LIVE NOW
Published : Jan 23, 2026, 07:26 AM ISTUpdated : Jan 24, 2026, 12:02 AM IST

Karnataka News Live: ವಿಜಯಪುರ - ಕಬ್ಬು ತುಂಬಿದ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ, ಸ್ಥಳದಲ್ಲೇ ಸವಾರ ದುರ್ಮರಣ

ಸಾರಾಂಶ

ಬಳ್ಳಾರಿಯಲ್ಲಿ ಪಡಿತರ ಅಕ್ಕಿಯನ್ನು ಕಳ್ಳಸಾಗಾಟ ಮಾಡುತ್ತಿದ್ದ ಅಡ್ಡೆ ಮೇಲೆ ತಡ ರಾತ್ರಿ ದಾಳಿ ಮಾಡಲಾಗಿದೆ. ಬಳ್ಳಾರಿ ಸಹಾಯಕ ಆಯುಕ್ತರಾದ ರಾಜೇಶ್ ನೇತೃತ್ವದಲ್ಲಿ ದಾಳಿ ನಡೆದಿದೆ. ಬಳ್ಳಾರಿ ನಗರದ ಪುಲ್ಲಯ್ಯ ಕಾಂಪೌಂಡ್ ಒಳ ಆವರಣದಲ್ಲಿ ಘಟನೆ ನಡೆದಿದೆ. ದಾಳಿ ವೇಳೆ ಗುಜರಾತ್ ಮೂಲದ ಲಾರಿಯಲ್ಲಿ ಕಳ್ಳ ಸಾಗಾಟ ಮಾಡುತ್ತಿದ್ದ 523 ಪಡಿತರ ಅಕ್ಕಿ ಚೀಲ ವಶಪಡಿಸಲಾಗಿದೆ. ಇತ್ತ ರಾಜ್ಯ ರಾಜಕಾರಣ ಮತ್ತೆ ರಂಗೇರುತ್ತಿದೆ. ದಾವೋಸ್‌ನಲ್ಲಿ ಡಿಕೆ ಶಿವಕುಮಾರ್, ಅಧಿಕಾರದ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ ಕೈಬಿಡಿಲ್ಲ ಎಂದಿದ್ದಾರೆ. ರಾಜ್ಯ ರಾಜಕರಾಣ ಹಾಗೂ ಪ್ರತಿ ಕ್ಷಣದ ಲೈವ್ ಅಪ್‌ಡೇಟ್ ಇಲ್ಲಿದೆ.

 

12:02 AM (IST) Jan 24

ವಿಜಯಪುರ - ಕಬ್ಬು ತುಂಬಿದ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ, ಸ್ಥಳದಲ್ಲೇ ಸವಾರ ದುರ್ಮರಣ

ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಬಳಿ ಕಬ್ಬಿನ ಲಾರಿಗೆ ಬೈಕ್ ಹಿಂಬದಿಯಿಂದ ಡಿಕ್ಕಿಯಾಗಿ 21 ವರ್ಷದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೆಲಸ ಮುಗಿಸಿ ತನ್ನ ಸ್ವಗ್ರಾಮ ಸಾತಿಹಾಳಕ್ಕೆ ಮರಳುತ್ತಿದ್ದಾಗ ಮಾರ್ಕಬ್ಬಿನಹಳ್ಳಿ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದೆ.
Read Full Story

11:18 PM (IST) Jan 23

ನಾಳೆಯಿಂದ ಸಾಲು ಸಾಲು ರಜೆ, ಊರುಗಳತ್ತ ಹರಿದ ಜನಸಾಗರ, ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್, ಸವಾರರು ಹೈರಾಣು!

ಸತತ ನಾಲ್ಕು ದಿನಗಳ ರಜೆಯ ಹಿನ್ನೆಲೆಯಲ್ಲಿ ಲಕ್ಷಾಂತರ ಜನರು ಬೆಂಗಳೂರಿನಿಂದ ತಮ್ಮ ಊರುಗಳತ್ತ ಹೊರಟಿದ್ದಾರೆ. ಇದರಿಂದಾಗಿ, ನಗರದ ಮೆಜೆಸ್ಟಿಕ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿವೆ

Read Full Story

10:54 PM (IST) Jan 23

ಮೃತ್ಯುಪಾಶವಾದ ಚಾರ್ಮಾಡಿ ಘಾಟ್ - ಒಂದೇ ದಿನ ಮೂರು ಲಾರಿಗಳು ಪಲ್ಟಿ, ಹೆದ್ದಾರಿಯಲ್ಲಿ ನೂರಾರು ವಾಹನಗಳು ಲಾಕ್!

ಚಿಕ್ಕಮಗಳೂರು-ದಕ್ಷಿಣ ಕನ್ನಡ ಸಂಪರ್ಕಿಸುವ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸರಣಿ ಲಾರಿ ಅಪಘಾತಗಳು ಸಂಭವಿಸಿವೆ. ಈ ದುರಂತದಿಂದಾಗಿ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಪೊಲೀಸರು ರಸ್ತೆ ಬಂದ್ ಮಾಡಿ ಪರ್ಯಾಯ ಮಾರ್ಗ ಬಳಸಲು ಸೂಚಿಸಿದ್ದಾರೆ.
Read Full Story

10:32 PM (IST) Jan 23

ಬಳ್ಳಾರಿ ಜಿ-ಸ್ಕೈರ್ ಬೆಂಕಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ - ಎಫ್‌ಎಸ್‌ಎಲ್ ಎಂಟ್ರಿ, ಮಾಡೆಲ್ ಹೌಸ್ ಸುಟ್ಟಿದ್ದು ಆಕಸ್ಮಿಕವೋ, ವ್ಯವಸ್ಥಿತ ಸಂಚೋ?

allari G Square Fire ಬಳ್ಳಾರಿಯ ಜೀ ಸ್ಕೈರ್ ಲೇಔಟ್‌ ಮಾಡೆಲ್ ಹೌಸ್‌ಗೆ ಬೆಂಕಿ ಬಿದ್ದ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಬೆಂಕಿಯ ಕಾರಣ ಪತ್ತೆಹಚ್ಚಲು ಎಫ್‌ಎಸ್‌ಎಲ್ ತಂಡ ತನಿಖೆ ನಡೆಸುತ್ತಿದ್ದರೆ, ಇತ್ತ ಬಿಜೆಪಿ ಮುಖಂಡರು ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

Read Full Story

09:21 PM (IST) Jan 23

ಚಾಮರಾಜನಗರ - ಲೋಕಾಯುಕ್ತ ದಾಳಿ, ವಾಹನ ಸವಾರನಿಂದ ಮೂರು ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಪೊಲೀಸಪ್ಪ!

ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಮಲ್ಲು, ವಶಪಡಿಸಿಕೊಂಡಿದ್ದ ಬೈಕ್ ಬಿಡುಗಡೆ ಮಾಡಲು ₹3,000 ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ

Read Full Story

08:53 PM (IST) Jan 23

ಮೂರು ನಾಲ್ಕು ಬಾರಿ ಕಾರು ಪಲ್ಟಿಯಾದ್ರೂ ವೃದ್ಧ ದಂಪತಿಗಳ ಪ್ರಾಣ ಉಳಿಸಿದ ಸೀಟ್ ಬೆಲ್ಟ್.!

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಾರೊಂದು ಹಲವು ಬಾರಿ ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ವೃದ್ಧ ದಂಪತಿಗಳು ಸೀಟ್ ಬೆಲ್ಟ್ ಧರಿಸಿದ್ದ ಕಾರಣ ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ

Read Full Story

08:28 PM (IST) Jan 23

"ಸೀಮಂತಕ್ಕಾದ್ರೂ ಕರೀರಿ ಅಕ್ಕಾ.." ಕತಾರ್‌ನಲ್ಲಿರೋ ಆಂಕರ್‌ ಅನುಶ್ರೀ ಕಾಲೆಳೆದ ಬಿಗ್‌ಬಾಸ್ ವಿನ್ನರ್‌ ಗಿಲ್ಲಿ!

ಬಿಗ್‌ಬಾಸ್‌ ಗೆದ್ದ ಬಳಿಕ ಸಂದರ್ಶನವೊಂದರಲ್ಲಿ ಬ್ಯುಸಿಯಾಗಿದ್ದ 'ಗಿಲ್ಲಿ' ನಟ, ಆಂಕರ್ ಅನುಶ್ರೀ ಜೊತೆ ಫೋನ್‌ನಲ್ಲಿ ಮಾತನಾಡಿದ್ದಾರೆ. ತಮ್ಮನ್ನು ಮದುವೆಗೆ ಆಹ್ವಾನಿಸದಿದ್ದಕ್ಕೆ ತಮಾಷೆಯಾಗಿ ಕಾಲೆಳೆದ ಅವರು, ಮುಂದೆ 'ಸೀಮಂತ'ಕ್ಕೆ ಕರೆಯುತ್ತೀರಾ ಎಂದು ಕೇಳಿ ನಗಿಸಿದ್ದಾರೆ. 

Read Full Story

08:11 PM (IST) Jan 23

BREAKING - ಜನಾರ್ದನ ರೆಡ್ಡಿ-ಶ್ರೀರಾಮುಲು ಅವರಿಗೆ ಸೇರಿದ ಮಾಡೆಲ್‌ ಹೌಸ್‌ಗೆ ಬೆಂಕಿ! ಕಾಂಗ್ರೆಸ್‌ನವರದ್ದೇ ಕೃತ್ಯ, ಗಂಭೀರ ಆರೋಪ

ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರಿಗೆ ಸೇರಿದ ಲೇಔಟ್‌ನ ಮಾಡೆಲ್ ಹೌಸ್‌ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಇತ್ತೀಚೆಗೆ ನಡೆದ ಬ್ಯಾನರ್ ಗಲಾಟೆಯ ಮುಂದುವರಿದ ಭಾಗ ಇದಾಗಿದ್ದು, ಇದು ಕಾಂಗ್ರೆಸ್ ನವರ ಕೃತ್ಯ ಎಂದು ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಆರೋಪಿಸಿದ್ದಾರೆ.
Read Full Story

08:02 PM (IST) Jan 23

BBK 12 - ರಕ್ಷಿತಾ ಶೆಟ್ಟಿ ನನ್ನ ಲೇಡಿ ವರ್ಷನ್​ - ಅವ್ರಲ್ಲಿ ನನ್ನ ಅಮ್ಮನನ್ನೇ ಕಂಡೆ- ಗಿಲ್ಲಿ ನಟ ಭಾವುಕ

ಬಿಗ್‌ಬಾಸ್ 12 ವಿನ್ನರ್ ಗಿಲ್ಲಿ ನಟ, ರನ್ನರ್ ಅಪ್ ರಕ್ಷಿತಾ ಶೆಟ್ಟಿ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ. ರಕ್ಷಿತಾ ತನ್ನ ಲೇಡಿ ವರ್ಷನ್ ಇದ್ದಂತೆ, ಆಕೆಯಲ್ಲಿ ತನ್ನ ಅಮ್ಮನನ್ನು ಕಂಡೆ ಎಂದು ಗಿಲ್ಲಿ ಹೇಳಿಕೊಂಡಿದ್ದಾರೆ.  ರಕ್ಷಿತಾ ಬಗ್ಗೆ ಗಿಲ್ಲಿ ಹೇಳಿದ್ದೇನು? 

Read Full Story

07:53 PM (IST) Jan 23

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ತನಿಖೆ ಮಾಡಿದ ಪೊಲೀಸ್ ತಂಡಕ್ಕೆ 25 ಲಕ್ಷ ರೂ. ಬಹುಮಾನ ಘೋಷಿಸಿದ ಸರ್ಕಾರ!

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಯಶಸ್ವಿಯಾಗಿ ತನಿಖೆ ನಡೆಸಿದ ಎಸ್‌ಐಟಿ ತಂಡಕ್ಕೆ ರಾಜ್ಯ ಸರ್ಕಾರ 25 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದೆ. ಈ ತಂಡದೊಂದಿಗೆ ಇತರೆ ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸಿದ ಅಧಿಕಾರಿಗಳು ಸೇರಿ 30 ಸಿಬ್ಬಂದಿಗಳಿಗೆ 35 ಲಕ್ಷ ರೂ. ಬಹುಮಾನ ನೀಡಲಾಗಿದೆ.

