MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • Photos: ಮಂತ್ರಾಲಯದ ಶ್ರೀ ಸುಜಯೀಂದ್ರ ತೀರ್ಥರ ಆರಾಧನಾ ಮಹೋತ್ಸವದ ಭವ್ಯ ಕ್ಷಣಗಳನ್ನು ಕಣ್ತುಂಬಿಕೊಳ್ಳಿ!

Photos: ಮಂತ್ರಾಲಯದ ಶ್ರೀ ಸುಜಯೀಂದ್ರ ತೀರ್ಥರ ಆರಾಧನಾ ಮಹೋತ್ಸವದ ಭವ್ಯ ಕ್ಷಣಗಳನ್ನು ಕಣ್ತುಂಬಿಕೊಳ್ಳಿ!

Sri Sujayeendra Tirtha Aradhana celebrated with devotion at Mantralayam ಮಂತ್ರಾಲಯದ ಪುಣ್ಯಕ್ಷೇತ್ರದಲ್ಲಿ ಇಂದು ಶ್ರೀ ಸುಜಯೀಂದ್ರ ತೀರ್ಥರ ಆರಾಧನಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಆರಾಧನಾ ಮಹೋತ್ಸವದ ಭವ್ಯ ಕ್ಷಣಗಳನ್ನು ಬಿಂಬಿಸುವ 10 ಫೋಟೋ ಗ್ಯಾಲರಿ ಇಲ್ಲಿದೆ.

1 Min read
Author : Ravi Janekal
Published : Jan 23 2026, 05:43 PM IST
Share this Photo Gallery
  • FB
  • TW
  • Linkdin
  • Whatsapp
19
Image Credit : Asianet News

ಭಕ್ತಿಯ ಪರಾಕಾಷ್ಠೆ: ಶ್ರೀ ಸುಜಯೀಂದ್ರ ತೀರ್ಥರ ಆರಾಧನೆ

ಮಂತ್ರಾಲಯದ ಪುಣ್ಯಕ್ಷೇತ್ರದಲ್ಲಿ ಇಂದು ಶ್ರೀ ಸುಜಯೀಂದ್ರ ತೀರ್ಥರ ಆರಾಧನಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಬೆಳ್ಳಂಬೆಳಗ್ಗೆಯೇ ಮಠದ ಆವರಣದಲ್ಲಿ ಮಂತ್ರಘೋಷಗಳು ಮೊಳಗುತ್ತಿದ್ದು, ಆಧ್ಯಾತ್ಮಿಕ ಕಳೆ ಕಟ್ಟಿತ್ತು.

29
Image Credit : Asianet News

ರಥೋತ್ಸವಕ್ಕೆ ಚಾಲನೆ ನೀಡಿದ ಶ್ರೀ ಸುಬುಧೇಂದ್ರ ತೀರ್ಥರು

ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಶ್ರೀ ಸುಜಯೀಂದ್ರ ತೀರ್ಥರ ಭವ್ಯ ರಥೋತ್ಸವಕ್ಕೆ ಮಂತ್ರಾಲಯ ಮಠದ ಪೀಠಾಧಿಪತಿಗಳಾದ  ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳು ಮಂಗಲ ಚಾಲನೆ ನೀಡಿದರು.

Related Articles

Related image1
ಮಂತ್ರಾಲಯ ಶ್ರೀಮಠದಲ್ಲಿ ಮೊದಲ ಬಾರಿಗೆ ಪುಷ್ಕರಣಿಯಲ್ಲಿ ರಾಯರ ಅದ್ಧೂರಿ ತೆಪ್ಪೋತ್ಸವ
Related image2
ಮಂತ್ರಾಲಯ ರಥಬೀದಿ ಮಾದರೀಲಿ ಚಾಮುಂಡಿಬೆಟ್ಟ, ಇತರೆಡೆ ಅಭಿವೃದ್ಧಿ: ರಾಮಲಿಂಗಾರೆಡ್ಡಿ
39
Image Credit : Asianet News

ಬೀದಿಯುದ್ದಕ್ಕೂ ಸಾಗಿದ ಭಕ್ತ ಸಾಗರ

ರಥೋತ್ಸವವು ಮಠದ ಪ್ರಾಂಗಣದಲ್ಲಿ ಸಂಚರಿಸುವಾಗ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು 'ಶ್ರೀ ರಾಘವೇಂದ್ರಾಯ ನಮಃ' ಎಂಬ ಜಯಘೋಷ ಮೊಳಗಿತು.

49
Image Credit : Asianet News

ಮೂಲ ಬೃಂದಾವನಕ್ಕೆ ಮಹಾ ಪಂಚಾಮೃತಾಭಿಷೇಕ

ಆರಾಧನೆಯ ಅಂಗವಾಗಿ ಶ್ರೀ ಸುಜಯೀಂದ್ರ ತೀರ್ಥರ ಮೂಲ ಬೃಂದಾವನಕ್ಕೆ  ಶ್ರೀ ಸ್ವಾಮೀಜಿಗಳ ದಿವ್ಯ ಹಸ್ತಗಳಿಂದ ವಿಧಿವಿಧಾನಗಳೊಂದಿಗೆ ಮಹಾ ಪಂಚಾಮೃತಾಭಿಷೇಕ ನೆರವೇರಿಸಲಾಯಿತು.

