LIVE NOW
Published : Sep 03, 2026, 05:20 AM ISTUpdated : Sep 03, 2026, 08:57 AM IST

Karnataka News Live: ಗುಂಡ್ಲುಪೇಟೆಯಲ್ಲಿ ದೇಶದ ಮೊದಲ ಎಐ ಮೈಕ್ರೋಡೇಟಾ ಕೇಂದ್ರ - ಹೊಸ ಶಕೆ ಆರಂಭ Chamarajanagar

ಸಾರಾಂಶ

ಕೊಪ್ಪಳ: ಇಸ್ಲಾಂ ಧರ್ಮದ ಕುರಿತ ತಮ್ಮ ಹೇಳಿಕೆಗೆ ಎರಡು ದಿನಗಳಿಂದ ವ್ಯಾಪಕ ಪ್ರಚಾರ ಕೊಟ್ಟಿರುವುದಕ್ಕೆ ಧನ್ಯವಾದ, ಇಲ್ಲದಿದ್ದರೆ ಬಸವರಾಜ ರಾಯರೆಡ್ಡಿ ಅಂದರೆ ಯಾರಿಗೂ ಗೊತ್ತಿರಲಿಲ್ಲ. ಸೌದಿ ಅರೇಬಿಯಾ, ಇರಾನ್‌ನಲ್ಲೆಲ್ಲ ಪ್ರಚಾರ ಸಿಕ್ಕಿದೆ ಎಂದು ಮುಖ್ಯಮಂತ್ರಿ ಅವರೂ ಹೇಳಿದ್ದಾರೆ ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು. 

ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಮಾತನಾಡಿದ ಅವರು, 2 ದಿನ ಪ್ರಚಾರ ಕೊಟ್ಟಿದ್ದಕ್ಕೆ ಧನ್ಯವಾದ. ಧರ್ಮದ ವಿಚಾರವಾಗಿ ನನ್ನ ಹೇಳಿಕೆಯಿಂದ ನನಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಸಿಕ್ಕಿದೆ. ದೇಶದ ಬೇರೆ ಬೇರೆ ನಾಯಕರು ಮಾತನಾಡುತ್ತಾರೆ. ನನ್ನ ಹೇಳಿಕೆಯನ್ನು ಅರ್ಧ ಬಳಸಿದ್ದರಿಂದ ಖ್ಯಾತಿ, ಅಪಖ್ಯಾತಿ ಉಂಟಾಗಿದೆ. ದಯವಿಟ್ಟು ಮಾಧ್ಯಮದವರು ಹೇಳಿಕೆಯನ್ನು ಪೂರ್ಣವಾಗಿ ಪ್ರಸಾರ ಮಾಡುವಂತೆ ಮನವಿ ಮಾಡಿದರು.

08:57 AM (IST) Sep 03

ಗುಂಡ್ಲುಪೇಟೆಯಲ್ಲಿ ದೇಶದ ಮೊದಲ ಎಐ ಮೈಕ್ರೋಡೇಟಾ ಕೇಂದ್ರ - ಹೊಸ ಶಕೆ ಆರಂಭ Chamarajanagar

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ, ಸಿನಿಫಿಯಾನ್ ಸಂಸ್ಥೆಯು ದೇಶದ ಮೊದಲ ತಾಲೂಕು ಮಟ್ಟದ ಎಐ ಮೈಕ್ರೋಡೇಟಾ ಕೇಂದ್ರವನ್ನು ಸೆಪ್ಟೆಂಬರ್ 5 ರಂದು ಉದ್ಘಾಟಿಸಲಿದೆ. ಕೇಂದ್ರ ಸರ್ಕಾರದ 'ನಮ್ಮ ಡೇಟಾ, ನಮ್ಮ ದೇಶದಲ್ಲಿ' ಕಾಯ್ದೆಯಡಿ ಸ್ಥಾಪನೆಯಾಗುತ್ತಿರುವ ಈ ಕೇಂದ್ರವು ಕೃಷಿ ಮತ್ತು ಕೈಗಾರಿಕೆಗಳಿಗೆ ಅಗತ್ಯ ಡೇಟಾ ಒದಗಿಸಲಿದೆ.
Read Full Story

08:43 AM (IST) Sep 03

8 ತಿಂಗಳ ನಂತರವೂ ಕೊಳೆಯದ ಸ್ವಾಮೀಜಿ ಶವ! ದೈವವಾಣಿಯಂತೆ ಸಮಾಧಿ ಅಗೆದಾಗ ಕಾದಿತ್ತು ಮಹಾ ವಿಸ್ಮಯ

ವಿಜಯಪುರದ ಮನಗೂಳಿಯಲ್ಲಿ, ಲಿಂಗೈಕ್ಯರಾದ ಹಾಲುಮತ ಗುರುಪೀಠದ ಮಲ್ಲಯ್ಯ ಸರೂರ ಮುತ್ಯಾರವರು ಭಕ್ತೆಯೊಬ್ಬರ ಮೂಲಕ ದೈವವಾಣಿ ನೀಡಿದ್ದರು. ಅವರ ಸೂಚನೆಯಂತೆ 8 ತಿಂಗಳ ನಂತರ ಸಮಾಧಿ ಅಗೆದು ನೋಡಿದಾಗ, ದೇಹವು ಕೊಳೆಯದೆ ಹಾಗೆಯೇ ಇದ್ದು, ಭಕ್ತರು ಅದನ್ನು ಮೆರವಣಿಗೆಯ ಮೂಲಕ ಮರು ಅಂತ್ಯಸಂಸ್ಕಾರ ಮಾಡಿದರು.
Read Full Story

08:14 AM (IST) Sep 03

ಬೆಳಗಾವಿ ಕ್ಯಾಂಟೋನ್ಮೆಂಟ್ ಪ್ರದೇಶದ 756 ಎಕರೆ ಹಸ್ತಾಂತರ? ಆತಂಕ ಬೇಡ ಅಂದ್ರು ಸಿಇಒ!

ಬೆಳಗಾವಿ ದಂಡುಮಂಡಳಿ ಪ್ರದೇಶವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಕುರಿತು ಯಾವುದೇ ಅಂತಿಮ ನಿರ್ಧಾರವಾಗಿಲ್ಲ ಎಂದು ಸಿಇಒ ಮಂಚಲವಾರ ಸುದಾಮ ಸ್ಪಷ್ಟಪಡಿಸಿದ್ದಾರೆ. ಈ ಪ್ರಸ್ತಾವನೆಯು ಇನ್ನೂ ಪರಿಶೀಲನಾ ಹಂತದಲ್ಲಿದ್ದು, ಅಂತಿಮ ತೀರ್ಮಾನ ಕೇಂದ್ರ ರಕ್ಷಣಾ ಸಚಿವಾಲಯಕ್ಕೆ ಸೇರಿದೆ ಎಂದು ಅವರು ತಿಳಿಸಿದ್ದಾರೆ.

Read Full Story

07:52 AM (IST) Sep 03

ವಿಜಯಪುರ ಗಗನಕ್ಕೆ ಹೊಸ ರೆಕ್ಕೆ - ಮಹತ್ವದ ಹೆಜ್ಜೆಯ ಮಾಹಿತಿ ಹಂಚಿಕೊಂಡ ಸಚಿವ MB ಪಾಟೀಲ್

ವಿಜಯಪುರದಲ್ಲಿ ಉದ್ಘಾಟನೆಗೆ ಸಜ್ಜಾಗಿರುವ ವಿಮಾನ ನಿಲ್ದಾಣದಲ್ಲಿ ಮಹಾರಾಷ್ಟ್ರದ ಕಾರ್ವರ್‌ ಏವಿಯೇಷನ್‌ ಸಂಸ್ಥೆಯು ವಿಮಾನ ಚಾಲನಾ ತರಬೇತಿ ಅಕಾಡೆಮಿ ಸ್ಥಾಪಿಸಲು ಆಸಕ್ತಿ ತೋರಿದೆ. ಈ ಯೋಜನೆಯು ಪೈಲಟ್ ತರಬೇತಿ, ವಿಮಾನ ನಿರ್ವಹಣೆ ಮತ್ತು ದುರಸ್ತಿ ಸೇವೆಗಳನ್ನು ಒದಗಿಸಲಿದ್ದು, ಉತ್ತರ ಕರ್ನಾಟಕದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದ್ದಾರೆ.
Read Full Story

07:19 AM (IST) Sep 03

ಬಸವರಾಜ ರಾಯರೆಡ್ಡಿ ಹೇಳಿಕೆ ವಿವಾದ - ಅಪ್ಪ, ಅಜ್ಜನ ಧರ್ಮನಿಷ್ಠೆ' ನೆನಪಿಸಿದ ಹಾಲಪ್ಪ ಆಚಾರ್!

ಸಚಿವ ಬಸವರಾಜ ರಾಯರಡ್ಡಿ ಅವರು ಇಸ್ಲಾಂ ಧರ್ಮ ಶ್ರೇಷ್ಠ ಎಂದು ನೀಡಿದ್ದಾರೆ ಎನ್ನಲಾದ ಹೇಳಿಕೆಗೆ ಮಾಜಿ ಸಚಿವ ಹಾಲಪ್ಪ ಆಚಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಯರಡ್ಡಿ ಮೊದಲು ತಮ್ಮ ತಂದೆ-ತಾಯಿಯ ಧರ್ಮವನ್ನು ಅಧ್ಯಯನ ಮಾಡಲಿ, ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.

Read Full Story

06:56 AM (IST) Sep 03

ಇಂದು ಸಂಪುಟ ಸಭೆ - ಎಚ್‌ಡಿಕೆ, ಜನಾರ್ದನ ರೆಡ್ಡಿ, ರೇಣುಕಾಚಾರ್ಯ ಪ್ರಾಸಿಕ್ಯೂಷನ್‌ ಚರ್ಚೆ?

ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ವಾಲ್ಮೀಕಿ ನಿಗಮ ಹಗರಣ ಸಂಬಂಧ ಬಿ. ನಾಗೇಂದ್ರ, ಅಕ್ರಮ ಆಸ್ತಿ ಪ್ರಕರಣದಲ್ಲಿ ರೇಣುಕಾಚಾರ್ಯ ಮತ್ತು ಜನಾರ್ದನ ರೆಡ್ಡಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಬಗ್ಗೆ ಚರ್ಚೆಯಾಗುವ ಸಾಧ್ಯತೆಗಳಿವೆ.

Read Full Story

06:43 AM (IST) Sep 03

KPSC - ಖರೀದಿಸಿದ್ದ ಪ್ರಶ್ನೆಗಳನ್ನೇ ಮರುಬಿಕರಿ ಮಾಡಿದ್ದ ಅಭ್ಯರ್ಥಿಗಳು; ಕನ್ನಾಳೆ ಗ್ಯಾಂಗ್‌ ಶಾಕ್‌

ಪಶುವೈದ್ಯಾಧಿಕಾರಿ ಹುದ್ದೆಗಳ ಖರೀದಿಗೆ ಹಣ ಹೊಂದಿಸಲು, ಕೆಲ ಅಭ್ಯರ್ಥಿಗಳು ತಮಗೆ ಸಿಕ್ಕಿದ್ದ ಲಿಖಿತ ಪರೀಕ್ಷೆಯ ಪ್ರಶ್ನೆಗಳನ್ನು ತಮ್ಮ ಸ್ನೇಹಿತರಿಗೆ ಮಾರಾಟ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಅಕ್ರಮದಿಂದಾಗಿ ಪರೀಕ್ಷಾ ಫಲಿತಾಂಶದಲ್ಲಿ ಅನಿರೀಕ್ಷಿತ ಟಾಪರ್‌ಗಳು ಕಾಣಿಸಿಕೊಂಡಿದ್ದು, ಸಿಐಡಿ 20ಕ್ಕೂ ಹೆಚ್ಚು ಶಂಕಿತ ಅಭ್ಯರ್ಥಿಗಳನ್ನು ವಿಚಾರಣೆ ನಡೆಸುತ್ತಿದೆ.
Read Full Story

06:29 AM (IST) Sep 03

ರೇಷ್ಮೆಗೂಡಿಗೆ ಬಂಪರ್ ಬೆಲೆ - ಕೆಜಿಗೆ 1100 ರು. ಹೊಸ ದಾಖಲೆ; ಬೆಲೆ ಏರಿಕೆಗೆ ಕಾರಣ ಏನು?