Read Full Story

07:34 PM (IST) Jan 23

7 ತಲೆ ಘಟಸರ್ಪ, ನಿಧಿ ರಹಸ್ಯ! ಲಕ್ಕುಂಡಿ ನಿಧಿಗೆ ಕಾವಲು ಕಾಯ್ತಿದ್ಯಾ ಘಟಸರ್ಪ? ಏನಿದು ರಹಸ್ಯ?

ಲಕ್ಕುಂಡಿಯಲ್ಲಿ ಪತ್ತೆಯಾದ ನಿಧಿಯನ್ನು ಒಂದು ಘಟಸರ್ಪ ಕಾಯುತ್ತಿದೆ ಎಂಬ ನಂಬಿಕೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಉತ್ಖನನದ ವೇಳೆ ಕಂಡುಬಂದ ವಿಚಿತ್ರ ಕುರುಹುಗಳು ಮತ್ತು ಪುರಾಣದ ಕಥೆಗಳು ಈ ನಿಗೂಢತೆಯನ್ನು ಹೆಚ್ಚಿಸಿದ್ದು, ಸತ್ಯಾಸತ್ಯತೆ ತಿಳಿಯಲು ಉರಗ ತಜ್ಞರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
Read Full Story

07:15 PM (IST) Jan 23

ವಿಶ್ವದ 3ನೇ ಬೆಸ್ಟ್ ವಿಸ್ಕಿ ಪಟ್ಟಿಯಲ್ಲಿ ಭಾರತದ 'ಅಮೃತ್'; ಒಂದು ಬಾಟಲಿ ಬೆಲೆ ಬರೋಬ್ಬರಿ 10 ಲಕ್ಷ ರೂಪಾಯಿ!

ಭಾರತೀಯ ಮದ್ಯ ತಯಾರಿಕಾ ಕಂಪನಿ 'ಅಮೃತ್' ಡಿಸ್ಟಿಲರಿಯ 'ಅಮೃತ್ ಎಕ್ಸ್‌ಪೆಡಿಶನ್' ವಿಸ್ಕಿಯು, ಜಿಮ್ ಮುರ್ರೆಯವರ 'ವಿಸ್ಕಿ ಬೈಬಲ್ 2025-26' ಆವೃತ್ತಿಯಲ್ಲಿ ವಿಶ್ವದ ಮೂರನೇ ಅತ್ಯುತ್ತಮ ವಿಸ್ಕಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ಬೆಲೆ ಸುಮಾರು 10 ಲಕ್ಷ ರೂಪಾಯಿ ಆಗಿದೆ. ವಿಷೇಷತೆ ಏನಿದೆ ನೋಡಿ..

Read Full Story

07:15 PM (IST) Jan 23

ನಿಧಿ ಸಿಕ್ಕವರ ಅದೃಷ್ಟ ಬದಲಾಯಿಸಲಿದೆ ಆ ಒಂದು ಪರೀಕ್ಷೆ! ಯಾರಿಗೆ ಸಿಗತ್ತೆ ಸಂಪತ್ತು? ಕಾನೂನು ಹೇಳೋದೇನು?

ಗದಗದ ಲಕ್ಕುಂಡಿಯಲ್ಲಿ ನಿಧಿ ಪತ್ತೆಯಾದ ಹಿನ್ನೆಲೆಯಲ್ಲಿ, 1878ರ ಭಾರತೀಯ ನಿಧಿ ಕಾಯ್ದೆ ಮತ್ತು 1972ರ ಪ್ರಾಚೀನ ವಸ್ತುಗಳ ಕಾಯ್ದೆಯ ಪ್ರಕಾರ ನಿಧಿಯ ಮಾಲೀಕತ್ವವನ್ನು ಹೇಗೆ ನಿರ್ಧರಿಸಲಾಗುತ್ತದೆ ಮತ್ತು ವಸ್ತುಗಳ ವಯಸ್ಸನ್ನು ಪತ್ತೆಹಚ್ಚುವ ವೈಜ್ಞಾನಿಕ ವಿಧಾನಗಳೇನು ಎಂಬುದನ್ನು ಇದು ಚರ್ಚಿಸುತ್ತದೆ.

Read Full Story

06:49 PM (IST) Jan 23

ಲಕ್ಕುಂಡಿ ಉತ್ಖನನ ಕೆಲಸಕ್ಕೆ ಅಡ್ಡಪಡಿಸಿದ ಕಾರ್ಮಿಕ ಮುಖಂಡ ಅಶ್ವಥ್ - ಸ್ಥಳೀಯರ ತರಾಟೆ, ಎತ್ತಾಕೊಂಡೋದ ಪೊಲೀಸರು!

ಗದಗದ ಲಕ್ಕುಂಡಿ ಐತಿಹಾಸಿಕ ಉತ್ಖನನ ಸ್ಥಳದಲ್ಲಿ ಕಾರ್ಮಿಕರ ಹಿತದ ನೆಪದಲ್ಲಿ ಬೆಂಗಳೂರಿನ ಹೋರಾಟಗಾರರೊಬ್ಬರು ಕೆಲಸಕ್ಕೆ ಅಡ್ಡಿಪಡಿಸಿದರು. ಇದರಿಂದ ಆಕ್ರೋಶಗೊಂಡ ಸ್ಥಳೀಯ ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಹೋರಾಟಗಾರನನ್ನು ವಶಕ್ಕೆ ಪಡೆದರು.
Read Full Story

06:30 PM (IST) Jan 23

ಅಯ್ಯೋ.. ಗುರುತು ಸಿಗದಷ್ಟು ಬದಲಾದ ಸೂಪರ್ ಸ್ಟಾರ್ ನಟಿ; ಕನ್ನಡದಲ್ಲೂ ನಟಿಸಿದ್ದರು ಈ ನಟಿ!