59
Image Credit : Asianet News

ಹೂವಿನ ಅಲಂಕಾರದಲ್ಲಿ ಕಂಗೊಳಿಸಿದ ಬೃಂದಾವನ

ಅಭಿಷೇಕದ ನಂತರ ಮೂಲ ಬೃಂದಾವನವನ್ನು ಸುಗಂಧ ಭರಿತ ಪುಷ್ಪಗಳಿಂದ ಅದ್ಭುತವಾಗಿ ಅಲಂಕರಿಸಲಾಗಿತ್ತು. ಈ ದೃಶ್ಯವು ಭಕ್ತರ ಕಣ್ಮನ ಸೆಳೆಯುವಂತಿತ್ತು.

69
Image Credit : Asianet News

ಉಂಜಾಳ ಮಂಟಪದಲ್ಲಿ ವಿದ್ವತ್ ಗೋಷ್ಠಿ

ಮಠದ ಉಂಜಾಳ ಮಂಟಪದಲ್ಲಿ ನಾಡಿನ ಹೆಸರಾಂತ ಪಂಡಿತರಿಂದ ಪ್ರವಚನ ಕಾರ್ಯಕ್ರಮಗಳು ನಡೆದವು. ಶ್ರೀ ಸುಜಯೀಂದ್ರ ತೀರ್ಥರ ಜೀವನ ಮತ್ತು ಸಾಧನೆಯ ಕುರಿತು ಪಂಡಿತರು ಬೆಳಕು ಚೆಲ್ಲಿದರು.

79
Image Credit : Asianet News

ಆಧ್ಯಾತ್ಮಿಕ ಚಿಂತನೆಯಲ್ಲಿ ಮುಳುಗಿದ ಪಂಡಿತರು

ಪಂಡಿತರ ಗಂಭೀರ ಪ್ರವಚನಗಳು ಮಂತ್ರಾಲಯದ ವಾತಾವರಣವನ್ನು ಮತ್ತಷ್ಟು ಭಕ್ತಿಮಯಗೊಳಿಸಿದವು. 

89
Image Credit : Asianet News

ಭಕ್ತರಿಗೆ ಶ್ರೀ ಸ್ವಾಮೀಜಿಗಳ ಅನುಗ್ರಹ ಸಂದೇಶ

ಈ ಪವಿತ್ರ ಸಂದರ್ಭದಲ್ಲಿ ಹೆಚ್.ಹೆಚ್. ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳು ಭಕ್ತರನ್ನುದ್ದೇಶಿಸಿ ಅನುಗ್ರಹ ಸಂದೇಶ ನೀಡಿದರು. ಗುರುಗಳ ಹಾದಿಯಲ್ಲಿ ನಡೆಯುವುದು ಹೇಗೆ ಎಂಬ ಬಗ್ಗೆ ಆಶೀರ್ವಚನ ನೀಡಿದರು.

99
Image Credit : Asianet News

ಸಕಲ ಭಕ್ತಾದಿಗಳಿಗೆ ಆಶೀರ್ವಾದ

ದೂರದೂರುಗಳಿಂದ ಬಂದಿದ್ದ ಭಕ್ತರಿಗೆ ಶ್ರೀ ಸ್ವಾಮೀಜಿಗಳು ಮಂತ್ರಾಕ್ಷತೆ ನೀಡಿ ಹರಸಿದರು. ಮಠದ ವತಿಯಿಂದ ವಿಶೇಷ ಪ್ರಸಾದದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಮಂತ್ರಾಲಯದಲ್ಲಿ ಸಡಗರದ ಮುಕ್ತಾಯ

ಇಡೀ ದಿನ ನಡೆದ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರೀ ಸುಜಯೀಂದ್ರ ತೀರ್ಥರ ಆರಾಧನಾ ಮಹೋತ್ಸವವು ಯಶಸ್ವಿಯಾಗಿ ಸಂಪನ್ನಗೊಂಡಿತು. ಮಂತ್ರಾಲಯದ ಹಾದಿಯುದ್ದಕ್ಕೂ ಭಕ್ತಿಯ ಅಲೆ ಎದ್ದಿತ್ತು.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಮಂತ್ರಾಲಯ
ಹಬ್ಬ

Latest Videos
Recommended Stories
Recommended image1
ನಾಳೆ ಜನವರಿ 24 ಶಿವಯೋಗದ ಶುಭ, ಈ ಐದು ರಾಶಿಗೆ ಅಪಾರ ಆರ್ಥಿಕ ಲಾಭ, ಗೌರವ
Recommended image2
ಫೆಬ್ರವರಿ 1ಕ್ಕೆ ಶುಕ್ರ ಮತ್ತು ಶನಿ ಚಾಲೀಸ ಯೋಗ, ಈ 5 ರಾಶಿಗೆ ಬಂಗಾರದ ಸಮಯ ಆರಂಭ
Recommended image3
ನಾಳೆ ಜನವರಿ 24 ಸೂರ್ಯನು ನಕ್ಷತ್ರ ಬದಲು, ಈ ಮೂರು ರಾಶಿಗೆ ದೊಡ್ಡ ಲಾಭ
Related Stories
Recommended image1
ಮಂತ್ರಾಲಯ ಶ್ರೀಮಠದಲ್ಲಿ ಮೊದಲ ಬಾರಿಗೆ ಪುಷ್ಕರಣಿಯಲ್ಲಿ ರಾಯರ ಅದ್ಧೂರಿ ತೆಪ್ಪೋತ್ಸವ
Recommended image2
ಮಂತ್ರಾಲಯ ರಥಬೀದಿ ಮಾದರೀಲಿ ಚಾಮುಂಡಿಬೆಟ್ಟ, ಇತರೆಡೆ ಅಭಿವೃದ್ಧಿ: ರಾಮಲಿಂಗಾರೆಡ್ಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved