪ್ರಥಮ ದರ್ಜೆ, ಪಾಲಿಟೆಕ್ನಿಕ್‌, ಎಂಜಿನಿಯರಿಂಗ್‌ ಕಾಲೇಜುಗಳು ಮತ್ತು ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು ವಿಶ್ವವಿದ್ಯಾಲಯದಲ್ಲಿ(ಯುವಿಸಿಇ) ಖಾಲಿ ಇರುವ ಒಟ್ಟು 2000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಅನುಮತಿ ನೀಡಿದೆ.

 

Read Full Story

07:41 AM (IST) Feb 05

ಕಾವೇರಿ ನದಿಗೆ ಹಾರಿ ಆತ್ಮ*ತ್ಯೆಗೆ ಯತ್ನಿಸಿದ್ದ ವೃದ್ಧೆ : ನೀರಿಲ್ಲದೆ ಮುಳುಗದ ಅಜ್ಜಿ ಸೇಫ್

ಕಾವೇರಿ ನದಿಗೆ ಹಾರಿ ಆತ್ಮ*ತ್ಯೆಗೆ ಯತ್ನಿಸಿದ್ದ ವೃದ್ಧೆಯನ್ನು ಸ್ಥಳೀಯರು ನದಿಯಿಂದ ಮೇಲೆತ್ತಿ ರಕ್ಷಣೆ ಮಾಡಿದ ಘಟನೆ ಶ್ರೀರಂಗಪಟ್ಟಣದ ಉತ್ತರ ಕಾವೇರಿಯ ವೆಲ್ಲೆಸ್ಲೀ ಸೇತುವೆ ಬಳಿ ಬುಧವಾರ ನಡೆದಿದೆ.

 

Read Full Story

07:40 AM (IST) Feb 05

ಜೆಡಿಎಸ್ ಜೊತೆ ಮೈತ್ರಿ ಬೇಡ - ಚುನಾವಣೆ ಸ್ವತಂತ್ರವಾಗಿ ಎದುರಿಸೋಣ : ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ಬಿಜೆಪಿ ಶಕ್ತಿಯುತವಾಗಿದೆ. ಎರಡೂ ಜಿಲ್ಲೆಗಳಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಸ್ವತಂತ್ರವಾಗಿ ಎದುರಿಸೋಣ ಎನ್ನುವುದು ಮುಖಂಡರು, ಕಾರ್ಯಕರ್ತರ ಅಭಿಪ್ರಾಯವಾಗಿದೆ.

 

Read Full Story

07:40 AM (IST) Feb 05

ಧರಣಿಮಂಡಲದೊಳಗೆ : - ಇಡೀ ದಿನ ಬಾವೀಲಿ ಧರಣಿ - ಸಚಿವ ತಲೆದಂಡಕ್ಕೆ ಪಟ್ಟು

ವಿಧಾನಮಂಡಲ ಅಧಿವೇಶನದ ಕೊನೆಯ ದಿನವೂ ಸಂಪೂರ್ಣ ಧರಣಿ, ಗದ್ದಲದಿಂದಲೇ ಮುಳುಗಿಹೋಯಿತು. ಅಬಕಾರಿ ಇಲಾಖೆಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿ, ಅಬಕಾರಿ ಸಚಿವ ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಮಂಗಳವಾರ ಅಹೋರಾತ್ರಿ ಧರಣಿ ನಡೆಸಿದ್ದ ವಿಪಕ್ಷ ಸದಸ್ಯರು ಬುಧವಾರ ಇಡೀ ದಿನ ಪ್ರತಿಭಟನೆ ಮಾಡಿದರು.

 

Read Full Story

07:40 AM (IST) Feb 05

ಜಿ ರಾಮ್‌ ಜಿ ಗೋ ರಾಮ್‌ ಜಿ! - ವಿಧಾನಮಂಡಲದಲ್ಲಿ ಸರ್ಕಾರ ನಿರ್ಣಯ

ಕೇಂದ್ರ ಸರ್ಕಾರದ ‘ವಿಬಿ ಜಿ ರಾಮ್‌ ಜಿ ಕಾಯ್ದೆ’ ರದ್ದುಪಡಿಸುವಂತೆ ಹಾಗೂ ‘ಮನರೇಗಾ ಕಾಯ್ದೆ’ ಪುನರ್‌ ಸ್ಥಾಪಿಸುವಂತೆ ರಾಜ್ಯ ಸರ್ಕಾರ ಉಭಯ ಸದನಗಳಲ್ಲಿ ಮಂಡಿಸಿದ ನಿರ್ಣಯವನ್ನು ಬುಧವಾರ ವಿರೋಧ ಪಕ್ಷಗಳ ಸದಸ್ಯರ ಗದ್ದಲ ಹಾಗೂ ಸಭಾತ್ಯಾಗದ ನಡುವೆ ಧ್ವನಿ ಮತದ ಮುಖಾಂತರ ಅಂಗೀಕರಿಸಲಾಯಿತು.

 

Read Full Story

More Trending News