ಅಜಿತ್ ಎದುರು ಈ ನಟಿ ನಟಿಸಬೇಕಿತ್ತು. ಆದರೆ ಆರಂಭದಲ್ಲಿ, ಪ್ರಸಿದ್ದ ನಟಿ ಸಮೀರಾ ರೆಡ್ಡಿ ಅವರನ್ನು ಈ ಪಾತ್ರಕ್ಕಾಗಿ ಸಂಪರ್ಕಿಸಲಾಯಿತು. ಅಲ್ಲಿ ಆದ ಸಮಸ್ಯೆ ಏನೆಂದರೆ, ಸಮೀರಾ ರೆಡ್ಡಿಿಗೆ ತಮಿಳು ಬರುತ್ತಿರಲಿಲ್ಲ, ನಿರ್ದೇಶಕರಿಗೆ ಹಿಂದಿ ಬರುತ್ತಿರಲಿಲ್ಲ. ಇದರಿಂದಾಗಿ ಮತ್ತೆ ಆ ಪಾತ್ರಕ್ಕೆ ಇವರೇ ಬಂದರು.

Read Full Story

06:09 PM (IST) Jan 23

ರಾಜಕೀಯ ನನಗೆ ಕೊನೆಯಾಗಲಿ ಅಂತ ಅಪ್ಪ ಹೇಳಿದ್ದಾರೆ - ಜಮೀರ್‌ ಅಹ್ಮದ್‌ ಪುತ್ರ ಝೈದ್‌ ಖಾನ್!

ಝೈದ್‌ ಖಾನ್‌, ರಚಿತಾ ರಾಮ್‌, ಮಲೈಕಾ ವಸುಪಾಲ್‌ ನಟನೆಯ ಕಲ್ಟ್‌ ಸಿನಿಮಾ ಇಂದು ರಿಲೀಸ್‌ ಆಗಿದೆ. ಅನಿಲ್‌ ಕುಮಾರ್‌ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಜಮೀರ್‌ ಅಹ್ಮದ್‌ ಪುತ್ರ ಝೈದ್‌ ಖಾನ್‌ ಸಂದರ್ಶನ ಇಲ್ಲಿದೆ.

 

Read Full Story

06:06 PM (IST) Jan 23

ಸರ್ಕಾರಿ ಅಧಿಕಾರಿಗೆ ಬೆದರಿಕೆ ಹಾಕಿದ ಕಾಂಗ್ರೆಸ್ MLA ಕ್ಯಾಂಡಿಡೇಟ್ ರಾಜೀವ್ ಗೌಡಗೆ ಪಕ್ಷದಿಂದಲೇ ಗೇಟ್ ಪಾಸ್!

ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬ್ಯಾನರ್ ತೆರವು ವಿಚಾರವಾಗಿ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಜೀವ್ ಗೌಡ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಕೆಪಿಸಿಸಿ ಶಿಸ್ತು ಪಾಲನಾ ಸಮಿತಿಯ ಶಿಫಾರಸ್ಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾದೆ.

Read Full Story

05:54 PM (IST) Jan 23

ಕರ್ಣನಂಥ ಕಿರಣ್‌ರಾಜ್‌ಗೆ ನಿಮ್ಮಿಂದ ಪರ್ಸನಲ್ ಹೆಲ್ಪ್ ಬೇಕಂತೆ, ಏನದು?

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕರ್ಣ ಸೀರಿಯಲ್‌ನಲ್ಲಿ ತಮ್ಮ ಮನೋಜ್ಞ ನಟನೆಯ ಮೂಲಕವೇ ಮನೆಮಾತಾಗಿರುವ ಕಿರಣ್ ರಾಜ್, ಇದೀಗ ಮತ್ತೊಮ್ಮೆ ಕನ್ನಡಿಗರ ಹೃದಯ ಗೆಲ್ಲುವ ಕೆಲಸ ಮಾಡಿದ್ದಾರೆ. ಇದರ ಜತೆಗೆ ನಿಮ್ಮಿಂದು ಒಂದು ಸಹಾಯ ಕೇಳಿದ್ದಾರೆ. ಏನದು? ನೋಡೋಣ ಬನ್ನಿ

Read Full Story

05:43 PM (IST) Jan 23

Photos - ಮಂತ್ರಾಲಯದ ಶ್ರೀ ಸುಜಯೀಂದ್ರ ತೀರ್ಥರ ಆರಾಧನಾ ಮಹೋತ್ಸವದ ಭವ್ಯ ಕ್ಷಣಗಳನ್ನು ಕಣ್ತುಂಬಿಕೊಳ್ಳಿ!

Sri Sujayeendra Tirtha Aradhana celebrated with devotion at Mantralayam ಮಂತ್ರಾಲಯದ ಪುಣ್ಯಕ್ಷೇತ್ರದಲ್ಲಿ ಇಂದು ಶ್ರೀ ಸುಜಯೀಂದ್ರ ತೀರ್ಥರ ಆರಾಧನಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಆರಾಧನಾ ಮಹೋತ್ಸವದ ಭವ್ಯ ಕ್ಷಣಗಳನ್ನು ಬಿಂಬಿಸುವ 10 ಫೋಟೋ ಗ್ಯಾಲರಿ ಇಲ್ಲಿದೆ.

Read Full Story

05:21 PM (IST) Jan 23

ಮನೆಗೆ ಕರೆದು ಕಿಚ್ಚ ಸುದೀಪ್‌ ಲಕ್ಷ, ಲಕ್ಷ ದುಡ್ಡು ಕೊಟ್ರು, ಎಚ್ಚರಿಕೆಯನ್ನು ನೀಡಿದ್ರು - Gilli Nata

Bigg Boss Kannada Season 12 Winner Gilli Nata : ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಗೆದ್ದಿರುವ ಗಿಲ್ಲಿ ನಟ ಅವರು ಡಾ ಶಿವರಾಜ್‌ಕುಮಾರ್‌, ಕಿಚ್ಚ ಸುದೀಪ್‌ ಮನೆಗೆ ಭೇಟಿ ನೀಡಿದ್ದರು. ಅಷ್ಟೇ ಅಲ್ಲದೆ ಸಿಎಂ ಸಿದ್ದರಾಮಯ್ಯ ಅವರನ್ನು ಕೂಡ ಭೇಟಿ ಮಾಡಿದ್ದರು.