ರಾಮನಗರ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ದ್ವಿತಳಿ ಗೂಡಿನ ದರ ಪ್ರತಿ ಕೆ.ಜಿಗೆ 1,100 ರೂ. ತಲುಪಿ ಹೊಸ ದಾಖಲೆ ಬರೆದಿದೆ. ಮಿಶ್ರತಳಿ ಗೂಡಿಗೂ ಗರಿಷ್ಠ 881 ರೂ. ಬೆಲೆ ಬಂದಿದ್ದು, ಮಳೆ ಕೊರತೆಯಿಂದ ಆವಕ ಕಡಿಮೆಯಾಗಿರುವುದೇ ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಈ ಅನಿರೀಕ್ಷಿತ ಧಾರಣೆಯಿಂದ ರೇಷ್ಮೆ ಬೆಳೆಗಾರರಲ್ಲಿ ಸಂತಸ ಮನೆಮಾಡಿದೆ.
Read Full Story

06:19 AM (IST) Sep 03

Mysuru - 140 ವರ್ಷಗಳ ಇತಿಹಾಸವುಳ್ಳ ಮೈಸೂರು ಚಿಕ್ಕಗಡಿಯಾರ ನವೀಕರಣ ಮಾಡಲಿದೆ ಎಚ್‌ಎಂಟಿ

140 ವರ್ಷಗಳ ಇತಿಹಾಸವಿರುವ ಮೈಸೂರಿನ ಚಿಕ್ಕ ಗಡಿಯಾರವನ್ನು ಎಚ್‌ಎಂಟಿ ಸಂಸ್ಥೆ ನವೀಕರಿಸಲಿದೆ. ದಸರಾ ಮಹೋತ್ಸವದ ಅಂಗವಾಗಿ ಆನೆಗಳ ತಾಲೀಮು ನಡೆದಿದ್ದು, ಜಾನಪದ ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇದಲ್ಲದೆ, ಕುಕ್ಕರಹಳ್ಳಿ ಕೆರೆ ಬಳಿ ರೈಲ್ವೆ ಕೆಳಸೇತುವೆ ಕಾಮಗಾರಿಗಾಗಿ 33 ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಮುಂದಾಗಿದೆ.
Read Full Story

06:06 AM (IST) Sep 03

₹314 ಕೋಟಿ ಮೊತ್ತದ 18 ಹೊಸ ಹೋಟೆಲ್‌ಗಳ ಯೋಜನೆಗಳಿಗೆ 47.23 ಕೋಟಿ ಸಹಾಯಧನ ಅನುಮೋದನೆ

ರಾಜ್ಯದಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯ ಬಲಪಡಿಸಲು, ₹314 ಕೋಟಿ ಮೊತ್ತದ 18 ಹೊಸ ಹೋಟೆಲ್‌ ಯೋಜನೆಗಳಿಗೆ ಸರ್ಕಾರ ₹47.23 ಕೋಟಿ ಸಹಾಯಧನ ಅನುಮೋದಿಸಿದೆ. ಇದರೊಂದಿಗೆ, 2024-29ರ ನೀತಿಯಡಿ ₹1,080.97 ಕೋಟಿ ಹೂಡಿಕೆಯ 78 ಹೊಸ ಯೋಜನೆಗಳಿಗೂ ತಾತ್ವಿಕ ಒಪ್ಪಿಗೆ ನೀಡಲಾಗಿದ್ದು, ಇದು ರಾಜ್ಯದಲ್ಲಿ ವಸತಿ ಸೌಲಭ್ಯ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸಲಿದೆ.
Read Full Story

More Trending News