Read Full Story

05:07 PM (IST) Jan 23

ಮಹಿಳಾ ಪ್ರಯಾಣಿಕರ ಸುರಕ್ಷತೆಗೆ MakeMyTrip ಮಾಸ್ಟರ್ ಪ್ಲಾನ್! AI ಆಧಾರಿತ ಹೊಸ ಫೀಚರ್‌ಗಳು ಲಾಂಚ್

ಮೇಕ್‌ಮೈಟ್ರಿಪ್ ತನ್ನ ವೇದಿಕೆಯಲ್ಲಿ ಮಹಿಳಾ ಪ್ರಯಾಣಿಕರಿಗಾಗಿ AI ಚಾಲಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಈ ಹೊಸ ಸೌಲಭ್ಯಗಳು ವಸತಿ ಮತ್ತು ಇಂಟರ್‌ಸಿಟಿ ಬಸ್ ಬುಕಿಂಗ್‌ಗಳಲ್ಲಿ  ಸುರಕ್ಷಿತ ಆಯ್ಕೆಗಳನ್ನು ಸೂಚಿಸುತ್ತವೆ. ಮಹಿಳೆಯರ ಪಕ್ಕದ ಸೀಟು ಮಹಿಳೆಯರಿಗೇ ಮೀಸಲಾಗುವಂತೆ ವ್ಯವಸ್ಥೆಯಿದೆ.

Read Full Story

04:31 PM (IST) Jan 23

ಮೈಸೂರಿನಲ್ಲಿ ದುರಂತ - ಬಹುಮಹಡಿ ಕಟ್ಟಡದಿಂದ ಬಿದ್ದು ಪೇಂಟರ್ ಸಾವು!

ಮೈಸೂರಿನಲ್ಲಿ ಪೇಂಟಿಂಗ್ ಕೆಲಸಕ್ಕೆಂದು ಹೋದ 44 ವರ್ಷದ ಸತೀಶ್ ಎಂಬುವವರು, ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದಾರೆ. ಕಂಟ್ರಾಕ್ಟರ್ ನಿರ್ಲಕ್ಷ್ಯದಿಂದ ಈ ದುರ್ಘಟನೆ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಇದೀಗ ಪತ್ನಿ ಮತ್ತು ಮಕ್ಕಳು ಅನಾಥರಾಗಿದ್ದಾರೆ.
Read Full Story

04:27 PM (IST) Jan 23

ಚೀನಾದ ಜಡೆ ಮದುವೆಯಾದ ಕಾಫಿನಾಡಿನ ರೂಪಕ್; ಚಿಕ್ಕಮಗಳೂರಿನ ಸೊಸೆಯಾದ ಡ್ರ್ಯಾಗನ್ ಹುಡುಗಿ!

ಆಸ್ಟ್ರೇಲಿಯಾದಲ್ಲಿ ಚಿಗುರಿದ ಪ್ರೀತಿಯೊಂದು ಚಿಕ್ಕಮಗಳೂರಿನಲ್ಲಿ ಮದುವೆಯಾಗಿ ಫಲಿಸಿದೆ. ಚೀನಾ ಮೂಲದ ಯುವತಿ 'ಜಡೆ' ಅವರನ್ನು ಕಾಫಿನಾಡಿನ ಯುವಕ ರೂಪಕ್ ಭಾರತೀಯ ಸಂಪ್ರದಾಯದಂತೆ ವಿವಾಹವಾಗಿದ್ದು, ಈ ಅಂತರಾಷ್ಟ್ರೀಯ ವಿವಾಹಕ್ಕೆ ಎರಡೂ ಕುಟುಂಬಗಳು ಸಾಕ್ಷಿಯಾಗಿವೆ.
Read Full Story

04:16 PM (IST) Jan 23

ಗಿಲ್ಲಿ ನಟನಿಗಿಂತ ದೊಡ್ಡದು ಯಾವುದೂ ಇಲ್ಲ ಎಂದು ಕೊರಳಿಗೆ ಕೆಜಿಗಟ್ಟಲೇ ಬಂಗಾರ ಹಾಕಿದ ಶರವಣ!

ಗಿಲ್ಲಿ ನಟ ಅವರು ಹೋದಲ್ಲಿ ಬಂದಲ್ಲಿ ಜನರು ಸೇರುತ್ತಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈಗ ಅವರು ಬಂಗಾರದ ಅಂಗಡಿ ಉದ್ಘಾಟನೆಗೆ ಆಗಮಿಸಿದ್ದರು. ಆ ವೇಳೆ ಅವರಿಗೆ ಬಂಗಾರದ ಆಭರಣ ಹಾಕಲಾಗಿದೆ.

 

Read Full Story

04:11 PM (IST) Jan 23

ಗಿಲ್ಲಿ ಮೊದಲೇ ಕೋಟ್ಯಧೀಶ್ವರ ಎಂದು ಶಾಕ್​ ಕೊಟ್ಟ ಗಗನಾ! ಮುಂದಿನ Bigg Biss ಎಂಟ್ರಿ ಬಗ್ಗೆ ಹೇಳಿದ್ದೇನು? ​

'ಕಾಮಿಡಿ ಕಿಲಾಡಿ' ಖ್ಯಾತಿಯ ಗಿಲ್ಲಿ ನಟ ಮತ್ತು ಗಗನಾ ಜೋಡಿ ಜನಪ್ರಿಯವಾಗಿತ್ತು. ಇದೀಗ ಗಿಲ್ಲಿ ನಟನ ಬಿಗ್ ಬಾಸ್ ಯಶಸ್ಸಿನ ಬಗ್ಗೆ ಮಾತನಾಡಿರುವ ಗಗನಾ, ಅವರು ಮೊದಲೇ ಜನರ ಪ್ರೀತಿಯಿಂದ ಕೋಟ್ಯಧಿಪತಿ ಆಗಿದ್ದರು ಎಂದು ಹೇಳಿದ್ದಾರೆ. ಜೊತೆಗೆ ತಮ್ಮ ಬಿಗ್ ಬಾಸ್ ಪ್ರವೇಶದ ಬಗ್ಗೆಯೂ ಗಗನಾ ಮಾತನಾಡಿದ್ದಾರೆ.
Read Full Story

04:11 PM (IST) Jan 23

ಗಿಲ್ಲಿನ ಭೇಟಿಯಾಗಿದ್ಯಾಕೆ ಸಿಎಂ ಸಿದ್ದರಾಮಯ್ಯ? ಬಿಗ್‌ಬಾಸ್‌ಗೆ ಟಗರು ಬಾಸ್‌ ಏನಂದ್ರು?

ಬಿಗ್ ಬಾಸ್ ವಿಜೇತ ಗಿಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಗಿಲ್ಲಿಯ ಜನಪ್ರಿಯತೆಯನ್ನು ಶ್ಲಾಘಿಸಿದ ಸಿಎಂ, ಅವರಿಗೆ ಶುಭ ಹಾರೈಸಿದರು. ಈ ಭೇಟಿಯ ಜೊತೆಗೆ ಗಿಲ್ಲಿ, ಶಿವರಾಜ್ ಕುಮಾರ್ ಹಾಗೂ ಸುದೀಪ್ ಅವರನ್ನೂ ಭೇಟಿ ಮಾಡಿರುವ ಬಗ್ಗೆ ಲೇಖನದಲ್ಲಿ ವಿವರಿಸಲಾಗಿದೆ.
Read Full Story

04:06 PM (IST) Jan 23

ಶಿವಮೊಗ್ಗದಲ್ಲಿ ತೋಟಕ್ಕೆ ಹೋದ ವ್ಯಕ್ತಿ ನಾಪತ್ತೆ; ತುಂಗಾ ನದಿಯಲ್ಲಿ ಶವವಾಗಿ ಪತ್ತೆ!

Shivamogga thirthahalli missing man body found At tunga river ಮನೆಯಿಂದ ತೋಟಕ್ಕೆ ಹೋಗುತ್ತೇನೆಂದು ಮನೆಯಿಂದ ಹೊರಗೆ ಹೋದ ವ್ಯಕ್ತಿ ಗುರುವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದು, ಇಂದು (ಶುಕ್ರವಾರ) ತುಂಗಾ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದಿದೆ.

Read Full Story

03:42 PM (IST) Jan 23

ಲಕ್ಕುಂಡಿ ಉತ್ಖನನ - ನಿಗೂಢ ಲೋಹದ ಉಂಡೆ, ನಾಣ್ಯಾಕಾರದ ಬಿಲ್ಲೆ ಪತ್ತೆ! ಭೂಗರ್ಭದಲ್ಲಿ ಇನ್ನೆಷ್ಟಿದೆ ರಹಸ್ಯ!

ಗದಗ ಜಿಲ್ಲೆಯ ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಉತ್ಖನನದ 8ನೇ ದಿನ, ಸುಟ್ಟ ಮಣ್ಣಿನ ಬಿಲ್ಲೆ, ನಿಗೂಢ ಮೂಳೆ ಹಾಗೂ ಅರ್ಧ ಕೆಜಿ ತೂಕದ ಲೋಹದ ಉಂಡೆಯಂತಹ ಪ್ರಾಚೀನ ಅವಶೇಷಗಳು ಪತ್ತೆಯಾಗಿವೆ. ಈ ಶೋಧವು ಇತಿಹಾಸಕಾರರು, ವಿದ್ಯಾರ್ಥಿಗಳಲ್ಲಿ ಕುತೂಹಲ ಸೃಷ್ಟಿಸಿದೆ.

Read Full Story

03:33 PM (IST) Jan 23

ಟಾಕ್ಸಿಕ್ ನಟ ಯಶ್, ಸೀರಿಯಲ್ ನಿರ್ಮಾಪಕಿ ಶ್ರುತಿ ನಾಯ್ಡು ಕಟ್ಟೆ ಮೇಲೆ ಕೂತು ಕಂಡ ಆ ಕನಸು ನನಸಾಯಿತಾ?

ನಟಿ ಹಾಗೂ ನಿರ್ಮಾಪಕಿ ಶ್ರುತಿ ನಾಯ್ಡು, 'ಪ್ರೀತಿ ಇಲ್ಲದ ಮೇಲೆ' ಧಾರಾವಾಹಿ ದಿನಗಳಲ್ಲಿ ಯಶ್ ಮತ್ತು ಅಚ್ಯುತ್ ಕುಮಾರ್ ಜೊತೆ ಕಂಡ ಕನಸುಗಳ ಬಗ್ಗೆ ಮಾತನಾಡಿದ್ದಾರೆ. ತಾವು ಐಷಾರಾಮಿ ಕಾರು, ಅಚ್ಯುತ್ ಫಿಲ್ಮ್‌ಫೇರ್ ಪ್ರಶಸ್ತಿಗಳು ಮತ್ತು ಯಶ್ ಪ್ಯಾನ್-ಇಂಡಿಯಾ ಸ್ಟಾರ್ ಆಗುವ ಕನಸು ಕಂಡಿದ್ದು ನನಸಾಗಿವೆ.

Read Full Story

03:29 PM (IST) Jan 23

ಕನಸಿಗೆ ದೇವರು ಬಂದು ಹೇಳಿದ ಜಾಗದಲ್ಲಿ ಅಗೆದರೆ ಕೈಗೆ ಸಿಕ್ಕೇಬಿಡ್ತು ಅಲಾಯಿ ದೇವರು

ಕನಸಿಗೆ ದೇವರು ಬಂದು ಹೇಳಿದ ಜಾಗದಲ್ಲಿ ಅಗೆದರೆ ಕೈಗೆ ಸಿಕ್ಕೇಬಿಡ್ತು ಅಲಾಯಿ ದೇವರು. ಮುಸ್ಲಿಮರೇ ಇರದ ಈ ಗ್ರಾಮದಲ್ಲಿ ಅಲಾಯಿ ದೇವರು ಪತ್ತೆಯಾಗಿದ್ದು, ಮಸೀದಿಗೆ ಸ್ಥಳಾಂತರ ಮಾಡಲಾಗಿದೆ.ಏನಿದರ ಅಸಲಿಯತ್ತು?

 

Read Full Story

03:13 PM (IST) Jan 23

ಲಕ್ಕುಂಡಿ ನಿಧಿ ಸಿಕ್ಕ ಜಾಗಕ್ಕೆ ಫ್ರಾನ್ಸ್ ಪ್ರವಾಸಿಗರ ಭೇಟಿ, ಪ್ರಜ್ವಲ್ ಪ್ರಾಮಾಣಿಕತೆಗೆ ವಿದೇಶಿಗರು ಫಿದಾ!

ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನದಲ್ಲಿ ಅರ್ಧ ಕೆಜಿ ಚಿನ್ನದ ನಿಧಿ ಪತ್ತೆಯಾಗಿದ್ದು, ಈ ಸ್ಥಳವು ಈಗ ಜಾಗತಿಕ ಗಮನ ಸೆಳೆಯುತ್ತಿದೆ. ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ಪ್ರಜ್ವಲ್ ರಿತ್ತಿ ಅವರ ಕಾರ್ಯಕ್ಕೆ ಫ್ರಾನ್ಸ್ ಪ್ರವಾಸಿಗರು 'ಮಿರಾಕಲ್' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read Full Story

03:04 PM (IST) Jan 23

Udaya Awards - ಬಡವರ ಮಗ ಬೆಳೆದಾಯ್ತು, ಈಗ ಧನಂಜಯ ಕುಟುಂಬ ಬೆಳೆಯುತ್ತಿದೆ! ಅಪ್ಪ ಆಗ್ತಿರೋ ಡಾಲಿ

Udaya Awards: ನಟ ಶಿವರಾಜ್‌ ಕುಮಾರ್‌,  ಪ್ರಕಾಶ್‌ ರಾಜ್‌, ಡಾಲಿ ಧನಂಜಯ್, ಶ್ರೀನಾಥ್, ಉಮಾಶ್ರೀ, ಸಾಧುಕೋಕಿಲ, ಕವಿ ಬಿ.ಆರ್.ಲಕ್ಷ್ಮಣರಾವ್‌ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಿದ ʻಉದಯ ಕನ್ನಡಿಗ-2025ʼ ಪುರಸ್ಕಾರ ಶನಿವಾರ, ಭಾನುವಾರ ಸಂಜೆ 6 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

 

Read Full Story

02:50 PM (IST) Jan 23

'ಎಂತದು ಗೊತ್ತುಂಟಾ? ಇಲ್ಲಿ ಎಂತದೂ ಇಲ್ಲ, ಆದ್ರೂ ಹೇಳ್ತೇನೆ' ಎಂದು ಲೈವ್​ಗೆ ಬಂದ ರಕ್ಷಿತಾ ಶೆಟ್ಟಿ ಹೇಳಿದ್ದೇನು?

ಬಿಗ್ ಬಾಸ್ ಖ್ಯಾತಿಯ 'ಮಂಗಳೂರು ಪುಟ್ಟಿ' ರಕ್ಷಿತಾ ಶೆಟ್ಟಿ, ತಮಗೆ ಸಿಕ್ಕ ಅಭೂತಪೂರ್ವ ಬೆಂಬಲಕ್ಕೆ ಆಶ್ಚರ್ಯಚಕಿತರಾಗಿದ್ದಾರೆ. ತಾನು ಇಷ್ಟು ಪ್ರೀತಿ ಗಳಿಸುತ್ತೇನೆ ಎಂದು ಊಹಿಸಿರಲಿಲ್ಲ ಎಂದಿರುವ ಅವರು, ದೇಶ-ವಿದೇಶಗಳಲ್ಲಿನ ಕನ್ನಡಿಗರಿಗೆ ಭಾವುಕರಾಗಿ ಧನ್ಯವಾದ ತಿಳಿಸಿದ್ದಾರೆ.
Read Full Story

02:15 PM (IST) Jan 23

ಭದ್ರಾವತಿ ಡಬಲ್ ಮ*ರ್ಡರ್ ಕೇಸ್ - ಚಾಲಾಕಿ ಕೊ*ಲೆಗಾರ ಅದೊಂದು ಸಾಕ್ಷ್ಯ ಬಿಟ್ಟಿದ್ದ! ಪಾಪಿ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ಭದ್ರಾವತಿಯಲ್ಲಿ ವಾಸವಾಗಿದ್ದ ವೃದ್ಧ ದಂಪತಿ ತಮ್ಮ ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಪೊಲೀಸರ ತನಿಖೆಯಿಂದ, ಹಣದಾಸೆಗಾಗಿ ಅವರ ಸೋದರನ ಮಗನಾದ ಆಯುರ್ವೇದ ವೈದ್ಯನೇ, ಅರಿವಳಿಕೆ ಇಂಜೆಕ್ಷನ್ ನೀಡಿ ಕೊಲೆ ಮಾಡಿರುವುದು ಬಯಲಾಗಿದೆ. ಈ ಮೂಲಕ ನಂಬಿಕೆಯೇ ಅವರ ಸಾವಿಗೆ ಕಾರಣವಾಯಿತು.
Read Full Story

01:37 PM (IST) Jan 23

ಚಿನ್ನದ ಭಾರಕ್ಕೆ ಸುಸ್ತಾದ Bigg Boss ಗಿಲ್ಲಿನಟ! ಗೋಲ್ಡ್​ ಚೈನ್​ ಹಾಕಿ ಉದ್ಯಮಿ ಶರವಣ ಕಿವಿಯಲ್ಲಿ ಹೇಳಿದ್ದೇನು?

ಬಿಗ್ ಬಾಸ್ ವಿಜೇತ ಗಿಲ್ಲಿನಟನಿಗೆ ಈಗ ಶುಕ್ರದೆಸೆ ಆರಂಭವಾಗಿದೆ. ಕಾರ್ಯಕ್ರಮಗಳ ಉದ್ಘಾಟನೆಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ಇತ್ತೀಚೆಗೆ ಚಿನ್ನದ ಮಳಿಗೆ ಉದ್ಘಾಟನೆ ವೇಳೆ ಉದ್ಯಮಿ ಶರಣವ ಹಾಕಿರೋ ಚಿನ್ನದ ಸರಕ್ಕೆ ಗಿಲ್ಲಿನಟ ಸುಸ್ತಾಗಿ ಹೋಗಿದ್ದಾರೆ! 

Read Full Story

01:31 PM (IST) Jan 23

ಅಪ್ಪನ ಕೊರಳು ಪಟ್ಟಿ ಹಿಡಿದ ವಿನೀಶ್​! ನಟ ದರ್ಶನ್‌ಗೆ ಇದೆಂಥಾ ದುರ್ವಿಧಿ! ರಿವಿಲ್ ಆಗಿರೋ ಆ ವಿಡಿಯೋ ಹಿಂದಿನ ಕಥೆ ಏನು..?

ನಟ ದರ್ಶನ್ ಮತ್ತು ಅವರ ಮಗ ವಿನೀಶ್ ನಡುವಿನ ಜಗಳದಂತೆ ಕಾಣುವ ವಿಡಿಯೋವೊಂದು ವೈರಲ್ ಆಗಿದೆ. ಆದರೆ, ಇದು 'ಡೆವಿಲ್' ಸಿನಿಮಾದ ಚಿತ್ರೀಕರಣದ ದೃಶ್ಯವಾಗಿದ್ದು, ಇದರಲ್ಲಿ ವಿನೀಶ್ ದರ್ಶನ್‌ರ ಡಬಲ್ ರೋಲ್‌ಗೆ ಡ್ಯೂಪ್ ಆಗಿ ನಟಿಸಿದ್ದಾರೆ.  

Read Full Story

01:16 PM (IST) Jan 23

ಟ್ರೋಲ್‌ ಆದ್ಮೇಲೆ, ಗಿಲ್ಲಿ ನಟ Bigg Boss ಕಪ್‌ ಗೆದ್ಮೇಲೆ ಕೊನೆಗೂ ಮಾತನಾಡಿದ Mahanati ಗಗನಾ;

Mahanati Show Gagana On Bigg Boss Kannada Season 12 Winner Gilli Nata: ಗಿಲ್ಲಿ ನಟ, ಮಹಾನಟಿ ಶೋ ಖ್ಯಾತಿಯ ಗಗನಾ ಅವರು ಡ್ಯಾನ್ಸಿಂಗ್‌ ಶೋನಲ್ಲಿ ಒಟ್ಟಿಗೆ ಭಾಗವಹಿಸಿದ್ದರು. ಬಿಗ್‌ ಬಾಸ್‌ ಮನೆಗೆ ಗಿಲ್ಲಿ ನಟ ಹೋದ ಬಳಿಕ, ಗಗನಾ ಅವರು ಗಿಲ್ಲಿ ಬಗ್ಗೆ ಮಾತನಾಡಿರಲಿಲ್ಲ. ಈಗ ಮಾತನಾಡಿದ್ದಾರೆ.

 

Read Full Story

01:06 PM (IST) Jan 23

ಕೇರಳ ಬಳಿಕ ವೈರಲ್ ವಿಡಿಯೋಗೆ ಉತ್ತರ ಕನ್ನಡದ ಮತ್ತೊಬ್ಬ ವ್ಯಕ್ತಿ ಬಲಿ; ತುಳಸಿ ಗಿಡದ ಮುಂದೆ ಪ್ರಾಣಬಿಟ್ಟ ವ್ಯಕ್ತಿ!

ಕಾರವಾರದ ಪಿಕಳೆ ನರ್ಸಿಂಗ್ ಹೋಂ ಸಿಬ್ಬಂದಿ ರಾಜು ಪಿಕಳೆ, ಅವಧಿ ಮೀರಿದ ಮಾತ್ರೆ ನೀಡಿದ ಆರೋಪದ ವಿಡಿಯೋ ವೈರಲ್ ಆದ ಬಳಿಕ ತೀವ್ರ ಮಾನಸಿಕ ಖಿನ್ನತೆಯಿಂದ ಅಂಕೋಲಾದ ತಮ್ಮ ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯು ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮಕ್ಕೆ ಕನ್ನಡಿ ಹಿಡಿದಿದೆ.
Read Full Story

12:49 PM (IST) Jan 23

ಕಾವ್ಯ ಶೈವ ಜಾಗದಲ್ಲಿ ಬೇರೆ ಹುಡುಗಿ ಇದ್ದಿದ್ರೆ ಅಷ್ಟೇ ಕಥೆ...; ಅದೊಂದು ಪ್ರಶ್ನೆಗೆ ಉತ್ತರ ಕೊಟ್ಟ Gilli Nata

Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಸೀಸನ್ 12 ವಿಜೇತ ಗಿಲ್ಲಿ ನಟ ಹಾಗೂ ಕಾವ್ಯ ಶೈವ ಅವರು ಲವ್‌ ಮಾಡುತ್ತಿದ್ದಾರಾ? ಮದುವೆ ಆಗುತ್ತಾರಾ ಎಂಬ ಪ್ರಶ್ನೆಯೇ ಕೇಳಿ ಬರುತ್ತಿದೆ. ನಾನು ಮದುವೆ ಆಗೋದಿಲ್ಲ ಎಂದು ಕಾವ್ಯ ಅವರು ಹೇಳಿದ್ದಾರೆ. ಈಗ ಗಿಲ್ಲಿ ಅವರು ಉತ್ತರ ಕೊಟ್ಟಿದ್ದಾರೆ.

 

Read Full Story

12:41 PM (IST) Jan 23

ಮಂಗಳೂರು - ಉರ್ವ ಸ್ಟೋರ್ ಬಳಿ 29 ವರ್ಷಗಳ ಹಿಂದೆ ನಡೆದ ಜೋಡಿ ಕೊಲೆ ಪ್ರಕರಣ - ದಂಡುಪಾಳ್ಯ ಗ್ಯಾಂಗ್‌ನ ಸದಸ್ಯನ ಬಂಧನ

29 ವರ್ಷಗಳ ಹಿಂದೆ ಮಂಗಳೂರಿನ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಭೀಕರ ಜೋಡಿ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ದಂಡುಪಾಳ್ಯ ಗ್ಯಾಂಗ್‌ನ ಸದಸ್ಯನಾದ ಚಿಕ್ಕ ಹನುಮ ಅಲಿಯಾಸ್ ಕೃಷ್ಣಪ್ಪನನ್ನು, ಆಂಧ್ರಪ್ರದೇಶದಲ್ಲಿ ಮಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Read Full Story

More Trending News